ಈ ದೇವಾಲಯದ ಆವರಣದಲ್ಲಿ ಸರಸ್ವತಿಬೆನ್ ಎಂಬ ಮಹಿಳೆ ಕ್ಲೀನಿಂಗ್ ಕೆಲಸ ಮಾಡುತ್ತಾರೆ. ಅವರು ಕೆಲವು ವರ್ಷಗಳ ಹಿಂದೆ ಈ ಹದ್ಮಾಟಿಯಾ ಗ್ರಾಮಕ್ಕೆ ಬಂದರಂತೆ. ಅವರ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಇಡೀ ಕುಟುಂಬ ಒಂದೇ ಕೋಣೆಯಲ್ಲಿ ವಾಸಿಸುತ್ತಿತ್ತಂತೆ. ನಂತರ ಅವರು ತನ್ನ ಮನೆಯಿಂದ ದೇವಾಲಯಕ್ಕೆ ಪಾದಯಾತ್ರೆ ಮಾಡೊದಾಗಿ ಬೇಡಿಕೊಂಡರು. ಅದರ ನಂತರ, ಪಂಚಮುಖಿ ಹನುಮಂತನ ದಯೆಯಿಂದಾಗಿ ಈಗ ಮನೆಯನ್ನು ಸಹ ನಿರ್ಮಿಸಲಾಗಿದೆಯಂತೆ. ಅಷ್ಟೇ ಯಾಕೆ ಎರಡು ಕಾರುಗಳನ್ನು ಸಹ ಖರೀದಿಸಿದ್ದು , ಈಗ ಅವರ ಆರ್ಥಿಕ ಸ್ಥಿತಿ (finacnial condition) ತುಂಬಾ ಉತ್ತಮವಾಗಿದೆ. ಆದರೂ, ಅವರು ಇನ್ನೂ ಈ ಪಂಚಮುಖಿ ಹನುಮಾನ್ ದೇವಾಲಯದ ಸೇವೆ ಮಾಡುತ್ತಲೇ ಇದ್ದಾರಂತೆ.