ಕುಡಿದ ಮತ್ತಿನಲ್ಲಿ ಶಿವನ ಅವತಾರವಾಗಿ ಬದಲಾದ ಅಜ್ಜ, 85ರ ವೃದ್ಧೆಯನ್ನು ಛತ್ರಿಯಿಂದ ಬಡಿದು ಕೊಲೆ!

By Suvarna NewsFirst Published Aug 6, 2023, 6:19 PM IST
Highlights

ತನ್ನ ಪಾಡಿಗೆ ಮನೆಗೆ ತೆರಳುತ್ತಿದ್ದ 85ರ ಹರೆಯದ ಅಜ್ಜಿಯನ್ನು ತಡೆದು ನಿಲ್ಲಿಸಿದ ಅಜ್ಜ, ನಾನು ಶಿವನ ಅವತಾರ ಎಂದು ಹೊಸ ವರಸೆ ಶುರುಮಾಡಿದ್ದಾನೆ. ಬಳಿಕ ಏಕಾಏಕಿ ಛತ್ರಿಯಲ್ಲಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಇದೀಗ ಈ ಮುದುಕಪ್ಪ ಕಂಬಿ ಎಣಿಸುತ್ತಿದ್ದಾನೆ.

ಉದಯಪುರ(ಜು.06) ನಾನು ಶಿವನ ಅವತಾರ. ನಿನಗೆ ಹೊಸ ಬದುಕು ನೀಡುತ್ತೇನೆ ಎಂದ ಅಜ್ಜ, 85ರ ವೃದ್ಧೆಯನ್ನು ತಡೆದು ನಿಲ್ಲಿಸಿ ದಾಳಿ ಮಾಡಿದ ಘಟನೆ ರಾಜಸ್ಥಾನದ ಉದಯಪುರ್ ಜಿಲ್ಲೆಯಲ್ಲಿ ನಡೆದಿದೆ. ಒಂದೆರೆಡು ಪೆಗ್ ಎಣ್ಣೆ ಹಾಕಿದ್ದ ಅಜ್ಜನಿಗೆ ನಡೆದುಕೊಂಡು ಬರುವಾಗ ತಾನು ಶಿವನ ಅವತಾರ ಅನ್ನೋ ಭಾವನೆ ಬಂದಿದೆ. ನಶೆ ಏರಿದ ಬಳಿಕ ಅಜ್ಜನ ವರಸೆ ಬದಲಾಗಿದೆ. ನಶೆಯಿಂದ ತಾನು ತಿರುಗುತ್ತಿದ್ದೇನೆ ಅನ್ನೋ ಸತ್ಯ ಅರಿವಾಗಿಲ್ಲ, ಆದರೆ ಇಡೀ ಜಗತ್ತೇ ತಿರುಗುತ್ತಿರುವುದು ನನ್ನಿಂದ ಎಂದುಕೊಂಡ ಅಜ್ಜ, ದಾರಿಯಲ್ಲಿ ಸಾಗುತ್ತಿದ್ದ ವೃದ್ಧೆಯನ್ನು ತಡೆದು ನಿಲ್ಲಿಸಿ, ಏಕಾಏಕಿ ದಾಳಿ ಮಾಡಿದ್ದಾನೆ.

ಸೈರಾ ಪೊಲೀಸ್ ಠಾಣೆಯ ತರ್ಪಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗವ್ರಿ ಕಾ ಬಿಲ್ವಾರ ಗ್ರಾಮದ ನಿವಾಸಿಯಾಗಿರುವ ಅಜ್ಜ ಪ್ರತಾಪ್ ಸಿಂಗ್, ಮದ್ಯ ಕುಡಿದು ನಶೆ ಏರಿಸಿಕೊಂಡಿದ್ದಾನೆ. ದಾರಿಯಲ್ಲಿ ಬರುತ್ತಿದ್ದ ವೇಳೆ ವೃದ್ಧೆಯೊಬ್ಬರು ತನ್ನ ಮನೆಗೆ ಸಾಗುತ್ತಿದ್ದರು. ಇದೇ ವೇಳೆ ವೃದ್ಧೆಯನ್ನು ತಡೆದು ನಿಲ್ಲಿಸಿದ ಮದುಕು ಪ್ರತಾಪ್ ಸಿಂಗ್, ಕತೆ ಶುರುಮಾಡಿದ್ದಾನೆ.

Latest Videos

ಅಪ್ರಾಪ್ತ ಬಾಲಕರ ನಗ್ನಗೊಳಿಸಿ ಮೂತ್ರ ಕುಡಿಸಿದ ಕಿಡಿಗೇಡಿಗಳು, ಖಾಸಗಿ ಅಂಗಕ್ಕೆ ಖಾರಪುಡಿ ಹಾಕಿ ವಿಕೃತಿ!

ನಾನು ಶಿವನ ಅವತಾರ. ಈ ಭೂಮಿಯಲ್ಲಿ ಏನೇ ನಡೆಯಬೇಕಿದ್ದರೂ ನನ್ನ ಅನುಮತಿ ಬೇಕು ಎಂದು ಎಣ್ಣೆ ಎಟಲ್ಲಿ ಶುರುವಾಗೋ ಕತೆಯನ್ನು ಆರಂಭಿಸಿದ್ದಾನೆ. ಅಜ್ಜನ ಮಾತು ಕೇಳಿ ಇವನ್ಯಾನರ ಸೀಮೆ ಅಂತಾ ಮುಂದು ಸಾಗಿದ್ದಾರೆ. ಇದು ಅಜ್ಜನನ್ನು ಮತ್ತಷ್ಟು ಕೆರಳಿಸಿದೆ. ವೃದ್ಧೆಯನ್ನು ತಡೆದು ನಿಲ್ಲಿಸಿ, ತನ್ನ ಕೈಯಲ್ಲಿದ್ದ ಛತ್ರಿಯಲ್ಲಿ ದಾಳಿ ಮಾಡಿದ್ದಾನೆ. 

ಅಜ್ಜನ ಏಕಾಏಕಿ ದಾಳಿಗೆ ವೃದ್ಧೆ ನೆಲಕ್ಕುರಳಿದ್ದಾರೆ. ಪರಿಪರಿಯಾಗಿ ಬೇಡಿಕೊಂಡರು ಶಿವನ ಅವತಾರ ಮೈಮೇಲೆ ಆವರಿಸಿಕೊಂಡಿದ್ದ ಅಜ್ಜ ಸತತವಾಗಿ ಹಲ್ಲೆ ಮಾಡಿದ್ದಾನೆ. ಇದರ ಪರಿಣಾಮ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ವೇಳೆ ಇಬ್ಬರು ಅಪ್ರಾಪ್ತ ಬಾಲಕರು ಅಜ್ಜನನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಮಕ್ಕಳನ್ನು ಬೆದರಿಸಿದ ಅಜ್ಜ, ದಾಳಿ ಮುಂದುವರಿಸಿದ್ದಾನೆ.

8ನೇ ತರಗತಿ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ; ಕಾಮುಕ ಶಿಕ್ಷಕ ವಶಕ್ಕೆ

ಈ ಕುರಿತು ವಿಡಿಯೋ ವ್ಯಾಟ್ಸ್ಆ್ಯಪ್ ಮೂಲಕ ಹರಿದಾಡಿದೆ. ತಕ್ಷಣ ಅಲರ್ಟ್ ಆದರ ಪೊಲೀಸರು ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಆರೋಪಿ ಪ್ರತಾಪ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಜ್ಜನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿದೆ. ಈ ವೇಳೆಯೂ ತಾನು ಶಿವನ ಅವತಾರ ಎಂದು ಹೊಸ ಕತೆ ಹೇಳಲು ಮುಂದಾಗಿದ್ದ. ಆದರೆ ಪೊಲೀಸರು ಬೆದರಿಸಿದ ಬೆನ್ನಲ್ಲೇ ಸೈಲೆಂಟ್ ಆಗಿದ್ದಾನೆ. ಬಳಿಕ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಘಟನೆ ವೇಳೆ ಸ್ಥಳದಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆ ಕುರಿತ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಇದೀಗ ಅಜ್ಜ ಪೊಲೀಸರ ಅತಿಥಿಯಾಗಿದ್ದಾನೆ.  

click me!