ಗುರುದ್ವಾರದ ಬಳಿ ಶರಾಬು ಸೇವಿಸುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ

By Anusha KbFirst Published May 15, 2023, 12:47 PM IST
Highlights

ಗುರುದ್ವಾರದ ಸರೋವರದ ಬಳಿ  ಸರಾಯಿ ಸೇವಿಸುತ್ತಾ ಕುಳಿತಿದ್ದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಪಂಜಾಬ್‌ನ ಪಟಿಯಾಲ ಬಳಿ ನಡೆದಿದೆ.

ಪಟಿಯಾಲಾ: ಗುರುದ್ವಾರದ ಸರೋವರದ ಬಳಿ  ಸರಾಯಿ ಸೇವಿಸುತ್ತಾ ಕುಳಿತಿದ್ದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಪಂಜಾಬ್‌ನ ಪಟಿಯಾಲ ಬಳಿ ನಡೆದಿದೆ.  ಪಟಿಯಾಲಾದ ದುಃಖ ನಿವಾರ್ನ್ ಸಾಹಿಬ್‌ ಗುರುದ್ವಾರದ ಸರೋವರದ ಸಮೀಪ ಮಹಿಳೆ ಮದ್ಯ ಸೇವಿಸುತ್ತಾ ಕುಳಿತಿದ್ದಾಗ ಈ ಘಟನೆ ನಡೆದಿದೆ ಎಂದು ಪಟಿಯಾಲಾ ಎಸ್‌ಎಸ್‌ಪಿ ವರುಣ್‌ ಶರ್ಮಾ (Varun Sharma) ಹೇಳಿದ್ದಾರೆ. ನಿನ್ನೆ ಭಾನುವಾರ ರಾತ್ರಿ 9:30 ರ ಸುಮಾರಿಗೆ ಈ ಘಟನೆ ನಡೆದಿದ್ದು. ಮೃತ ಮಹಿಳೆಯನ್ನು 32 ವರ್ಷದ ಪರ್ಮಿಂದರ್ ಕೌರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಈಕೆ,  ಅರ್ಬನ್ ಎಸ್ಟೇಟ್ 1 ರ ನಿವಾಸಿ ಎಂದು ವರುಣ್ ಶರ್ಮಾ ಮಾಹಿತಿ ನೀಡಿದ್ದಾರೆ. 

ಪರ್ಮಿಂದರ್ ಕೌರ್ (Parminder Kaur) ಅವರು ಗುರುದ್ವಾರ ದುಖಃ ನಿವಾರ್ನ್ ಸಾಹಿಬ್‌ನ (Dukhniwarn Sahib) ಸರೋವರದ ಬಳಿ ಮದ್ಯ ಸೇವಿಸುತ್ತಿದ್ದರು. ಇದನ್ನು ಗಮನಿಸಿದ ಕೆಲವರು ಅವರನ್ನು ಮ್ಯಾನೇಜರ್ ಕಚೇರಿಗೆ ಕರೆದೊಯ್ದರು. ಈ ವೇಳೆ ಸ್ಥಳದಲ್ಲಿದ್ದ ನಿರ್ಮಲಜೀತ್ ಸಿಂಗ್ ಸೈನಿ ಎಂಬಾತ ಕೋಪದಿಂದ ಆಕೆಯ ಮೇಲೆ ಐದು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಎಸ್‌ಎಸ್‌ಪಿ ವರುಣ್ ಶರ್ಮಾ ಮಾಹಿತಿ ನೀಡಿದ್ದಾರೆ.  ಮಹಿಳೆಯನ್ನು ಗುರುದ್ವಾರದ ಆವರಣದಿಂದ ಹೊರಗೆ ಕರೆದೊಯ್ಯುತ್ತಿದ್ದಾಗ ಸಾಧು ಸಿಂಗ್ ಎಂಬುವವರ ಪುತ್ರ ನಿರ್ಮಲಜೀತ್ ಸಿಂಗ್ (Nirmaljeet Singh) ಎಂಬಾತ ತನ್ನ 32 ಬೋರ್ ಲೈಸೆನ್ಸ್‌ಡ್ ರಿವಾಲ್ವರ್ ಬಳಸಿ ಪರ್ಮಿಂದರ್ ಕೌರ್ ಮೇಲೆ 5 ಸುತ್ತು ಗುಂಡು ಹಾರಿಸಿದ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು; ಹಾಡಹಗಲೇ ರೌಡಿಶೀಟರ್ ಗುಂಡಿಕ್ಕಿ ಹತ್ಯೆ!

ಈ ಗುಂಡಿನ ದಾಳಿಯಲ್ಲಿ ಮಹಿಳೆ ಪರ್ಮಿಂದರ್ ಕೌರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬರು ಗಾಯಗೊಂಡಿದ್ದಾರೆ, ಗಾಯಾಳುವನ್ನು ಸಾಗರ್ ಕುಮಾರ್ (Sagar Kumar) ಎಂದು ಗುರುತಿಸಲಾಗಿದೆ. ಆತನನ್ನು ಚಿಕಿತ್ಸೆಗಾಗಿ ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ (Rajindra Hospital) ಸಾಗಿಸಲಾಗಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ನಿರ್ಮಲ್‌ಜೀತ್ ಸಿಂಗ್‌ನನ್ನು (Niramjeet Singh) ಬಂಧಿಸಲಾಗಿದ್ದು, ಆತನ ಬಳಿ ಇದ್ದ ರಿವಾಲ್ವರ್‌ನ್ನು ವಶಕ್ಕೆ ಪಡೆಯಲಾಗಿದೆ. ಈತ ಓರ್ವ ವೃತ್ತಿಪರ ಭೂಮಿ ಮಾರಾಟ ದಲ್ಲಾಳಿ ಎಂದು ತಿಳಿದು ಬಂದಿದೆ. ಆದರೆ ಆತನಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಟೇಸ್ಟ್‌ ಚೆನ್ನಾಗಿಲ್ಲ ಅಂತ ಕಬಾಬ್‌ ಮಾಡಿದವನನ್ನು ಗುಂಡಿಕ್ಕಿ ಕೊಂದ!

2 ವರ್ಷದಿಂದ ಹಿಂಬಾಲಿಸಿ ಕೊಂದೇ ಬಿಟ್ಟ ಪಾಪಿ

ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 22 ವರ್ಷದ ಹುಡುಗಿಯೊಬ್ಬಳನ್ನು ಭಗ್ನಪ್ರೇಮಿಯೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಆರೋಪಿ 2 ವರ್ಷಗಳಿಂದ ಆತನನ್ನು ಹಿಂಬಾಲಿಸುತ್ತಲೇ ಇದ್ದು, ಈಗ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಅಲ್ಲದೇ ಆತನನ್ನು ಬಂಧಿಸಲು ಹೊದ ಪೊಲೀಸರ ಮೇಲೆಯೂ ಆರೋಪಿ ಗುಂಡು ಹಾರಿಸಿದ್ದು ಈ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.  ದೀಪಕ್ ರಾಥೋರೆ ಎಂಬಾತನೇ ಹೀಗೆ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಯುವಕ.  ಪೂಜಾ ಹತ್ಯೆಯಾದ ಯುವತಿಯಾಗಿದ್ದು,  ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆರೋಪಿ ದೀಪಕ್ ನಡುರಸ್ತೆಯಲ್ಲೇ ಪೂಜಾ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಮಧ್ಯಪ್ರದೇಶದ (Madhya Pradesh) ಧಾರ್ ನಗರದಲ್ಲಿ ಈ ಘಟನೆ ನಡೆದಿದೆ. 

ಆರೋಪಿ ದೀಪಕ್ ಪೂಜಾಳಿಗೆ ತನ್ನನ್ನು ಮದುವೆಯಾಗುವಂತೆ ಹೇಳಿ ನಿರಂತರವಾಗಿ ಒತ್ತಾಯಿಸುತ್ತಿದ್ದ. ಆದರೆ ಪೂಜಾ ಈತನ ನಿವೇದನೆಯನ್ನು ತಿರಸ್ಕರಿಸಿದ್ದಳು. ಮೃತ ಪೂಜಾಳಿಗೆ ತಂದೆ ಇಲ್ಲ, ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ  ಧಾರ್‌ ಸಮೋಪದ ನಗರವಾದ ಬ್ರಹ್ಮಕುಂಡದಲ್ಲಿ ಈಕೆ ನೆಲೆಸಿದ್ದಳು.  ಧಾರ್‌ನ  (Dhar) ರೆಸ್ಟೋರೆಂಟ್ (restaurant) ಒಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಎಂದಿನಂತೆ  ಕೆಲಸಕ್ಕೆ ಆಗಮಿಸುತ್ತಿದ್ದ ವೇಳೆ ಈಕೆಗೆ ಆರೋಪಿ ಎದುರಾಗಿದ್ದು, ಗುಂಡು ಹಾರಿಸಿದ್ದಾನೆ. 

click me!