Published : Sep 01, 2025, 07:08 AM ISTUpdated : Sep 01, 2025, 10:29 PM IST

India Latest News Live: ದಸರಾ-ದೀಪಾವಳಿಗೆ ಬಂಗಾರದ ಬೆಲೆ ಎಷ್ಟಾಗಬಹುದು? ಈಗ್ಲೇ ಖರೀದಿ ಮಾಡ್ಬೇಕಾ ಅಥವಾ ಕಾದು ನೋಡಬೇಕಾ?

ಸಾರಾಂಶ

ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳ 2ನೇ ವಾರ ಭೇಟಿ ನೀಡುವ ಸಾಧ್ಯತೆ ಇದೆ. ಸೆ.12-14ರವರೆಗೆ ಮೋದಿ 3 ದಿನಗಳ ಕಾಲ ಅಸ್ಸಾಂ ಮತ್ತು ಮಿಜೋರಾಂ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಮಣಿಪುರಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಇದು ನಿಜವಾದರೆ, 2023ರಲ್ಲಿ ರಾಜ್ಯದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ಮೋದಿ ಅವರ ಮೊದಲ ಭೇಟಿ ಇದಾಗಲಿದೆ. ರಾಜ್ಯದಲ್ಲಿ ಭಾರೀ ಹಿಂಸಾಚಾರ ನಡೆದು 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೂ ಮೋದಿ ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿಲ್ಲ ಎಂದು ವಿಪಕ್ಷಗಳು ಆರೋಪಿಸಿದ್ದವು.

10:29 PM (IST) Sep 01

ದಸರಾ-ದೀಪಾವಳಿಗೆ ಬಂಗಾರದ ಬೆಲೆ ಎಷ್ಟಾಗಬಹುದು? ಈಗ್ಲೇ ಖರೀದಿ ಮಾಡ್ಬೇಕಾ ಅಥವಾ ಕಾದು ನೋಡಬೇಕಾ?

ಬಂಗಾರದ ಬೆಲೆ ಭವಿಷ್ಯ: ಸೆಪ್ಟೆಂಬರ್ 1 ರಂದು ಬಂಗಾರ-ಬೆಳ್ಳಿ ಬೆಲೆಯಲ್ಲಿ ದಾಖಲೆಯ ಏರಿಕೆಯಾಗಿದೆ. ದಸರಾ-ದೀಪಾವಳಿ ಹಬ್ಬಗಳಲ್ಲಿ ಬಂಗಾರ ಖರೀದಿಸಲು ಯೋಜಿಸುತ್ತಿರುವವವರು ಈಗಲೇ ಖರೀದಿ ಮಾಡಬೇಕಾ ಅಥವಾ ಕಾದು ನೋಡಬೇಕಾ? ಬಂಗಾರದ ಬೆಲೆ ಎಷ್ಟಕ್ಕೆ ತಲುಪಬಹುದು ಎಂದು ತಿಳಿಯಿರಿ.

 

Read Full Story

09:33 PM (IST) Sep 01

ಏಷ್ಯಾ ಕಪ್ 2025 - ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಬೆಲೆ ಎಷ್ಟು? ಬುಕ್ ಮಾಡೋದು ಹೇಗೆ?

2025ರ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಟಿಕೆಟ್ ಬೆಲೆ, ಬುಕಿಂಗ್ ಪ್ರಕ್ರಿಯೆ ಮತ್ತು ವೇಳಾಪಟ್ಟಿ ಇಲ್ಲಿದೆ.

Read Full Story

08:03 PM (IST) Sep 01

'ಒನ್‌ ಸೈಡೆಡ್‌ ಡಿಸಾಸ್ಟರ್‌..' ಭಾರತದ ಜೊತೆಗಿನ ಸಂಬಂಧ ವಿಪತ್ತು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌!

ಡೊನಾಲ್ಡ್ ಟ್ರಂಪ್ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು 'ಏಕಪಕ್ಷೀಯ ವಿಪತ್ತು' ಎಂದು ಕರೆದಿದ್ದಾರೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸರಕುಗಳನ್ನು ರಫ್ತು ಮಾಡುತ್ತದೆ ಆದರೆ ಅಮೆರಿಕದಿಂದ ಕಡಿಮೆ ಆಮದು ಮಾಡಿಕೊಳ್ಳುತ್ತದೆ ಮತ್ತು ಹೆಚ್ಚಿನ ಸುಂಕ ವಿಧಿಸುತ್ತದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

Read Full Story

07:56 PM (IST) Sep 01

ಅಲ್ಲಿ ಪ್ರವಾಹ- ಇಲ್ಲಿ ಭೂಕಂಪ - ಪಾಕ್​-ಅಪ್ಘಾನ್​ ಜನರ ಬದುಕು ಛಿದ್ರ ಛಿದ್ರ- ಲೆಕ್ಕಕ್ಕೆ ಸಿಗದ ಸಾವಿನ ಸಂಖ್ಯೆ

ಏಕಕಾಲಕ್ಕೆ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿವೆ. ಪಾಕ್​ನಲ್ಲಿ ಪ್ರವಾಹ ಹಾಗೂ ಅಪ್ಘಾನ್​ನಲ್ಲಿ ಭೀಕರ ಭೂಕಂಪ ಉಂಟಾಗಿದೆ. ಇದರ ಡಿಟೇಲ್ಸ್​ ಇಲ್ಲಿದೆ...

 

Read Full Story

07:02 PM (IST) Sep 01

ಮದ್ವೆಯಾಗಿ ಒಂದೇ ವರ್ಷಕ್ಕೆ ನಾಪತ್ತೆಯಾದ ಗಂಡ - ಇನ್ಸ್ಟಾ ರೀಲ್ಸ್‌ನಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಪತ್ತೆ

ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಎಲ್ಲರಂತೆ ಯುವತಿಯೊಬ್ಬಳನ್ನು  ಮದ್ವೆಯಾಗಿದ್ದ. ಮದುವೆಯ ನಂತರ ದಂಪತಿಗೆ ಮಗುವೂ ಆಗಿದೆ. ಇದಾದ ಒಂದು ವರ್ಷದ ನಂತರ ಈ ಖತರ್ನಾಕ್ ಕಿಲಾಡಿ ಮನೆಯಿಂದಲೇ ನಾಪತ್ತೆಯಾಗಿದ್ದ ಈಗ ಮತ್ತೊಬ್ಬ ಮಹಿಳೆ ಜೊತೆ ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಆತ ಕಾಣಿಸಿಕೊಂಡಿದ್ದಾನೆ.

Read Full Story

06:52 PM (IST) Sep 01

ಇನ್ನೂ 2 ಸಾವಿರ ರೂಪಾಯಿ ನೋಟು ಇರಿಸಿಕೊಂಡಿದ್ದೀರಾ? ಆರ್‌ಬಿಐ ನೀಡಿದೆ ಬಿಗ್‌ಅಪ್‌ಡೇಟ್‌

₹2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆಯ ಪ್ರಗತಿಯನ್ನು RBI ಪ್ರಕಟಿಸಿದೆ. ಚಲಾವಣೆಯಲ್ಲಿದ್ದ ಶೇ.98.33 ರಷ್ಟು ನೋಟುಗಳು ಈಗಾಗಲೇ ಹಿಂತಿರುಗಿವೆ. ಈ ನೋಟುಗಳು ಇನ್ನೂ ಕಾನೂನುಬದ್ಧವಾಗಿದ್ದು, ವ್ಯವಹಾರಗಳಲ್ಲಿ ಬಳಸಬಹುದು.

Read Full Story

06:50 PM (IST) Sep 01

ಟ್ರಂಪ್​ ಆಯಸ್ಸು ಇನ್ನು 6-8 ತಿಂಗಳಷ್ಟೇ - ವೈದ್ಯರ ಶಾಕಿಂಗ್​ ವಿಡಿಯೋ ವೈರಲ್​- ಡಾಕ್ಟರ್​ ಹೇಳಿದ್ದೇನು?

ವಿವಿಧ ದೇಶಗಳ ವಿರೋಧ ಕಟ್ಟಿಕೊಂಡಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಆಯಸ್ಸು ಇನ್ನು ಕೇವಲ 6-8 ತಿಂಗಳು ಎಂದಿದ್ದಾರೆ ವೈದ್ಯರೊಬ್ಬರು. ಶಾಕಿಂಗ್​ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಏನಿದೆ ನೋಡಿ...

 

Read Full Story

06:07 PM (IST) Sep 01

ನೋ ಹೆಲ್ಮೆಟ್ ನೋ ಪೆಟ್ರೋಲ್ ಎಂದ ಬಂಕ್ ಸಿಬ್ಬಂದಿಗೆ ಗುಂಡಿಕ್ಕಿದ ಬೈಕ್ ಸವಾರರು

ಮಧ್ಯಪ್ರದೇಶದಲ್ಲಿ ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಪೆಟ್ರೋಲ್ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಸಿಬ್ಬಂದಿಗೆ ಗಾಯಗಳಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Read Full Story

05:15 PM (IST) Sep 01

ನದಿ ನೀರಿನ ನಡುಗಡ್ಡೆಯಲ್ಲಿ ಸಿಲುಕಿದ ಗೋಮಾತೆಯನ್ನು ಏರ್‌ಲಿಫ್ಟ್ ಮಾಡಿದ ಮಂಡ್ಯದ ಜನ!

ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದಾಗ ನಡುಗಡ್ಡೆಯಲ್ಲಿ ಸಿಲುಕಿದ್ದ ಎರಡು ಹಸುಗಳನ್ನು ಕ್ರೇನ್ ಮೂಲಕ ರಕ್ಷಿಸಲಾಯಿತು. ಶಿವಮೊಗ್ಗದಲ್ಲಿ ಒಳಚರಂಡಿಗೆ ಬಿದ್ದ ಕರುವನ್ನೂ ರಕ್ಷಿಸಲಾಗಿದೆ.
Read Full Story

04:28 PM (IST) Sep 01

ನಿಜ ನಾಗ ನಾನಿರುವಾಗ ಕೃತಕಾಭರಣವೇಕೆ? ಮಹದೇವನ ಕೊರಳಿಗೆ ಸುತ್ತಿ ಹೆಡೆಎತ್ತಿ ನಿಂತ ನಾಗರ ಹಾವು

ಶಿವನ ಪ್ರತಿಮೆಯ ಕೊರಳಿಗೆ ನಾಗರಹಾವು ಸುತ್ತಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನ ಭಕ್ತಿಪರವಶರಾಗಿದ್ದಾರೆ. ಹಾವುಗಳು ಶಿವನನ್ನು ಏಕೆ ಸುತ್ತಿಕೊಳ್ಳುತ್ತವೆ ಎಂಬುದರ ಬಗ್ಗೆ ಹಲವು ನಂಬಿಕೆಗಳಿವೆ.
Read Full Story

04:03 PM (IST) Sep 01

ಗಣೇಶನ ಪೂಜೆ ಮಾಡಿ ಎಂದ್ರೆ ಮದುವೆ ಮಾಡಿಸೋದಾ ಈ ಜನ? ಜಾಲತಾಣದಲ್ಲಿ ಆಕ್ರೋಶ

ಗಣೇಶನ ಪೂಜೆ ಮಾಡಿ ಎಂದ್ರೆ ಮದುವೆ ಮಾಡಿಸೋದಾ ಈ ಜನ? ಗಣೇಶನ ಕೈಯಲ್ಲಿ ಯುವತಿ ಇರುವುದನ್ನು ನೋಡಿ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್​ ಆಗಿದೆ.

 

Read Full Story

03:19 PM (IST) Sep 01

ಆಟವಾಡುತ್ತಾ ಅಕ್ಕ ತಮ್ಮ ನುಂಗಿದ್ದೇನು? ಹೊಟ್ಟೆ ನೋವು ಅಂತಿದ್ದವರ ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್

4 ವರ್ಷದ ಹಾಗೂ 3 ವರ್ಷದ ಅಕ್ಕ ತಮ್ಮ ಮನೆಯಲ್ಲಿ ಹೊಟ್ಟೆನೋವು ಎಂದು ಅಳಲು ಶುರು ಮಾಡಿದಾಗ ಪೋಷಕರು ಜಂತು ಹುಳುವಿನ ಸಮಸ್ಯೆ ಎಂದು ಆರಂಭದಲ್ಲಿ ಸುಮ್ಮನಾಗಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್ ಮಾಡಿದ ಪೋಷಕರಿಗೆ ಶಾಕ್ ಆಗಿತ್ತು.

Read Full Story

02:09 PM (IST) Sep 01

ಡೆಹ್ರಾಡೂನ್‌ನಲ್ಲಿ ಹಾವಿನ ಆಕ್ರಮಣ - ಕಾಡಾ ಅಧಿಕಾರಿಗಳ ಮೇಲೆ ಹಾವು ತಿರುಗಿಬಿದ್ದ ಭಯಾನಕ ಕ್ಷಣ

ಡೆಹ್ರಾಡೂನ್‌ನಲ್ಲಿ ಮನೆಯೊಂದರ ಗೋಡೆಯ ಮೇಲೆ ಹಾವೊಂದು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿಯಲು ಹೋದಾಗ ಹಾವು ಅವರ ಮೇಲೆಯೇ ತಿರುಗಿಬಿದ್ದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. 

Read Full Story

01:10 PM (IST) Sep 01

ಮಣಿಪುರಕ್ಕೆ ಹೋಗಲು ಕೊನೆಗೂ ಮೋದಿಗೆ ಟೈಮ್‌ ಸಿಕ್ತು, ಈ ತಿಂಗಳ 2ನೇ ವಾರದಲ್ಲಿ ಈಶಾನ್ಯ ರಾಜ್ಯಕ್ಕೆ ಭೇಟಿ!

ಪ್ರಧಾನಿ ಈಶಾನ್ಯ ರಾಜ್ಯದ ಇಂಫಾಲ್ ಮತ್ತು ಚುರಚಂದಪುರ ಜಿಲ್ಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಲ್ಲಿ ಜನಾಂಗೀಯ ಸಂಘರ್ಷದಿಂದಾಗಿ ಮನೆಗಳಿಂದ ಸ್ಥಳಾಂತರಗೊಂಡ ಜನರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

 

Read Full Story

12:21 PM (IST) Sep 01

ಮಳೆಗೆ ಮನೆಯೇ ಬಿದ್ದರೂ ದೃಢವಾಗಿ ನಿಂತ ಫ್ಯಾನ್ - ಕೊಚ್ಚಿ ಹೋಗ್ತಿದ್ದ ನಾಯಿಯ ರಕ್ಷಣೆ

ಉತ್ತರ ಭಾರತದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮನೆಗಳು ಕುಸಿದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ, ಪಂಜಾಬ್‌ನಲ್ಲಿ ಕುಸಿದ ಮನೆಯಲ್ಲಿ ಫ್ಯಾನ್ ಮಾತ್ರ ದೃಢವಾಗಿ ನಿಂತ ದೃಶ್ಯ ವೈರಲ್ ಆಗಿದೆ.

Read Full Story

11:36 AM (IST) Sep 01

ಮುಕ್ಕಾಲ ಹಾಡಿಗೆ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಾಜಿ ಕಾಲೇಜಿನ ಪ್ರೊಫೆಸರ್ ಬಿಂದಾಸ್ ಡಾನ್ಸ್‌

ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಪ್ರೊಫೆಸರ್ ಪುಷ್ಪರಾಜ್ ಅವರು ಪ್ರಭುದೇವ್ ಅವರ ಮುಕ್ಕಾಲ ಮುಕಾಬಲ ಹಾಡಿಗೆ ನೃತ್ಯ ಮಾಡಿದ್ದು, ಅವರ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ.

Read Full Story

11:09 AM (IST) Sep 01

ಇಂದಿನಿಂದ Paytm UPI ಸ್ಥಗಿತ ಮೆಸೇಜ್ ನಿಮಗೂ ಬಂತಾ? ಯಾರಿಗೆಲ್ಲಾ ಇದು ಅನ್ವಯ? ಡಿಟೇಲ್ಸ್​ ಇಲ್ಲಿದೆ...

ಇಂದಿನಿಂದ Paytm UPI ಸ್ಥಗಿತ ಎನ್ನುವ ಸಂದೇಶ ನಿಮಗೂ ಬಂದಿರಬೇಕು ಅಲ್ವಾ? ಇದನ್ನು ನೋಡಿ ಶಾಕ್​ ಆಗಿದ್ಯಾ? ಯಾರಿಗೆಲ್ಲಾ ಇದು ಅನ್ವಯ? ಡಿಟೇಲ್ಸ್​ ಇಲ್ಲಿದೆ...

 

Read Full Story

10:55 AM (IST) Sep 01

ವಿಚಿತ್ರವಾಗಿ ಡಾನ್ಸ್ ಮಾಡಿ ಹೆರಿಗೆ ನೋವಿನಲ್ಲೂ ಹೆಂಡ್ತಿ ಮುಖದಲ್ಲಿ ನಗು ತರಿಸಿದ ಗಂಡ - ವೀಡಿಯೋ ವೈರಲ್

ಹೆರಿಗೆ ನೋವಿನಲ್ಲಿದ್ದ ಪತ್ನಿಯನ್ನು ನಗಿಸಲು ಪತಿಯೊಬ್ಬ ಮಾಡಿದ ವಿಶಿಷ್ಟ ಪ್ರಯತ್ನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೃತ್ಯ ಮಾಡುವ ಮೂಲಕ ಪತ್ನಿಯನ್ನು ನಗಿಸಲು ಯತ್ನಿಸಿದ ಪತಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ. 

Read Full Story

10:21 AM (IST) Sep 01

ಕೇರಳದ ಕೆನರಾ ಬ್ಯಾಂಕ್‌ನಲ್ಲಿ ಗೋಮಾಂಸ ಉತ್ಸವ ಮಾಡಿದ ಉದ್ಯೋಗಿಗಳು..!

ಕೇರಳದ ಎರ್ನಾಕುಲಂನ ಕೆನರಾ ಬ್ಯಾಂಕ್‌ನಲ್ಲಿ ಗೋಮಾಂಸ ನಿಷೇಧ ಮಾಡಿ ಎಂದು ಮ್ಯಾನೇಜರ್ ಆದೇಶದ ವಿರುದ್ಧ ಉದ್ಯೋಗಿಗಳು ಗೋಮಾಂಸ ಉತ್ಸವ ಆಯೋಜಿಸಿದ ಘಟನೆ ನಡೆದಿದೆ..

Read Full Story

10:16 AM (IST) Sep 01

ಚಿನ್ನಾಭರಣ ಪ್ರಿಯರಿಗೆ ಬಿಗ್‌ ಶಾಕ್; ತಲೆ ಗಿರ್ ಅನ್ನುವಷ್ಟು ಏರಿಕೆಯಾದ ಬೆಲೆ

Gold And Silver Price:ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, 1 ಕೆಜಿ ಬೆಳ್ಳಿ ಬೆಲೆ 1,26,000 ರೂ. ಆಗಿದೆ.

Read Full Story

07:35 AM (IST) Sep 01

LPG Price Sep 1, 2025 - ತಿಂಗಳ ಮೊದಲ ದಿನವೇ ಸಂತಸದ ಸುದ್ದಿ; ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಇಳಿಕೆ

LPG cylinder price :  ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಇಂಡಿಯನ್ ಆಯಿಲ್ ಮತ್ತು ಇತರ ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು ಬೆಲೆಗಳನ್ನು ಪರಿಷ್ಕರಿಸುತ್ತವೆ.

Read Full Story

More Trending News