Jan 8, 2019, 1:29 PM IST
ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಒಳ್ಳೆಯ ಸ್ನೇಹಿತರು. ’ಮುಕುಂದ ಮುರಾರಿ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆಮೇಲೆ ಅದೇನಾಯ್ತೋ ಏನೋ ಇವರಿಬ್ಬರ ನಡುವೆ ಅಷ್ಟಕ್ಕಷ್ಟೆ ಎನ್ನುವ ಮಾತು ಕೇಳಿ ಬಂದಿದೆ.
ಇತ್ತೀಚಿಗೆ ನಿರ್ದೇಶಕರ ಸಂಘದ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಉಪ್ಪಿ-ಸುದೀಪ್ ಆಗಮಿಸಬೇಕಿತ್ತು. ಆದರೆ ಉಪ್ಪಿ ಮಾತ್ರ ಆಗಮಿಸಿದರು.ಸುದೀಪ್ ತಡವಾಗಿ ಎಂಟ್ರಿ ಕೊಟ್ಟರು. ಬೇಕಂತಲೇ ತಡವಾಗಿ ಬಂದ್ರಾ ಎಂಬ ಕುತೂಹಲಕ್ಕೆ ಕಿಚ್ಚ ಕೊಟ್ಟ ಉತ್ತರ ಸಖತ್ತಾಗಿದೆ.