MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಟ್ವಿಸ್ಟ್ ಅಂದ್ರೆ ಇದು ನೋಡಿ: ವೀರಭದ್ರನ ಕುತಂತ್ರದ ಕತ್ತಲಲ್ಲಿ ಮುಳುಗಿದ ಮಾರಿಗುಡಿಗೆ ಸಾಕ್ಷಾತ್ಕಾರ

ಟ್ವಿಸ್ಟ್ ಅಂದ್ರೆ ಇದು ನೋಡಿ: ವೀರಭದ್ರನ ಕುತಂತ್ರದ ಕತ್ತಲಲ್ಲಿ ಮುಳುಗಿದ ಮಾರಿಗುಡಿಗೆ ಸಾಕ್ಷಾತ್ಕಾರ

ಅಣ್ಣಯ್ಯ ಸೀರಿಯಲ್‌ನಲ್ಲಿ, ವೀರಭದ್ರನಿಂದ ಅಪಹರಣಕ್ಕೊಳಗಾದ ಶಾರದಮ್ಮಳನ್ನು ಪಾರ್ವತಿ ಮತ್ತು ಮಾದಪ್ಪನ ಸಹಾಯದಿಂದ ಶಿವು ರಕ್ಷಿಸಲು ಮುಂದಾಗಿದ್ದಾನೆ. ತಾನು ರಕ್ಷಿಸುತ್ತಿರುವುದು ತನ್ನ ತಾಯಿಯನ್ನೇ ಎಂಬ ಅರಿವಿಲ್ಲದ ಶಿವು, ರೌಡಿಗಳೊಂದಿಗೆ ಹೋರಾಡುತ್ತಾನೆ.

1 Min read
Mahmad Rafik
Published : Sep 21 2025, 04:49 PM IST
Share this Photo Gallery
  • FB
  • TW
  • Linkdin
  • Whatsapp
15
ಅಣ್ಣಯ್ಯ ಸೀರಿಯಲ್‌
Image Credit : zee kannada FB

ಅಣ್ಣಯ್ಯ ಸೀರಿಯಲ್‌

ಅಣ್ಣಯ್ಯ ಸೀರಿಯಲ್‌ನಲ್ಲಿ ತಾಯಿ ಮತ್ತು ಮಗ ಒಂದಾಗುವ ಕಾಲ ಸನ್ನಿಹಿತವಾಗಿದೆ. ವೀರಭದ್ರನ ಮೋಸದಾಟದಲ್ಲಿ ಸಿಲುಕಿದ್ದ ಶಾರದಮ್ಮಳನ್ನು ಪಾರ್ವತಿ ಕಾಪಾಡಿದ್ದಾಳೆ. ಶಿವು ರೌದ್ರಾವತಾರಕ್ಕೆ ವೀರಭದ್ರ ಭಯದಿಂದ ನೀರು ಕುಡಿದಿದ್ದಾನೆ.

25
ತೋಟದ ಹಳೆ ಮನೆ
Image Credit : zee kannada FB

ತೋಟದ ಹಳೆ ಮನೆ

ಶಾರದಮ್ಮಳನ್ನು ವೀರಭದ್ರ ತೋಟದ ಹಳೆ ಮನೆಯೊಂದರಲ್ಲಿ ಬಂಧಿಸಿಟ್ಟಿರೋದು ತಿಳಿಯುತ್ತಿದ್ದಂತೆ ಮಾದಪ್ಪ ಮತ್ತು ಪಾರ್ವತಿ ತಡಮಾಡದೇ ಶಿವುಗೆ ವಿಷಯ ತಿಳಿಸಿದ್ದಾರೆ. ತಾನು ಕಾಪಾಡುತ್ತಿರೋದು ತನ್ನ ತಾಯಿ ಎಂಬ ವಿಷಯ ಶಿವುಗೆ ಗೊತ್ತಿಲ್ಲ. ಆದ್ರೆ ತೋಟದ ಮನೆಗೂ ಹೋಗುವ ಮೊದಲೇ ಮಾವನಿಗೆ ಎಲ್ಲಾ ವಿಷಯವನ್ನು ಶಿವು ತಿಳಿಸಿದ್ದನು.

Related Articles

Related image1
ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ 'ಅಣ್ಣಯ್ಯ' ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ...
Related image2
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಏಕಕಾಲಕ್ಕೆ ಒಂದಲ್ಲ, ಎರಡು ಡಿವೋರ್ಸ್‌ ಆಗೋ ಸೂಚನೆ ಸಿಕ್ಕಾಯ್ತು!
35
 ಗಟಗಟ ಅಂತ ನೀರು ಕುಡಿದ ವೀರಭದ್ರ
Image Credit : zee kannada FB

ಗಟಗಟ ಅಂತ ನೀರು ಕುಡಿದ ವೀರಭದ್ರ

ವಿಷಯ ತಿಳಿದ ವೀರಭದ್ರ ತನ್ನ ಪಟಾಲಂಗೆ ಶಾರದಮ್ಮಳನ್ನು ತೋಟದ ಮನೆಯಿಂದ ಶಿಫ್ಟ್ ಮಾಡಲು ಸೂಚಿಸಿದ್ದಾನೆ. ಈ ವೇಳೆ ರೌಡಿಗಳು ಮತ್ತು ಶಿವು ಮಧ್ಯೆ ಘನಘೋರ ಕಾಳಗವೇ ನಡೆದಿದೆ. ಶಿವು ಮತ್ತು ಪಾರ್ವತಿ ಹೋರಾಟ ಮಾಡುತ್ತಿರುವ ವಿಷಯ ಕೇಳಿ ವೀರಭದ್ರ ಗಟಗಟ ಅಂತ ನೀರು ಕುಡಿದಿದ್ದಾನೆ.

45
ಮಾದಪ್ಪನ ಸಾಥ್
Image Credit : zee kannada FB

ಮಾದಪ್ಪನ ಸಾಥ್

ಶಿವು ಮತ್ತು ಪಾರ್ವತಿ ಹೋರಾಟಕ್ಕೆ ಮಾದಪ್ಪನ ಸಾಥ್ ನೀಡಿದ್ದಾನೆ. ಶಿವು ಮುಖಕ್ಕೆ ಬಟ್ಟೆ ಹಾಕಿ ಹೊಡೆಯಲು ಮುಂದಾದ ರೌಡಿ ಎದೆಗೆ ಮಾದಪ್ಪ ಗನ್ ಇರಿಸಿದ್ದಾನೆ. ಇದೀಗ ಶಿವು ಮತ್ತು ಶಾರದಮ್ಮ ಮುಖಾಮುಖಿ ಆಗಬೇಕಿದೆ. ತಾಯಿ ಮತ್ತು ಮಗನ ಮಿಲನವನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.

ಇದನ್ನೂ ಓದಿ: ಸೀನನಿಂದ ಪಿಂಕಿಯನ್ನು ದೂರ ಮಾಡೋದ್ದಕ್ಕೆ ಒಂದೇ ಉಪಾಯ; ಮಾದಪ್ಪ ತೆಗೆದುಕೊಳ್ಳಬೇಕಿದೆ ಗಟ್ಟಿ ನಿರ್ಧಾರ

55
ಸತ್ಯ ತಿಳಿಬೇಕಿದೆ
Image Credit : zee kannada FB

ಸತ್ಯ ತಿಳಿಬೇಕಿದೆ

ಮತ್ತೊಂದೆಡೆ ಶಾರದಮ್ಮಾ ತನ್ನ ಅತ್ತೆ ಎಂಬ ಸತ್ಯವೂ ಪಾರುಗೆ ತಿಳಿಯಬೇಕಿದೆ. ಇಂದು ಬಿಡುಗಡೆಯಾಗಿರುವ ಪ್ರೋಮೋ ನೋಡಿ ವೀಕ್ಷಕರು ಟ್ವಿಸ್ಟ್ ಅಂದ್ರೆ ಇದು ನೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ತಾಯಿಯ ಮುಖ ನೋಡುವಷ್ಟರಲ್ಲಿ ಆ ವೀರಭದ್ರ ಕರೆಂಟ್ ತೆಗೆಸುತ್ತಾನೆ. ನಂತರ ಕತ್ತಲೆಯಲ್ಲಿ ಶಾರದಮ್ಮಳನ್ನು ಅಲ್ಲಿಂದ ಕರೆದುಕೊಂಡು ಹೋಗಲಾಗುತ್ತೆ ಎಂದು ವೀಕ್ಷಕರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: 'ಯಾವ ಸಮಸ್ಯೆಯಿಂದ ದಪ್ಪಗಾದ್ರಿ' ಎಂಬ ಪ್ರಶ್ನೆಗೆ Annayya Serial ಗುಂಡಮ್ಮನ ಉತ್ತರ ಕೇಳಿ.…

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved