MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಮಲ್ಲಿ ಕಿತಾಪತಿ- ಅಪ್ಪನ ಬಳಿ ಹೋಗಿ ಅಮ್ಮನ ಕೈಯಲ್ಲಿ ತಗ್ಲಾಕ್ಕೊಂಡ ಆಕಾಶ್​! ಮನೆ ಶಿಫ್ಟ್​​?

Amruthadhaare Serial: ಮಲ್ಲಿ ಕಿತಾಪತಿ- ಅಪ್ಪನ ಬಳಿ ಹೋಗಿ ಅಮ್ಮನ ಕೈಯಲ್ಲಿ ತಗ್ಲಾಕ್ಕೊಂಡ ಆಕಾಶ್​! ಮನೆ ಶಿಫ್ಟ್​​?

ಗೌತಮ್ ಮನೆಯ ಬಗ್ಗೆ ತಿಳಿಯುವ ಕುತೂಹಲದಿಂದ ಮಲ್ಲಿ, ಆಕಾಶ್‌ನನ್ನು ಅವರ ಮನೆಗೆ ಕಳುಹಿಸುತ್ತಾಳೆ. ಆದರೆ ಈ ವಿಷಯ ಭೂಮಿಕಾ ಮುಂದೆ ಬಾಯಿ ತಪ್ಪಿ ಹೇಳಿದಾಗ, ಗೌತಮ್ ಮತ್ತು ಭೂಮಿಕಾ ನಡುವಿನ ಸಂಬಂಧದಲ್ಲಿ ಹೊಸ ಬಿಕ್ಕಟ್ಟು ಶುರುವಾಗುತ್ತದೆ, ಇದರಿಂದ ಭೂಮಿಕಾ ಮುಂದಿನ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.

1 Min read
Suchethana D
Published : Oct 23 2025, 08:04 PM IST
Share this Photo Gallery
  • FB
  • TW
  • Linkdin
  • Whatsapp
16
ಅಮೃತಧಾರೆಗೆ ಟ್ವಿಸ್ಟ್​
Image Credit : zee5

ಅಮೃತಧಾರೆಗೆ ಟ್ವಿಸ್ಟ್​

ಅಮೃತಧಾರೆ (Amruthadhaare) ಸೀರಿಯಲ್​ನಲ್ಲಿ ಸದ್ಯ ಭಾರಿ ಟ್ವಿಸ್ಟ್​ ಸಿಕ್ಕಿದ್ದು, ಗೌತಮ್​ ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ನೋಡುವ ಕುತೂಹಲದಿಂದ ಮಲ್ಲಿ ಆಕಾಶ್​ನನ್ನು ಗೌತಮ್​ ಮನೆಗೆ ಕಳುಹಿಸಿದ್ದಳು. ಅವರ ಮನೆಗೆ ಹೋಗುವುದು ಬೇಡ ಎಂದು ಭೂಮಿಕಾ ಮಲ್ಲಿಗೆ ಹೇಳಿದ್ದರಿಂದ ಅವಳು ಆಕಾಶ್​ನನ್ನು ಕಳುಹಿಸಿದ್ದಳು.

26
ಆಕಾಶ್​ನನ್ನು ಕಳುಹಿಸಿದ ಮಲ್ಲಿ
Image Credit : Instagram

ಆಕಾಶ್​ನನ್ನು ಕಳುಹಿಸಿದ ಮಲ್ಲಿ

ಬೇಡ ಬೇಡ ಎಂದರೂ ಕೇಳದೇ ಆಕಾಶ್​ನಿಗೆ ಒತ್ತಾಯ ಮಾಡಿ ಕಳುಹಿಸಿದ್ದಳು ಮಲ್ಲಿ. ಅಲ್ಲಿ ಗೌತಮ್​ ಬಿಸಿಬೇಳೆ ಬಾತ್​ ಮಾಡಿದ್ದ. ಇದನ್ನು ನೋಡಿ ಆಕಾಶ್​ ಬಾಯಲ್ಲಿ ನೀರೂರಿತು. ಸುಮ್ನೆ ಬಿಡ್ತಾನಾ ಡುಮ್ಮ ಸರ್​ ಮಗ? ಚೆನ್ನಾಗಿ ಬಾರಿಸಿದ.

Related Articles

Related image1
ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್​ ಮಾಡಿದ್ರಿ​? Suhaana Syed ಉತ್ತರ ಕೇಳಿ
Related image2
Lakshmi Nivasa: ವಿಶ್ವನ ಜೊತೆ ಚಿನ್ನುಮರಿಗೂ ಹಳ್ಳತೋಡಿದ ಜಯಂತ್​: ಶ್ರದ್ಧಾಂಜಲಿ ಕಾರ್ಡ್​ ಪ್ರಿಂಟ್​!
36
ಬಿಸಿಬೇಳೆ ಬಾತ್​
Image Credit : Instagram

ಬಿಸಿಬೇಳೆ ಬಾತ್​

ಮನೆಗೆ ಬಂದು ನೋಡಿದ್ರೆ ಭೂಮಿಕಾನೂ ಬಿಸಿಬೇಳೆ ಬಾತ್​ನ್ನೇ ಮಾಡಿದ್ದಳು. ಅಲ್ಲಿ ಹೋಗಿದ್ದನ್ನು ಕೇಳಿಕೊಳ್ಳಲಾಗದೇ ಸಂಕಟ ಪಟ್ಟ ಆಕಾಶ್​. ವಿಷ್ಯ ಗೊತ್ತಾಗತ್ತೆ ಎಂದು ಅದನ್ನೂ ತಿಂದ.

46
ಬಾಯ್ತಪ್ಪಿ ಸತ್ಯ ಕೇಳಿದ ಮಲ್ಲಿ
Image Credit : Instagram

ಬಾಯ್ತಪ್ಪಿ ಸತ್ಯ ಕೇಳಿದ ಮಲ್ಲಿ

ಕೊನೆಗೆ ಮಾತು ಮಾತಿನ ನಡುವೆ ಮಲ್ಲಿ ಗೌತಮ್​ ಮನೆಯಲ್ಲಿ ಇಬ್ಬರೇ ಇರೋದು ಅಂತ ಭೂಮಿಕಾ ಎದುರು ಬಾಯಿ ತಪ್ಪಿ ಹೇಳಿದಳು. ಹೇಳಿ ಕೇಳಿ ಹೆಡ್​ ಮಿಸ್ಸು ಭೂಮಿ ಮಿಸ್ಸು, ಕೇಳ್ಬೇಕಾ? ಅದು ಹೇಗೆ ಗೊತ್ತಾಯ್ತು ಅಂತ ಪ್ರಶ್ನಿಸಿದಳು.

56
ವಿಷ್ಯ ತಿಳಿದೇ ಹೋಯ್ತು
Image Credit : Instagram

ವಿಷ್ಯ ತಿಳಿದೇ ಹೋಯ್ತು

ಆಗ ಮಲ್ಲಿ, ಆಕಾಶ್​ ಗೌತಮ್​ ಮನೆಗೆ ಹೋಗಿದ್ದ ವಿಷ್ಯ ಹೇಳೇಬಿಟ್ಟಳು. ಆಕಾಶ್​ನನ್ನು ಭೂಮಿಕಾ ಕೇಳಿದಾಗ, ಚಿಕ್ಕಿನೇ ಫೋರ್ಸ್​ ಮಾಡಿ ಕಳಿಸಿರೋ ವಿಷ್ಯ ಹೇಳಿದ.

66
ಮುಂದೇನ್​ ಮಾಡ್ತಾಳೆ ಭೂಮಿಕಾ?
Image Credit : Instagram

ಮುಂದೇನ್​ ಮಾಡ್ತಾಳೆ ಭೂಮಿಕಾ?

ಕೊನೆಯಲ್ಲಿ ಗೌತಮ್​ ಸರ್​ಗೆ ಬೇಸರ ಆಗಬಾರದು ಎಂದು ಬಿಸಿಬೇಳೆ ಬಾತ್​ ತಿಂದೆ, ಇಲ್ಲಿ ನಿಂಗೆ ಬೇಸರ ಆಗ್ಬಾರ್ದು ಎಂದು ಇಲ್ಲೂ ತಿಂದೆ ಎಂದ. ಮುಂದೆ ಭೂಮಿಕಾ ಏನು ಮಾಡ್ತಾಳೋ ನೋಡಬೇಕಿದೆ. ಮನೆ ಚೇಂಜ್​ ಮಾಡ್ತಾಳಾ ಎನ್ನೋದು ಇನ್ನಷ್ಟೇ ಕಾದು ನೋಡಬೇಕಿದೆ.

ಇದರ ಪ್ರೊಮೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಟಿವಿ ಶೋ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved