ನವದೆಹಲಿ: ಮಾಲಿನ್ಯದ ಕಾರಣ ಗೋಚರತೆ ನಷ್ಟವಾಗಿ 8 ಬಸ್ಗಳು ಹಾಗೂ 3 ಸಣ್ಣ ವಾಹನಗಳು ಸರಣಿಯಾಗಿ ಒಂದಕ್ಕೊಂದು ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಮಂಗಳವಾರ ನಡೆದಿದೆ. ಇದರಿಂದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯಗಳಿಂದ 13 ಜನ ಮೃತರಾಗಿದ್ದಾರೆ. 25 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಮುನಾ ಎಕ್ಸ್ಪ್ರೆಸ್ವೇನ ಆಗ್ರಾ-ನೊಯ್ಡಾ ಮಾರ್ಗದಲ್ಲಿ ದಟ್ಟ ಹೊಗೆ ವಾತಾವರಣವನ್ನು ವ್ಯಾಪಿಸಿತ್ತು
10:53 PM (IST) Dec 17
ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ ಪಡೆದಿದೆ. ಅದು ಅಂಬಾನಿ ಕುಟುಂಬ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕುಟುಂಬ ಯಾವುದು?
10:01 PM (IST) Dec 17
3 ಗಂಟೆ ಕಾದರೂ ತಗ್ಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು, ಭಾರತದಲ್ಲಿ ಹಲವೆಡೆ ವಿಪರೀತ ಚಳಿ ವಾತಾವರಣವಿದೆ. ಮೈದಾನ ಕಾಣದಷ್ಟು ಮಂಜು ಕವಿದ ಕಾರಣ ಪಂದ್ಯ ರದ್ದುಗೊಳಿಸಲಾಗಿದೆ.
09:01 PM (IST) Dec 17
ನಾಳೆ ಡೆಲ್ಲಿ ಸೇರಿ ಕೆಲ ವಲಯದ ಶಾಲಾ ಕಾಲೇಜಿಗೆ ರಜೆ ಘೋಷಣೆ, ಪೋಷಕರಿಗೆ ಮಹತ್ವದ ಅಪ್ಡೇಟ್ ನೀಡಲಾಗಿದೆ. ಎಲ್ಲೆಲ್ಲಿ ರಜೆ ಘೋಷಣೆ ಮಾಡಲಾಗಿದೆ? ಸರ್ಕಾರ ಹೊರಡಿಸಿದ ಮಹತ್ವದ ಸೂಚನೆ ಏನು?
08:22 PM (IST) Dec 17
ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್ಕೌಂಟರ್ ಮಾಡಿ ಮುಗಿಸಿದ ಪೊಲೀಸ್, ಎರಡೇ ದಿನದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ, ಎನ್ಕೌಂಟರ್ ಮೂಲಕ ಕತೆ ಮುಗಿಸಿದ್ದಾರೆ.
08:16 PM (IST) Dec 17
ಶ್ರೀಲಂಕಾದ ಅಧಿಕಾರಿಗಳು, ಪೆಟ್ರೋಲಿಯಂ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪದ ಮೇಲೆ ವಿಶ್ವಕಪ್ ವಿಜೇತ ಕ್ರಿಕೆಟ್ ನಾಯಕ ಅರ್ಜುನ ರಣತುಂಗ ಅವರನ್ನು ಬಂಧಿಸಲು ಯೋಜಿಸಿದ್ದಾರೆ ಎಂದು ಸೋಮವಾರ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
07:37 PM (IST) Dec 17
07:36 PM (IST) Dec 17
ಡಿ.19ಕ್ಕೆ ರಾಜಕೀಯ ಭೂಕಂಪಕ್ಕೆ ಮೋದಿ ಸರ್ಕಾರ ಪತನ, ಭವಿಷ್ಯ ನುಡಿದ ಸಂಜಯ್ ರಾವತ್, ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ರಾವತ್ ನೀಡಿದ ಕಾರಣವೇನು ಗೊತ್ತಾ?
07:06 PM (IST) Dec 17
ಲಖನೌ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಉಪನಾಯಕ ಶುಭ್ಮನ್ ಗಿಲ್, ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ ನೋಡಿ.
06:52 PM (IST) Dec 17
ಈ ಜರ್ಮನ್ ಶೆಫರ್ಡ್ ಶ್ವಾನಗಳು ಮನೆಯ ಪುಟ್ಟ ಮಕ್ಕಳು ಹಾಗೂ ಮನೆಯ ಮಾಲೀಕರ ಜೊತೆಗೆ ಅದು ಹೊಂದಿರುವ ಸಂಬಂಧ ಬಹಳ ಅನೋನ್ಯ ಹಾಗೂ ಬಹಳ ಭಾವುಕತೆಯಿಂದ ಕೂಡಿರುವಂತಹದ್ದು, ಹಾಗೆಯೇ ಇಲ್ಲೊಂದು ಪುಟ್ಟ ಬಾಲಕಿ ಹಾಗೂ ಜರ್ಮನ್ ಶೆಫರ್ಡ್ ನಾಯಿಯ ಒಡನಾಟದ ವೀಡಿಯೋ ಈಗ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದೆ.
06:49 PM (IST) Dec 17
ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು, ಎರಡು ಪಕ್ಷದ ಜನಪ್ರತಿನಿಧಿಗಳು ಜುಟ್ಟು ಹಿಡಿದು ಬಡಿದಾಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ದೇಶ ಯಾವುದಾದರೂ ಅಸ್ತ್ರ ಒಂದೆ ಎಂದು ಭರ್ಜರಿ ಕಮೆಂಟ್ ಮಾಡಿದ್ದಾರೆ.
06:38 PM (IST) Dec 17
ಐಪಿಎಲ್ ಹರಾಜಿನಲ್ಲಿ 25.20 ಕೋಟಿಗೆ ಕೋಲ್ಕತ್ತಾ ತಂಡಕ್ಕೆ ಮಾರಾಟವಾದ ಕ್ಯಾಮರೂನ್ ಗ್ರೀನ್, ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು. ಕಡಿಮೆ ಹಣವಿದ್ದರೂ ಮುಂಬೈ ಇಂಡಿಯನ್ಸ್ ಗ್ರೀನ್ಗಾಗಿ ಮೊದಲ ಬಿಡ್ ಮಾಡಿತ್ತು. ಈ ಬಗ್ಗೆ ಆಕಾಶ್ ಅಂಬಾನಿ ತುಟಿಬಿಚ್ಚಿದ್ದಾರೆ.
06:15 PM (IST) Dec 17
ಟೀಮ್ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಕ್ರೀಡಾ ನಿರೂಪಕಿ ಸಾಹಿಬಾ ಬಾಲಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಕಾಫಿ ಡೇಟ್ನಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಇಬ್ಬರೂ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
06:03 PM (IST) Dec 17
ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್ನಲ್ಲಿ 6,500 ರೂ ಏರಿಕೆ, ಕಳೆದೆರಡು ದಿನ ಇಳಿಕೆಯತ್ತ ಸಾಗಿದ್ದ ಬಂಗಾರ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ ದುಬಾರಿಯಾಗಿದೆ.
05:52 PM (IST) Dec 17
ಸಿಬ್ಬಂದಿ ಆಯ್ಕೆ ಆಯೋಗ (SSC) 2026ರ GD ಕಾನ್ಸ್ಟೇಬಲ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಅಸ್ಸಾಂ ರೈಫಲ್ಸ್, ಮತ್ತು ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ನಲ್ಲಿ ಒಟ್ಟು 25,487 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
05:32 PM (IST) Dec 17
ತನ್ನ ಚರ್ಮದ ಬಣ್ಣ ಕಪ್ಪಾಗಿದೆ ಎಂದು ಸಹಪಾಠಿಗಳು ಆಡಿಕೊಂಡಿದ್ದಕ್ಕೆ 5 ವರ್ಷದ ಬಾಲಕಿಯೊಬ್ಬಳು ತಾನು ಕುರೂಪಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಈ ಘಟನೆಯ ವಿಡಿಯೋವನ್ನು ತಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶಾಲೆಗಳಲ್ಲಿನ ವರ್ಣತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
05:26 PM (IST) Dec 17
Sreeleela's Emotional Appeal Don't Promote AI-Generated Vulgar Content & Trash ನಟಿ ಶ್ರೀಲೀಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಎಐ-ರಚಿತ ಅಸಭ್ಯ ವಿಷಯಗಳ ವಿರುದ್ಧ ಗಂಭೀರ ಮನವಿ ಮಾಡಿದ್ದಾರೆ.
05:19 PM (IST) Dec 17
ಅ.1ರಿಂದ ಜನವರಿ 31ರ ವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ, ಚಳಿಗಾಲದ ಸಮಯದಲ್ಲಿ ಟೋಲ್ ಸಂಗ್ರಹದಿಂದ ಸಮಸ್ಯೆಗಳೇ ಹೆಚ್ಚಾಗುತ್ತಿದೆ. ಹಣ ಸಂಗ್ರಹಕ್ಕಿಂತ ಅಪತ್ತುಗಳೇ ಹೆಚ್ಚುತ್ತಿದೆ ಎಂದಿದೆ.
05:10 PM (IST) Dec 17
04:22 PM (IST) Dec 17
ರೈಲ್ವೆ ಮಂಡಳಿಯು ರಿಸರ್ವೇಷನ್ ಚಾರ್ಟ್ ತಯಾರಿಸುವ ಸಮಯವನ್ನು ಪರಿಷ್ಕರಿಸಿದೆ. ಈ ಹಿಂದೆ ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಸಿದ್ಧವಾಗುತ್ತಿದ್ದ ಚಾರ್ಟ್, ಈಗ ಹೆಚ್ಚಿನ ರೈಲುಗಳಿಗೆ 10 ಗಂಟೆಗಳ ಮುಂಚಿತವಾಗಿ ಸಿದ್ಧವಾಗಲಿದೆ.
04:19 PM (IST) Dec 17
ತಾಳಿ ಕಟ್ಟಿದ ಬೆನ್ನಲ್ಲೇ ಆಫೀಸ್ ಕೆಲಸಕ್ಕೆ ಕೂತ ವಧು, ಹನಿಮೂನ್ನಲ್ಲೂ ಆನ್ಲೈನ್ ಮೀಟಿಂಗ್; ಗಂಡ ವೈಟಿಂಗ್, ಸಹೋದರಿಯ ಮದುವೆ ಹಾಗೂ ಹನಿಮೂನ್ ಕುರಿತು ಸಹೋದರ ಹೇಳಿಕೊಂಡಿದ್ದಾನೆ. ನವ ಜೋಡಿಯ ಮದುವೆ ಜೀವನ, ಕೆಲಸ ಹೇಗೆ ನಡೆಯುತ್ತಿದೆ?
04:06 PM (IST) Dec 17
ಶಾಲಾ ಕಾರ್ಯಕ್ರಮವೊಂದರಲ್ಲಿ, ಮಕ್ಕಳು ವೇದಿಕೆಯ ಮೇಲೆ ನೃತ್ಯ ಮಾಡುವಾಗ ಸ್ಟೆಪ್ಸ್ ಮರೆಯಬಾರದೆಂದು ಶಿಕ್ಷಕಿಯೊಬ್ಬರು ಪ್ರೇಕ್ಷಕರಿಗೆ ಕಾಣದಂತೆ ಮರೆಯಲ್ಲಿ ನಿಂತು ನೃತ್ಯ ಮಾಡಿ ಮಾರ್ಗದರ್ಶನ ನೀಡಿದ್ದಾರೆ. ಮಕ್ಕಳ ಯಶಸ್ಸಿಗಾಗಿ ಅವರು ಪಟ್ಟ ಶ್ರಮದ ಈ ವೀಡಿಯೋ ವೈರಲ್ ಆಗಿದೆ.
03:44 PM (IST) Dec 17
03:30 PM (IST) Dec 17
ನಾಳೆಯಿಂದಲೇ ಖಾಸಗಿ-ಸರ್ಕಾರಿ ಶೇ.50 ಉದ್ಯೋಗಿಗಳಿಗೆ ರಷ್ಟು ವರ್ಕ್ ಫ್ರಮ್ ಹೋಮ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ನಿಯಮ ಪಾಲಿಸದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ದಿಢೀರ್ ಈ ನಿರ್ಧಾರ ಯಾಕೆ?
03:03 PM (IST) Dec 17
ಒಂದು ಕೋಟಿ ರೂಪಾಯಿ ವಿಮಾ ಹಣಕ್ಕಾಗಿ ಸಾಲದಲ್ಲಿದ್ದ ವ್ಯಕ್ತಿಯೊಬ್ಬ, ಲಿಫ್ಟ್ ಕೇಳಿದ ಅಮಾಯಕನನ್ನು ತನ್ನ ಕಾರಿನಲ್ಲಿ ಸುಟ್ಟು ಕೊಂದು ತಾನೇ ಸತ್ತಂತೆ ನಾಟಕವಾಡಿದ್ದಾನೆ. ಆದರೆ ಆತ ಸಿಕ್ಕಿಬಿದ್ದಿದ್ದು ಹೇಗೆ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
02:48 PM (IST) Dec 17
ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ, ವಂತಾರಾಗೆ ಭೇಟಿ ನೀಡಿದ ಮೆಸ್ಸಿಗೆ ಈ ಅತೀ ದುಬಾರಿ ಉಡುಗೊರೆಯನ್ನು ನೀಡಲಾಗಿದೆ. ಈ ವಾಚ್ ಬೆಲೆ ಎಷ್ಟು?
02:25 PM (IST) Dec 17
Indian Railways: ಭಾರತೀಯ ರೈಲ್ವೆಯಲ್ಲಿ ರಾತ್ರಿ ಪ್ರಯಾಣಿಸುವಾಗ ಪ್ರಯಾಣಿಕರು ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಆರಾಮದಾಯಕ ಪ್ರಯಾಣಕ್ಕಾಗಿ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ.
01:17 PM (IST) Dec 17
ಕಾಲ ಎಷ್ಟೇ ಮುಂದುವರೆದಿದ್ದರೂ, ವಿಚಾರಗಳು ಎಷ್ಟೋ ಬದಲಾಗಿದ್ದರು. ಮಕ್ಕಳ ಮದುವೆ ಸಂಬಂಧದ ವಿಚಾರ ಬಂದಾಗ ಬಹುತೇಕ ಪೋಷಕರು ಹುಡುಗ/ಹುಡುಗಿ ಒಂದೇ ಜಾತಿ ಆಗಿರಬೇಕು ಎಂದು ಹೇಳುವುದು ಸಾಮಾನ್ಯವಾಗಿದೆ. ಹೀಗಿರುವಾಗ ಇಲ್ಲೊಂದು ಕಡೆ ಮಗಳ ಪ್ರೀತಿ ಕೇಳಿದ ತಂದೆ ಏನು ಹೇಳಿದ್ದಾರೆ ನೋಡಿ…
12:49 PM (IST) Dec 17
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಅವರ ಹಿಜಾಬ್ ಎಳೆದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯಿಂದ ತೀವ್ರವಾಗಿ ನೊಂದಿರುವ ವೈದ್ಯೆ, ತಮಗೆ ದೊರೆತ ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ್ದಾರೆ.
12:34 PM (IST) Dec 17
ಅಬುಧಾಬಿ: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು 29 ವಿದೇಶಿಗರು ಸೇರಿದಂತೆ 77 ಆಟಗಾರರನ್ನು ಖರೀದಿಸಿದವು. ಒಟ್ಟು ₹215.45 ಕೋಟಿ ಖರ್ಚು ಮಾಡಿದವು. ಈ ಬಾರಿಯ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು.
11:57 AM (IST) Dec 17
ಎಂಜಿನಿಯರಿಂಗ್ ಕಾಮಗಾರಿಯಿಂದಾಗಿ, ತಾಳಗುಪ್ಪ- ಬೆಂಗಳೂರು ನಡುವಿನ ರೈಲು ಸೇರಿದಂತೆ ಕೆಲ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಡಿಸೆಂಬರ್ ತಿಂಗಳ ನಿರ್ದಿಷ್ಟ ದಿನಾಂಕಗಳಂದು ರೈಲುಗಳನ್ನು ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ, ಇನ್ನು ಕೆಲವನ್ನು ಬೇರೆ ಮಾರ್ಗಗಳಲ್ಲಿ ತಿರುಗಿಸಲಾಗಿದೆ.
11:05 AM (IST) Dec 17
ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ, ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ₹25.20 ಕೋಟಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.
07:32 AM (IST) Dec 17
2025ನೇ ಇಸವಿಯಲ್ಲಿ ಹಲವು ಬಾಲಿವುಡ್ ಚಿತ್ರಗಳು ತೆರೆಕಂಡವು. ಆದರೆ, ಇವುಗಳಲ್ಲಿ ಕೆಲವು ನಿರ್ಮಾಪಕರ ಹಣವನ್ನು ಸಂಪೂರ್ಣವಾಗಿ ಮುಳುಗಿಸಿದವು. ಹಾಗಿದ್ರೆ ಆ ಸಿನಿಮಾಗಳು ಯಾವುವು ಅಂತ ನೋಡೋಣ ಬನ್ನಿ