MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ತಾನೊಂದು ಬಗೆದರೆ ದೈವವೊಂದು ಬಗೆಯಿತು; ದುಷ್ಟ ರಮೇಶನಿಗೆ ಗೊತ್ತೇ ಆಗಲಿಲ್ಲ! ಹಿರಿ ಹಿರಿ ಹಿಗ್ಗಿದ ಪ್ರೇಕ್ಷಕರು

ತಾನೊಂದು ಬಗೆದರೆ ದೈವವೊಂದು ಬಗೆಯಿತು; ದುಷ್ಟ ರಮೇಶನಿಗೆ ಗೊತ್ತೇ ಆಗಲಿಲ್ಲ! ಹಿರಿ ಹಿರಿ ಹಿಗ್ಗಿದ ಪ್ರೇಕ್ಷಕರು

Karna Nidhi Nitya story: ಕರ್ಣನಿಂದ ನಿಧಿಯನ್ನು ದೂರ ಮಾಡಲು ರಮೇಶ್ ರೂಪಿಸಿದ ಸಂಚು ವಿಫಲವಾಗಿದೆ. ಮನೆ ಕಳೆದುಕೊಂಡ ನಿಧಿಯನ್ನು ಕರ್ಣ ತನ್ನ ಮನೆಗೆ ಕರೆತಂದಿದ್ದು, ಪತ್ನಿ ನಿತ್ಯಾ ಜೊತೆಯಲ್ಲೇ ಮಾಜಿ ಪ್ರೇಯಸಿ ನಿಧಿಯ ಗೃಹಪ್ರವೇಶವೂ ನಡೆದಿದೆ. ಇದು ಕಥೆಯಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.

2 Min read
Mahmad Rafik
Published : Oct 22 2025, 08:02 AM IST
Share this Photo Gallery
  • FB
  • TW
  • Linkdin
  • Whatsapp
15
 ಕರ್ಣ ಸೀರಿಯಲ್
Image Credit : Zee Kannada

ಕರ್ಣ ಸೀರಿಯಲ್

ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಪ್ರತಿ ಸಂಚಿಕೆಯಲ್ಲಿಯೂ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿಧಿಯನ್ನು ಪ್ರೀತಿ ಮಾಡಿದ್ದ ಕರ್ಣ ತನ್ನನ್ನು ಸದಾ ದ್ವೇಷಿಸುವ ನಿತ್ಯಾ ಜೊತೆ ಸಪ್ತಪದಿ ತುಳಿದಿದ್ದಾನೆ. ಕರ್ಣನ ಮಾಜಿ ಪ್ರೇಯಸಿ ನಿಧಿ ಆತನ ಮುಂದೆಯೇ ಇರಬೇಕು. ಪ್ರೀತಿ ಕಳೆದುಕೊಂಡ ನೋವು ಪ್ರತಿದಿನ ಕರ್ಣನಿಗೆ ಕಾಡುತ್ತಿರಬೇಕು ಎಂದು ನಿಧಿ ಮನೆಗೆ ರಮೇಶ್ ಬೆಂಕಿ ಹಚ್ಚಿಸಿದ್ದಾನೆ.

25
ರಮೇಶ್‌ನ ನೀಚ ಪ್ಲಾನ್
Image Credit : Zee Kannada

ರಮೇಶ್‌ನ ನೀಚ ಪ್ಲಾನ್

ಮನೆ ಕಳೆದುಕೊಂಡು ಶಾಂತಜ್ಜಿ ಜೊತೆ ನಿಧಿ ಬೀದಿಗೆ ಬಂದಿದ್ದಾಳೆ. ನಿತ್ಯಾ ನಮ್ಮ ಸೊಸೆ, ಆಕೆಯನ್ನು ನಾವು ಮನೆಗೆ ಕರೆದುಕೊಂಡು ಹೋಗುತ್ತವೆ. ಆದ್ರೆ ನಿಧಿ ಮತ್ತು ಶಾಂತಜ್ಜಿ ಅವರ ಮುಂದಿನ ಕಥೆ ಏನು ಎಂದು ತಾಯಿ ಮುಂದೆ ರಮೇಶ್ ಹೇಳಿದ್ದಾನೆ. ಆಗ ಕರ್ಣ, ಇನ್ಮುಂದೆ ಅವರಿಬ್ಬರು ನಮ್ಮೊಂದಿಗೆ ನಮ್ಮ ಮನೆಯಲ್ಲಿರುತ್ತಾರೆ ಎಂದು ಹೇಳಿದ್ದಾನೆ. ಇಲ್ಲಿಗೆ ರಮೇಶ್‌ನ ಮತ್ತೊಂದು ಪ್ಲಾನ್‌ ಸಕ್ಸಸ್ ಆಗಿದೆ.

