ನವದೆಹಲಿ: ಪ್ರಧಾನಿ ಮೋದಿ ಮಿತವ್ಯಯ ಕರೆ, ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಶೇ.15ರಷ್ಟು ಏರಿಕೆ ಬೆನ್ನಲ್ಲೇ ದೇಶದಲ್ಲಿ ಒಂದೇ ದಿನ ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ 8,500 ರು.ಹೆಚ್ಚಾಗಿದ್ದರೆ, ಬೆಳ್ಳಿ ಕೇಜಿಗೆ 20,500 ರು. ಜಿಗಿದಿದೆ.
ದೆಹಲಿಯಲ್ಲಿ ಬುಧವಾರ ಅಂತ್ಯದ ವೇಳೆ 10 ಗ್ರಾಂಗೆ 1,56,800ರು.ಇದ್ದ ಚಿನ್ನದ ದರ 8550 ರು. ಏರಿಕೆ ಕಂಡು 1,65,350 ರು.ಗೆ ತಲುಪಿದೆ. ಬೆಳ್ಳಿ ಕೇಜಿಗೆ 2,97, 500 ರು.ಗೆ ತಲುಪಿದೆ. ಹಿಂದಿನ ದಿನ ಈ ದರ 2,77,000 ರು.ಇತ್ತು.
ಬೆಂಗಳೂರಲ್ಲೂ ಏರಿಕೆ
ಬೆಂಗಳೂರಿನಲ್ಲಿಯೂ ದರ ಏರಿಕೆ ಆಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನ 8020 ರು. ಹೆಚ್ಚಳವಾಗಿ 1,62, 000 ರು.ಗೆ ತಲುಪಿದೆ. 22 ಕ್ಯಾರೆಟ್ ಚಿನ್ನ 7350 ರು. ಏರಿಕೆಯಾಗಿ 1,48,500 ರು. ಆಗಿದೆ. ಇನ್ನು ಚಿನ್ನ ಕೇಜಿಗೆ 20,000 ರು. ಹೆಚ್ಚಳದೊಂದಿಗೆ 3 ಲಕ್ಷ ರು.ಗೆ ತಲುಪಿದೆ.
10:14 PM (IST) May 14
ಅಮೆರಿಕ ಸಂಸದ ಇದೀಗ ಭಾರಿ ವಿವಾದ ಸೃಷ್ಟಿಸಿದ್ದಾರೆ. ಅಮೆರಿಕದ H-1B ವೀಸಾ ಭಾರತೀಯರ ಕೈಸೇರುತ್ತಿದೆ. ಅಮೆರಿಕದ ವೀಸಾ ಕಾರ್ಟೆಲ್ ವ್ಯವಸ್ಥೆ ಹೀಗೆ ಹದಗೆಡಲು ಭಾರತದ ಚಿಲ್ಕೂರು ದೇವಸ್ಥಾನದ ಕೈವಾಡವಿದೆ ಎಂದಿದ್ದಾರೆ
08:48 PM (IST) May 14
ಭಾರತದ ಧುರಂಧರ್ ಸಿನಿಮಾ ಪಾಕಿಸ್ತಾನವನ್ನು ನೆಗಟೀವ್ ರೀತಿಯಲ್ಲಿ ತೋರಿಸಿದೆ. ಉಗ್ರರರೆಂದು ಬಿಂಬಿಸಿದೆ ಎಂದು ಪ್ರತಿಯಾಗಿ ಮೆರಾ ಲ್ಯಾರಿ ಎಂಬ ಸಿನಿಮಾ ರಿಲೀಸ್ ಮಾಡಿತ್ತು. ಇದರ ಪಯಣ ಈಗ ಬಾರಿ ಟ್ರೋಲ್ ಆಗಿದೆ.
08:04 PM (IST) May 14
ಬಾಲಿವುಡ್ ನಟ ರಣಬೀರ್ ಕಪೂರ್ ರಾಮಾಯಾಣ ಸಿನಿಮಾದ ಶ್ರೀರಾಮನ ಪಾತ್ರಕ್ಕಾಗಿ ಹಲವು ತ್ಯಾಗ ಮಾಡಿದ್ದಾರೆ. ಇದೀಗ ರಣಬೀರ್ ಕಪೂರ್ ಆಧ್ಯಾತ್ಮಕ್ಕೆ ವಾಲಿದ್ರಾ? ಆಯೋಧ್ಯೆಯಲ್ಲಿ ಭೂಮಿ ಖರೀದಿ ಕೆಲ ಸೂಚನೆ ನೀಡಿದೆ.
07:33 PM (IST) May 14
ತ್ರಿಷಾ.. ಸದ್ಯ ಕಾಲಿವುಡ್ನಲ್ಲಿ ಸಂಚಲಸೃಷ್ಟಿಸಿರುವ ನಟಿ. ಅದರಲ್ಲೂ ವಿಜಯ್ ದಳಪತಿ ಜೊತೆ ಹಿಂದೆ ಮುಂದೆ ಸುತ್ತುತ್ತಿರೋ ತ್ರಿಷಾ ಕೃಷ್ಣನ್ತಮಿಳುನಾಡಿನ ಹೊಸ ಜಯಲಲಿತಾ ಅನ್ನೋ ಹಾಗೆ ಫೊಟ್ರೆ ಆಗುತ್ತಿದ್ದಾರೆ. ಆ ಕಡೆ ವಿಜಯ್ ತಮಿಳುನಾಡು ಸಿಎಂ ಆಗುತ್ತಿದ್ದಂತೆ ಈ ಕಡೆ ನಟಿ ತ್ರಿಷಾಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ.
06:55 PM (IST) May 14
ರೈಲು ಮಾರ್ಗದ ಕಾಮಗಾರಿಯಿಂದಾಗಿ, ವಿಜಯಪುರ-ಹುಬ್ಬಳ್ಳಿ ವಿಶೇಷ ರೈಲು, ಪಂಚಗಂಗಾ ಎಕ್ಸ್ಪ್ರೆಸ್ ಮತ್ತು ಮುರುಡೇಶ್ವರ-ಬೆಂಗಳೂರು ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿಟೇಲ್ಸ್ ಇಲ್ಲಿದೆ.
06:34 PM (IST) May 14
ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಮಣೆ ಹಾಕಿದೆ. ಶ್ರೀಲಂಕಾ, ಆಫ್ಘಾನಿಸ್ತಾನ ವಿರುದ್ದದ ತ್ರಿಕೋನ ಸರಣಿಗೆ ಭಾರತ ಎ ತಂಡ ಪ್ರಕಟಗೊಂಡಿದ್ದು, ವೈಭವ್ಗೆ ಸ್ಥಾನ ನೀಡಲಾಗಿದೆ.
05:51 PM (IST) May 14
05:45 PM (IST) May 14
ಭಾರತದ ಮೊದಲ ಸ್ವದೇಶಿ ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಹಮದಾಬಾದ್-ಧೋಲೇರಾ ನಡುವಿನ ಈ ಕಾರಿಡಾರ್, ₹20,667 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಜೊತೆಗೆ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
05:27 PM (IST) May 14
ಪೂಜೆ, ಸಮಾರಂಭಗಳಿಗಾಗಿ ಮುಟ್ಟನ್ನು ಮುಂದೂಡುವ ಮಾತ್ರೆ ಸೇವಿಸಿದ ಯುವತಿಯೊಬ್ಬಳು ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈ ಹಾರ್ಮೋನು ಮಾತ್ರೆಗಳು ಥ್ರಂಬೋಸಿಸ್ನಂತಹ ಗಂಭೀರ ಅಪಾಯ ಉಂಟುಮಾಡಬಹುದು, ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
05:22 PM (IST) May 14
ಯುದ್ಧ ಸಂಕಷ್ಟದಿಂದ ಎದುರಾಗಿರುವ ಸವಾಲು ಎದುರಿಸಲು ಮೋದಿ ಮಾಡಿದ ಹಲವು ಮನವಿಯಲ್ಲಿ ಮನೆಯಿಂದ ಕೆಲಸ ಕೂಡ ಒಂದು. ಈ ಮನವಿ ಬೆನ್ನಲ್ಲೇ ಇದೀಗ ವಾರದಲ್ಲಿ 2 ದಿನ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ.
04:55 PM (IST) May 14
ಒಮಾನ್ ಕರಾವಳಿ ಬಳಿ ಡ್ರೋನ್ ದಾಳಿಗೆ ತುತ್ತಾಗಿ ಗುಜರಾತ್ ಮೂಲದ 'ಹಾಜಿ ಅಲಿ' ಎಂಬ ಭಾರತೀಯ ಸರಕು ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 14 ಭಾರತೀಯ ನಾವಿಕರನ್ನು ಒಮಾನ್ ಅಧಿಕಾರಿಗಳು ರಕ್ಷಿಸಿದ್ದಾರೆ.
04:36 PM (IST) May 14
ತಲೈವಾ ಚಿತ್ರದ ಪೋಸ್ಟರ್ಗಳಲ್ಲಿ ಹಾಗೂ ಹಾಡುಗಳಲ್ಲಿ Time to Lead ಅನ್ನೋ ಸಾಲುಗಳನ್ನು ಬಳಸಲಾಗಿತ್ತು. ಇದನ್ನೇ ನೇರವಾಗಿ ತಮಗೆ ಸವಾಲು ಎಂದು ಪರಿಗಣಿಸಿದ ಅಂದಿನ ಜಯಲಲಿತಾ ಸರ್ಕಾರ ಚಿತ್ರಕ್ಕೆ ಬಾಂಬ್ ಬೆದರಿಕೆ ಇದೆ ಅನ್ನೋ ಕಾರಣಗಳನ್ನು ನೀಡಿ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆಗೆಯನ್ನೇ ನಿಲ್ಲಿಸಿತ್ತು.
04:04 PM (IST) May 14
03:06 PM (IST) May 14
01:48 PM (IST) May 14
12:13 PM (IST) May 14
ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದೆ.
12:01 PM (IST) May 14
11:38 AM (IST) May 14
10:06 AM (IST) May 14
Actor Sharib Hashmi: 'ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಟ ಶಾರಿಬ್ ಹಶ್ಮಿ ಪತ್ನಿ ನಸ್ರೀನ್ 6ನೇ ಬಾರಿಗೆ ಬಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಸರಣಿ ಶಸ್ತ್ರಚಿಕಿತ್ಸೆಗಳಿಂದ ಮುಖದ ರೂಪ ಬದಲಾದರೂ, ಪತಿ ಶಾರಿಬ್ ಅವರ ಅಚಲ ಪ್ರೀತಿ, ಬೆಂಬಲವೇ ತಮ್ಮ ದೊಡ್ಡ ಶಕ್ತಿ ಎಂದು ನಸ್ರೀನ್ ಹೇಳಿಕೊಂಡಿದ್ದಾರೆ.
09:24 AM (IST) May 14
08:58 AM (IST) May 14
ಟಾಟಾ ಐಪಿಎಲ್ 2026ರ ಪ್ಲೇಆಫ್ ರೇಸ್ ತೀವ್ರಗೊಂಡಿದ್ದು, ಸಿಎಸ್ಕೆ, ಆರ್ಸಿಬಿ ಮತ್ತು ಎಸ್ಆರ್ಎಚ್ ತಂಡಗಳ ಭವಿಷ್ಯವನ್ನು ನಿರ್ಧರಿಸಬಲ್ಲ ಐವರು ಯುವ ಆಟಗಾರರನ್ನು ಕ್ರಿಕೆಟ್ ತಜ್ಞರು ಗುರುತಿಸಿದ್ದಾರೆ.
08:23 AM (IST) May 14