MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಚೊಚ್ಚಲ ಸೈಮಾ ಅವಾರ್ಡ್ ಗೆದ್ದ ಅಂಕಿತಾ ಅಮರ್… ಕನ್ನಡಕ್ಕೆ ಸಿಕ್ಕಳೊಬ್ಬ ಸಾಯಿ ಪಲ್ಲವಿ ಅಂತಿದ್ದಾರೆ ಜನ

ಚೊಚ್ಚಲ ಸೈಮಾ ಅವಾರ್ಡ್ ಗೆದ್ದ ಅಂಕಿತಾ ಅಮರ್… ಕನ್ನಡಕ್ಕೆ ಸಿಕ್ಕಳೊಬ್ಬ ಸಾಯಿ ಪಲ್ಲವಿ ಅಂತಿದ್ದಾರೆ ಜನ

ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್ ಇದೀಗ ಚೊಚ್ಚಲ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿಯನ್ನು ನೋಡಿ ಜನ ಸಾಯಿ ಪಲ್ಲವಿ ಎನ್ನುತ್ತಿದ್ದಾರೆ.

2 Min read
Author : Pavna Das
Published : Sep 08 2025, 12:28 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ನಮ್ಮನೆ ಯುವರಾಣಿ (Nammane Yuvarani) ಮೂಲಕ ಜನಪ್ರಿಯತೆ ಪಡೆದ ನಟಿ ಅಂಕಿತಾ ಅಮರ್. ಇಂದಿಗೂ ವೀಕ್ಷಕರು ಮೀರಾ ಹೆಸರನ್ನು ನೆನಪಿಟ್ಟುಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ, ಸೀರಿಯಲ್ ನಲ್ಲಿ ಅವರು ನಟಿಸಿದ್ದ ಅದ್ಭುತವಾದ ಪಾತ್ರ.

27
Image Credit : Instagram

ನಮ್ಮನೆ ಯುವರಾಣಿ ಧಾರಾವಾಹಿ ಬಳಿಕ ಚಂದನವನಕ್ಕೆ ಎಂಟ್ರಿ ಕೊಟ್ಟ ಅಂಕಿತಾ ಅಮರ್ (Ankita Amar), ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಅಂಕಿತಾ ನಟಿಸಿರುವ ಇಬ್ಬನಿ ತಬ್ಬಿದ ಇಳಿಯಲಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಈ ಸಿನಿಮಾಗಾಗಿ ಚೊಚ್ಚಲ ಸೈಮಾ ಅವಾರ್ಡ್ ಬಂದಿದೆ.

Related Articles

Related image1
Sai Pallavi: ನಟಿ ಸಾಯಿ ಪಲ್ಲವಿಯಿಂದ ಹೆಣ್ಣು ಮಕ್ಕಳು ಕಲಿಯಬೇಕಾದ ಜೀವನ ಪಾಠಗಳು
Related image2
ಪಾತ್ರಗಳ ಆಯ್ಕೆ, ಡ್ರೆಸ್ಸಿಂಗ್ ಬಗ್ಗೆ ತುಂಬಾನೆ ಚೂಸಿ ಅಂಕಿತಾ ಅಮರ್…ಸಿಂಪಲ್ ಬೆಡಗಿಯನ್ನ ಸಾಯಿ ಪಲ್ಲವಿಗೆ ಹೋಲಿಸಿದ ಜನ!
37
Image Credit : Instagram

ರಕ್ಷಿತ್ ಶೆಟ್ಟಿ ನಿರ್ಮಾಣದ, ಚಂದ್ರಜಿತ್ ನಿರ್ದೇಶನದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ರಿಲೀಸ್ ಆಗಿ ಭಾರಿ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅಂಕಿತಾ ಅಮರ್ ನಾಯಕಿಯಾಗಿ ನಟಿಸಿದ್ದರು. ಇದೀಗ ಈ ವರ್ಷದ ಸೈಮಾ ಅವಾರ್ಡ್ (SIIMA Award 2025) ಕಾರ್ಯಕ್ರಮದಲ್ಲಿ ಚೊಚ್ಚಲ ಬೆಸ್ಟ್ ಡೆಬ್ಯೂಟ್ ನಾಯಕಿ ಪ್ರಶಸ್ತಿ ಗೆದ್ದಿದ್ದಾರೆ.

47
Image Credit : Instagram

ಈ ಸಂಭ್ರಮದಲ್ಲಿ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವಾರ್ಡ್ ಫಂಕ್ಷನ್ ಫೋಟೊಗಳನ್ನು ಶೇರ್ ಮಾಡಿ, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಮ್ಮ ಧರಿಸಿದ್ದ ಸೀರೆ, ತಂಗಿ ಆರಿಸಿದ ಬಿಂದುರೆ, ಅಪ್ಪ ಕೊಡಿಸಿದ ಕಾಡಿಗೆ, ಮಾಮಿ ಮುಡಿಸಿದ ಮಲ್ಲಿಗೆ, ತಾಯಿ ಚಾಮುಂಡಿ ಕೊಟ್ಟ ಬಳೆ ಗಾಜು , ತಾತನ ನೆನಪಿಗೆ ತೊಟ್ಟ ಹಳೆ ವಾಚು, ಅನಾಹಿತಾಳ ಆಸರೆ ಮನದಲಿ, ನಿಮ್ಮ ಪ್ರೀತಿಯ ಉಡುಗೋರೆ ಕೈಯಲಿ , ದುಬೈನಲ್ಲಿ ನೀವೆಲ್ರೂ ಇದ್ರಿ ನನ್ನ ಜೊತೆಯಲ್ಲಿ ಎಂದು ಬರೆದು ಅವಾರ್ಡ್ ಹಿಡಿದಿರುವ ಫೋಟೊ ಶೇರ್ ಮಾಡಿದ್ದಾರೆ.

57
Image Credit : Instagram

ಜೊತೆಗೆ ನನ್ನ ಮೇಲೆ ನಂಬಿಕೆ ಇಟ್ಟ ಹಾಗೂ ನನಗೆ ವೋಟ್ ಮಾಡಿ, ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ, ನಿರ್ದೇಶಕರಿಗೂ, ನಿರ್ಮಾಪಕರಿಗೂ ಥ್ಯಾಂಕ್ಯೂ ಎಂದಿದ್ದರು. ಚೊಚ್ಚಲ ಪ್ರಶಸ್ತಿ ಪಡೆದಿರುವ ಸಂಭ್ರಮದಲ್ಲಿರುವ ನಟಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

67
Image Credit : Instagram

ಇನ್ನು ತಮ್ಮ ಸಿಂಪ್ಲಿಸಿಟಿಗೆ ಜನಪ್ರಿಯತೆ ಪಡೆದಿರುವ ಸಾಯಿ ಪಲ್ಲವಿ (Sai Pallavi) ಅವರಿಗೆ ಅಂಕಿತಾ ಅಮರ್ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಅಂಕಿತಾ ಅಮರ್ ಕೂಡ ತುಂಬಾ ಸಿಂಪಲ್ ಆಗಿದ್ದು, ಅವರು ಕಾರ್ಯಕ್ರಮಗಳಿಗೆ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂಕಿತಾ ಅತ್ಯುತ್ತಮ ಡ್ಯಾನ್ಸ್ ಕೂಡ ಹೌದು, ಎಂಎಸ್ಸಿ ಬಯೋಕೆಮೆಸ್ಟ್ರಿ ಮಾಡಿದ್ದು, ಎಲ್ಲದರಲ್ಲೂ ಸಾಯಿ ಪಲ್ಲವಿಗೆ ಹೋಲಿಕೆಯಾಗೋದರಿಂದ ಜನ ಕನ್ನಡಕ್ಕೊಬ್ಬರು ಸಾಯಿ ಪಲ್ಲವಿ ಸಿಕ್ಕಿದ್ದಾರೆ ಎನ್ನುತ್ತಿದ್ದಾರೆ.

77
Image Credit : Instagram

ಇನ್ನು ಕರಿಯರ್ ಬಗ್ಗೆ ಹೇಳೊದದರೆ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಬಳಿಕ ಅಂಕಿತಾ ಮತ್ತು ಶೈನ್ ಶೆಟ್ಟಿ ಅಭಿನಯದ ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೇ ಮೈ ಹೀರೋ ಎನ್ನುವ ಸಿನಿಮಾದಲ್ಲೂ ಅಂಕಿತಾ ನಟಿಸಿದ್ದಾರೆ. ಪೃಥ್ವಿ ಅಂಬಾರ್ ಜೊತೆಗೆ ಅಬ ಜಬ ದಬ ಸಿನಿಮಾದಲ್ಲೂ ಗಾಯಕಿಯಾಗಿ ಅಂಕಿತಾ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಉಪೇಂದ್ರ (Upendra) ಜೊತೆ ಭಾರ್ಗವ ಸಿನಿಮಾದಲ್ಲೂ ಕೂಡ ಅಂಕಿತಾ ನಾಯಕಿಯಾಗಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಕನ್ನಡ ಧಾರಾವಾಹಿ
ಕನ್ನಡ ಧಾರಾವಾಹಿಗಳ ಟಿಆರ್‌ಪಿ

Latest Videos
Recommended Stories
Recommended image1
'ನಮ್ಮ ಹನುಮ ಕನ್ನಡಿಗ' : ರಿಷಬ್ ಮಾತಿಗೆ ಜಗ್ಗೇಶ್ ರೋಮಾಂಚನ, ಏನು ಹೇಳಿದ್ರು ನೋಡಿ!
Recommended image2
ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
Recommended image3
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Related Stories
Recommended image1
Sai Pallavi: ನಟಿ ಸಾಯಿ ಪಲ್ಲವಿಯಿಂದ ಹೆಣ್ಣು ಮಕ್ಕಳು ಕಲಿಯಬೇಕಾದ ಜೀವನ ಪಾಠಗಳು
Recommended image2
ಪಾತ್ರಗಳ ಆಯ್ಕೆ, ಡ್ರೆಸ್ಸಿಂಗ್ ಬಗ್ಗೆ ತುಂಬಾನೆ ಚೂಸಿ ಅಂಕಿತಾ ಅಮರ್…ಸಿಂಪಲ್ ಬೆಡಗಿಯನ್ನ ಸಾಯಿ ಪಲ್ಲವಿಗೆ ಹೋಲಿಸಿದ ಜನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved