ಭಾರತದ ಈ ಸ್ಥಳಗಳಲ್ಲಿ ಪಿಂಡ ಪ್ರಧಾನ ಮಾಡಿದರೆ ಪಿತೃಗಳಿಗೆ ಮೋಕ್ಷ ಸಿಗುತ್ತಂತೆ

First Published Sep 19, 2022, 5:29 PM IST

ಹಿಂದೂ ಧರ್ಮವು ಸಂಪೂರ್ಣವಾಗಿ ಸಂಪ್ರದಾಯಗಳಿಂದ ತುಂಬಿದೆ. ಜೀವನ ಮತ್ತು ಮರಣದ ಎಲ್ಲಾ ಸಂದರ್ಭಗಳಿಗೆ ಆಚರಣೆಗಳಿಂದ ತುಂಬಿದೆ. ಮಗು ಹುಟ್ಟಿದಾಗ ನಾಮಕರಣ, ಪುಣ್ಯಾರ್ಚನೆ, ಕೇಶ ಮುಂಡನ, ಉಪನಯನದಂತಹ ಹಲವು ಸಂಸ್ಕಾರಗಳನ್ನು ಮಾಡಲಾಗುತ್ತದೆ. ಇನ್ನು ಶ್ರಾದ್ಧ, ಅಸ್ತಿ ವಿಸರ್ಜನೆ ಮತ್ತು ಪಿಂಡ ಪ್ರಧಾನದಂತಹ ಆಚರಣೆಗಳು ಸಾವಿಗೆ ಸಂಬಂಧಿಸಿವೆ. ಪೂರ್ವಜರನ್ನು ಪೂಜಿಸಲು ಮತ್ತು ಅವರ ಆತ್ಮವನ್ನು ಮೋಕ್ಷದ ಕಡೆಗೆ ಕೊಂಡೊಯ್ಯಲು ಪಿಂಡ ಪ್ರಧಾನ ಒಂದು ಆಚರಣೆಯಾಗಿದೆ.

ಹೆಚ್ಚಿನ ಎಲ್ಲಾ ಹಿಂದೂಗಳು ಈ ಪಿಂಡ ಪ್ರಧಾನ ಆಚರಣೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಬ್ರಹ್ಮ ದೇವ ಈ ಅಭ್ಯಾಸ ಪ್ರಾರಂಭಿಸಿದನು ಎಂದು ನಂಬಲಾಗಿದೆ. ಹೀಗೆ ಮಾಡೋದರಿಂದ ಸತ್ತವರ ಆತ್ಮವು ದುಃಖದಿಂದ ಮುಕ್ತವಾಗುತ್ತದೆ ಎಂದು ನಂಬಲಾಗಿರೋದರಿಂದ ಪಿಂಡ ಪ್ರಧಾನವು (Pind daan) ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಪಿಂಡ ಪ್ರಧಾನಕ್ಕಾಗಿ ನೀವು ಭೇಟಿ ನೀಡಬಹುದಾದ ಸ್ಥಳಗಳ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ.

ಪಿಂಡ ಪ್ರಧಾನಕ್ಕಾಗಿ ಭಾರತದ ಈ ಸ್ಥಳಗಳು ಪ್ರಸಿದ್ಧಿ ಪಡೆದಿದೆ

1) ವಾರಣಾಸಿ-(Varanasi)
ವಾರಣಾಸಿಯು ಭಾರತದ ಅತ್ಯಂತ ಪವಿತ್ರ ಗಂಗಾ ನದಿ ದಡದಲ್ಲಿದೆ,  ಮತ್ತು ಈ ನಗರವು ಭಾರತದ ಅತ್ಯುನ್ನತ ಯಾತ್ರಾಸ್ಥಳಗಳಲ್ಲಿ ಒಂದು. ಗಂಗಾ ಘಾಟ್ ನಲ್ಲಿ ಪಿಂಡ ಪ್ರಧಾನ ಸಮಾರಂಭವನ್ನು ನಡೆಸುವ ಅಭ್ಯಾಸವು ಸಾಕಷ್ಟು ಹಳೆಯದಾಗಿದೆ, ಅಲ್ಲಿ ಸ್ಥಳೀಯ ಬ್ರಾಹ್ಮಣ ಪಂಡಿತರು ಮಂತ್ರ ಪಠಣ ಮತ್ತು ನಂತರ ಪಿಂಡ ಪ್ರಧಾನವನ್ನು ಒಳಗೊಂಡ ಆಚರಣೆಗಳನ್ನು ಪ್ರಾರಂಭಿಸುತ್ತಾರೆ. 

