LIVE NOW
Published : May 14, 2026, 06:51 AM ISTUpdated : May 14, 2026, 09:24 AM IST

India Latest News Live: ಪುಷ್ಪಾ ಸರ್ಕಾರ ಎಂಬ ಉದಯನಿಧಿ ಸ್ಟಾಲಿನ್ ವ್ಯಂಗ್ಯಕ್ಕೆ ಸಿಎಂ ವಿಜಯ್ ಮೊದಲ ತಿರುಗೇಟು

ಸಾರಾಂಶ

ನವದೆಹಲಿ: ಪ್ರಧಾನಿ ಮೋದಿ ಮಿತವ್ಯಯ ಕರೆ, ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಶೇ.15ರಷ್ಟು ಏರಿಕೆ ಬೆನ್ನಲ್ಲೇ ದೇಶದಲ್ಲಿ ಒಂದೇ ದಿನ ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ 8,500 ರು.ಹೆಚ್ಚಾಗಿದ್ದರೆ, ಬೆಳ್ಳಿ ಕೇಜಿಗೆ 20,500 ರು. ಜಿಗಿದಿದೆ.

ದೆಹಲಿಯಲ್ಲಿ ಬುಧವಾರ ಅಂತ್ಯದ ವೇಳೆ 10 ಗ್ರಾಂಗೆ 1,56,800ರು.ಇದ್ದ ಚಿನ್ನದ ದರ 8550 ರು. ಏರಿಕೆ ಕಂಡು 1,65,350 ರು.ಗೆ ತಲುಪಿದೆ. ಬೆಳ್ಳಿ ಕೇಜಿಗೆ 2,97, 500 ರು.ಗೆ ತಲುಪಿದೆ. ಹಿಂದಿನ ದಿನ ಈ ದರ 2,77,000 ರು.ಇತ್ತು.

ಬೆಂಗಳೂರಲ್ಲೂ ಏರಿಕೆ

ಬೆಂಗಳೂರಿನಲ್ಲಿಯೂ ದರ ಏರಿಕೆ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 8020 ರು. ಹೆಚ್ಚಳವಾಗಿ 1,62, 000 ರು.ಗೆ ತಲುಪಿದೆ. 22 ಕ್ಯಾರೆಟ್‌ ಚಿನ್ನ 7350 ರು. ಏರಿಕೆಯಾಗಿ 1,48,500 ರು. ಆಗಿದೆ. ಇನ್ನು ಚಿನ್ನ ಕೇಜಿಗೆ 20,000 ರು. ಹೆಚ್ಚಳದೊಂದಿಗೆ 3 ಲಕ್ಷ ರು.ಗೆ ತಲುಪಿದೆ.

09:24 AM (IST) May 14

ಪುಷ್ಪಾ ಸರ್ಕಾರ ಎಂಬ ಉದಯನಿಧಿ ಸ್ಟಾಲಿನ್ ವ್ಯಂಗ್ಯಕ್ಕೆ ಸಿಎಂ ವಿಜಯ್ ಮೊದಲ ತಿರುಗೇಟು

ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ವಿಜಯ್, ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್‌ಗೆ ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದ್ದಾರೆ. ತಮ್ಮ ಟಿವಿಕೆ ಪಕ್ಷವು ಡಿಎಂಕೆಗಿಂತ ಹೆಚ್ಚು ಮತಗಳನ್ನು ಪಡೆದಿದೆ ಎಂದು ಸಾಬೀತುಪಡಿಸಿ, ತಮ್ಮ ಸರ್ಕಾರವು ಜನಪರ ಕೆಲಸಗಳ ಮೂಲಕವೇ ಉತ್ತರ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

08:58 AM (IST) May 14

ಪ್ಲೇಆಫ್ ಕನಸಿನ ರೂವಾರಿಗಳು; ಚೇತೇಶ್ವರ, ಬೌಷರ್ ಗಮನ ಸೆಳೆದ ಐವರು IPL ಪ್ರತಿಭೆಗಳು

ಟಾಟಾ ಐಪಿಎಲ್ 2026ರ ಪ್ಲೇಆಫ್ ರೇಸ್ ತೀವ್ರಗೊಂಡಿದ್ದು, ಸಿಎಸ್‌ಕೆ, ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ತಂಡಗಳ ಭವಿಷ್ಯವನ್ನು ನಿರ್ಧರಿಸಬಲ್ಲ ಐವರು ಯುವ ಆಟಗಾರರನ್ನು ಕ್ರಿಕೆಟ್ ತಜ್ಞರು ಗುರುತಿಸಿದ್ದಾರೆ. 

Read Full Story

08:23 AM (IST) May 14

Gold Price - ಖರೀದಿ ಕಡಿಮೆ ಮಾಡದಿದ್ರೆ ಚಿನ್ನ ಮತ್ತಷ್ಟೂ ದುಬಾರಿ - ಬಿವಿ ರುದ್ರಮೂರ್ತಿ

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರ ಚಿನ್ನದ ಖರೀದಿ ಮಿತಿಗೊಳಿಸುವ ಕರೆ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ಹೂಡಿಕೆ ತಜ್ಞ ಬಿ.ವಿ.ರುದ್ರಮೂರ್ತಿ ವಿಶ್ಲೇಷಿಸಿದ್ದಾರೆ. ಚಿನ್ನದ ಆಮದು, ವಿದೇಶಿ ವಿನಿಮಯ ಮತ್ತು ಪರ್ಯಾಯ ಹೂಡಿಕೆಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.
Read Full Story

More Trending News