ವಿಧಿಯಾಟದಲ್ಲಿ ಬೀದಿಗೆ ಬಂದ್ರು ಇಬ್ಬರು ಹೆಣ್ಣುಮಕ್ಕಳು; ಲಕ್ಷ್ಮೀ ನಿವಾಸದ ಕಥೆಯಲ್ಲಿ ಮಹತ್ತರ ತಿರುವು!

Published : Dec 03, 2025, 08:05 AM IST

ಅಣ್ಣನ ದುರಾಸೆಗೆ ಬೇಸತ್ತು ಭಾವನಾ ಮನೆಯಿಂದ ಹೊರನಡೆದರೆ, ತನ್ನ ಗತಕಾಲದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಜಾನು ಕೂಡ ಮನೆ ತೊರೆದಿದ್ದಾಳೆ. ಇಬ್ಬರೂ ಸಂಕಷ್ಟದಲ್ಲಿರುವಾಗ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಕಥೆ ಮಹತ್ತರ ತಿರುವು ಪಡೆದುಕೊಂಡಿದ್ದು, ವಿಶ್ವನು ಜಾನುಳನ್ನು ಹುಡುಕಿ ಕರೆದುಕೊಂಡು ಹೋಗಿದ್ದಾನೆ.

PREV
15
ಭಾವನಾ ಮತ್ತು ಜಾನು

ಗಂಡನಿಂದ ದೂರವಾಗಿರುವ ಭಾವನಾ ಮತ್ತು ಜಾನು ಇದೀಗ ಬೀದಿಗೆ ಬಂದಿದ್ದಾರೆ. ಅಣ್ಣನ ದುರಾಸೆಗೆ ಬೇಸತ್ತು ಭಾವನಾ ಮನೆಯಿಂದ ಹೊರಗೆ ಬಂದ್ರೆ, ವಿಶ್ವನ ತಾಯಿಯ ಪ್ರಶ್ನೆಗಳಿಗೆ ಉತ್ತರಿಸಲಾರದೇ ಜಾನು ಸಹ ಮನೆ ಬಿಟ್ಟು ಬಂದಿದ್ದಾಳೆ.

25
ಲಕ್ಷ್ಮೀ ನಿವಾಸದ ಕಥೆ

ಲಕ್ಷ್ಮೀ ನಿವಾಸದ ಕಥೆಯಲ್ಲಿ ಮಹತ್ತರದ ತಿರುವು ಸಿಕ್ಕಿದ್ದು, ಮುಂದೆ ಏನಾಗುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಇಲ್ಲಿಯ ಋಣ ಮುಗಿದಿದೆ. ಮತ್ತೆ ವಾಪಸ್ ನಾನು ಈ ಮನೆಗೆ ಬರಲ್ಲ ಎಂದು ಹೇಳಿ ಜಾನು ಹೊರ ನಡೆದಿದ್ದಾಳೆ. ಚಿನ್ನುಮರಿಯನ್ನು ಹುಡುಕಿಕೊಂಡು ಬಂದಿರುವ ಸೈಕೋ ಜಯಂತ್ ಮನೆಯೊಳಗೆ ಬರುವಷ್ಟರಲ್ಲಿ ಜಾನು ಹೋಗಿದ್ದಾಳೆ.

35
ಚಿನ್ನುಮರಿ

ವಿಶ್ವ ಮತ್ತು ಜಾನು ನಡುವೆ ಏನೋ ನಡೆಯುತ್ತಿದೆ ಎಂಬ ಅನುಮಾನ ತನುಗೆ ಬಂದಿತ್ತು. ಹಾಗಾಗಿ ಅತ್ತೆ ಮುಂದೆ ಈ ವಿಷಯವನ್ನು ಹೇಳಿಕೊಂಡಿದ್ದಳು. ಇಬ್ಬರು ಜೊತೆಯಾಗಿ ಚಂದನಾ ಮೂಲವನ್ನು ಪತ್ತೆ ಮಾಡಲು ಮುಂದಾಗಿದ್ದರು. ತನ್ನ ಹಿಂದಿನ ಬದುಕಿನ ಬಗ್ಗೆ ಯಾವ ವಿಷಯವನ್ನು ಹೇಳದೇ ಚಿನ್ನುಮರಿ ಹೊರನಡೆದಿದ್ದಾಳೆ.

45
ತಂಗಿ ಭಾವನಾ ಸಂಸಾರ

ತನ್ನ ಮನೆ ಉಳಿಸಿಕೊಳ್ಳಲು ಮತ್ತು ಹಣಕ್ಕಾಗಿ ತಂಗಿ ಭಾವನಾ ಸಂಸಾರವನ್ನು ಸಂತೋಷ್ ಹಾಳು ಮಾಡಿದ್ದಾನೆ. ಬಾಡಿಗೆ ಹಣ ಕೇಳಿದ ಅಣ್ಣನ ದುರಾಸೆಗೆ ಕ್ಯಾಕರಿಸಿ ಉಗಿದು ಭಾವನಾ ಎಲ್ಲವನ್ನು ದಿಕ್ಕರಿಸಿ ಹೊರ ನಡೆದಿದ್ದಾಳೆ. ಇತ್ತ ಮನೆಯಿಂದ ಹೊರಟಿದ್ದ ಜಾನುಳನ್ನು ಭೇಟಿಯಾಗಿ ವಿಶ್ವ ಕರೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ: Lakshmi Nivasa: ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!

55
ಶ್ರೀನಿವಾಸ್‌ಗೆ ಗೊತ್ತಿಲ್ಲ.

ಇಬ್ಬರು ಗಂಡು ಮಕ್ಕಳಿಗೆ ಶ್ರೀನಿವಾಸ್ ಬುದ್ಧಿ ಕಲಿಸಿದ್ದರು. ಯಾರ ಸಹವಾಸ ಬೇಡ ಎಂದು ನಿವೇಶನದಲ್ಲಿ ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಸಂತೋಷ್‌ ಮನೆಯಲ್ಲಿದ್ದ ಭಾವನಾ ಬದುಕು ಸರಿಪಡಿಸಲು ಮುಂದಾಗಿರುವ ಸಂದರ್ಭದಲ್ಲಿಯೇ ಮತ್ತೊಂದು ತಿರುವು ಪಡೆದುಕೊಂಡಿದೆ. ಸತ್ತು ಹೋಗಿದ್ದಾಳೆ ಅಂದುಕೊಂಡಿರುವ ಜಾನು ಜೀವನದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುವುದು ಶ್ರೀನಿವಾಸ್‌ಗೆ ಗೊತ್ತಿಲ್ಲ.

ಇದನ್ನೂ ಓದಿ: ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ: ಇದಪ್ಪಾ ಸ್ವಾಭಿಮಾನದ ತಿರುಗೇಟು?

Read more Photos on
click me!

Recommended Stories