09:28 PM (IST) Jul 25

India News Live 25th July: India-UK FTA - ಬ್ರಿಟಿಷರು ಈಗ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನೇ ಹೆಚ್ಚು ಖರೀದಿಸುತ್ತಾರೆ!

ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ದೇಶೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ತೆರೆಯಲಿದೆ. ಕೊಲ್ಹಾಪುರಿ ಚಪ್ಪಲಿ, ಹಲಸಿನ ಹಣ್ಣು, ಫೇಣಿ, ಟಾಡಿ ಮುಂತಾದವು ಯುಕೆಗೆ ರಫ್ತಾಗಲಿವೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು $120 ಬಿಲಿಯನ್‌ಗೆ ಹೆಚ್ಚಿಸುವ ಗುರಿ ಹೊಂದಿದೆ.
Read Full Story
06:44 PM (IST) Jul 25

India News Live 25th July: ಹಿಂದೂ ಹುಡುಗಿಯರಿಗೆ ಕಲ್ಮಾ ಪಠಿಸುವಂತೆ ಮಾಡಿದ್ದು ಇದೇ ಕಾರಣಕ್ಕೆ; ಮದುವೆ ನಂತರ ಅಸಹ್ಯ ಕೃತ್ಯ, ಮತಾಂತರದ ಕರಾಳ ಮುಖ ಬಯಲು!

ಏಳು ರಾಜ್ಯಗಳಲ್ಲಿ ಹರಡಿರುವ ಅಕ್ರಮ ಮತಾಂತರ ಗ್ಯಾಂಗ್ ಬೆಳಕಿಗೆ ಬಂದಿದೆ. ದೆಹಲಿಯ ಮಾಸ್ಟರ್‌ಮೈಂಡ್‌ನಿಂದ ಹಲವು ಯುವತಿಯರು ಬಲಿಪಶುಗಳಾಗಿದ್ದಾರೆ. ಈ ಗ್ಯಾಂಗ್‌ನಲ್ಲಿ ಕೆಲವು ಯುವತಿಯರು ಸ್ವತಃ ಮತಾಂತರಗೊಂಡು ಇತರರನ್ನು ಬಲೆಗೆ ಬೀಳಿಸುತ್ತಿದ್ದಾರೆ.
Read Full Story
06:14 PM (IST) Jul 25

India News Live 25th July: ಕಿಟಕಿ ಪಕ್ಕದಲ್ಲಿ ಕೂರಿಸಿದ್ದ ಮಗು 12ನೇ ಮಹಡಿಯಿಂದ ಬಿದ್ದು ಸಾವು - ಮತ್ತೊಂದೆಡೆ ಅಪ್ಪನ ಕೈ ಜಾರಿ 21 ತಿಂಗಳ ಕಂದ ಸಾವು

ಮುಂಬೈನಲ್ಲಿ ನಡೆದ ಘಟನೆಯಲ್ಲಿ ತಾಯಿ ಮಗುವನ್ನು ಶೂ ರ್ಯಾಕ್ ಮೇಲೆ ಕೂರಿಸಿದ್ದ ವೇಳೆ ಕಿಟಕಿಯಿಂದ ಬಿದ್ದು ಮಗು ಸಾವನ್ನಪ್ಪಿದೆ. ಮತ್ತೊಂದು ಪ್ರಕರಣದಲ್ಲಿ ವಾಟರ್ ಪಾರ್ಕ್ ನಲ್ಲಿ ಅಪ್ಪನ ತೋಳಿನಿಂದ ಜಾರಿ ಬಿದ್ದ ಮಗುವೊಂದು ಸಾವನ್ನಪ್ಪಿದೆ.

Read Full Story
05:26 PM (IST) Jul 25

India News Live 25th July: ಭಾರಿ ಮಳೆಗೆ ಕುಸಿದ ಇತಿಹಾಸ ಪ್ರಸಿದ್ಧಬಾಲಾಪುರ ಕೋಟೆ - ನದಿಯಲ್ಲಿ ಕೊಚ್ಚಿ ಹೋದ ಟ್ರಾಕ್ಟರ್‌

ಮಹಾರಾಷ್ಟ್ರದ ಅಕೋಲಾದಲ್ಲಿ ಭಾರೀ ಮಳೆಯಿಂದಾಗಿ ಶತಮಾನಗಳಷ್ಟು ಹಳೆಯದಾದ ಬಾಲಾಪುರ ಕೋಟೆ ಕುಸಿದಿದೆ. ಮಳೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಗುಡ್ಡ ಕುಸಿತ ಸೇರಿದಂತೆ ಹಲವು ಅವಾಂತರಗಳು ನಡೆದಿವೆ.

Read Full Story
04:12 PM (IST) Jul 25

India News Live 25th July: ಬರೋಬ್ಬರಿ 25 OTT ಫ್ಲಾಟ್‌ಫಾರ್ಮ್ ಗಳಿಗೆ ನಿಷೇಧ ಹೇರಿದ ಕೇಂದ್ರ

ಅಶ್ಲೀಲ ವಿಷಯ ಪ್ರಸಾರದ ಆರೋಪದ ಮೇಲೆ ೨೫ OTT ವೇದಿಕೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಮಾಲೋಚನೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಅಪ್ರಾಪ್ತ ವಯಸ್ಕರಿಗೆ ಅಶ್ಲೀಲ ವಿಷಯ ತಲುಪದಂತೆ ತಡೆಯುವುದು ಇದರ ಉದ್ದೇಶ.
Read Full Story
03:43 PM (IST) Jul 25

India News Live 25th July: Prime Video ಒಟಿಟಿಯಲ್ಲಿ ಸಿನಿಮಾಗಳನ್ನು ರೆಂಟ್‌ಗೆ ಪಡೆದುಕೊಳ್ಳೋದು ಹೇಗೆ?

ಹಿತವಾದ ರೊಮ್ಯಾಂಟಿಕ್ ಹಾಸ್ಯಗಳಿಂದ ಹಿಡಿದು ಅದ್ಭುತವಾದ ಆಕ್ಷನ್ ಥ್ರಿಲ್ಲರ್‌ಗಳವರೆಗೆ ಎಲ್ಲಾ ಸಿನಿಮಾಗಳನ್ನೂ ನೀವು ರೆಂಟ್‌ನಲ್ಲಿ ಬಹಳ ಸುಲಭವಾಗಿ ವೀಕ್ಷಿಸಬಹುದು.

Read Full Story
03:19 PM (IST) Jul 25

India News Live 25th July: ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯಾತೀತ' ಪದಗಳನ್ನು ತೆಗೆದುಹಾಕುವ ಯೋಚನೆ ಸದ್ಯ ಇಲ್ಲ ಎಂದ ಕೇಂದ್ರ!

ಪೀಠಿಕೆಯಲ್ಲಿ ಎರಡು ಪದಗಳನ್ನು ಪರಿಚಯಿಸುವ 42 ನೇ ತಿದ್ದುಪಡಿಯನ್ನು ಪ್ರಶ್ನಿಸಿದ ಸವಾಲನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ನ ನವೆಂಬರ್ 2024 ರ ತೀರ್ಪನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಉಲ್ಲೇಖಿಸಿದರು.

Read Full Story
02:55 PM (IST) Jul 25

India News Live 25th July: ಕನಿಷ್ಠ ವೇತನ 30 ಸಾವಿರಕ್ಕೆ ಏರಿಕೆಯಾಗುವ 8ನೇ ವೇತನ ಆಯೋಗ ಜಾರಿ ವಿಳಂಬ!

ಕನಿಷ್ಠ ವೇತನ ಮಟ್ಟವು ತಿಂಗಳಿಗೆ ₹18,000 ರಿಂದ ₹30,000 ಕ್ಕೆ ಏರಿಕೆಯಾಗಬಹುದು ಎಂದು ಕೋಟಕ್ ಮುನ್ಸೂಚನೆ ನೀಡಿದೆ, ಇದು ಸುಮಾರು 1.8 ರಷ್ಟು ಫಿಟ್‌ಮೆಂಟ್ ಅಂಶ ಮತ್ತು ಸುಮಾರು 13% ರಷ್ಟು ನಿಜವಾದ ವೇತನ ಹೆಚ್ಚಳವನ್ನು ಸೂಚಿಸುತ್ತದೆ.

Read Full Story
01:59 PM (IST) Jul 25

India News Live 25th July: ITR Filing 2025 - ಎಲ್ಲರಿಗೂ ಒಂದೇ ಡೆಡ್‌ಲೈನ್‌ ಅಲ್ಲ, ಸಂಬಳದಾರರು, ಉದ್ಯಮಿಗಳಿಗೆ ಇರೋ ಲಾಸ್ಟ್‌ ಡೇಟ್‌ ಇದು

ITR Filing Last Date 2025: ವೈಯಕ್ತಿಕ ಮತ್ತು ಹಿಂದೂ ಕುಟುಂಬಗಳಿಗೆ (HUF) ಆದಾಯ ತೆರಿಗೆ ಇಲಾಖೆಯು 2024-25ನೇ ಹಣಕಾಸು ವರ್ಷದ ಐಟಿಆರ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 15, 2025 ರವರೆಗೆ ವಿಸ್ತರಿಸಿದೆ.

