MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ನೋಡುಗರಲ್ಲಿ ರೋಮಾಂಚನ ಸೃಷ್ಟಿಸಿದ ಅಣ್ಣಯ್ಯ; ಮಾರಿಗುಡಿ ವೀರಭದ್ರನಿಗೆ ಆಯ್ತು ಶಿಕ್ಷೆ, ಗೊಂದಲದಲ್ಲಿ ಶಿವು

ನೋಡುಗರಲ್ಲಿ ರೋಮಾಂಚನ ಸೃಷ್ಟಿಸಿದ ಅಣ್ಣಯ್ಯ; ಮಾರಿಗುಡಿ ವೀರಭದ್ರನಿಗೆ ಆಯ್ತು ಶಿಕ್ಷೆ, ಗೊಂದಲದಲ್ಲಿ ಶಿವು

ರೋಮಾಂಚನ ಸೃಷ್ಟಿಸಿದ ಅಣ್ಣಯ್ಯ: ವೀರಭದ್ರನ ಬಂಧನದಿಂದ ಶಾರದಮ್ಮಳನ್ನು ಶಿವು, ಪಾರ್ವತಿ ಮತ್ತು ಮಾದಪ್ಪ ರಕ್ಷಿಸಿದ್ದಾರೆ. ತನ್ನ ಪಾಪದ ಕೃತ್ಯಕ್ಕೆ ಹೆದರಿ ವೀರಭದ್ರ ಪಾರ್ಶ್ವವಾಯುವಿಗೆ ತುತ್ತಾಗಿದ್ದಾನೆ. ಇತ್ತ, ತನ್ನ ಗುರುತು ಮಗ ಶಿವುಗೆ ತಿಳಿಯಬಾರದೆಂದು ಶಾರದಮ್ಮ ಮಾದಪ್ಪನ ಬಳಿ ಮನವಿ ಮಾಡಿಕೊಂಡಿದ್ದಾಳೆ.

1 Min read
Mahmad Rafik
Published : Sep 22 2025, 08:20 PM IST
Share this Photo Gallery
  • FB
  • TW
  • Linkdin
  • Whatsapp
15
ಮಾದಪ್ಪನ ಮನೆ ಸೇರಿದ ಶಾರದಮ್ಮ
Image Credit : Zee Kannada FB

ಮಾದಪ್ಪನ ಮನೆ ಸೇರಿದ ಶಾರದಮ್ಮ

ವೀರಭದ್ರನ ಬಂಧನದಲ್ಲಿದ್ದ ಶಾರದಮ್ಮಳನ್ನು ಶಿವು, ಪಾರ್ವತಿ ಮತ್ತು ಮಾದಪ್ಪ ರಕ್ಷಣೆ ಮಾಡಿದ್ದಾರೆ. ಅಲ್ಲಿದ್ದ ಎಲ್ಲಾ ರೌಡಿಗಳು ಎಸ್ಕೇಪ್ ಆಗಿದ್ದು, ಶಿವುಗೆ ತಾಯಿಯ ದರ್ಶನವೇ ಆಗಲಿಲ್ಲ. ಶಾರದಮ್ಮಳನ್ನು ನೋಡಿದ ಮಾದಪ್ಪ, ಯಾವ ವಿಷಯವನ್ನು ಹೇಳದೇ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.

25
ವೀರಭದ್ರಗೆ ಪಾರ್ಶ್ವವಾಯು
Image Credit : Zee Kannada FB

ವೀರಭದ್ರಗೆ ಪಾರ್ಶ್ವವಾಯು

ಶಿವು-ಪಾರು ತನ್ನ ತೋಟಕ್ಕೆ ಬಂದಿರೋ ವಿಷಯ ತಿಳಿಯುತ್ತಿದ್ದಂತೆ ವೀರಭದ್ರ ಭಯದಿಂದ ಗಢಗಢ ನಡುಗುತ್ತಿದ್ದಾನೆ. ಶಾರದಮ್ಮಾ ಎಲ್ಲಿ ತನ್ನೆಲ್ಲಾ ವಿಷಯವನ್ನು ಶಿವುಗೆ ಹೇಳುತ್ತಾಳೆ ಎಂಬ ಭಯದಲ್ಲಿದ್ದ ವೀರಭದ್ರ ಪಾರ್ಶ್ವವಾಯುಗೆ ತುತ್ತಾಗಿದ್ದಾನೆ. ಈ ದೃಶ್ಯ ನೋಡಿದರೆ ಮಾಡಬಾರದನ್ನು ಮಾಡಿದ್ರೆ ಆಗಬಾರದ್ದೆ ಆಗುತ್ತೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Related Articles

Related image1
Annayya Serial Manu: ಅಣ್ಣಯ್ಯ ಧಾರಾವಾಹಿ ಪೆದ್ದ ಮನು ರಿಯಲ್‌ ಲೈಫ್‌ನಲ್ಲಿ ತುಂಬ ಬುದ್ಧಿವಂತ! ಶಿಕ್ಷಣ ಏನು?
Related image2
Annayya Serial ಶಿವು-ಪಾರು ರಿಯಲ್‌ ಲೈಫ್‌ನಲ್ಲೂ ಒಂದಾಗ್ತಾ ಇದ್ದಾರಾ? ಮದುವೆ ಬಗ್ಗೆ ನಟಿ ಹೇಳಿದ್ದೇನು?
35
ಶಾರದಮ್ಮಾ ಮನವಿ
Image Credit : Zee Kannada FB

ಶಾರದಮ್ಮಾ ಮನವಿ

ಇತ್ತ ತನ್ನ ಮಾವನ ತೋಟದ ಮನೆಯಲ್ಲಿ ಮಹಿಳೆಯನ್ನು ಬಂಧಿಸಿಟ್ಟಿದ್ದು ಯಾರು? ಆ ಮಹಿಳೆ ಯಾರು ಎಂದು ತಿಳಿಯದೇ ಶಿವು ಗೊಂದಲಕ್ಕೆ ಒಳಗಾಗಿದ್ದಾನೆ. ಇತ್ತ ಮಾದಪ್ಪನ ಮನೆ ಸೇರಿರುವ ಶಾರದಮ್ಮಾ, ಮಗಳು ರಶ್ಮಿ ಮದುವೆಯನ್ನು ನಿನ್ನ ಮಗ ಸೀನನೊಂದಿಗೆ ಮಾಡಿಸಿದ್ದು ನಾನು ಎಂಬ ಸತ್ಯವನ್ನು ಹೇಳಿದ್ದಾಳೆ. ಹಾಗೆ ನಾನು ಶಿವು ತಾಯಿ ಅನ್ನೋ ಸತ್ಯ ಪಾರುಗೆ ಗೊತ್ತಾಗೋದು ಬೇಡ ಎಂದು ಮಾದಪ್ಪನ ಬಳಿ ಶಾರದಮ್ಮಾ ಮನವಿ ಮಾಡಿಕೊಂಡಿದ್ದಾಳೆ.

45
 ಶಾರದಮ್ಮಾ ಫುಲ್ ಖುಷಿ
Image Credit : Zee Kannada FB

ಶಾರದಮ್ಮಾ ಫುಲ್ ಖುಷಿ

ಫೋನ್ ಮಾಡಿ ಶಾರದಮ್ಮಳ ಆರೈಕೆಯನ್ನು ಪಾರು ವಿಚಾರಿಸಿದ್ದಾಳೆ. ಇದರಿಂದ ಶಾರದಮ್ಮಾ ಖುಷಿಯಾಗಿದ್ದಾಳೆ. ಮತ್ತೊಂದೆಡೆ ಮನೆಯ ಹಿತ್ತಲ ಕೋಣೆಯಲ್ಲಿದ್ದ ಶಾರದಮ್ಮಳನ್ನು ಗುಂಡಮ್ಮ (ರಶ್ಮಿ) ನೋಡಿದ್ದಾಳೆ. ಮಗಳು ನೋಡಿ ಶಾರದಮ್ಮಾ ಫುಲ್ ಖುಷಿಯಾಗಿದ್ದಾಳೆ.

ಇದನ್ನೂ ಓದಿ: ಕರಗಿದೆ ಕಾಯುವಿಕೆ.. ಅಪ್ಪನಿಗೆ ಸಿಕ್ಕಿದೆ 'ಅಪ್ಪು'ವಿನ ಅಪ್ಪುಗೆ! ಗೌತಮ್ ಖುಷಿಗೆ ಪಾರವೇ ಇಲ್ಲ!

55
ರಾಣಿ ಜೀವನ ಏನಾಗ್ತಿದೆ?
Image Credit : Zee Kannada FB

ರಾಣಿ ಜೀವನ ಏನಾಗ್ತಿದೆ?

ಒಟ್ಟಿನಲ್ಲಿ ಇಂದಿನ ಸಂಚಿಕ ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ಮುಂದೆ ಅಣ್ಣಯ್ಯ ಸೀರಿಯಲ್ ಯಾವ ಆಯಾಮ ಪಡೆದುಕೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಹುಟ್ಟಿದೆ. ಇತ್ತ ರಾಣಿ ಜೀವನ ಏನಾಗ್ತಿದೆ ಅಂತಾನೂ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟ್ವಿಸ್ಟ್ ಅಂದ್ರೆ ಇದು ನೋಡಿ: ವೀರಭದ್ರನ ಕುತಂತ್ರದ ಕತ್ತಲಲ್ಲಿ ಮುಳುಗಿದ ಮಾರಿಗುಡಿಗೆ ಸಾಕ್ಷಾತ್ಕಾರ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved