ನವದೆಹಲಿ: 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ 10 ಚುನಾವಣಾ ಟ್ರಸ್ಟ್ಗಳು 3826.34 ಕೋಟಿ ರು. ದೇಣಿಗೆ ಸ್ವೀಕರಿಸಿ, ರಾಜಕೀಯ ಪಕ್ಷಗಳಿಗೆ ಹಂಚಿದೆ. ಈ ಪೈಕಿ ಬಿಜೆಪಿ ಅತಿ ಹೆಚ್ಚು ಅಂದರೆ 3157 ಕೋಟಿ ರು. ದೇಣಿಗೆ ಸ್ವೀಕರಿಸಿದೆ. ಇದು ಒಟ್ಟು ದೇಣಿಗೆಯಲ್ಲಿ ಶೇ.82ರಷ್ಟಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ದೇಣಿಗೆ ಕುರಿತ ಅಂಕಿ ಅಂಶ ಆಧರಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ. ಒಟ್ಟು 20 ಚುನಾವಣಾ ಟ್ರಸ್ಟ್ಗಳ ಪೈಕಿ 10 ದೇಣಿಗೆ ಸಂಗ್ರಹಿಸಿವೆ, 5 ಸಂಸ್ಥೆಗಳ ಕುರಿತ ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ಉಳಿದಂತೆ ಕಾಂಗ್ರೆಸ್ 298.7 ಕೋಟಿ ರು., ಟಿಎಂಸಿಗೆ 102 ಕೋಟಿ ರು. ನೀಡಲಾಗಿದೆ. ಉಳಿದಂತೆ 19 ಇತರ ಪಕ್ಷಗಳು 267.9 ಕೋಟಿ ರು. ದೇಣಿಗೆ ಸ್ವೀಕರಿಸಿವೆ

11:28 PM (IST) Feb 14
ಮದುವೆ ಸುದ್ದಿಯ ನಡುವೆ, ರಶ್ಮಿಕಾ ಮಂದಣ್ಣ ಪ್ರೇಮಿಗಳ ದಿನದಂದು ವಿಕ್ಕಿ ಕೌಶಲ್ ಅವರನ್ನು ನೆನಪಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣ ಏನು? ರಾತ್ರಿಯ ವೇಳೆ ಅವರು ಇದನ್ನು ನೆನಪಿಸಿಕೊಂಡದ್ದು ಏಕೆ? ಇಲ್ಲಿದೆ ಡಿಟೇಲ್ಸ್.
11:03 PM (IST) Feb 14
ಇಸ್ಲಾಮಿಕ್ ವಿದ್ವಾಂಸ ಮುಫ್ತಿ ತಾರಿಕ್ ಮಸೂದ್ ಅವರ ಸಂದರ್ಶನವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ತಮಗೆ ನಾಲ್ಕು ಪತ್ನಿಯರು ಮತ್ತು 19 ಮಕ್ಕಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಧರ್ಮೋಪದೇಶಕರು, ಬಹುಪತ್ನಿತ್ವವನ್ನು ಸಮರ್ಥಿಸುವ ಪುಸ್ತಕವನ್ನೂ ಬರೆದಿದ್ದಾರೆ.
10:55 PM (IST) Feb 14
Alexei Navalny Killed by Dart Frog Toxin: 5 Nations Blame Putin ರಷ್ಯಾ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರನ್ನು 'ಎಪಿಬ್ಯಾಟಿಡಿನ್' ಎಂಬ ವಿಷಕಾರಿ ಅಂಶದಿಂದ ಸಾಯಿಸಲಾಗಿದೆ ಎಂದು ಯುಕೆ, ಫ್ರಾನ್ಸ್ ಸೇರಿದಂತೆ ಐದು ಯುರೋಪಿಯನ್ ರಾಷ್ಟ್ರಗಳು ದೃಢಪಡಿಸಿವೆ.
10:17 PM (IST) Feb 14
Tragic: Hyderabad Siblings Die in Varanasi Hotel Room ಹೈದರಾಬಾದ್ನಲ್ಲಿ ಅಕ್ಕ ಆತ್ಮ*ಹ*ತ್ಯೆ ಮಾಡಿಕೊಂಡ ಎರಡು ವಾರಗಳ ನಂತರ, ಆಕೆಯ ಚಿತಾಭಸ್ಮ ವಿಸರ್ಜನೆಗೆ ವಾರಣಾಸಿಗೆ ತೆರಳಿದ್ದ ಇಬ್ಬರು ಸಹೋದರರು ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
10:05 PM (IST) Feb 14
19 ವರ್ಷದ ವಿದ್ಯಾರ್ಥಿ ಅಥರ್ವ ಚತುರ್ವೇದಿ, ತನಗಾದ ಅನ್ಯಾಯದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ತಾನೇ ಖುದ್ದು ವಾದ ಮಂಡಿಸಿ ಗೆಲುವು ಸಾಧಿಸಿದ್ದಾನೆ. ಎರಡು ಬಾರಿ ನೀಟ್ ಪಾಸಾದರೂ EWS ಕೋಟಾದಡಿ ವೈದ್ಯಕೀಯ ಸೀಟು ನಿರಾಕರಿಸಿದ್ದನ್ನು ಪ್ರಶ್ನಿಸಿದ್ದ ಆತನಿಗೆ ತಾತ್ಕಾಲಿಕ ಪ್ರವೇಶ ನೀಡುವಂತೆ ಆದೇಶಿಸಿದೆ.
09:03 PM (IST) Feb 14
ಈಗಿನ ಜನರೇಷನ್ ಚರ್ಮದ ನ್ಯಾಚುರಲ್ ಸೌಂದರ್ಯವನ್ನು ಉಳಿಸಿಕೊಂಡು ಹೇಗೆ ಶೈನ್ ಆಗಬಹುದು ಅಂತ ಯೋಚಿಸ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ 'ಸ್ಕಿನ್ ಸೈಕ್ಲಿಂಗ್'ನಂತಹ ವಿಚಿತ್ರ ಆದ್ರೂ ಎಫೆಕ್ಟಿವ್ ಆದ ಬ್ಯೂಟಿ ಹ್ಯಾಕ್ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
08:01 PM (IST) Feb 14
07:31 PM (IST) Feb 14
ಪ್ರೇಮಿಗಳ ದಿನಾಚರಣೆ ದಿನ ದುರಂತ ಅಂತ್ಯಕಂಡ ಜೋಡಿ, ಕಾರಿನೊಳಗೆ ನಡೆದಿದ್ದೇನು? ಕಳೆದ ಕೆಲ ವರ್ಷಗಳಿಂದ ಪ್ರಣಯ ಹಕ್ಕಿಗಳಾಗಿದ್ದ ಈ ಜೋಡಿ ವ್ಯಾಲಟೈನ್ಸ್ ಡೇ ದಿನವೇ ಸಾವು ಕಂಡಿದ್ದು ಹೇಗೆ, ಟಾಟಾ ಅಲ್ಟ್ರೋಜ್ ಕಾರಿನೊಳಗಿನ ರಹಸ್ಯ.
07:29 PM (IST) Feb 14
ಮಲಪ್ಪುರಂನ ನಿಲಂಬೂರ್ನಲ್ಲಿ ಮಗುವಿನ ಚಿನ್ನದ ಸರ ಕಿತ್ತು ನುಂಗಿದ್ದ ಮಹಿಳೆಯ ಹೊಟ್ಟೆಯಿಂದ ಸರ ಇನ್ನೂ ಹೊರಬಂದಿಲ್ಲ. ಎರಡು ಬಾರಿ ಎನಿಮಾ ನೀಡಿದರೂ ಪ್ರಯೋಜನವಾಗಿಲ್ಲ. ಸದ್ಯ ಪೊಲೀಸರ ಕಾವಲಿನಲ್ಲಿ ಆಕೆಯನ್ನು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
07:07 PM (IST) Feb 14
DP World CEO Resigns Over Epstein Files; Yuvaraj Narayan New CEO ಜೆಫ್ರಿ ಎಪ್ಸ್ಟೀನ್ ಹಗರಣದ ಎಫೆಕ್ಟ್ನಿಂದಾಗಿ ಡಿಪಿ ವರ್ಲ್ಡ್ (DP World) ಅಧ್ಯಕ್ಷ ಸುಲ್ತಾನ್ ಸುಲಾಯೆಮ್ ರಾಜೀನಾಮೆ ನೀಡಿದ್ದು, ಭಾರತೀಯ ಮೂಲದ ಯುವರಾಜ್ ನಾರಾಯಣ್ ಅವರು ಸಿಇಒ ಆಗಿ ನೇಮಕವಾಗಿದ್ದಾರೆ.
06:43 PM (IST) Feb 14
SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಮುಂದಿನ ಸಲ್ಲಾಪಕ್ಕೆ ಗಂಡ ಅಡ್ಡಿಯಾಗಬಹುದು ಎಂದು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಕರೆಯಿಸಿ ಹತ್ಯೆ ಮಾಡಿದ ಚುನಾವಣಾಧಿಕಾರಿ ಮಹಾ ಷಡ್ಯಂತ್ರ ಬಯಲಾಗಿದೆ.
06:39 PM (IST) Feb 14
ನಮೀಬಿಯಾ ವಿರುದ್ಧದ ಟಿ20 ಪಂದ್ಯದಲ್ಲಿ, ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಪೂರ್ಣ ಬೌಲಿಂಗ್ ಕೋಟಾ ನೀಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರವನ್ನು ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ 'ಅಸಂಬದ್ಧ' ಎಂದು ಟೀಕಿಸಿದ್ದಾರೆ.
06:21 PM (IST) Feb 14
ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಟಿ20 ಪಂದ್ಯ ನಾಳೆ ಕೊಲಂಬೊದಲ್ಲಿ ನಡೆಯಲಿದೆ. ಸೂಪರ್ 8 ಹಂತಕ್ಕೇರಲು ಎರಡೂ ತಂಡಗಳು ಸೆಣಸಲಿದ್ದು, ಸ್ಪಿನ್ ಸ್ನೇಹಿ ಪಿಚ್ನಲ್ಲಿ ಯಾರು ಮಿಂಚಬಹುದು? ಪಂದ್ಯ ಆರಂಭ ಎಷ್ಟು ಗಂಟೆಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
06:01 PM (IST) Feb 14
05:49 PM (IST) Feb 14
05:36 PM (IST) Feb 14
ಮಗನೇ ಇಲ್ಲದ ಮೇಲೆ ಕಾರು ಯಾಕೆ? ಸಾವಿನ ನೋವಿನಲ್ಲೇ 6 ಕೋಟಿ ರೂ BMW ಸಮಾಧಿ ಮಾಡಿದ ತಂದೆ, ಹೊಚ್ಚ ಹೊಸ BMW ಕಾರನ್ನು ಸಮಾಧಿ ಮಾಡಿದ ಹೃದಯವಿದ್ರಾವಕ ಘಟನೆ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ.
05:14 PM (IST) Feb 14
Nirmala Sitharaman vs Jaya Bachchan: Heated Spat in Rajya Sabha ಬಜೆಟ್ನಲ್ಲಿ ಮನರಂಜನಾ ಉದ್ಯಮವನ್ನು ನಿರ್ಲಕ್ಷಿಸಲಾಗಿದೆ ಎಂದುಸಂಸದೆ ಜಯಾ ಬಚ್ಚನ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ರಾಜ್ಯದ ವಿಷಯ ಎಂದು ಸ್ಪಷ್ಟಪಡಿಸಿದರು.
04:53 PM (IST) Feb 14
ವಿಷ ಕುಡಿದರೆ ಸಾಯ್ತೀವಾ? ಚೆಕ್ ಮಾಡಲು ಹೋದ ಐವರು ಬಿಹಾರಿ ಹುಡುಗಿಯರ ಕತೆ ಏನಾಯಿತು? ಫ್ರೆಂಡ್ಸ್ ಸೇರಿ ಹೊಲಕ್ಕೆ ತೆರಳಿ ವಿಷದ ರುಚಿ, ಅದರ ಪರಿಣಾಮ ಪರೀಕ್ಷಿಸಲು ಬಯಸಿದ್ದಾರೆ. ಇದರಂತೆ ಪರೀಕ್ಷೆಯಲ್ಲಿ ಬಂದ ಫಲಿತಾಂಶ ಏನು?
04:31 PM (IST) Feb 14
ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎನಿಸಿಕೊಂಡಿರುವ ಧೋನಿಗೆ ಬಿಸಿಸಿಐನಿಂದ ಸಿಗುವ ಪೆನ್ಷನ್ ಎಷ್ಟು ಎನ್ನುವ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
04:06 PM (IST) Feb 14
ಮುತ್ತಿನ ಮತ್ತಿನ ಲೀವ್ ಇನ್ ರಿಲೇಶನ್ಶಿಪ್ ದುರಂತ, ಯುವತಿ ನೀರಿನ ಟ್ಯಾಂಕ್ನಲ್ಲಿ ಶವವಾಗಿ ಪತ್ತೆ, ಚಿನ್ನ ಚಿನ್ನ ಎಂದು ಹಿಂದೆ ಬಿದ್ದು ಪಾರ್ಟ್ನರ್ ಮಾಡಿಕೊಂಡಿದ್ದ. ಹಲವು ಕನಸುಗಳೊಂದಿಗೆ ಪಾರ್ಟ್ನರ್ ಜೊತೆ ಕಾಲ ಕಳೆದ ಯುವತಿ ನೀರಿನ ಟ್ಯಾಂಕ್ನಲ್ಲಿ ಎಸೆದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
03:58 PM (IST) Feb 14
02:54 PM (IST) Feb 14
ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್, ಆಟೋ ರಿಕ್ಷಾ ಹಾಗೂ ಕಾರಿನ ಮೇಲೆ ಪಿಲ್ಲರ್ ಬಿದ್ದಿದೆ. ನಾಲ್ವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಆಸ್ಪತ್ರೆ ದಾಖಲಿಸಲಾಗಿದೆ.
02:45 PM (IST) Feb 14
01:53 PM (IST) Feb 14
ದೆಹಲಿ ಹೊಟೆಲ್ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸದಸ್ಯನಿಗೆ ಹೃದಯಾಘಾತ, ಕುಸಿದು ಬಿದ್ದ ಸದಸ್ಯನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಟಿ20 ವಿಶ್ವಕಪ್ ಪಂದ್ಯಕ್ಕಾಗಿ ಆಫ್ಘಾನಿಸ್ತಾನ ತಂಡ ದೆಹಲಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಈ ಘಟನೆ ಸಂಭವಿಸಿದೆ.
01:13 PM (IST) Feb 14
01:08 PM (IST) Feb 14
ಕ್ಯಾಬ್ ಚಾಲಕರು ಇತ್ತೀಚೆಗೆ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ಮಹಿಳಾ ಗ್ರಾಹಕಿಯೊಬ್ಬಳು ಚಾಲಕನಿಗೆ ಸೆಕ್ಸ್ ಆಫರ್ ನೀಡಿದರೆ, ಮತ್ತೊಂದು ಘಟನೆಯಲ್ಲಿ ಜೋಡಿಯೊಂದು ಕಾರಿನಲ್ಲೇ ಕಾಮಕ್ರೀಡೆಯಲ್ಲಿ ತೊಡಗಿ ಚಾಲಕನಿಗೆ ಮುಜುಗರ ಉಂಟುಮಾಡಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿವೆ.
12:55 PM (IST) Feb 14
ಬಾಂಗ್ಲಾದೇಶ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಬಿಜೆಪಿ, ತಾರಿಕ್ ರೆಹಮಾನ್ ಬಾಂಗ್ಲಾದೇಶ ನೂತನ ಪ್ರಧಾನಿಯಾಗುತ್ತಿದ್ದರೆ, ಇತ್ತ ಬಿಜೆಪಿ ಮಾಡಿದ ಮೋಡಿಗೆ ಹಲವರು ಅಚ್ಚರಿಕೊಂಡಿದ್ದಾರೆ. ಏನಿದರ ರಹಸ್ಯ.
12:33 PM (IST) Feb 14
24 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಯ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ನಾಪತ್ತೆಯಾಗುವ ಮುನ್ನ, ಆಕೆಯ ಫೋನ್ನಿಂದಲೇ ಕಾಲೇಜು ವಾಟ್ಸಾಪ್ ಗ್ರೂಪ್ಗೆ ಆಕೆಯ ಆಕ್ಷೇಪಾರ್ಹ ವಿಡಿಯೋವೊಂದು ಪೋಸ್ಟ್ ಆಗಿತ್ತು. ಈ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
12:26 PM (IST) Feb 14
11:57 AM (IST) Feb 14
11:45 AM (IST) Feb 14
11:17 AM (IST) Feb 14
11:14 AM (IST) Feb 14
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್, ವೆನಿಜುವೆಲಾದಿಂದ ನೇರವಾಗಿ ಕಚ್ಚಾ ತೈಲವನ್ನು ಖರೀದಿಸಲು ಅಮೆರಿಕಾದಿಂದ ಪರವಾನಿಗೆ ಪಡೆದುಕೊಂಡಿದೆ. ಇದಕ್ಕೂ ಮೊದಲು ಹಲವು ತೈಲ ಕಂಪನಿಗಳು ವೆನೆಜುವೆಲಾದಿಂದ ಕಚ್ಚಾತೈಲ ಖರೀದಿಗೆ ಅಮೆರಿಕಾದ ಪರವಾನಿಗೆಯನ್ನು ಕೇಳಿದ್ದವು.
09:49 AM (IST) Feb 14
ಪರಭಾಣಿಯ ನೂತನ ಮೇಯರ್ ಆಗಿ ಸೈಯದ್ ಇಕ್ಬಾಲ್ ಆಯ್ಕೆಯಾಗಿದ್ದನ್ನು ಬಿಜೆಪಿ ದೊಡ್ಡ ವಿಷಯ ಮಾಡುತ್ತಿರುವುದಕ್ಕೆ ಶಿವಸೇನೆ (ಯುಬಿಟಿ) ಮುಖವಾಣಿ 'ಸಾಮ್ನಾ' ಕಿಡಿಕಾರಿದೆ. ಇದು ಬಿಜೆಪಿಯ ಇಬ್ಬಗೆ ನೀತಿ ಎಂದು ಆರೋಪಿಸಿದೆ.
09:44 AM (IST) Feb 14
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ತುಂಬಾ ಭಾವನಾತ್ಮಕ ಮತ್ತು ಕರುಣಾಮಯಿ ಆಗಿರುತ್ತಾರೆ. ಅವರು ಯಾವ ದಿನಾಂಕದಂದು ಜನಿಸಿದವರು ಎಂಬುದನ್ನು ನೋಡೋಣ.
09:29 AM (IST) Feb 14
ಏರ್ ಇಂಡಿಯಾದ ಮತ್ತೊಂದು ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ವಿಷಯ ಕೇಳಿದ ಪ್ರಯಾಣಿಕರು ದೇವರಿಗೊಂದು ಥ್ಯಾಂಕ್ಸ್ ಹೇಳುತ್ತಿದ್ದಾರೆ. ಈ ಘೋರ ಅಪರಾಧಕ್ಕಾಗಿ ಏರ್ ಇಂಡಿಯಾಗೆ ಭಾರತದ ನಾಗರಿಕ ವಿಮಾನಯಾನ ನಿಯಂತ್ರಕ (DGCA) ಬರೋಬ್ಬರಿ 1 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.
08:56 AM (IST) Feb 14
ಒಮ್ಮೆ ಕ್ರಿಕೆಟಿಗನಾಗಿ ಹೆಸರು ಮಾಡಿದರೆ ಸಾಕು, ಆಮೇಲೆ ಓದಿಗೆ ಗುಡ್ಬೈ ಹೇಳುವವರೇ ಹೆಚ್ಚು. ಆದರೆ ಅಂಡರ್-19 ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಇದೀಗ 10ನೇ ಕ್ಲಾಸ್ ಬೋರ್ಡ್ ಎಕ್ಸಾಂ ಬರೆಯಲು ರೆಡಿಯಾಗಿದ್ದಾರೆ.
08:30 AM (IST) Feb 14
India vs Pakistan match washed out due to rain: ಫೆಬ್ರವರಿ 12 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಹವಾಮಾನ ಇಲಾಖೆಯು ಪಂದ್ಯದ ದಿನ ಶೇ.90 ರಷ್ಟು ಮಳೆಯಾಗುವ ಸಾಧ್ಯತೆಯನ್ನು ಮುನ್ಸೂಚನೆ ನೀಡಿದೆ.
08:28 AM (IST) Feb 14
ಅಯ್ಯೋ, ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು, ಇನ್ನೂ ನಿಮ್ಮ ಪಾರ್ಟ್ನರ್ಗೆ ಗಿಫ್ಟ್ ತಗೊಂಡಿಲ್ವಾ? ಟೆನ್ಶನ್ ಬೇಡ. ಕೊನೆ ಕ್ಷಣದಲ್ಲೂ ನಿಮ್ಮ ಸಂಗಾತಿಯ ಮುಖದಲ್ಲಿ ದೊಡ್ಡ ನಗು ತರಿಸುವಂತಹ ಕೆಲವು ಐಡಿಯಾಗಳಿವೆ.
07:45 AM (IST) Feb 14
LeT Operatives 2016ರಲ್ಲಿ ಕಾಶ್ಮೀರಕ್ಕೆ ನುಸುಳಿದ್ದ ಪಾಕಿಸ್ತಾನಿ ಉಗ್ರನೊಬ್ಬನಿಗೆ ಆಶ್ರಯ, ಊಟ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಿದ್ದ ಲಷ್ಕರ್-ಎ-ತೊಯ್ಬಾದ ಇಬ್ಬರು ಸಹಚರರಿಗೆ ಎನ್ಐಎ ವಿಶೇಷ ನ್ಯಾಯಾಲಯ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.