Read Full Story
01:16 PM (IST) Jul 25

India News Live 25th July: ತುರ್ತು ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದಾಗಲೇ ಹೆದ್ದಾರಿಯಲ್ಲಿ ವಿಮಾನ ಪತನ - ಹಲವು ವಾಹನಗಳು ಜಸ್ಟ್ ಮಿಸ್

ಇಟಲಿಯ ಬ್ರೆಸಿಕಾದಲ್ಲಿ ಪುಟ್ಟ ವಿಮಾನವೊಂದು ತುರ್ತು ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದ ವೇಳೆ ಹೆದ್ದಾರಿಯಲ್ಲೇ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

Read Full Story
12:58 PM (IST) Jul 25

India News Live 25th July: Cheating Capital Of India - ಇಬ್ಬರಲ್ಲಿ ಒಬ್ಬರಿಗೆ ಅಕ್ರಮ ಸಂಬಂಧ! ಟಾಪ್ ​20 ಊರುಗಳ ಶಾಕಿಂಗ್​ ಪಟ್ಟಿ ಬಿಡುಗಡೆ

ಅಕ್ರಮ ಸಂಬಂಧಗಳು ಹೆಚ್ಚುತ್ತಿರುವ ಇತ್ತೀಚಿನ ದಿನಗಳಲ್ಲಿ ಭಾರತದ ಮೋಸದ ರಾಜಧಾನಿಯ ಪಟ್ಟಿ ಬಿಡುಗಡೆಯಾಗಿದೆ. ಬೆಂಗಳೂರಿಗೆ ಎಷ್ಟನೇ ಸ್ಥಾನ? ಶಾಕಿಂಗ್​ ವರದಿ ಬಿಡುಗಡೆ

Read Full Story
12:04 PM (IST) Jul 25

India News Live 25th July: ಥಾಯ್ಲೆಂಡ್, ಕಾಂಬೋಡಿಯಾ ಮಧ್ಯೆ ಯುದ್ಧಕ್ಕೆ ಕಾರಣವಾದ ಶಿವ ದೇಗುಲದ ಹಿನ್ನೆಲೆ ಏನು? ನಿರ್ಮಿಸಿದ್ದು ಯಾರು?

ಗಡಿಯಲ್ಲಿರುವ ಹಿಂದೂ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ವಿಕೋಪಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಆ ದೇಗುಲದ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

Read Full Story
11:53 AM (IST) Jul 25

India News Live 25th July: 120 ರೂಪಾಯಿ ಟೂಲ್‌ ಶುಲ್ಕ ಈಗ ಬರೀ 15 ರೂಪಾಯಿಗೆ ಇಳಿಕೆ, ಆ.15 ರಿಂದ ವಾಹನ ಮಾಲೀಕರಿಗೆ ಜಾಕ್‌ಪಾಟ್‌!

ಕೇಂದ್ರ ಸರ್ಕಾರವು ಖಾಸಗಿ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಆಗಸ್ಟ್ 15 ರಿಂದ ಜಾರಿಗೆ ತರುತ್ತಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಟೋಲ್ ಶುಲ್ಕದಲ್ಲಿ ಗಣನೀಯ ರಿಯಾಯಿತಿ ದೊರೆಯಲಿದೆ. 

Read Full Story
11:25 AM (IST) Jul 25

India News Live 25th July: ಏರಿಂಡಿಯಾ ವಿಮಾನದ ಒಳಗೇ ಗಂಡು ಮಗು ಹೆತ್ತ ಮಹಿಳೆ!

ಮಸ್ಕತ್‌ನಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಥಾಯ್ಲೆಂಡ್ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನದ ಸಿಬ್ಬಂದಿ ಹೆರಿಗೆಗೆ ಸಹಾಯ ಮಾಡಿದರು ಮತ್ತು ಮುಂಬೈನಲ್ಲಿ ಬಂದಿಳಿದ ನಂತರ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು.
Read Full Story
10:56 AM (IST) Jul 25

India News Live 25th July: ಕಾರ್ಯಕ್ರಮಕ್ಕೆ ಬರೋದಿಲ್ಲವೆಂದು ಸೋನಿಯಾ ಗಾಂಧಿ ಬರೆದ ಪತ್ರವನ್ನೇ, ತನ್ನ'ಆಸ್ಕರ್‌ ಅವಾರ್ಡ್‌' ಎಂದು ಕರೆದ ರೇವಂತ್‌ ರೆಡ್ಡಿ!

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಸೋನಿಯಾ ಗಾಂಧಿಯವರ ಪತ್ರವನ್ನು ತಮ್ಮ "ಆಸ್ಕರ್, ನೊಬೆಲ್ ಮತ್ತು ಜೀವಮಾನ ಸಾಧನೆ ಪ್ರಶಸ್ತಿ" ಎಂದು ಕರೆದಿದ್ದು, ಇದು ವಿಪಕ್ಷ ಬಿಆರ್‌ಎಸ್‌ನಿಂದ ಅಪಹಾಸ್ಯಕ್ಕೆ ಕಾರಣವಾಗಿದೆ.

Read Full Story
10:09 AM (IST) Jul 25

India News Live 25th July: ರಾಜಸ್ಥಾನದಲ್ಲಿ ಶಾಲಾ ಕಟ್ಟಡ ಕುಸಿತ - ಕನಿಷ್ಟ 4 ಸಾವು, 40 ಮಕ್ಕಳು ಅವಶೇಷಗಳಡಿ ಸಿಲುಕಿರುವ ಶಂಕೆ

ರಾಜಸ್ಥಾನದ ಝಲಾವರ್‌ನಲ್ಲಿ ಶಾಲಾ ಕಟ್ಟಡ ಕುಸಿತದಿಂದ ಕನಿಷ್ಠ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಕ್ಕಳು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Read Full Story
07:54 AM (IST) Jul 25

India News Live 25th July: ದೇಶದ 2ನೇ ಅತಿ ಸುದೀರ್ಘ ಪ್ರಧಾನಿ : ಇಂದಿರಾ ಮೀರಿಸಿದ ಮೋದಿ

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಶುಕ್ರವಾರ 4,078 ದಿನಗಳು ಪೂರ್ಣಗೊಳ್ಳುತ್ತಿದ್ದು, 4,077 ದಿನಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿಯಲಿದ್ದಾರೆ.

Read Full Story
07:54 AM (IST) Jul 25

India News Live 25th July: ಗೋವಾದಲ್ಲಿ ಕನ್ನಡಿಗರಿನ್ನು ವಾಹನ ಖರೀದಿಸುವಂತಿಲ್ಲ: ಹೊಸ ಕಾನೂನಿಗೆ ಸರ್ಕಾರ ಸಿದ್ಧತೆ

ಕಡಲ ಕಿನಾರೆಯ ಪುಟ್ಟ ರಾಜ್ಯವನ್ನು ಸುಂದರವಾಗಿ ಕಟ್ಟಿ ಬೆಳೆಸಿದ ಕನ್ನಡಿಗರು ಇನ್ನು ಮುಂದೆ ಇಲ್ಲಿ ಯಾವುದೇ ವಾಹನ ಖರೀದಿಸುವಂತಿಲ್ಲ!

Read Full Story
07:54 AM (IST) Jul 25

India News Live 25th July: ಮಹದಾಯಿ ವಿಷಯ ಕುರಿತು ಗೋವಾ ಸಿಎಂ ಹೇಳಿಕೆ ವೈಯಕ್ತಿಕ: ಪ್ರಲ್ಹಾದ್ ಜೋಶಿ

ಮಹದಾಯಿ ವಿಷಯ ಕುರಿತು ಗೋವಾ ಸಿಎಂ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಭಾರತ ಸರ್ಕಾರದ ಹೇಳಿಕೆಯಲ್ಲ. ಅದು ಅವರ ವೈಯುಕ್ತಿಕ ಹೇಳಿಕೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

Read Full Story
07:53 AM (IST) Jul 25

India News Live 25th July: ದರ್ಶನ್‌ಗೆ ಹೈಕೋರ್ಟ್‌ ಜಾಮೀನು ಕೊಟ್ಟಿದ್ದು ಹೇಗೆ?: ಸುಪ್ರೀಂ ತರಾಟೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರೆ 6 ಆರೋಪಿಗಳಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಒಂದೇ ವಾರದಲ್ಲಿ ಎರಡನೇ ಬಾರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌

Read Full Story