MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ದುರ್ಗಾಷ್ಟಮಿಯಂದೇ ಹಿತಾಳ ಬ*ಲಿಗೆ ಸಿದ್ಧತೆ! ಮುಂದಾದದ್ದು ಮೈ ಜುಂ ಎನ್ನೋ ಘಟನೆ... Naa Ninna Bidalaare

ದುರ್ಗಾಷ್ಟಮಿಯಂದೇ ಹಿತಾಳ ಬ*ಲಿಗೆ ಸಿದ್ಧತೆ! ಮುಂದಾದದ್ದು ಮೈ ಜುಂ ಎನ್ನೋ ಘಟನೆ... Naa Ninna Bidalaare

ನವರಾತ್ರಿಯ ದುರ್ಗಾಷ್ಟಮಿಯಂದು 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಮಹಾ ರೋಚಕ ಸಂಚಿಕೆ ಪ್ರಸಾರವಾಗಲಿದೆ. ಮೊಮ್ಮಗಳು ಹಿತಾಳನ್ನು ಬಲಿ ಕೊಡಲು ಮಾಳವಿಕಾ ಸಿದ್ಧತೆ ನಡೆಸಿದ್ದು, ದುಷ್ಟರ ಸಂಹಾರಕ್ಕೆ ದುರ್ಗಾ ದೇವಿಯ ಅವತಾರ ಎತ್ತುತ್ತಾಳೆ. ಈ ಮೂಲಕ ದುರ್ಗಾ ಉಗ್ರರೂಪ ತಾಳಿ ಹಿತಾಳನ್ನು ಕಾಪಾಡುತ್ತಾಳೆ.

2 Min read
Suchethana D
Published : Sep 24 2025, 02:06 PM IST
Share this Photo Gallery
  • FB
  • TW
  • Linkdin
  • Whatsapp
17
30ರಂದು ದುರ್ಗಾಷ್ಟಮಿ
Image Credit : Asianet News

30ರಂದು ದುರ್ಗಾಷ್ಟಮಿ

ಈಗ ನವರಾತ್ರಿಯ ಸಂಭ್ರಮ. ದುಷ್ಟರ ಸಂಹಾರಕ್ಕೆ ದುರ್ಗೆ ವಿವಿಧ ಅವತಾರಗಳನ್ನು ಎತ್ತಿ ಬರುತ್ತಾಳೆ. ನವರಾತ್ರಿಯ ಎಂಟನೆಯ ದಿನ ದುರ್ಗಾಷ್ಟಮಿ. ಅದು ಈ ವರ್ಷ ಸೆಪ್ಟೆಂಬರ್​ 30ರಂದು ಬರಲಿದೆ. ಈ ದಿನ ದುರ್ಗಾ ದೇವಿಯ ಮಹಾಗೌರಿ ರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಒಂದೊಂದು ದಿನವೂ ದುರ್ಗೆ ಒಂದೊಂದು ಅವತಾರ ಎತ್ತುತ್ತಾಳೆ. ಅದೇನೇ ಇದ್ದರೂ ಎಲ್ಲರ ಗುರಿ ಒಂದೇ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವುದು. ಇದೇ ಕಾರಣಕ್ಕೆ ನವರಾತ್ರಿಯಂದು ಟಿವಿ ವಾಹಿನಿಗಳಲ್ಲಿಯೂ ದುರ್ಗೆಯರ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

27
ದುರ್ಗೆಯ ಅವತಾರದಲ್ಲಿ ನಾ ನಿನ್ನ ಬಿಡಲಾರೆ ದುರ್ಗಾ
Image Credit : Instagram

ದುರ್ಗೆಯ ಅವತಾರದಲ್ಲಿ ನಾ ನಿನ್ನ ಬಿಡಲಾರೆ ದುರ್ಗಾ

ಆದರೆ, ಎಲ್ಲಕ್ಕಿಂತಲೂ ಭಿನ್ನವಾಗಿ, ರೋಚಕಕ್ಕಿಂತಲೂ ರೋಚಕವಾಗಿರೋ ಎಪಿಸೋಡ್​ ಜೀ ಕನ್ನಡದ ನಾ ನಿನ್ನ ಬಿಡಲಾರೆ ಸೀರಿಯಲ್​ (Naa Ninna Bidalaare). ದುರ್ಗಾಷ್ಟಮಿಗೆ ದುರ್ಗೆಯ ಅವತಾರ ಎನ್ನುವ ಹೆಸರಿನಲ್ಲಿ ಇದರ ಪ್ರೊಮೋ ರಿಲೀಸ್​​ ಆಗಿದೆ. ಇದನ್ನು ನೋಡಿದರೆ ಮೈಯೆಲ್ಲಾ ಜುಂ ಎನ್ನುವುದಂತೂ ನಿಜ. ಈ ಎಪಿಸೋಡ್​ ನೋಡಲು ಇದಾಗಲೇ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Related Articles

Related image1
Brahmagantu ಸೀರಿಯಲ್​ಗೆ ಹೊಸ ಹೀರೋ ಎಂಟ್ರಿ! ಕಿಡ್​ನ್ಯಾಪ್​ ಆಗಿರೋ ದೀಪಾ ಕಾಪಾಡಲು ಬಂದನೀತ...
Related image2
ರೋಚಕ ತಿರುವಿನಲ್ಲಿ Naa Ninna Bidalaare: ಕೊನೆಗೂ ಅಮ್ಮ-ಮಗಳ ಮಿಲನ; ಮುಂದಿದೆ ಭಾರಿ ಟ್ವಿಸ್ಟ್​
37
ಹಿತಾಳ ಬ*ಲಿ ಸಿದ್ಧತೆ
Image Credit : Instagram

ಹಿತಾಳ ಬ*ಲಿ ಸಿದ್ಧತೆ

ಅಷ್ಟಕ್ಕೂ ಈ ಸೀರಿಯಲ್​ನಲ್ಲಿ ಆತ್ಮ, ಪ್ರೇತ, ಮಾಟ, ಮಂತ್ರ, ತಂತ್ರ, ಕುತಂತ್ರ, ದೇವಿಯ ಶಕ್ತಿ ಎಲ್ಲವೂ ಅಡಗಿದೆ. ಮನುಷ್ಯರನ್ನು ಬ*ಲಿ ಕೊಟ್ಟು ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದ ಸೀರಿಯಲ್​ ಇದು. ಇದಾಗಲೇ ತನ್ನ ಸೊಸೆ ಅಂಬಿಕಾಳನ್ನೇ ಅತ್ತೆ ಮಾಳವಿಕಾ ಬ*ಲಿ ಕೊಟ್ಟಿದ್ದು ಆಗಿದೆ. ಆದರೆ ಇದೀಗ ಅವಳು ಮೊಮ್ಮಗಳು ಹಿತಾಳನ್ನು ಸಾಯಿಸಿ ಶಕ್ತಿಯನ್ನು ಪಡೆಯಲು ನೋಡುತ್ತಿದ್ದಾಳೆ.

47
 ರಾಕ್ಷಸರಿಂದ ಹಿತಾಳಿಗೆ ಅಪಾಯ
Image Credit : Instagram

ರಾಕ್ಷಸರಿಂದ ಹಿತಾಳಿಗೆ ಅಪಾಯ

ಹಿತಾಳಿಗೆ 7ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಇದರ ಏರ್ಪಾಟು ನಡೆದಿದೆ. ಆಕೆಯನ್ನು ಸಾಯಿಸುವ ಮೂಲಕ ಸರ್ವಶಕ್ತಿ ಪಡೆಯಲು ಮಾಳವಿಕಾ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾಳೆ. ಅದರಂತೆ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಕ್ಷಸಲು ಹಿತಾಳ ಸಂಹಾರಕ್ಕೆ ಬಂದಿದ್ದಾರೆ.

