- Home
- Entertainment
- TV Talk
- Puttakkana Makkalu Serial ಬಿಡೋಕೆ ಬೇರೆ ಕಾರಣವೇ ಇದೆ: ಈಗ ಸತ್ಯ ಹೇಳಿದ ನಟಿ ಸಂಜನಾ ಬುರ್ಲಿ
Puttakkana Makkalu Serial ಬಿಡೋಕೆ ಬೇರೆ ಕಾರಣವೇ ಇದೆ: ಈಗ ಸತ್ಯ ಹೇಳಿದ ನಟಿ ಸಂಜನಾ ಬುರ್ಲಿ
ವರ್ಷಾನುಗಟ್ಟಲೇ ಕನ್ನಡ ಕಿರುತೆರೆಯಲ್ಲಿ ಟಿಆರ್ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಾಪ್ ರೇಟಿಂಗ್ ಸ್ಥಾನದಲ್ಲಿತ್ತು. ಈ ಧಾರಾವಾಹಿಯ ಸ್ನೇಹಾ ಪಾತ್ರ ಕಂಡರೆ ಅನೇಕರಿಗೆ ಇಷ್ಟ. ಇಂಥ ಪಾತ್ರಕ್ಕೆ ನಟಿ ಸಂಜನಾ ಬುರ್ಲಿ ಗುಡ್ಬೈ ಹೇಳಿದ್ದರು. ಅದಕ್ಕೀಗ ಸಂಜನಾ ಬುರ್ಲಿ ಉತ್ತರ ಕೊಟ್ಟಿದ್ದಾರೆ.

ಸಂಜನಾ ಈ ರೀತಿ ಮಾಡಿದ್ಯಾಕೆ?
ಸಂಜನಾ ಯಾಕೆ ಈ ರೀತಿ ಮಾಡಿದರು ಎನ್ನುವ ಪ್ರಶ್ನೆ ಎದುರಾಗಿತ್ತು. ಅದಕ್ಕೀಗ ಸಂಜನಾ ಬುರ್ಲಿ ಅವರು Asianet Suvarna News ಡಿಜಿಟಲ್ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.
ಇದ್ದರೆ ಸ್ನೇಹಾ ರೀತಿ ಇರಬೇಕು, ದುಡಿಯಬೇಕು, ದುಡಿದು ಬದುಕಬೇಕು, ಸ್ವಾಭಿಮಾನ ಮುಖ್ಯ, ಶಿಕ್ಷಣ ಮುಖ್ಯ ಎಂದು ಸ್ನೇಹಾ ತೋರಿಸಿಕೊಟ್ಟಿದ್ದಳು. ಬಡವರ ಮನೆಯಲ್ಲಿ ಹುಟ್ಟಿದ್ದರೂ ಕೂಡ, ಸ್ನೇಹಾಗೆ ಅನ್ಯಾಯದ ವಿರುದ್ಧ ದನಿ ಎತ್ತುವ ಶಕ್ತಿ ಇತ್ತು. ಸ್ನೇಹಾಳಿಗೆ ಕನ್ನಡ ಕಿರುತೆರೆಯ ಜನರು ತುಂಬ ಪ್ರೀತಿ ಕೊಟ್ಟಿದ್ದರು.
ಸ್ನೇಹಾ-ಕಂಠಿ ಜೋಡಿ ಮರೆಯೋಕೆ ಆಗತ್ತಾ?
ವರ್ಷಾನುಗಟ್ಟಲೇ ಸ್ನೇಹಾ ಪಾತ್ರಕ್ಕೆ ಸಂಜನಾ ಬುರ್ಲಿ ಅವರು ಜೀವ ತುಂಬಿದ್ದರು. ಇನ್ನು ಸ್ನೇಹಾ-ಕಂಠಿ ಪಾತ್ರವಂತೂ ಜನರ ಮನಸ್ಸು ಗೆದ್ದಿತ್ತು. ಹೀಗಿರುವಾಗ ಸಂಜನಾ ಬುರ್ಲಿ ಅವರು ಯಾಕೆ ಧಾರಾವಾಹಿ ತೊರೆದರು ಎನ್ನುವ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಅವರು ಉತ್ತರ ಕೊಟ್ಟಿದ್ದಾರೆ.
ಸೀರಿಯಲ್ ಬಿಟ್ಟಿದ್ದು ಯಾಕೆ?
“ನನಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಿಜಕ್ಕೂ ದೊಡ್ಡ ಹೆಸರು ಕೊಟ್ಟಿದೆ. ನಾನು ಸ್ನೇಹಾ ಆಗಿ ಜನರಿಗೆ ಹತ್ತಿರ ಆಗಿದ್ದೇನೆ. ಈ ಪಾತ್ರಕ್ಕೆ, ಈ ಅವಕಾಶಕ್ಕೆ ನಾನು ಸದಾ ಚಿರಋಣಿ. ನಾನು ಮೆಡಿಕಲ್ ಇಂಜಿನಿಯರಿಂಗ್ ಓದುತ್ತಿದ್ದೆ, ಇದಕ್ಕೆ ಒಂದಿಷ್ಟು ಸಮಯ ಬೇಕಿತ್ತು. ಹೀಗಾಗಿ ಧಾರಾವಾಹಿ, ಶಿಕ್ಷಣ ನಿಭಾಯಿಸೋದು ಕಷ್ಟ ಅಂತ ಧಾರಾವಾಹಿಯನ್ನು ತೊರೆಯುವ ನಿರ್ಧಾರ ಮಾಡಿದೆ. ಇದನ್ನು ಬಿಟ್ಟು ಬೇರೆ ಕಾರಣವೂ ಇದೆ. ಅದನ್ನು ಸಮಯ ಬಂದಾಗ ತಿಳಿಸುವೆ” ಎಂದು ಅವರು ಹೇಳಿದ್ದಾರೆ.
ಶ್ರೀಗಂಧದಗುಡಿ ನಾಯಕಿ
ಅಂದಹಾಗೆ ಶ್ರೀಗಂಧದಗುಡಿ ಎನ್ನುವ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ಅವರು ಚಂದನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಲ್ವರು ಹುಡುಗರು, ಓರ್ವ ತಂದೆ ಇರುವ ಮನೆಗೆ ಅವರು ಸೊಸೆಯಾಗಿ ಬರಲಿದ್ದಾರೆ. ಬಹಳ ವಿಭಿನ್ನವಾದ ಕಥೆ ಇಲ್ಲಿದೆ.
ಶಿಕ್ಷಣ ಏನು?
ಅಂದಹಾಗೆ ಸಂಜನಾ ಅವರು ಮೆಡಿಕಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ಈಗ ಅವರು ರಾಜ್ಯಶಾಸ್ತ್ರದಲ್ಲಿ ಮಾಸ್ಟರ್ಸ್ ಮಾಡುತ್ತಿದ್ದಾರಂತೆ. ಮುಂದೆ ಪಿಎಚ್ಡಿ ಮಾಡುವ ಆಸೆಯೂ ಇದೆಯಂತೆ.