Related Articles

Related image1
Karna Serial: ಕರ್ಣನ ನಗು ಕಿತ್ತುಕೊಂಡ್ರು ನೀಚರಿಗೆ ತೃಪ್ತಿಯಾಗಲಿಲ್ವಾ? ನಿತ್ಯಾ, ನಿಧಿಗೆ ಶಾಕ್‌ ಮೇಲೆ ಶಾಕ್
Related image2
Karna Serial: ಗುಟ್ಟಾಗಿಯೇ ಉಳಿತು ಮೂರು ಗಂಟಿನ ಸತ್ಯ: ಕರ್ಣನದ್ದು ಒಂದೊಂದು ಭೂಮಿ ತೂಕದ ಮಾತು
35
ಗೆದ್ದೆ ಎಂಬ ಹೆಮ್ಮೆಯಲ್ಲಿ ರಮೇಶ್
Image Credit : Zee Kannada

ಗೆದ್ದೆ ಎಂಬ ಹೆಮ್ಮೆಯಲ್ಲಿ ರಮೇಶ್

ಎಲ್ಲವೂ ತಾನು ಅಂದುಕೊಂಡಂತೆ ಆಗುತ್ತಿದೆ ಎಂದು ರಮೇಶ್ ಹೆಮ್ಮೆಯಿಂದ ಬೀಗುತ್ತಿದ್ದಾನೆ. ಆದ್ರೆ ನಿತ್ಯಾ ಕೊರಳಿಗೆ ಕರ್ಣ ತಾಳಿ ಕಟ್ಟೇ ಇಲ್ಲ ಎಂಬ ವಿಷಯ ರಮೇಶ್‌ನಿಗೆ ಗೊತ್ತಿಲ್ಲ. ಇನ್ನು ಮಗ-ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ವೇಳೆ ನಿಧಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರಿಂದ ನಿಧಿಯನ್ನು ಎತ್ತಿಕೊಂಡು ನಿತ್ಯಾ ಜೊತೆ ಕರ್ಣ ಮನೆಯೊಳಗೆ ಬಂದಿದ್ದಾನೆ. ಇಬ್ಬರು ಸೋದರಿಯರು ಕರ್ಣನೊಂದಿಗೆ ಮನೆಯೊಳಗೆ ಬಂದಿದ್ದಾರೆ.

45
ತಾನೊಂದು ಬಗೆದರೆ ದೈವವೊಂದು ಬಗೆಯಿತು
Image Credit : Zee Kannada

ತಾನೊಂದು ಬಗೆದರೆ ದೈವವೊಂದು ಬಗೆಯಿತು

ಇಂದಿನ ಪ್ರೋಮೋ ನೋಡಿದ ವೀಕ್ಷಕರು, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂದು ಹೇಳುತ್ತಿದ್ದಾರೆ. ಕರ್ಣನಿಂದ ನಿಧಿಯನ್ನು ದೂರ ಮಾಡಬೇಕು ಎಂದು ರಮೇಶ್‌ ಸಂಚು ರೂಪಿಸಿದ್ದನು. ಇದೀಗ ರಮೇಶ್‌ನ ಮುಂದೆಯೇ ಕರ್ಣನೊಂದಿಗೆ ನಿಧಿಯ ಗೃಹಪ್ರವೇಶವಾಗಿರೋದನ್ನು ಕಂಡು ಪ್ರೇಕ್ಷಕರು ಹಿರಿ ಹಿರಿ ಹಿಗ್ಗಿದ್ದಾರೆ.

ಇದನ್ನೂ ಓದಿ: Karna Serial: ಒಡೆದ ಹೃದಯಗಳ ಪಿಸುಮಾತಿಗೆ ಸಾಕ್ಷಿಯಾದ ಕರ್ಣ-ನಿಧಿ ಮೌನ, ಅಸಹಾಯಕಳಾಗಿ ನಿಂತ ನಿತ್ಯಾ

55
ಕುತೂಹಲ
Image Credit : Zee Kannada

ಕುತೂಹಲ

ಮುಂದೆ ಕರ್ಣ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ? ಮದುವೆಗೂ ಮುಂಚೆಯೇ ಗರ್ಭಿಣಿಯಾಗಿರುವ ವಿಷಯವನ್ನು ಕರ್ಣನಿಗೆ ನಿತ್ಯಾ ಹೇಳ್ತಾಳಾ? ಹೀಗೆ ಹಲವು ಕುತೂಹಲಗಳನ್ನು ಕರ್ಣ ಧಾರಾವಾಹಿ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಸೀರಿಯಲ್‌ ಮತ್ತಷ್ಟು ರೋಚಕ ತಿರುವು ಪಡೆದುಕೊಳ್ಳಲಿದೆ ಎಂಬುದರ ಸುಳಿವು ಪ್ರೇಕ್ಷಕರಿಗೆ ಸಿಕ್ಕಿದೆ.

ಇದನ್ನೂ ಓದಿ: ಕರ್ಣನ ಮದ್ವೆ ಆಗ್ತಿದ್ದಂತೆ ಭವ್ಯಾ ಗೌಡ ಬಗ್ಗೆ ಎಲ್ರೂ ಹೇಳ್ತಿರೋದು, ಹೇಳಿದ್ದು ಇದೊಂದೇ ಮಾತು!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಕಿರಣ್ ರಾಜ್
ನಮ್ರತಾ ಗೌಡ
ಭವ್ಯಾ ಗೌಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved