LIVE NOW
Published : Apr 02, 2026, 07:18 AM ISTUpdated : Apr 02, 2026, 10:50 AM IST

India Latest News Live: Ritual Sacrifice - ಮಗನಿಗೆ ಹುಷಾರಾಗಲೆಂದು ಮಗಳನ್ನೇ ಬಲಿ ಕೊಟ್ಟ ತಾಯಿ! ಊರೆಲ್ಲ ರಾಮನವಮಿ ಸಂಭ್ರಮದ್ದಾಗ, ಅಲ್ಲಿ ನಡೆದಿತ್ತು ಘೋರ! ಕೃತ್ಯ

ಸಾರಾಂಶ

ಚಂಡೀಗಢ: ಇಲ್ಲಿನ ಪಂಜಾಬ್‌ನ ಬಿಜೆಪಿ ಕಚೇರಿಯ ಎದುರು ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕಚ್ಚಾಬಾಂಬ್‌ ಸ್ಫೋಟ ಸಂಭವಿಸಿದ್ದು, ದಿಗಿಲಿನ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಘಟನೆಯಲ್ಲಿ ಪ್ರಾಣಾಪಾಯವಾಗಿಲ್ಲ. ಒಂದು ಸ್ಕೂಟರ್‌ಗೆ ಹಾನಿಯಾಗಿದೆ. ‘ಕಚ್ಚಾ ಸ್ಫೋಟಕ ಎಸೆತದಿಂದ ಸ್ಫೋಟ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ತ ಭದ್ರತಾ ದೃಷ್ಟಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿ, ಉಗ್ರರ ಕೈವಾಡವಿದೆಯೇ ಎಂಬ ಬಗ್ಗೆ ಪರಿಶೀಲಿಸಿದೆ. 

ಪಂಜಾಬ್‌ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ವಿನೀತ್ ಜೋಶಿ ಮಾತನಾಡಿ, ‘ಪಕ್ಷದ ಕಚೇರಿಯ ಹೊರಗೇ ಘಟನೆ ಸಂಭವಿಸಿರುವುದು ಕಳವಳಕಾರಿ. ಸ್ಫೋಟದಿಂದ ಕಂಪೌಂಡ್‌ ಗೋಡೆಯ ಮೇಲೆ ಕೆಲ ಗುರುತುಗಳಾಗಿವೆ. ಇದು ಹೇಗಾಯಿತು ಎಂದು ಪೊಲೀಸರೇ ತಿಳಿಸಬೇಕು’ ಎಂದರು

10:50 AM (IST) Apr 02

Ritual Sacrifice - ಮಗನಿಗೆ ಹುಷಾರಾಗಲೆಂದು ಮಗಳನ್ನೇ ಬಲಿ ಕೊಟ್ಟ ತಾಯಿ! ಊರೆಲ್ಲ ರಾಮನವಮಿ ಸಂಭ್ರಮದ್ದಾಗ, ಅಲ್ಲಿ ನಡೆದಿತ್ತು ಘೋರ! ಕೃತ್ಯ

ಜಾರ್ಖಂಡ್‌ನ ಕುಸುಂಭಾ ಗ್ರಾಮದಲ್ಲಿ, ಮಗನ ಅನಾರೋಗ್ಯ ಗುಣಪಡಿಸಲು ತಾಯಿಯೊಬ್ಬಳು ಮಾಟಗಾರ್ತಿಯ ಮಾತಿಗೆ ಕಟ್ಟುಬಿದ್ದು ತನ್ನ ಹದಿಹರೆಯದ ಮಗಳನ್ನೇ ಬಲಿ ಕೊಟ್ಟಿದ್ದಾಳೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ತಾಯಿ, ಮಾಟಗಾರ್ತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Read Full Story

10:35 AM (IST) Apr 02

ಏರಿಕೆ ನಡುವೆ ನೆಮ್ಮದಿ ನೀಡಿದ ಚಿನ್ನದ ಬೆಲೆ; ಇಂದು ಎಷ್ಟು ಇಳಿಕೆ? ಗ್ರಾಹಕರು ಖುಷ್

ಏಪ್ರಿಲ್ ತಿಂಗಳ ಬೆಲೆ ಏರಿಕೆಗಳ ನಂತರ, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ಮೇಲೆ ₹15,300 ಮತ್ತು 1 ಕೆಜಿ ಬೆಳ್ಳಿಯ ಮೇಲೆ ₹5,000 ದಷ್ಟು ಬೆಲೆ ಕುಸಿದಿದೆ. ಈ ಲೇಖನವು ಇಂದಿನ ನಿಖರವಾದ ಚಿನ್ನ ಮತ್ತು ಬೆಳ್ಳಿಯ ದರಗಳನ್ನು ವಿವರಿಸುತ್ತದೆ.
Read Full Story

10:16 AM (IST) Apr 02

ಯುಎಇ ಹೊಸ ಆರೋಗ್ಯ ಪರವಾನಗಿ ಪ್ರಕಟ, ನಿಯಮವೀಗ ಮತ್ತಷ್ಟು ಸರಳ, ಭಾರತೀಯರಿಗೆ ತೆರೆದುಕೊಂಡ ವಿಪುಲ ಅವಕಾಶ!

 ಯುಎಇ ತನ್ನ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಹೊಸ ಪರವಾನಗಿ ಸುಧಾರಣೆಗಳನ್ನು ಜಾರಿಗೆ ತಂದಿದೆ. ಈ ಕ್ರಮಗಳಡಿ, ವೈದ್ಯಕೀಯ ಕಾಲೇಜುಗಳ ಅಧ್ಯಾಪಕರು ಈಗ ಆಸ್ಪತ್ರೆಗಳಲ್ಲಿ ನೇರವಾಗಿ ಸೇವೆ ಸಲ್ಲಿಸಬಹುದು ಮತ್ತು ಕೆಲವು ನರ್ಸಿಂಗ್ ಪದವೀಧರರಿಗೆ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈ ಬದಲಾವಣೆಗಳು ಶೈಕ್ಷಣಿಕ ಜ್ಞಾನ ಮತ್ತು ಪ್ರಾಯೋಗಿಕ ಅನುಭವದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿವೆ.

Read Full Story

09:33 AM (IST) Apr 02

ಕೇರಳವನ್ನು ಕಾಂಗ್ರೆಸ್ ಮುಕ್ತ ಮಾಡಲು ರಾಹುಲ್ ಪ್ರಯತ್ನ - ರಾಜೀವ್ ಚಂದ್ರಶೇಖರ್ ವ್ಯಂಗ್ಯ

ಕೇರಳವನ್ನು ಕಾಂಗ್ರೆಸ್ ಮುಕ್ತ ಮಾಡುವ ಹೊಣೆಯನ್ನು ಸ್ವತಃ ರಾಹುಲ್ ಗಾಂಧಿಯೇ ವಹಿಸಿಕೊಂಡಿದ್ದಾರೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಬಿಜೆಪಿ ಮತ್ತು ಸಿಪಿಐ(ಎಂ) ಕೈಜೋಡಿಸಿವೆ ಎಂಬ ರಾಹುಲ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Read Full Story

09:18 AM (IST) Apr 02

ರಿಸರ್ವೇಶನ್ ಇರಲಿಲ್ಲ, ಟಾಯ್ಲೆಟ್ ಬಳಿ ಮಲಗಿದ್ದ ಸೈನಿಕರಿಗೆ ಸೀಟ್ ಕೊಟ್ಟ TTE; ಹೃದಯ ಗೆದ್ದ ವಿಡಿಯೋ

ರಿಸರ್ವೇಶನ್ ಇಲ್ಲದ ಕಾರಣ ರೈಲಿನ ಶೌಚಾಲಯದ ಬಳಿ ಮಲಗಿದ್ದ ಇಬ್ಬರು ಸೈನಿಕರನ್ನು TTE ಗಮನಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಆ ಯೋಧರಿಗೆ TTE ಗೌರವಯುತವಾಗಿ ಬರ್ತ್‌ಗಳ ವ್ಯವಸ್ಥೆ ಮಾಡಿಕೊಟ್ಟರು. 

Read Full Story

More Trending News