2) ಗಯಾ-(Gaya)

ಗಯಾ ಬಿಹಾರದ ಮತ್ತೊಂದು ಪ್ರಮುಖ ಸ್ಥಳವಾಗಿದ್ದು, ಪಿಂಡ ಪ್ರಧಾನವನ್ನು ಸಾಮಾನ್ಯವಾಗಿ ಫಾಲ್ಗುಣಿ ನದಿಯ ದಡದಲ್ಲಿ ಮಾಡಲಾಗುತ್ತೆ, ಇದನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಹೇಳಲಾಗುತ್ತೆ. ಜನರು ಈ ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ ಮತ್ತು ಬ್ರಾಹ್ಮಣರು ಇಲ್ಲಿ ಲಭ್ಯವಿರುವ 48 ವೇದಿಕೆಗಳಲ್ಲಿ ಯಾವುದಾದರೂ ಒಂದರ ಮೇಲೆ ಪಿಂಡ ಪ್ರಧಾನಕ್ಕೆ ಪ್ರತಿಕ್ರಿಯೆಯನ್ನು ಆಯೋಜಿಸುತ್ತಾರೆ. 

3) ಅಲಕನಂದಾದ ದಡದಲ್ಲಿರುವ ಬದರೀನಾಥ-(Bhadarinath)

ಬ್ರಹ್ಮ ಕಪಾಲ್ ಘಾಟ್ ಪಿಂಡ ಪ್ರಧಾನ ಸಮಾರಂಭಕ್ಕೆ ಶುಭವೆಂದು ಪರಿಗಣಿಸಲಾಗಿದೆ. ಭಕ್ತರು ಪವಿತ್ರ ನೀರಿನಲ್ಲಿ ಸ್ನಾನ ಮಾಡುತ್ತಾರೆ ಮತ್ತು ಬ್ರಾಹ್ಮಣರು ಮಂತ್ರ ಪಠಿಸುವ ಮತ್ತು ಅಗಲಿದವರ ಆತ್ಮ ಶಾಂತಿ ಕೋರುತ್ತಾ, ಪೂರ್ವಜರಿಗೆ ಸಾಂಪ್ರದಾಯಿಕ ಅಕ್ಕಿ ಉಂಡೆಗಳನ್ನು ಅರ್ಪಿಸುವ ಆಚರಣೆಯನ್ನು ಪ್ರಾರಂಭಿಸಿದರು.

4) ಪುಷ್ಕರ್-(Pushkar)

ರಾಜಸ್ಥಾನದ ಪುಷ್ಕರ್‌ನಲ್ಲಿರುವ ಪವಿತ್ರ ಸರೋವರವು ವಿಷ್ಣುವಿನ ಹೊಕ್ಕಳಿನಿಂದ ಉಗಮವಾಯಿತು ಎಂದು ನಂಬಲಾಗಿದೆ ಮತ್ತು ಕೆಲವರ ಪ್ರಕಾರ, ಭಗವಾನ್ ಬ್ರಹ್ಮನು ಇಲ್ಲಿ ಕಮಲದ ಹೂವನ್ನು ಬಿಟ್ಟಾಗ ಅದು ಅಸ್ತಿತ್ವಕ್ಕೆ ಬಂದಿತು ಎಂದು ನಂಬಲಾಗಿದೆ. ಸರೋವರ ಮತ್ತು ಸ್ನಾನದ ವೇದಿಕೆಯ ಸುತ್ತಲೂ 52 ಘಾಟ್ ಗಳಿವೆ, ಇಲ್ಲಿ ಭಕ್ತರು ಸಾಮಾನ್ಯವಾಗಿ ಪವಿತ್ರ ಅಶ್ವಿನ್ ತಿಂಗಳಲ್ಲಿ ನಡೆಯುವ ಪಿಂಡ ಪ್ರಧಾನ ಸಮಾರಂಭಕ್ಕೆ ಹಾಜರಾಗುತ್ತಾರೆ.

5) ಅಯೋಧ್ಯೆ-(Ayodhya)

ರಾಮಜನ್ಮಭೂಮಿಯು ಒಂದು ಸುಪ್ರಸಿದ್ಧ ಯಾತ್ರಾಸ್ಥಳ. ಪಿಂಡ ಪ್ರಧಾನ ಸಮಾರಂಭಗಳಿಗೆ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಪವಿತ್ರ ಸರಯೂ ನದಿಯ ದಡದಲ್ಲಿ ಭಟ್ ಕುಂಡವಿದೆ, ಅಲ್ಲಿ ಹಿಂದೂ ಬ್ರಾಹ್ಮಣರು ಪುರೋಹಿತರ ನೇತೃತ್ವದಲ್ಲಿ ಆಚರಣೆಗಳನ್ನು ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಪೂರೈಸುತ್ತಾರೆ. 

click me!