Published : Dec 01, 2025, 06:56 AM ISTUpdated : Dec 01, 2025, 10:33 PM IST

India Latest News Live: ಏನಿದು ಸಂಚಾರ್‌ ಸಾಥಿ? ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೀಇನ್ಸ್‌ಟಾಲ್‌ ಆಗಿರಬೇಕು ಎಂದು ಕೇಂದ್ರ ಹೇಳಿದ್ದೇಕೆ?

ಸಾರಾಂಶ

ಜೈಪುರ: ಬಾಬ್ರಿ ಮಸೀದಿ ಧ್ವಂಸದ ದಿನವಾದ ಡಿಸೆಂಬರ್ 6 ಅನ್ನು ಶಾಲೆಗಳಲ್ಲಿ 'ಶೌರ್ಯ ದಿವಸ್' ಎಂದು ಆಚರಿಸಿ ಎಂದು ರಾಜಸ್ಥಾನ ಶಿಕ್ಷಣ ಮತ್ತು ಪಂಚಾಯತ್ ರಾಜ್ ಸಚಿವ ಮದನ್ ದಿಲಾವರ್ ಸೂಚನೆ ನೀಡಿ ವಿವಾದಕ್ಕೀಡಾಗಿದ್ದಾರೆ. ಅವರ ಸೂಚನೆಗೆ ಆಕ್ರೋಶ ವ್ಯಕ್ತವಾದ ಕಾರಣ, ಕೇವಲ 12 ತಾಸಿನಲ್ಲಿ ಆದೇಶವನ್ನು ರಾಜಸ್ಥಾನ ಶಿಕ್ಷಣ ಇಲಾಖೆ ಭಾನುವಾರ ಬೆಳಗ್ಗೆ ಹಿಂತೆಗೆದುಕೊಂಡಿದೆ. 'ಡಿಸೆಂಬರ್ 6 ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವವಾಗಿದ್ದು, ಅದನ್ನು ಶಾಲೆಗಳಲ್ಲಿ ಶೌರ್ಯ ದಿನ ಎಂದು ಆಚರಿಸಿ' ಎಂದು ದಿಲಾವ‌ರ್ ಶನಿವಾರ ಆದೇಶಿಸಿದ್ದರು. ಇದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.

Sanchar Saathi portal

10:33 PM (IST) Dec 01

ಏನಿದು ಸಂಚಾರ್‌ ಸಾಥಿ? ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೀಇನ್ಸ್‌ಟಾಲ್‌ ಆಗಿರಬೇಕು ಎಂದು ಕೇಂದ್ರ ಹೇಳಿದ್ದೇಕೆ?

ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್‌ಗಳಲ್ಲಿ 'ಸಂಚಾರ್ ಸಾಥಿ' ಅಪ್ಲಿಕೇಶನ್‌ ಅನ್ನು ಕಡ್ಡಾಯವಾಗಿ ಪ್ರೀ-ಇನ್‌ಸ್ಟಾಲ್ ಮಾಡಲು ದೂರಸಂಪರ್ಕ ಇಲಾಖೆ (DoT) ಆದೇಶಿಸಿದೆ. ಈ ಆ್ಯಪ್ ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲು, ವಂಚನೆಗಳನ್ನು ವರದಿ ಮಾಡಲು  ಸಹಾಯ ಮಾಡುತ್ತದೆ

Read Full Story

10:25 PM (IST) Dec 01

ಗೋಡೆ ಕಂಡಾಗ ಕಾಲು ಅಗಲಿಸಿ ನಿಲ್ಲುವವರೇ ಹುಷಾರ್​! ಮೂತ್ರ ಮಾಡಿದ್ರೆ ವಾಪಸ್​ ಚಿಮ್ಮುತ್ತೆ ನಿಮ್ಮದೇ ನೀರು!

ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಮೂತ್ರ ಮಾಡುವವರಿಗೆ ಪಾಠ ಕಲಿಸಲು 'ಆ್ಯಂಟಿ ಯೂರಿನ್ ಪೇಂಟ್' ಎಂಬ ಹೊಸ ತಂತ್ರಜ್ಞಾನ ಬಂದಿದೆ. ಈ ಹೈಡ್ರೋಫೋಬಿಕ್ ಪೇಂಟ್ ಹಚ್ಚಿದ ಗೋಡೆಗೆ ಮೂತ್ರ ಮಾಡಿದರೆ, ಅದು ಮರಳಿ ಅವರ ಮೇಲೆಯೇ ಎರಚುತ್ತದೆ.  

Read Full Story

09:58 PM (IST) Dec 01

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ

RAM ಮತ್ತು ROM ಕಾಂಪೋನೆಂಟ್‌ಗಳ ಬೆಲೆ ಏರಿಕೆಯಿಂದಾಗಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಬೆಲೆ ಹೆಚ್ಚಾಗಿದೆ. Xiaomi, Vivo, ಮತ್ತು Realme ನಂತಹ ಬ್ರ್ಯಾಂಡ್‌ಗಳು ತಮ್ಮ ಜನಪ್ರಿಯ ಮಾದರಿಗಳ ಬೆಲೆಯನ್ನು 2,000 ರೂ.ವರೆಗೆ ಹೆಚ್ಚಿಸಿವೆ. 

Read Full Story

09:03 PM (IST) Dec 01

ಪುಟಿನ್‌ ಭೇಟಿ ವೇಳೆ ಮಹತ್ವದ ಚರ್ಚೆ ನಡೆಸಲಿದೆ ಭಾರತ, ಏರ್‌ಫೋರ್ಸ್‌ಗೆ ಸಿಗುತ್ತಾ ಸುಖೋಯ್‌ 57?

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಮುಂದಿನ ಪೀಳಿಗೆಯ Su-57 ಯುದ್ಧ ವಿಮಾನಗಳು ಮತ್ತು S-500 ಕ್ಷಿಪಣಿ ವ್ಯವಸ್ಥೆಯ ಕುರಿತು ಮಾತುಕತೆ ನಡೆಯಲಿದೆ. ವಿಳಂಬವಾಗಿರುವ S-400 ವ್ಯವಸ್ಥೆಯ ಪೂರೈಕೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆಯಾಗಲಿದೆ.

Read Full Story

08:36 PM (IST) Dec 01

ಸಂಸತ್‌ಗೆ ಬೀದಿನಾಯಿಯನ್ನು ಕರೆದುಕೊಂಡು ಬಂದ ಕಾಂಗ್ರೆಸ್ ಸಂಸದೆ

ಚಳಿಗಾಲದ ಅಧಿವೇಶನದ ವೇಳೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸಂಸತ್ ಆವರಣಕ್ಕೆ ಬೀದಿ ನಾಯಿಮರಿಯನ್ನು ಕರೆತಂದು ವಿವಾದ ಸೃಷ್ಟಿಸಿದ್ದಾರೆ. ನಾಯಿಮರಿ ಸುರಕ್ಷತೆಗಾಗಿ ತಂದಿದ್ದಾಗಿ ಸಮರ್ಥಿಸಿಕೊಂಡ ಅವರು, 'ನಿಜವಾದ ನಾಯಿಗಳು ಸಂಸತ್ತಿನಲ್ಲಿವೆ' ಎಂದು ಹೇಳಿಕೆ ನೀಡಿದ್ದಾರೆ.

Read Full Story

08:02 PM (IST) Dec 01

Brahmos Missile - ಮುಸ್ಲಿಂ ದೇಶಕ್ಕೆ ಕ್ಷಿಪಣಿ ಮಾರಲಿರುವ ಇಂಡಿಯಾ, ಚೀನಾ ಸುತ್ತ ಭಾರತದ ಬ್ರಹ್ಮೋಸ್‌ ಭದ್ರಕೋಟೆ!

Brahmos Missile: ಬ್ರಹ್ಮೋಸ್ ಕ್ಷಿಪಣಿ ಭಾರತದ ಇಲ್ಲಿಯವರೆಗಿನ ಅತ್ಯಂತ ಮಾರಕ ಅಸ್ತ್ರ. ಆಪರೇಷನ್ ಸಿಂಧೂರ್ ಸಮಯದಲ್ಲಿ ಇಡೀ ಜಗತ್ತು ಬ್ರಹ್ಮೋಸ್‌ನ ಶಕ್ತಿಯನ್ನು ಕಂಡಿತು. ಪಾಕಿಸ್ತಾನವು ತನ್ನ ದೇಶದ ಮೇಲೆ ಒಂದೇ ಒಂದು ಯುದ್ಧ ವಿಮಾನವನ್ನು ಹಾರಿಸದಂತೆ ಭಾರತ ಇದನ್ನು ಮಾಡಿತ್ತು.

 

Read Full Story

06:27 PM (IST) Dec 01

ಟೆಸ್ಟ್ ಕ್ರಿಕೆಟ್ ನಿವೃತ್ತಿ ನಿರ್ಧಾರ ಹಿಂಪಡೆಯುತ್ತಾರಾ ರನ್ ಮೆಷಿನ್? ವಿರಾಟ್ ಕೊಹ್ಲಿ ಹೇಳಿದ್ದೇನು?

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ವರ್ಷದ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಆದರೆ ಇತ್ತೀಚೆಗೆ ಅವರು ನಿವೃತ್ತಿಯಿಂದ ಹಿಂತಿರುಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೊಹ್ಲಿ ಏನು ಹೇಳಿದ್ದಾರೆಂದು ನೋಡೋಣ ಬನ್ನಿ

 

Read Full Story

05:14 PM (IST) Dec 01

ಮಹಿಳೆಯರಿಗೆ ಕಿರುಕುಳ ನೀಡ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ರಾಷ್ಟ್ರಮಟ್ಟದ ಬಾಡಿಬಿಲ್ಡರ್‌ನ ಹೊಡೆದು ಕೊಂದ ಗುಂಪು

Rohit Dhankhar death:ರಾಷ್ಟ್ರೀಯ ಮಟ್ಟದ ಪ್ಯಾರಾ-ಅಥ್ಲೀಟ್ ಮತ್ತು ಬಾಡಿಬಿಲ್ಡರ್ ರೋಹಿತ್ ಧಂಖರ್ ಅವರನ್ನು ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿ ಕೊಲೆ ಮಾಡಿದೆ. ಮದುವೆ ಸಮಾರಂಭದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ವಿರೋಧಿಸಿದ್ದಕ್ಕೆ ಈ ಕೃತ್ಯವೆಸಗಲಾಗಿದೆ.

Read Full Story

04:42 PM (IST) Dec 01

ಕೋಚ್ ಗೌತಮ್‌ ಗಂಭೀರ್ ಜತೆಗೆ ಹದಗೆಟ್ಟ ರೋಹಿತ್-ಕೊಹ್ಲಿ ಸಂಬಂಧ; ಬಿಸಿಸಿಐ ನಡೆ ಏನು?

ಬೆಂಗಳೂರು: ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಹಿರಿಯ ಆಟಗಾರರಿಗೆ ಗೇಟ್‌ಪಾಸ್ ನೀಡುವ ಕೆಲಸ ನಡೆಯುತ್ತಿದೆ ಎನ್ನುವ ಆರೋಪವಿದೆ. ಇದೆಲ್ಲದರ ನಡುವೆ ಇದೀಗ ಗಂಭೀರ್ ಹಾಗೂ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಡುವೆ ಶೀತಲ ಸಮರ ಜೋರಾಗಿದೆ.

 

Read Full Story

04:23 PM (IST) Dec 01

100 ರೂಪಾಯಿ ಕೇಳಿದ್ರೆ ಗಂಡನೂ ಕೊಡಲ್ಲ ಹೀಗಿರುವಾಗ ನೀವು ಸಿಎಂಗೆ ನಿಷ್ಠರಾಗಿರಬೇಕು - ಸಚಿವ

Majhi Ladki Bahin scheme: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಂತೆ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಎಂಬ ಯೋಜನೆ ಇದೆ. ಈ ಯೋಜನೆಯ ನೆಪದಲ್ಲಿ ವೋಟು ಕೇಳುವ ಬರದಲ್ಲಿ ಅಲ್ಲಿನ ಸಚಿವರೊಬ್ಬರು ನೀಡಿದ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.

Read Full Story

03:30 PM (IST) Dec 01

ಕಸ್ಟಡಿಯಲ್ಲಿದ್ದ ಮಹಿಳೆಗೆ ಡಿಎಸ್‌ಪಿಯಿಂದಲೇ ಲೈಂಗಿಕ ಕಿರುಕುಳ - ಸಹೋದ್ಯೋಗಿ ಸಾವಿನ ನಂತರ ಪ್ರಕರಣ ಬೆಳಕಿಗೆ

Kerala DSP suspended: ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಸಹೋದ್ಯೋಗಿ ಅಧಿಕಾರಿಯೊಬ್ಬರ ಆತ್ಮಹತ್ಯೆಯ ನಂತರ ಪ್ರಕರಣ ಬೆಳಕಿಗೆ ಬಂದಿದೆ.

Read Full Story

02:25 PM (IST) Dec 01

ಕಾರು ಜಿಗ್‌ಜಾಗ್‌ ಚಲಾಯಿಸಿ ಮದುಮಗನ ಹುಚ್ಚಾಟ - ಬದುಕಿನ ಬಂಡಿ ಎಳೆಯಲು ಊರು ಬಿಟ್ಟು ಬಂದ 23ರ ಹರೆಯದ ಯುವಕ ಸಾವು

ದೆಹಲಿಯಲ್ಲಿ ತನ್ನದೇ ಮದುವೆ ಆರತಕ್ಷತೆ ಮುಗಿಸಿ ವಾಪಸಾಗುತ್ತಿದ್ದ ವರನೋರ್ವ ಮರ್ಸಿಡಿಸ್ ಕಾರನ್ನುಅತಿವೇಗದಿಂದ ಚಲಾಯಿಸಿ,  ಆಟೋಗಾಗಿ ಕಾಯುತ್ತಿದ್ದ ಮೂವರು ಹೊಟೇಲ್ ಬಾಣಸಿಗರಿಗೆ ಡಿಕ್ಕಿ ಹೊಡೆದಿದ್ದು, ಈ ಅವಘಡದಲ್ಲಿ 23 ಹರೆಯದ ಬಾಣಸಿಗ ಮೃತಪಟ್ಟಿದ್ದಾನೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story

01:50 PM (IST) Dec 01

ಕೊಹ್ಲಿ-ರೋಹಿತ್ ಅಬ್ಬರಿಸುತ್ತಿದ್ದಂತೆಯೇ ಗಂಭೀರ್-ಅಗರ್ಕರ್‌ಗೆ ದಿಢೀರ್ ಮೀಟಿಂಗ್ ಕರೆದ BCCI!

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿ ಮಿಂಚಿದ್ದಾರೆ. ಇದರ ಬೆನ್ನಲ್ಲೇ ಗಂಭೀರ್-ಅಗರ್ಕರ್‌ಗೆ ಬುಲಾವ್ ನೀಡಿದೆ ಬಿಸಿಸಿಐ.

 

Read Full Story

01:29 PM (IST) Dec 01

ಗೃಹಿಣಿಯ ಅನೈ*ತಿಕ ಸಂಬಂಧಕ್ಕೆ ಅನಾಥರಾದ ಮಕ್ಕಳು - ಕೆಲಸ ಮಾಡುವ ಮಹಿಳೆಯರ ಹಾಸ್ಟೆಲ್‌ನಲ್ಲೇ ಭೀಕರ ಕೊಲೆ

Selfie with dead body: ಪತಿಯನ್ನು ತೊರೆದು ಹಾಸ್ಟೆಲ್‌ನಲ್ಲಿದ್ದ ಪತ್ನಿಯನ್ನು ಆಕೆಯ ಪತಿಯೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆತ ಮೃತದೇಹದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ.

Read Full Story

12:45 PM (IST) Dec 01

ಫಸ್ಟ್‌ನೈಟ್‌ ಕೋಣೆಯಿಂದ ಹೊರ ಬಂದ ವರ ಮಿಸ್ಸಿಂಗ್; ವಧು ಆಸೆ ನೆರವೇರಿಸಲು ಹೋದವ ಬರಲೇ ಇಲ್ಲ!

ಮೊದಲ ರಾತ್ರಿಯಂದೇ ವರನೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ವಧು ಕೋಣೆಯಲ್ಲಿ ಲೈಟ್ ತರಲು ಕೇಳಿದಾಗ ಹೊರಹೋದ ಮೊಹಸಿನ್ ಎಂಬ ವರ ಮತ್ತೆ ಹಿಂತಿರುಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಗಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Read Full Story

12:39 PM (IST) Dec 01

ಹಿಟ್‌ಮ್ಯಾನ್‌ಗೆ ಬಿಸಿಸಿಐ ಸಂದೇಶ - ರೋಹಿತ್ ಶರ್ಮಾ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್?

ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಗೊಂದಲಗಳ ನಡುವೆ, ಬಿಸಿಸಿಐ ಅವರಿಗೆ ಪ್ರಮುಖ ಸಂದೇಶ ಕಳುಹಿಸಿದೆ. ಫಿಟ್ನೆಸ್ ಮತ್ತು ಪ್ರದರ್ಶನದ ಮೇಲೆ ಗಮನಹರಿಸಲು ಮತ್ತು ಭವಿಷ್ಯದ ಊಹಾಪೋಹಗಳನ್ನು ಕಡೆಗಣಿಸಲು ಸೂಚಿಸಿದೆ.

 

Read Full Story

11:50 AM (IST) Dec 01

ಜಿಯೋಹಾಟ್‌ಸ್ಟಾರ್‌ ಚಂದಾದಾರಿಕೆ ಜೊತೆ 3 ಹೊಸ ಪ್ಲಾನ್ ನೀಡಿದ ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮೂರು ವಿಶೇಷ ಪ್ಲಾನ್‌ಗಳನ್ನು ಘೋಷಿಸಿದೆ. ₹949, ₹195, ಮತ್ತು ₹100 ಬೆಲೆಯ ಈ ಪ್ಲಾನ್‌ಗಳು ಉಚಿತ ಜಿಯೋಹಾಟ್‌ಸ್ಟಾರ್‌ ಚಂದಾದಾರಿಕೆಯೊಂದಿಗೆ ಬರುತ್ತವೆ, ಜೊತೆಗೆ ಡೇಟಾ ಮತ್ತು ಕರೆ ಸೌಲಭ್ಯಗಳನ್ನು ನೀಡುತ್ತವೆ.

Read Full Story

11:39 AM (IST) Dec 01

52ನೇ ಏಕದಿನ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!

ವಿರಾಟ್ ಕೊಹ್ಲಿ ರಾಂಚಿ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಈ ಕ್ಲಾಸಿಕ್ ಇನ್ನಿಂಗ್ಸ್‌ನೊಂದಿಗೆ, ಅವರು ಅತಿ ಹೆಚ್ಚು ಶತಕಗಳ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್ ಅವರಂತಹ ದಿಗ್ಗಜರ ದಾಖಲೆಗಳನ್ನು ಮುರಿದಿದ್ದಾರೆ.

Read Full Story

10:57 AM (IST) Dec 01

ಪಾಕಿಸ್ತಾನದ ಬೆನ್ನುಮೂಳೆ ಮುರಿದ ಬಲೂಚಿಸ್ತಾನ; 35 ಸಾವಿರ ಕೋಟಿ ಸಾಲ ಕೊಟ್ಟ ಅಮೆರಿಕಾಗೆ ಶಾಕ್

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ, ವಿದೇಶಿ ಗಣಿಗಾರಿಕೆ ಸಿಬ್ಬಂದಿ ವಾಸವಿದ್ದ ಕಾಂಪೌಂಡ್ ಮೇಲೆ ಬಲೂಚ್ ಲಿಬರೇಶನ್ ಫ್ರಂಟ್ (BLF) ಆತ್ಮಹತ್ಯಾ ದಾಳಿ ನಡೆಸಿದೆ. ಪಾಕಿಸ್ತಾನವು 'ಸುರಕ್ಷಿತ' ಎಂದು ಘೋಷಿಸಿದ್ದ ಸ್ಥಳ ದಲ್ಲಿ ದಾಳಿ ನಡೆದಿದೆ.

Read Full Story

10:29 AM (IST) Dec 01

Gold And Silver Price - ತಿಂಗಳ ಮೊದಲ ದಿನ 22, 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಾಗಿದೆ?

ಡಿಸೆಂಬರ್ 1 ರಂದು ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಬದಲಾವಣೆಯಾಗಿದೆ. ಈ ಲೇಖನವು 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ, ಪ್ರಮುಖ ನಗರಗಳಲ್ಲಿನ ಬೆಲೆ ಹಾಗೂ ಬೆಳ್ಳಿಯ ಪ್ರಸ್ತುತ ಮಾರುಕಟ್ಟೆ ದರವನ್ನು ವಿವರಿಸುತ್ತದೆ.
Read Full Story

10:29 AM (IST) Dec 01

ಟೆಸ್ಟ್‌ಗೆ ವಿರಾಟ್ ಕೊಹ್ಲಿ ವಾಪಸ್ ಬರ್ತಾರಾ? ಮೊದಲ ಸಲ ತುಟಿಬಿಚ್ಚಿದ ಬಿಸಿಸಿಐ

ಟೀಂ ಇಂಡಿಯಾ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡ್ತಿದೆ. ಕೊಹ್ಲಿ ನಾಯಕತ್ವದಲ್ಲೇ ತಂಡ ಅದ್ಭುತ ಗೆಲುವುಗಳನ್ನು ಸಾಧಿಸಿತ್ತು ಅಂತಾ ಫ್ಯಾನ್ಸ್ ಹೇಳ್ತಿದ್ದಾರೆ. ಮತ್ತೆ ವಿರಾಟ್ ಕೊಹ್ಲಿ ಟೆಸ್ಟ್‌ಗೆ ವಾಪಸ್ ಬರಬೇಕು ಅಂತಾ ಕೇಳಿಕೊಳ್ತಿದ್ದಾರೆ. ಈ ಬಗ್ಗೆ ಬಿಸಿಸಿಐ ಮೊದಲ ಸಲ ಪ್ರತಿಕ್ರಿಯಿಸಿದೆ.

