MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸೀನನಿಂದ ಪಿಂಕಿಯನ್ನು ದೂರ ಮಾಡೋದ್ದಕ್ಕೆ ಒಂದೇ ಉಪಾಯ; ಮಾದಪ್ಪ ತೆಗೆದುಕೊಳ್ಳಬೇಕಿದೆ ಗಟ್ಟಿ ನಿರ್ಧಾರ

ಸೀನನಿಂದ ಪಿಂಕಿಯನ್ನು ದೂರ ಮಾಡೋದ್ದಕ್ಕೆ ಒಂದೇ ಉಪಾಯ; ಮಾದಪ್ಪ ತೆಗೆದುಕೊಳ್ಳಬೇಕಿದೆ ಗಟ್ಟಿ ನಿರ್ಧಾರ

ಮಾದಪ್ಪ ತೆಗೆದುಕೊಳ್ಳಬೇಕಿದೆ ಗಟ್ಟಿ ನಿರ್ಧಾರ: ಸೀನನ ಹುಟ್ಟುಹಬ್ಬದ ದಿನದಂದು, ತಾನು ಗುಂಡಮ್ಮನನ್ನು ಇಷ್ಟಪಟ್ಟು ಮದುವೆಯಾಗಿಲ್ಲ ಎಂಬ ಸತ್ಯವನ್ನು ಪಿಂಕಿ ಮುಂದೆ ಸೀನ ಬಾಯ್ಬಿಟ್ಟಿದ್ದಾನೆ. ಈ ಸತ್ಯವನ್ನು ಕೇಳಿ ಗುಂಡಮ್ಮ ಆಘಾತಕ್ಕೊಳಗಾಗಿದ್ದಾಳೆ.

1 Min read
Mahmad Rafik
Published : Sep 17 2025, 01:12 PM IST
Share this Photo Gallery
  • FB
  • TW
  • Linkdin
  • Whatsapp
15
ಅಣ್ಣಯ್ಯ ಸೀರಿಯಲ್‌
Image Credit : zee Kannada FB

ಅಣ್ಣಯ್ಯ ಸೀರಿಯಲ್‌

ಅಣ್ಣಯ್ಯ ಸೀರಿಯಲ್‌ನಲ್ಲಿ ಗುಂಡಮ್ಮ-ಸೀನನ ಜೋಡಿ ಅಂದ್ರೆ ಅಭಿಮಾನಿಗಳಿಗೆ ತುಂಬಾ ಇಷ್ಟ. ಮದುವೆ ಬಳಿಕವೂ ಗುಂಡಮ್ಮ ಮತ್ತು ಸೀನ ಕ್ಯೂಟ್‌ ಆಗಿ ಜಗಳ ಮಾಡೋದನ್ನು ನೋಡೋದನ್ನು ವೀಕ್ಷಕರು ಕಾಯುತ್ತಿರುತ್ತಾರೆ. ಮದುವೆಯಾದ್ರೂ ಸೀನ ಮಾತ್ರ ತನ್ನ ಹಳೆ ಪ್ರೀತಿಯನ್ನು ಮರೆತಿಲ್ಲ.

25
ಸೀನನ ಹುಟ್ಟುಹಬ್ಬ
Image Credit : Zee Kannada FB

ಸೀನನ ಹುಟ್ಟುಹಬ್ಬ

ಸೀನನ ಹುಟ್ಟುಹಬ್ಬವನ್ನು ಪಿಂಕಿ ಮತ್ತು ಲೀಲಾ ಅದ್ಧೂರಿಯಾಗಿ ಆಚರಿಸಿದ್ದಾರೆ. ಸೀನನಿಗೆ ಇಷ್ಟವಾದ ಅಡುಗೆ ಮಾಡಿಕೊಂಡು ಬರಲು ಗುಂಡಮ್ಮ ತವರಿಗೆ ಹೋಗಿದ್ದಳು. ತವರಿನಿಂದ ಬರುತ್ತಲೇ ಪಿಂಕಿ ಮತ್ತು ಸೀನ ನಡುವಿನ ಪ್ರೀತಿಯ ವಿಷಯ ಗುಂಡಮ್ಮಳಿಗೆ ಗೊತ್ತಾಗಿದೆ.

Related Articles

Related image1
ಮಗು ಮಾಡ್ಕೊಳ್ಳಲ್ಲ ಅಂದ ಅಣ್ಣಯ್ಯ, ಈಗ ಫಸ್ಟ್‌ನೈಟ್‌ ಮಾಡ್ಕೊಳ್ತಿದ್ದಾರಲ್ಲಾ, ಕಥೆ ಬೇರೇ ಉಂಟು ಸ್ವಾಮಿ!
Related image2
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಏಕಕಾಲಕ್ಕೆ ಒಂದಲ್ಲ, ಎರಡು ಡಿವೋರ್ಸ್‌ ಆಗೋ ಸೂಚನೆ ಸಿಕ್ಕಾಯ್ತು!
35
ಗುಂಡಮ್ಮ ಶಾಕ್
Image Credit : Zee Kannada FB

ಗುಂಡಮ್ಮ ಶಾಕ್

ತನ್ನ ಮದುವೆಯಾಗಿದ್ದು, ಇಷ್ಟದಿಂದಲ್ಲ. ಅಪ್ಪನ ಬೆದರಿಕೆಯಿಂದಾಗಿ ನಾನು ಗುಂಡಮ್ಮಗೆ ತಾಳಿ ಕಟ್ಟಿದೆ ಎಂದು ಪಿಂಕಿ ಮುಂದೆ ಸೀನ ಹೇಳಿಕೊಂಡಿದ್ದಾನೆ. ಈ ವಿಷಯ ಕೇಳಿ ಗುಂಡಮ್ಮ ಶಾಕ್ ಆಗಿ ಕಣ್ಣೀರು ಹಾಕಿದ್ದಾಳೆ. ಅತ್ತೆ ಜೊತೆ ಸೇರಿಕೊಂಡು ಸೀನ ತನಗೆ ಮೋಸ ಮಾಡಿರುವ ವಿಷಯ ತಿಳಿದು ಗುಂಡಮ್ಮ ಅಘಾತಕ್ಕೊಳಗಾಗಿದ್ದಾಳೆ.

45
ಪಿಂಕಿ ಪ್ಲಾನ್
Image Credit : Asianet News

ಪಿಂಕಿ ಪ್ಲಾನ್

ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕೃಷಿ ಜಮೀನು ಇದೆ ಎಂದು ಸೀನನ ಹಿಂದೆ ಪಿಂಕಿ ಬಿದ್ದಿದ್ದಾಳೆ. ಮಾದಪ್ಪನ ಕುಟುಂಬ ಆರ್ಥಿಕವಾಗಿ ಉತ್ತಮವಾಗಿದ್ದು, ಸೀನನ ಮದುವೆಯಾದ್ರೆ ಜೀವನ ಸುಂದರವಾಗಿರುತ್ತೆ ಎಂದು ಪಿಂಕಿ ಪ್ಲಾನ್ ಮಾಡಿಕೊಂಡಿದ್ದಾಳೆ. ಸೀನನ ಜೀವನದಿಂದ ಪಿಂಕಿ ದೂರವಾದ್ರೆ ಮಾತ್ರ ಗುಂಡಮ್ಮ ಸಂತೋಷವಾಗಿರುತ್ತಾಳೆ.

ಇದನ್ನೂ ಓದಿ: Annayya Serial ಶಿವು-ಪಾರು ರಿಯಲ್‌ ಲೈಫ್‌ನಲ್ಲೂ ಒಂದಾಗ್ತಾ ಇದ್ದಾರಾ? ಮದುವೆ ಬಗ್ಗೆ ನಟಿ ಹೇಳಿದ್ದೇನು?

55
ಮಾದಪ್ಪ ಮಾಡಬೇಕಿದೆ ಗಟ್ಟಿ ನಿರ್ಧಾರ
Image Credit : Asianet News

ಮಾದಪ್ಪ ಮಾಡಬೇಕಿದೆ ಗಟ್ಟಿ ನಿರ್ಧಾರ

ಮಗ ಮತ್ತು ಸೊಸೆ ಸಂತೋಷವಾಗಿರಬೇಕಾದ್ರೆ ಮಾದಪ್ಪ ತನ್ನ ಎಲ್ಲಾ ಆಸ್ತಿಯನ್ನು ರಶ್ಮಿ (ಗುಂಡಮ್ಮ) ಹೆಸರಿಗೆ ಬರೆಯಬೇಕು. ಆಗ ಪಿಂಕಿ ತಾನೇ ಸೀನನಿಂದ ದೂರ ಹೋಗುತ್ತಾಳೆ. ಈಗಾಗಲೇ ಪಿಂಕಿಗೆ ಶಿವಣ್ಣ ಎಚ್ಚರಿಕೆ ನೀಡಿದ್ದಾಳೆ. ಪಾರು ಸಹ ಪರೋಕ್ಷವಾಗಿ ಸೀನ ಮತ್ತು ಪಿಂಕಿಗೆ ವಾರ್ನ್ ಮಾಡಿದ್ದಳು.

ಇದನ್ನೂ ಓದಿ:Annayya Serial : ಶಿವಣ್ಣನ ಇಬ್ಬರು ತಂಗಿಯರ ಜೀವನದಲ್ಲಿ ಬಿರುಗಾಳಿ... ಸರಿಪಡಿಸಲು ಮಾಂಕಾಳವ್ವನೇ ಬರಬೇಕೆ?

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved