ಚಂಡೀಗಢ: ಇಲ್ಲಿನ ಪಂಜಾಬ್ನ ಬಿಜೆಪಿ ಕಚೇರಿಯ ಎದುರು ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕಚ್ಚಾಬಾಂಬ್ ಸ್ಫೋಟ ಸಂಭವಿಸಿದ್ದು, ದಿಗಿಲಿನ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಘಟನೆಯಲ್ಲಿ ಪ್ರಾಣಾಪಾಯವಾಗಿಲ್ಲ. ಒಂದು ಸ್ಕೂಟರ್ಗೆ ಹಾನಿಯಾಗಿದೆ. ‘ಕಚ್ಚಾ ಸ್ಫೋಟಕ ಎಸೆತದಿಂದ ಸ್ಫೋಟ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ತ ಭದ್ರತಾ ದೃಷ್ಟಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿ, ಉಗ್ರರ ಕೈವಾಡವಿದೆಯೇ ಎಂಬ ಬಗ್ಗೆ ಪರಿಶೀಲಿಸಿದೆ.
ಪಂಜಾಬ್ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ವಿನೀತ್ ಜೋಶಿ ಮಾತನಾಡಿ, ‘ಪಕ್ಷದ ಕಚೇರಿಯ ಹೊರಗೇ ಘಟನೆ ಸಂಭವಿಸಿರುವುದು ಕಳವಳಕಾರಿ. ಸ್ಫೋಟದಿಂದ ಕಂಪೌಂಡ್ ಗೋಡೆಯ ಮೇಲೆ ಕೆಲ ಗುರುತುಗಳಾಗಿವೆ. ಇದು ಹೇಗಾಯಿತು ಎಂದು ಪೊಲೀಸರೇ ತಿಳಿಸಬೇಕು’ ಎಂದರು
10:50 AM (IST) Apr 02
ಜಾರ್ಖಂಡ್ನ ಕುಸುಂಭಾ ಗ್ರಾಮದಲ್ಲಿ, ಮಗನ ಅನಾರೋಗ್ಯ ಗುಣಪಡಿಸಲು ತಾಯಿಯೊಬ್ಬಳು ಮಾಟಗಾರ್ತಿಯ ಮಾತಿಗೆ ಕಟ್ಟುಬಿದ್ದು ತನ್ನ ಹದಿಹರೆಯದ ಮಗಳನ್ನೇ ಬಲಿ ಕೊಟ್ಟಿದ್ದಾಳೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ತಾಯಿ, ಮಾಟಗಾರ್ತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
10:35 AM (IST) Apr 02
10:16 AM (IST) Apr 02
ಯುಎಇ ತನ್ನ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಹೊಸ ಪರವಾನಗಿ ಸುಧಾರಣೆಗಳನ್ನು ಜಾರಿಗೆ ತಂದಿದೆ. ಈ ಕ್ರಮಗಳಡಿ, ವೈದ್ಯಕೀಯ ಕಾಲೇಜುಗಳ ಅಧ್ಯಾಪಕರು ಈಗ ಆಸ್ಪತ್ರೆಗಳಲ್ಲಿ ನೇರವಾಗಿ ಸೇವೆ ಸಲ್ಲಿಸಬಹುದು ಮತ್ತು ಕೆಲವು ನರ್ಸಿಂಗ್ ಪದವೀಧರರಿಗೆ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈ ಬದಲಾವಣೆಗಳು ಶೈಕ್ಷಣಿಕ ಜ್ಞಾನ ಮತ್ತು ಪ್ರಾಯೋಗಿಕ ಅನುಭವದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿವೆ.
09:33 AM (IST) Apr 02
ಕೇರಳವನ್ನು ಕಾಂಗ್ರೆಸ್ ಮುಕ್ತ ಮಾಡುವ ಹೊಣೆಯನ್ನು ಸ್ವತಃ ರಾಹುಲ್ ಗಾಂಧಿಯೇ ವಹಿಸಿಕೊಂಡಿದ್ದಾರೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಬಿಜೆಪಿ ಮತ್ತು ಸಿಪಿಐ(ಎಂ) ಕೈಜೋಡಿಸಿವೆ ಎಂಬ ರಾಹುಲ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
09:18 AM (IST) Apr 02
ರಿಸರ್ವೇಶನ್ ಇಲ್ಲದ ಕಾರಣ ರೈಲಿನ ಶೌಚಾಲಯದ ಬಳಿ ಮಲಗಿದ್ದ ಇಬ್ಬರು ಸೈನಿಕರನ್ನು TTE ಗಮನಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಆ ಯೋಧರಿಗೆ TTE ಗೌರವಯುತವಾಗಿ ಬರ್ತ್ಗಳ ವ್ಯವಸ್ಥೆ ಮಾಡಿಕೊಟ್ಟರು.