Read Full Story

08:57 AM (IST) Dec 01

ಏರ್‌ಟೆಲ್‌ನಿಂದ ವರ್ಷಪೂರ್ತಿ ನೆಮ್ಮದಿ ನೀಡುವ ಎರಡು ಹೊಸ ಬಜೆಟ್ ಸ್ನೇಹಿ ರೀಚಾರ್ಜ್ ಪ್ಲಾನ್‌

ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಎರಡು ಹೊಸ ಬಜೆಟ್ ಸ್ನೇಹಿ ವಾರ್ಷಿಕ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಸೆಕೆಂಡರಿ ಸಿಮ್ ಅನ್ನು ವರ್ಷಪೂರ್ತಿ ಸಕ್ರಿಯವಾಗಿಡಲು ಬಯಸುವವರಿಗೆ ಉತ್ತಮವಾಗಿದ್ದು,  ಅನಿಯಮಿತ ಕರೆ ಮತ್ತು ಡೇಟಾ ಪ್ರಯೋಜನಗಳನ್ನು ನೀಡುತ್ತವೆ.

Read Full Story

08:26 AM (IST) Dec 01

BBK 12 - ಕುಚಿಕುಗಳಾಗಿದ್ದ ರಘು, ಗಿಲ್ಲಿ ನಟನ ಮಧ್ಯೆ ಮಾರಾಮಾರಿ ಜಗಳ; ಅಂಥದ್ದೇನಾಯ್ತು?

Bigg Boss Kannada 12 Updte: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಯಾರಿಗೆ ಯಾವ ಸ್ಥಾನ ಇದೆ ಎಂದು ರ್ಯಾಂಕಿಂಗ್‌ ನೀಡಿ ಎಂದು ಬಿಗ್‌ ಬಾಸ್‌ ಆದೇಶ ಮಾಡಿದ್ದರು. ಆ ವೇಳೆ ರಘು, ಗಿಲ್ಲಿ ನಟ ನಡುವೆ ಮಾರಾಮಾರಿ ಜಗಳ ಆಗಿದೆ. ಕುಚಿಕುಗಳಾಗಿದ್ದವರು, ಈಗ ಜಗಳ ಆಡಿಕೊಂಡಿದ್ದಾರೆ.

Read Full Story

08:04 AM (IST) Dec 01

Karna Serial - ಎಲ್ಲ ಸತ್ಯ ಹೊರಬಂತು, ಸಮಸ್ಯೆ ಪರಿಹಾರವಾಯ್ತು, ಇನ್ನು ನಿಧಿ-ಕರ್ಣನನ್ನು ಯಾರೂ ದೂರ ಮಾಡೋಕಾಗಲ್ಲ

Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ನಿಧಿ-ಕರ್ಣ ಒಂದಾಗ್ತಾರಾ ಎನ್ನುವ ಪ್ರಶ್ನೆ ಬಂದಿದೆ. ಹೀಗಿರುವಾಗ ವಾಹಿನಿಯು ವೀಕ್ಷಕರಿಗೆ ಇಷ್ಟ ಆಗುವ ಪ್ರೋಮೋವನ್ನು ರಿಲೀಸ್‌ ಮಾಡಿದೆ. ವಿಶೇಷವಾಗಿ ಪ್ರೋಮೋ ಶೂಟ್‌ ಮಾಡಲಾಗಿದೆ.

 

Read Full Story

07:19 AM (IST) Dec 01

December Price - ವರ್ಷದ ಕೊನೆ ತಿಂಗಳ ಮೊದಲ ದಿನದಂತೆ LPG ಸಿಲಿಂಡರ್ ದರದಲ್ಲಿ ಬದಲಾವಣೆ

ಡಿಸೆಂಬರ್ 1 ರಿಂದ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ಬಳಕೆದಾರರಿಗೆ ರಿಲೀಫ್ ಸಿಕ್ಕಿದೆ. ಆದರೆ, ದೇಶಾದ್ಯಂತ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಬೆಲೆಗಳು ಸ್ಥಿರವಾಗಿವೆ.
Read Full Story

More Trending News