ಚಂಡೀಗಢ: ಇಲ್ಲಿನ ಪಂಜಾಬ್ನ ಬಿಜೆಪಿ ಕಚೇರಿಯ ಎದುರು ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕಚ್ಚಾಬಾಂಬ್ ಸ್ಫೋಟ ಸಂಭವಿಸಿದ್ದು, ದಿಗಿಲಿನ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಘಟನೆಯಲ್ಲಿ ಪ್ರಾಣಾಪಾಯವಾಗಿಲ್ಲ. ಒಂದು ಸ್ಕೂಟರ್ಗೆ ಹಾನಿಯಾಗಿದೆ. ‘ಕಚ್ಚಾ ಸ್ಫೋಟಕ ಎಸೆತದಿಂದ ಸ್ಫೋಟ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ತ ಭದ್ರತಾ ದೃಷ್ಟಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿ, ಉಗ್ರರ ಕೈವಾಡವಿದೆಯೇ ಎಂಬ ಬಗ್ಗೆ ಪರಿಶೀಲಿಸಿದೆ.
ಪಂಜಾಬ್ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ವಿನೀತ್ ಜೋಶಿ ಮಾತನಾಡಿ, ‘ಪಕ್ಷದ ಕಚೇರಿಯ ಹೊರಗೇ ಘಟನೆ ಸಂಭವಿಸಿರುವುದು ಕಳವಳಕಾರಿ. ಸ್ಫೋಟದಿಂದ ಕಂಪೌಂಡ್ ಗೋಡೆಯ ಮೇಲೆ ಕೆಲ ಗುರುತುಗಳಾಗಿವೆ. ಇದು ಹೇಗಾಯಿತು ಎಂದು ಪೊಲೀಸರೇ ತಿಳಿಸಬೇಕು’ ಎಂದರು
11:12 PM (IST) Apr 02
ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ, 100ಕ್ಕೂ ಹೆಚ್ಚು ಮಹಿಳೆಯರನ್ನು ಈತ ಬಳಸಿಕೊಂಡಿದ್ದಾನೆ. ಪೂಜೆ ಹೆಸರಿನಲ್ಲಿ ಈತ ಮಾಡಿದ ಒಂದೊಂದೆ ಕತೆ ಬಹಿರಂಗವಾಗಿದೆ.
10:30 PM (IST) Apr 02
ಮೂಗಿನ ತುದಿಯಲ್ಲಿ ಗಂಡನ ಕೋಪಕ್ಕೆ ಹೆಂಡತಿ ಮೂಗು ಮಾಯ, 12 ಹೊಲಿಗೆ ಜೊತೆ ಐಸಿಯುನಲ್ಲಿ ಚಿಕಿತ್ಸೆ, ಗಂಡನ ಕೋಪ ಆಕ್ರೋಶಕ್ಕೆ ಹೆಂಡತಿ ಆರೋಗ್ಯ ಗಂಭೀರವಾಗಿದೆ. ಮುಖ ವಿಕಾರಗೊಂಡಿದೆ. ಪೋಷಕರು ಕಂಗಾಲಾಗಿದ್ದಾರೆ.
09:46 PM (IST) Apr 02
ಸೂಪರ್ಸ್ಟಾರ್ ರಜನಿಕಾಂತ್ ಜೊತೆ ನಾಯಕಿಯಾಗಿ ನಟಿಸುವ ಅವಕಾಶವನ್ನು ನಟಿ ಖುಷ್ಬೂ ನಿರಾಕರಿಸಿದ್ದರು. ಅದಕ್ಕೆ ಕಾರಣ ಒಂದೇ ಒಂದು ದೃಶ್ಯ. ಆ ದೃಶ್ಯದಲ್ಲಿ ಅವರು ರಜನಿಕಾಂತ್ಗೆ ಹೊಡೆಯಬೇಕಿತ್ತು. ಹಾಗಾದರೆ ಆ ಸಿನಿಮಾ ಯಾವುದು? ಇಲ್ಲಿದೆ ವಿವರ.
09:22 PM (IST) Apr 02
ಮುದ್ದಿನ ನಾಯಿಯ ಭಾವುಕ ವಿದಾಯಕ್ಕೆ ಕಣ್ಣೀರಿಟ್ಟ ನವ ವಧು, ಗಂಡನ ಮನೆಗೆ ಹೊರಟಾಗ ಕಣ್ಣೀರ ಕೋಡಿ, ಇಷ್ಟು ದಿನ ಮುದ್ದಾಡುತ್ತಿದ್ದ ಮಾಲಕಿ ಮನೆ ಬಿಟ್ಟು ಗಂಡನ ಮನೆಗೆ ಹೊರಟಾಗ ಮೂಕ ಪ್ರಾಣಿಗಳ ನೋವಿಗೆ ಹಲವರು ಕಣ್ಣೀರಾಗಿದ್ದಾರೆ.
08:13 PM (IST) Apr 02
ಪ್ರೀತಿಸಿ ಮದ್ವೆಯಾದ ಒಂದೂವರೆ ತಿಂಗಳಿಗೆ ಟೆಕ್ಕಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ ಇಶಿತಾ ಸಾವು, ಇವರ ಪ್ರೀತಿಗೆ ಪೋಷಕರು ಬೆಂಬಲ ನೀಡಿದ್ದರು. ಆದರೆ ಇದೀಗ ದಿಢೀರ್ ಸಾವು ಆಘಾತ ಜೊತೆಗೆ ಕೆಲ ಅನುಮಾನಕ್ಕೆ ಕಾರಣಾಗಿದೆ.
07:30 PM (IST) Apr 02
ಅಲ್ಲು ಅರ್ಜುನ್ ಮನಸಾರೆ ಆರಾಧಿಸುತ್ತಿದ್ದ ನಟಿಯೊಬ್ಬರಿದ್ದರು. ಆದರೆ, ಆ ನಟಿ ಮದುವೆಯಾದಾಗ ಬನ್ನಿಗೆ ಸಿಕ್ಕಾಪಟ್ಟೆ ಬೇಸರವಾಗಿತ್ತಂತೆ. ಅವರ ಹೃದಯವೇ ಒಡೆದು ಹೋದ ಅನುಭವವಾಗಿತ್ತು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
07:26 PM (IST) Apr 02
ರೈಲ್ವೆ ಇಲಾಖೆಯು ಟಿಕೆಟ್ ರದ್ದತಿ ಮತ್ತು ಬೋರ್ಡಿಂಗ್ ಪಾಯಿಂಟ್ ಬದಲಾವಣೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಟಿಕೆಟ್ ರದ್ದತಿ ಇನ್ನುಮುಂದೆ ಸ್ವಲ್ಪ ದುಬಾರಿಯಾಗಲಿದೆ. ಇದರೊಂದಿಗೆ, ದೀರ್ಘಾವಧಿ ಪ್ರಯಾಣಕ್ಕಾಗಿ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲುಗಳನ್ನು ಸಹ ಪರಿಚಯಿಸಲಾಗಿದೆ.
07:11 PM (IST) Apr 02
ಅಜಯ್ ದೇವಗನ್ ಗುರುವಾರ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಅವರ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಸ್ನೇಹಿತರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಗೈದಿದ್ದಾರೆ.
07:04 PM (IST) Apr 02
ಸಿಕ್ಕಾಗ ನಗುತ್ತಿದ್ದ ಮಹಿಳೆಯನ್ನು ಲಿಫ್ಟ್ನಲ್ಲೇ ಬಲವಂತವಾಗಿ ಚುಂಬಿಸಿದ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್, ಹೋದಾಗ ಬಂದಾಗ ಸ್ಮೈಲ್ ಕೊಡುತ್ತಿದ್ದ ಮಹಿಳೆಯನ್ನು ಫಾಲೋ ಮಾಡಿ ಲಿಫ್ಟ್ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ.
06:51 PM (IST) Apr 02
ಬಾಲಿವುಡ್ನಲ್ಲಿ ದೊಡ್ಡ ಬಜೆಟ್ನ ಸಿನಿಮಾಗಳು ಫ್ಲಾಪ್ ಆಗುವುದು ಸಾಮಾನ್ಯ. ಆದರೆ ಒಂದು ಸಿನಿಮಾ ಎಷ್ಟು ಹೀನಾಯವಾಗಿ ಸೋತಿದೆ ಎಂದರೆ, ಅದು ಬಾಲಿವುಡ್ನ ಅತಿದೊಡ್ಡ ಡಿಸಾಸ್ಟರ್ ಎಂಬ ದಾಖಲೆಯನ್ನೇ ಬರೆದಿದೆ.
06:43 PM (IST) Apr 02
ಡೊನಾಲ್ಡ್ ಟ್ರಂಪ್ ಅವರ ಪುತ್ರರು ಬೆಂಬಲಿತ 'ಪವರ್ಅಸ್' ಡ್ರೋನ್ ಕಂಪನಿಯು, ಇರಾನ್ ದಾಳಿಯಿಂದ ಕಂಗೆಟ್ಟಿರುವ ಯುಎಇಗೆ ಶಸ್ತ್ರಾಸ್ತ್ರ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಈ ಬೆಳವಣಿಗೆಯು ಅಮೆರಿಕದಲ್ಲಿ ಹಿತಾಸಕ್ತಿ ಸಂಘರ್ಷದ ಕುರಿತು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
06:27 PM (IST) Apr 02
ಚಿತ್ರತಂಡದ ಯೋಜನೆಗಳ ಪ್ರಕಾರ, 'ರಾಮಾಯಣ' ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ಜಾಗತಿಕವಾಗಿ ತೆರೆಗೆ ಬರಲಿದೆ. ಇನ್ನು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ರಣಬೀರ್ ಅವರ ಗೈರುಹಾಜರಿಯ ಸೀಕ್ರೆಟ್ ರಿವೀಲ್ ಆಗಿದೆ. ಇನ್ನೇನಿದೆ..?
06:18 PM (IST) Apr 02
06:11 PM (IST) Apr 02
100 ಮಹಿಳೆಯರ ಜೊತೆ ಗುರೂಜಿ ರಾಸಲೀಲೆ ಕೇಸ್ನಲ್ಲಿ ಮಹತ್ವದ ಬೆಳವಣಿಗೆ, ಪತ್ನಿ ಕಲ್ಪನಾ ನಾಪತ್ತೆ, ಸ್ವಯಂ ಘೋಷಿತ ದೇವಮಾನವ ಅರೆಸ್ಟ್ ಆದ ಬೆನ್ನಲ್ಲೇ ಸಚಿವರಿಗೆ ಕರೆ ಮಾಡಿ ಬಿಡಿಸುವ ಪ್ರಯತ್ನ ಮಾಡಿದ್ದ ಪತ್ನಿ ಈಗ ತಲೆಮರೆಸಿಕೊಂಡಿದ್ದಾರೆ.
05:43 PM (IST) Apr 02
ರಾಮ್ ಚರಣ್ ಕೇವಲ ನಟ ಮಾತ್ರವಲ್ಲ, ಅವರು ನಿರ್ಮಾಪಕ ಹಾಗೂ ಉದ್ಯಮಿಯಾಗಿಯೂ ಯಶಸ್ಸು ಕಂಡಿದ್ದಾರೆ. ಚಿರಂಜೀವಿ ನಟನೆಯ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಲವು ಬ್ಯುಸಿನೆಸ್ಗಳಲ್ಲಿ ಹೂಡಿಕೆ ಮಾಡಿದ್ದಾರೆ.
05:27 PM (IST) Apr 02
ಮಾತೃಭೂಮಿ ಚಿತ್ರವು ಮೇ 15, 2026 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. "ಚಿತ್ರದ ಹೆಚ್ಚುವರಿ ಶೂಟಿಂಗ್ ಮುಗಿದಿದ್ದು, ಸಿನಿಮಾ ಶೀಘ್ರದಲ್ಲೇ ಸಿದ್ಧವಾಗಲಿದೆ. ಹೀಗಾಗಿ, ನಿರ್ಮಾಪಕರು ಬೇಗನೆ ರಿಲೀಸ್ ಮಾಡಲು ಬಯಸಿದ್ದಾರೆ.
05:05 PM (IST) Apr 02
ರಾಮನ ಪಾತ್ರಕ್ಕೆ ನ್ಯಾಯ ಸಲ್ಲಿಸೋದಕ್ಕೆ ನನ್ನಿಂದಾಗದು ಅಂದುಕೊಂಡಿದ್ದೆ. ಆ ಕ್ರಮೇಣ ಆ ಭಯ ಕೃತಜ್ಞತೆಯಾಗಿ ಬದಲಾಯ್ತು. ಏಕೆಂದರೆ ನನ್ನ ಬದುಕಿಗೆ ನಿಜವಾಗಿಯೂ ಇಂಥಾ ಅವಕಾಶದ ಅಗತ್ಯ ಇತ್ತು ಎಂದರು ರಣಬೀರ್ ಕಪೂರ್.
05:03 PM (IST) Apr 02
ತೈಲ ಬಿಕ್ಕಟ್ಟಿನಿಂದ ಮಲೇಷಿಯಾದಲ್ಲಿ ವರ್ಕ್ ಫ್ರಮ್ ಹೋಮ್ ಜಾರಿ, ದೇಸಿ ವಿಮಾನ ಕಡಿತಗೊಳಿಸಿದ ಚೀನಾ, ಭಾರತದಲ್ಲಿ ಗ್ಯಾಸ್ ಪೂರೈಕೆ ಸಮಸ್ಯೆಗಳಿಂದ ಏಪ್ರಿಲ್ 15 ರಿಂದ ಹೊಸ ನಿಯಮ ಜಾರಿಯಾಗುತ್ತಾ?
04:54 PM (IST) Apr 02
03:33 PM (IST) Apr 02
ನಿವೃತ್ತಿಗೆ 2 ವರ್ಷ ಇರುವಾಗಲೇ ಕ್ಯಾನ್ಸರ್ ಪೀಡಿತ ಒರಾಕಲ್ ಉದ್ಯೋಗಿ ವಜಾ, ಕಣ್ಣೀರ ಬದುಕು ಬಿಚ್ಚಿಟ್ಟ ಮಗ, ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿರುವ ಈ ಉದ್ಯೋಗಿಯ ಕತೆ ಹಲವರ ಕಣ್ಣಾಲಿ ತೇವಗೊಳಿಸಿದೆ.
03:08 PM (IST) Apr 02
03:04 PM (IST) Apr 02
ಮೊದಲ ರಾತ್ರಿಯಂದು ವಧು 'ನನ್ನನ್ನು ಮುಟ್ಟಬೇಡ' ಎಂದು ಹೇಳಿದ್ದಾಳೆ. ಈ ವಿಚಾರವಾಗಿ ನಡೆದ ಜಗಳದಲ್ಲಿ ವರನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ವಧುವಿಗೆ ಬೇರೊಬ್ಬನ ಜೊತೆ ಪ್ರೀತಿ ಇರಬಹುದೆಂದು ವರನ ಕುಟುಂಬಸ್ಥರು ಆರೋಪಿಸಿದ್ದಾರೆ.
02:40 PM (IST) Apr 02
ಆಂಡ್ರಾಯ್ಡ್ ಬಳಕೆದಾರರಿಗೆ ಶೀಘ್ರದಲ್ಲೇ 'ಟ್ಯಾಪ್ ಟು ಶೇರ್' ಎಂಬ ಹೊಸ ಫೈಲ್ ಹಂಚಿಕೆ ವೈಶಿಷ್ಟ್ಯ ಲಭ್ಯವಾಗಲಿದೆ. ಎನ್ಎಫ್ಸಿ ಮತ್ತು ಕ್ವಿಕ್ ಶೇರ್ ತಂತ್ರಜ್ಞಾನ ಬಳಸಿ, ಫೋನ್ಗಳನ್ನು ಟ್ಯಾಪ್ ಮಾಡುವ ಮೂಲಕ ಫೈಲ್ಗಳನ್ನು ಸುಲಭವಾಗಿ ವರ್ಗಾಯಿಸಬಹುದು. ಈ ಸೌಲಭ್ಯವು ಆಂಡ್ರಾಯ್ಡ್ 17ರೊಂದಿಗೆ ಬರಲಿದೆ.
02:30 PM (IST) Apr 02
ಜನರ ಪರವಾಗಿ ಧನಿ ಎತ್ತುವ ರಾಘವ್ ಚಡ್ಡಾಗೆ ಶಾಕ್, ರಾಜ್ಯಸಭೆ ಡೆಪ್ಯೂಟಿ ನಾಯಕ ಸ್ಥಾನದಿಂದ ಕೊಕ್ ನೀಡಲಾಗಿದೆ. ಇಷ್ಟೇ ಅಲ್ಲ ರಾಘವ್ ಚಡ್ಡಾಗೆ ಮಾತನಾಡಲು ಅವಕಾಶ ನೀಡದಂತೆ ಸಭೆಗೆ ನಿರ್ದೇಶನ ನೀಡಲಾಗಿದೆ.
02:21 PM (IST) Apr 02
01:55 PM (IST) Apr 02
ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ಹೊಸ ಆದಾಯ ತೆರಿಗೆ ನಿಯಮಗಳು ನಗದು ವ್ಯವಹಾರಗಳ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿವೆ. ಕಪ್ಪು ಹಣ ತಡೆಯುವ ಉದ್ದೇಶದಿಂದ, 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ಸ್ವೀಕಾರ ಮತ್ತು 20 ಸಾವಿರ ರೂ. ಮೀರಿದ ವ್ಯವಹಾರಕ್ಕೆ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.
01:54 PM (IST) Apr 02
ಅನುಷ್ಕಾ ಶೆಟ್ಟಿ ಅವರ ಅಭಿಮಾನಿಗಳು ಬಹಳ ದಿನಗಳಿಂದ ಅವರದೊಂದು ದೊಡ್ಡ ಹಿಟ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ 'ಕಥನಾರ್' ಟ್ರೇಲರ್ನಲ್ಲಿ ಅನುಷ್ಕಾ ಅವರ ಲುಕ್ ಮತ್ತು ಪಾತ್ರದ ತೀವ್ರತೆ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅತೀ ಶೀಘ್ರದಲ್ಲೇ ಈ ಸಿನಿಮಾ ಬೆಳ್ಳಿಪರದೆಯ ಮೇಲೆ ಬರಲಿದೆ.
01:11 PM (IST) Apr 02
ಮೊದಲ ಭಾಗದಲ್ಲಿ ರಾಜ್ಕುಮಾರ್ ರಾವ್ ಮತ್ತು ಲಿಸಾ ಹೇಡನ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು. ಆದರೆ ಸೀಕ್ವೆಲ್ನಲ್ಲಿ ಈ ಇಬ್ಬರೂ ಕಲಾವಿದರು ಇರುವುದು ಅನುಮಾನ ಎನ್ನಲಾಗುತ್ತಿದೆ. ನಿರ್ದೇಶಕ ವಿಕಾಸ್ ಬಹ್ಲ್ ಈ ಬಾರಿ ಹೊಸ ತಾರಾಗಣವನ್ನು ಪರಿಚಯಿಸಲು ಪ್ಲಾನ್ ಮಾಡುತ್ತಿದ್ದು, ಪೋಷಕ ಪಾತ್ರಗಳಿಗಾಗಿ ರಂಗಭೂಮಿ ಕಲಾವಿದರ ಶೋಧ ನಡೆಸುತ್ತಿದ್ದಾರೆ.
01:05 PM (IST) Apr 02
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ದೇಶದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಧಾನಿ ಮೋದಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸಲು ನಿಗಾ ವಹಿಸುವಂತೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಸಗೊಬ್ಬರಗಳ ಸಾಕಷ್ಟು ದಾಸ್ತಾನು ಖಚಿತಪಡಿಸಿಕೊಳ್ಳುವಂತೆ ಹೇಳಿದ್ದಾರೆ.
11:35 AM (IST) Apr 02
ಈ ಘಟನೆಯು ದಿವ್ಯಾ ದತ್ತಾ ಅವರಿಗೆ ವೃತ್ತಿಜೀವನದ ದೊಡ್ಡ ಪಾಠವಾಯಿತು. "ಒಬ್ಬ 17-18 ವರ್ಷದ ಹುಡುಗಿಗೆ ಅಮಿತಾಭ್ ಬಚ್ಚನ್ ಅವರಂತಹ ಮಹಾನ್ ನಟ ಹೇಳಿದ ಈ ಮಾತುಗಳು ಜೀವನಪರ್ಯಂತ ಮರೆಯಲಾಗದವು. ಅಂದಿನಿಂದ ನಾನು ಪಾತ್ರಕ್ಕೂ ಮತ್ತು ವೈಯಕ್ತಿಕ ಜೀವನಕ್ಕೂ ಗೆರೆ ಎಳೆಯುವುದನ್ನು ಕಲಿತೆ," ಎಂದು ದಿವ್ಯಾ ಹೇಳಿದ್ದಾರೆ.
11:34 AM (IST) Apr 02
10:50 AM (IST) Apr 02
ಜಾರ್ಖಂಡ್ನ ಕುಸುಂಭಾ ಗ್ರಾಮದಲ್ಲಿ, ಮಗನ ಅನಾರೋಗ್ಯ ಗುಣಪಡಿಸಲು ತಾಯಿಯೊಬ್ಬಳು ಮಾಟಗಾರ್ತಿಯ ಮಾತಿಗೆ ಕಟ್ಟುಬಿದ್ದು ತನ್ನ ಹದಿಹರೆಯದ ಮಗಳನ್ನೇ ಬಲಿ ಕೊಟ್ಟಿದ್ದಾಳೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ತಾಯಿ, ಮಾಟಗಾರ್ತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
10:35 AM (IST) Apr 02
10:16 AM (IST) Apr 02
ಯುಎಇ ತನ್ನ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಹೊಸ ಪರವಾನಗಿ ಸುಧಾರಣೆಗಳನ್ನು ಜಾರಿಗೆ ತಂದಿದೆ. ಈ ಕ್ರಮಗಳಡಿ, ವೈದ್ಯಕೀಯ ಕಾಲೇಜುಗಳ ಅಧ್ಯಾಪಕರು ಈಗ ಆಸ್ಪತ್ರೆಗಳಲ್ಲಿ ನೇರವಾಗಿ ಸೇವೆ ಸಲ್ಲಿಸಬಹುದು ಮತ್ತು ಕೆಲವು ನರ್ಸಿಂಗ್ ಪದವೀಧರರಿಗೆ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈ ಬದಲಾವಣೆಗಳು ಶೈಕ್ಷಣಿಕ ಜ್ಞಾನ ಮತ್ತು ಪ್ರಾಯೋಗಿಕ ಅನುಭವದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿವೆ.
09:33 AM (IST) Apr 02
ಕೇರಳವನ್ನು ಕಾಂಗ್ರೆಸ್ ಮುಕ್ತ ಮಾಡುವ ಹೊಣೆಯನ್ನು ಸ್ವತಃ ರಾಹುಲ್ ಗಾಂಧಿಯೇ ವಹಿಸಿಕೊಂಡಿದ್ದಾರೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಬಿಜೆಪಿ ಮತ್ತು ಸಿಪಿಐ(ಎಂ) ಕೈಜೋಡಿಸಿವೆ ಎಂಬ ರಾಹುಲ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
09:18 AM (IST) Apr 02
ರಿಸರ್ವೇಶನ್ ಇಲ್ಲದ ಕಾರಣ ರೈಲಿನ ಶೌಚಾಲಯದ ಬಳಿ ಮಲಗಿದ್ದ ಇಬ್ಬರು ಸೈನಿಕರನ್ನು TTE ಗಮನಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಆ ಯೋಧರಿಗೆ TTE ಗೌರವಯುತವಾಗಿ ಬರ್ತ್ಗಳ ವ್ಯವಸ್ಥೆ ಮಾಡಿಕೊಟ್ಟರು.