57
ಕಂಗಾಲಾಗಿ ಹೋದವರೇ ಎಲ್ಲಾ
Image Credit : Instagram

ಕಂಗಾಲಾಗಿ ಹೋದವರೇ ಎಲ್ಲಾ

ಅದನ್ನು ತಡೆಯುವ ಶಕ್ತಿ ಅಂಬಿಕಾಳ ಆತ್ಮಕ್ಕೂ ಇಲ್ಲ, ಇನ್ನು ಮನುಷ್ಯರ ಮಾತೆಲ್ಲಿ? ಎಲ್ಲರೂ ಕಂಗಾಲಾಗಿ ಹೋಗಿದ್ದಾರೆ. ಅತ್ತ ಅಂಬಿಕಾ ಮತ್ತು ದುರ್ಗಾಳ ಅಪ್ಪ ಕೂಡ ಏನೋ ಕೆಟ್ಟ ಸೂಚನೆಯನ್ನೇ ಕೊಟ್ಟಿದ್ದಾನೆ. ಬಳಿಕ ದುರ್ಗಾಷ್ಟಮಿಯಂದೆ ದುರ್ಗಾವತಾರ ಎತ್ತುವ ಸಮಯ ಬಂದಿದೆ ಎಂದಿದ್ದಾನೆ.

67
ದುರ್ಗೆಯ ಮಡಿಲಿನಲ್ಲಿ ದುರ್ಗಾ
Image Credit : Instagram

ದುರ್ಗೆಯ ಮಡಿಲಿನಲ್ಲಿ ದುರ್ಗಾ

ಇಲ್ಲಿಂದ ನಡೆಯುವುದೇ ರೋಚಕ ತಿರುವು. ಹಿತಾಳನ್ನು ಕಾಪಾಡಲು ಬಂದ ದುರ್ಗಾಳನ್ನು ದುಷ್ಟರು ನೂಕಿದ್ದಾರೆ. ದೇವಿಯ ಮಡಿಲಿನಲ್ಲಿ ದುರ್ಗಾ ಬಿದ್ದಿದ್ದಾಳೆ. ಅಲ್ಲಿ ಆಕೆಗೆ ವಿಶೇಷ ಶಕ್ತಿ ಬಂದಿದೆ. ಅಷ್ಟಮಿ ದಿನದಂದೆ ದುರ್ಗಾ ಉಗ್ರರೂಪ ತಾಳಿದ್ದಾಳೆ. ಹಿತಾಳನ್ನು ಕಾಪಾಡಿದ್ದಾಳೆ. ದುಷ್ಟರ ಸಂಹಾರ ಮಾಡಿದ್ದಾಳೆ.

77
ದುರ್ಗಾವತಾರದಲ್ಲಿ ದುಷ್ಟರ ಸಂಹಾರ
Image Credit : Instagram

ದುರ್ಗಾವತಾರದಲ್ಲಿ ದುಷ್ಟರ ಸಂಹಾರ

ಈ ಮೈನವಿರೇಳುವ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಇದರ ಎಪಿಸೋಡ್​ಗಾಗಿ ಕಾತರದಿಂದ ಕಾಯುತ್ತಿರುವುದಾಗಿ ನೆಟ್ಟಿಗರು ಕಮೆಂಟ್​ನಲ್ಲಿ ಹಾಕಿದ್ದಾರೆ. ನಿಜ ಜೀವನದಲ್ಲಿಯೂ ದುಷ್ಟರ ಸಂಹಾರಕ್ಕೆ ದೇವಿ ಅವತರಿಸಿ ಬರಬಾರದೆ ಎಂದು ಕೆಲವರು ತಮ್ಮ ಅನಿಸಿಕೆಯನ್ನೂ ವ್ಯಕ್ತಪಡಿಸಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನಾ ನಿನ್ನ ಬಿಡಲಾರೆ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ದಸರಾ
ನವರಾತ್ರಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved