MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi Serial: ಬೇರೆಯವ್ರ ಸಂಸಾರ ಹಾಳ್‌ ಮಾಡೋಕೆ ಹೋದ್ರೆ ಇದೇ ಗತಿ ಬರೋದು ಶ್ರೇಷ್ಠ ಅವ್ರೇ..!

Bhagyalakshmi Serial: ಬೇರೆಯವ್ರ ಸಂಸಾರ ಹಾಳ್‌ ಮಾಡೋಕೆ ಹೋದ್ರೆ ಇದೇ ಗತಿ ಬರೋದು ಶ್ರೇಷ್ಠ ಅವ್ರೇ..!

bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಹಾಗೂ ಶ್ರೇಷ್ಠ ಮದುವೆಯಾಗಿದೆ. ಆದರೂ ಅವರಿಗೆ ನೆಮ್ಮದಿ ಇಲ್ಲದಂತಾಗಿದೆ. ಇದಕ್ಕೆ ಕಾರಣ ಏನು? 

1 Min read
Padmashree Bhat
Published : Aug 11 2025, 05:52 PM IST| Updated : Aug 11 2025, 05:53 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : jiohotstar

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳನ್ನು ಬಿಟ್ಟು ತಾಂಡವ್‌ ಹಾಗೂ ಶ್ರೇಷ್ಠ ಮದುವೆ ಆಗಿದ್ದಾರೆ. ಶ್ರೇಷ್ಠಳಿಗೆ ಸಾಕಷ್ಟು ಬಾರಿ ಬೇಡಿಕೊಂಡರೂ ಕೂಡ ಅವಳು ಮಾತ್ರ ಕೇಳದೆ ಮದುವೆ ಆಗಿದ್ದಾಳೆ. ಇಡೀ ಕುಟುಂಬ ಶ್ರೇಷ್ಠಳಿಗೆ ಎಚ್ಚರಿಕೆ ಕೊಟ್ಟರೂ, ಮನವಿ ಮಾಡಿದ್ರೂ ಅವಳು ಮಾತ್ರ ಸುಮ್ಮನಾಗಲಿಲ್ಲ.

25
Image Credit : jiohotstar

ತಾಂಡವ್‌ನನ್ನು ಪ್ರೀತಿ ಮಾಡಿ ಮದುವೆಯಾಗಬೇಕು ಎನ್ನೋದಕ್ಕಿಂತ ಜಾಸ್ತಿ, ತಾಂಡವ್‌ನನ್ನು ಪಡೆದುಕೊಂಡು ಭಾಗ್ಯ, ಕುಸುಮಾಗೆ ಪಾಠ ಕಲಿಸಬೇಕು ಅಂತ ಶ್ರೇಷ್ಠ ಅವನನ್ನು ಮದುವೆಯಾದಳು. ಭಾಗ್ಯ, ಕುಸುಮಾ ಅವಮಾನ ಮಾಡಿದ್ದಕ್ಕೆ ತಕ್ಕ ಶಾಸ್ತಿ ಮಾಡಬೇಕು ಎನ್ನೋದು ಅವಳ ಮಹದಾಸೆಯಾಗಿತ್ತು.

Related Articles

Related image1
Bhagyalakshmi Serial: ಇಷ್ಟು ದಿನಗಳ ಬಳಿಕ ಕುಸುಮಾಗೆ ಜ್ಞಾನೋದಯ! ಭಾಗ್ಯ ಬದುಕು ಬದಲಾಗೋದು ಗ್ಯಾರಂಟಿ!
Related image2
Bhagyalakshmi Serial: ತಾಂಡವ್​ಗೆ ಭಾಗ್ಯಳಿಂದ ಕಪಾಳಮೋಕ್ಷ! ಆದಿ-ಭಾಗ್ಯ ಒಂದಾಗೋ ಹೊತ್ತಲ್ಲಿ ಅವಾಂತರ!
35
Image Credit : jiohotstar

ತಾಂಡವ್‌, ಶ್ರೇಷ್ಠ ಮದುವೆಯಾಗಿದೆ. ಇವರಿಬ್ಬರಿಗೂ ಭಾಗ್ಯ ಹಾಳಾಗಬೇಕು, ಅವಳು ಅವಮಾನ ಎದುರಿಸಬೇಕು ಅಂತ ದಿನವೂ ಪ್ಲ್ಯಾನ್‌ ಮಾಡೋದರಲ್ಲಿ ಸಮಯ ಕಳೆಯುತ್ತಾರೆ. ಒಟ್ಟಿನಲ್ಲಿ ಬೇರೆಯವರ ದುಃಖದಲ್ಲಿ ಖುಷಿಪಡುವ ಹಾಳು ಮನಸ್ಸು ಇವರದ್ದು.

45
Image Credit : jiohotstar

ತಾಂಡವ್‌ ಹಾಗೂ ಭಾಗ್ಯ ಪದೇ ಪದೇ ಮುಖಾಮುಖಿಯಾಗುತ್ತಾರೆ. ತಾಂಡವ್‌ ಆಫೀಸ್‌ನಲ್ಲಿ ಕೆಲಸ ಮಾಡುವ ಆದೀಶ್ವರ್‌ಗೆ ಭಾಗ್ಯ ಕಂಡರೆ ಸಿಕ್ಕಾಪಟ್ಟೆ ಗೌರವ, ಅಭಿಮಾನ. ಭಾಗ್ಯಳನ್ನು ಎಲ್ಲರೂ ಹೊಗಳ್ತಾರೆ ಅಂತ ತಾಂಡವ್‌ಗೆ ಸಿಟ್ಟು. ಇನ್ನೊಂದು ಕಡೆ ಶ್ರೇಷ್ಠಗೆ ಅನುಮಾನ.

55
Image Credit : colors kannada instagram

ಭಾಗ್ಯ ಹಾಗೂ ತಾಂಡವ್‌ ಮುಖಾಮುಖಿ ಆಗ್ತಿರೋದು ನೋಡಿ ಶ್ರೇಷ್ಠಗೆ ಚಿಂತೆ ಶುರು ಆಗಿದೆ. ಯಾವಾಗ ನೋಡಿದರೂ ಕೂಡ ನನ್ನನ್ನು ಅಸಡ್ಡೆಯಿಂದ ಕಾಣುವ ತಾಂಡವ್‌ ಮನಸ್ಸು ಬದಲಾಯಿಸಿ ಭಾಗ್ಯಳ ಜೊತೆ ಮತ್ತೆ ಸಂಸಾರ ಮಾಡ್ತಾನೆ ಎನ್ನುವ ಚಿಂತೆ ಅವಳಿಗೆ ಶುರುವಾಗಿದೆ. ಬೇರೆಯವರ ಮನೆ ಹಾಳು ಮಾಡಲು ಹೋಈದರೆ ನೆಮ್ಮದಿ ಇರೋದಿಲ್ಲ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕಲರ್ಸ್ ಕನ್ನಡ
ಭಾಗ್ಯಲಕ್ಷ್ಮಿ ಧಾರಾವಾಹಿ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved