MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಧ್ರುವಂತ್‌ಗೆ ಮಾತೇ ಮುಳ್ಳಾಯ್ತು; ಬಿಗ್‌ಬಾಸ್‌ನ Expect The Unexpected ಅಂದ್ರೆ ಇದೇ ನೋಡಿ

ಧ್ರುವಂತ್‌ಗೆ ಮಾತೇ ಮುಳ್ಳಾಯ್ತು; ಬಿಗ್‌ಬಾಸ್‌ನ Expect The Unexpected ಅಂದ್ರೆ ಇದೇ ನೋಡಿ

Dhruvanth and Spandana fight: ಬಿಗ್‌ಬಾಸ್ ಸೀಸನ್ 12 ರಲ್ಲಿ, ಅರಸನಾಗಿ ಅಧಿಕಾರ ಚಲಾಯಿಸಿದ್ದ ಧ್ರುವಂತ್‌ ಮೇಲೆ ಸ್ಪಂದನಾ ಸೇಡು ತೀರಿಸಿಕೊಂಡಿದ್ದಾರೆ.  ಫೈನಲಿಸ್ಟ್ ಆಗಿರುವ ಸ್ಪಂದನಾ, ಈ ವಾರದ ಎಲ್ಲಾ ಟಾಸ್ಕ್‌ಗಳಿಂದ ಧ್ರುವಂತ್ ಅವರನ್ನು ಹೊರಗಿಡುವ ಮೂಲಕ ತಮ್ಮ ಅಧಿಕಾರವನ್ನು ಬಳಸಿದ್ದಾರೆ. 

2 Min read
Author : Mahmad Rafik
Published : Oct 14 2025, 09:07 AM IST
Share this Photo Gallery
  • FB
  • TW
  • Linkdin
  • Whatsapp
16
ಧ್ರುವಂತ್‌ ಆಟ
Image Credit : Colors Kannada

ಧ್ರುವಂತ್‌ ಆಟ

ಸೀಸನ್ 12 ಮೊದಲ ಎರಡು ಬ್ಯಾಲೆನ್ಸ್‌ ಆಗಿ ಆಟವಾಡುತ್ತಿದ್ದ, ವೀಕೆಂಡ್ ಎಪಿಸೋಡ್ ಮುಗಿದ ಮರುದಿನವೇ ಧ್ರುವಂತ್‌ ತಮ್ಮ ಮೊದಲ ಬಾರಿ ಅರಸನ ಪವರ್ ಚಲಾಯಿಸಲು ಆರಂಭಿಸಿದ್ದರು. ಒಂಟಿಗಳಿಗೆ ಅರಸ ಮತ್ತು ಅರಸಿ ಎಂಬ ಪವರ್ ನೀಡಲಾಗಿತ್ತು. ಆದ್ರೆ ಎರಡು ವಾರ ಈ ಪವರ್ ಬಳಸದೇ ಎಲ್ಲರೊಂದಿಗೂ ಸಂಯಮದಿಂದ ಧ್ರುವಂತ್‌ ಆಟವಾಡುತ್ತಿದ್ದರು.

26
ಅರಸನ ಪವರ್
Image Credit : Colors Kannada

ಅರಸನ ಪವರ್

ಮೊದಲ ಬಾರಿ ಜಂಟಿಗಳಾಗಿದ್ದ ಸ್ಪಂದನಾ ಮತ್ತು ಮಾಳು ಮೇಲೆ ಅರಸನ ಪವರ್ ಚಲಾಯಿಸಿದ್ದರು. ಇದು ಸ್ಪಂದನಾ ಮತ್ತು ಧ್ರುವಂತ್‌ ಜಗಳಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಬಿಗ್‌ಬಾಸ್ ಜಂಟಿ ಸ್ಪರ್ಧಿಗಳನ್ನು ಬಂಧನದಿಂದ ಮುಕ್ತ ಮಾಡಿದ್ದರು. ಈಗ ತಾನೇ ಧ್ರುವಂತ್‌ ಮೈಲೇಜ್ ತೆಗೆದುಕೊಳ್ಳುತ್ತಿದ್ರ. ಅರಸ/ಸಿ ಮತ್ತು ಜಂಟಿ ಕಾನ್ಸೆಪ್ಟ್ ಕ್ಯಾನ್ಸಲ್ ಮಾಡಿದ್ದು ಯಾಕೆ ಬಿಗ್‌ಬಾಸ್ ಎಂದು ಗಿಲ್ಲಿ ತಮಾಷೆ ಮಾಡಿದ್ದರು.

Related Articles

Related image1
ಬಿಗ್‌ಬಾಸ್ ಮನೆ ಪುಟ್ಟಿಯ ಪ್ರಯತ್ನಕ್ಕೆ ವೀಕ್ಷಕರ ಮೆಚ್ಚುಗೆ; ಸುದೀಪ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ತಬ್ಬಿಬ್ಬು
Related image2
ಸ್ಪಂದನಾ ಜೊತೆಗಿನ ಜಗಳದ ವೇಳೆ ಸತ್ಯ ಬಿಚ್ಚಿಟ್ರಾ ಧ್ರುವಂತ್?
36
ಮಾತೇ ಮುಳ್ಳಾಯ್ತು
Image Credit : Colors Kannada

ಮಾತೇ ಮುಳ್ಳಾಯ್ತು

ಇದೀಗ ಸ್ಪಂದನಾ ಜೊತೆ ಮಾಡಿಕೊಂಡ ಜಗಳವೇ ಧ್ರುವಂತ್‌ಗೆ ಮುಳ್ಳಾಗಿದೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ವಾರದ ಎಲ್ಲಾ ಟಾಸ್ಕ್‌ಗಳಿಂದ ಧೃವಂತ್ ಅವರನ್ನು ಸ್ಪಂದನಾ ಹೊರಗೆ ಇರಿಸಿದ್ದಾರೆ. ಜನತೆ ವೋಟ್ ಆಧಾರದ ಮೇಲೆ ಸ್ಪಂದನಾ ಮತ್ತು ಮಾಳು ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.

46
ಎಲ್ಲಾ ಟಾಸ್ಕ್‌
Image Credit : Colors Kannada

ಎಲ್ಲಾ ಟಾಸ್ಕ್‌

ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಸ್ಪಂದನಾ ಸೋಮಣ್ಣ ಮತ್ತು ಮಾಳು ನಿಪನಾಳ ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್‌ನಿಂದ ಸೇವ್ ಆಗಲು ಸ್ಪರ್ಧಿಗಳು ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು. ಆದ್ರೆ ಧ್ರುವಂತ್‌ ಅವರನ್ನು ಎಲ್ಲಾ ಟಾಸ್ಕ್‌ಗಳಿಂದ ಹೊರಗಿಡುವ ಕೆಲಸವನ್ನು ಸ್ಪಂದನಾ ಮಾಡಿದ್ದಾರೆ.

56
ನೆಟ್ಟಿಗರು ಹೇಳಿದ್ದೇನು?
Image Credit : Colors Kannada

ನೆಟ್ಟಿಗರು ಹೇಳಿದ್ದೇನು?

ಇಂದಿನ ಪ್ರೋಮೋವನ್ನು ಮಾತಿಗೆ ಸ್ಪಂದಿಸಿದ್ದೇ ತಪ್ಪಾಯ್ತಾ? ಟಾಸ್ಕ್‌ಗಳಿಂದ ಧ್ರುವಂತ್ ಬ್ಲಾಕ್! ಶೀರ್ಷಿಕೆಯಡಿಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಪ್ರೋಮೋ ನೋಡಿದ ನೆಟ್ಟಿಗರು, ಮುಂದಿನ ವಾರ ಫೈನಲ್ ಲಿಸ್ಟ್ ಆಗಿರುವ ಸ್ಪಂದನಾ ಮನೆಯಿಂದ ಔಟ್ ಆಗ್ಲಿ. ಅವಳಿಗ ತುಂಬಾ ದುರಂಹಕಾರ. ಅವಳು ಹಾಕುವ ತುಂಡುಬಟ್ಟೆ ಕೂಡ ನೋಡೋದಕ್ಕೆ ಅಸಹ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ನಮ್ಮನೇಲಿ ನನ್ ಹೆಂಡ್ತಿ ನ್ಯೂಸ್ ನೋಡಲ್ಲ, ಬಿಗ್ ಬಾಸ್ ನೋಡ್ತಾರೆ; ಡಿ.ಕೆ. ಶಿವಕುಮಾರ್

66
ಆಟದ ಗೊಡವೆಯೇ ಅವರಿಗಿಲ್ಲ
Image Credit : Colors Kannada

ಆಟದ ಗೊಡವೆಯೇ ಅವರಿಗಿಲ್ಲ

ಅರುಣಾ ಎಂಬವರು ಕಮೆಂಟ್ ಮಾಡಿ ಪರಸ್ಪರ ಸೇಡು ತೀರಿಸಿ ಕುಹಕ ನಗು. ಅವಸ್ಥೆಯೇ ಇವರದ್ದು. ಬಿಗ್ಬಾಸ್ ಕೆಲವರಿಗೆ ಅಧಿಕಾರ ಕೊಡುವುದು. ಅವರವರಿಗೆ ಬೇಕಾದ ಹಾಗೆ, ಅವರಿಗಾಗದವರಿಗೆ ಅನ್ಯಾಯ ಮಾಡುವುದು. ಆಟದ ಗೊಡವೆಯೇ ಅವರಿಗಿಲ್ಲ. ಹೇಳಿ ಸುಖವಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ನಿನ್ನೆ ಧ್ರುವಂತ್‌ ಅವರದ್ದು ಅತಿಯಾಗಿತ್ತು. ಸ್ಪಂದನಾ ಮತ್ತು ಮಾಳುಗೆ ತಾನೇ ಸೇವ್ ಮಾಡಿದ ಹಾಗೆ ವರ್ತಿಸಿದ್ದು ಸರಿ ಇರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಿಯಾಲಿಟಿ ಶೋ
ಕಲರ್ಸ್ ಕನ್ನಡ
ಕಿಚ್ಚ ಸುದೀಪ್

Latest Videos
Recommended Stories
Recommended image1
ಕಾವ್ಯಾ ಗೌಡ ಮನೆಯ ರಹಸ್ಯ: ಸಿಸಿಟಿವಿ ಹೇಳಿದ ಸತ್ಯ ಏನು? ಕ್ರೂರ ಮುಖಗಳು ಅಂತ ಹೇಳಿದ್ಯಾರಿಗೆ?
Recommended image2
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Recommended image3
Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
Related Stories
Recommended image1
ಬಿಗ್‌ಬಾಸ್ ಮನೆ ಪುಟ್ಟಿಯ ಪ್ರಯತ್ನಕ್ಕೆ ವೀಕ್ಷಕರ ಮೆಚ್ಚುಗೆ; ಸುದೀಪ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ತಬ್ಬಿಬ್ಬು
Recommended image2
ಸ್ಪಂದನಾ ಜೊತೆಗಿನ ಜಗಳದ ವೇಳೆ ಸತ್ಯ ಬಿಚ್ಚಿಟ್ರಾ ಧ್ರುವಂತ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved