MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ನೀವಿಬ್ಬರು ಸಲಿಂಗಿಗಳು, ಎಲ್ಲರಿಗೂ ಹೇಳ್ತೀನಿ ಅಂದವನ ಉಸಿರು ನಿಲ್ಲಿಸಿದ್ರು: ಇಬ್ಬರು ಅರೆಸ್ಟ್

ನೀವಿಬ್ಬರು ಸಲಿಂಗಿಗಳು, ಎಲ್ಲರಿಗೂ ಹೇಳ್ತೀನಿ ಅಂದವನ ಉಸಿರು ನಿಲ್ಲಿಸಿದ್ರು: ಇಬ್ಬರು ಅರೆಸ್ಟ್

ತಮ್ಮ ಸಲಿಂಗಿ ಸಂಬಂಧದ ವಿಷಯವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಕ್ಕೆ, ರಾಜ್‌ವೀರ್ ಮತ್ತು ಸಾಹಿಲ್ ಎಂಬ ಇಬ್ಬರು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಇಬ್ಬರನ್ನೂ ಬಂಧಿಸಿ, ಕೊಲೆಯ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ.

2 Min read
Mahmad Rafik
Published : Nov 01 2025, 01:28 PM IST
Share this Photo Gallery
  • FB
  • TW
  • Linkdin
  • Whatsapp
15
ಕೊ*ಲೆಯ ಹಿಂದಿನ ರಹಸ್ಯ
Image Credit : Google

ಕೊ*ಲೆಯ ಹಿಂದಿನ ರಹಸ್ಯ

ಕೀಟನಾಶಕ ಮಾರಾಟಗಾರ ಮನೀಷ್ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ತನ್ನನ್ನು ಸಲಿಂಗಿ ಎಂದು ಒಪ್ಪಿಕೊಂಡಿದ್ದಾನೆ. ರಾಜ್‌ವೀರ್ ಮತ್ತು ಸಾಹಿಲ್ ಬಂಧಿತ ಆರೋಪಿಗಳು. ಪೊಲೀಸರ ವಿಚಾರಣೆ ವೇಳೆ ಕೊ*ಲೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

25
ಸಲಿಂಗಿ ಜೋಡಿಯಿಂದ ಕೊ*ಲೆ
Image Credit : Google

ಸಲಿಂಗಿ ಜೋಡಿಯಿಂದ ಕೊ*ಲೆ

ಉತ್ತರ ಪ್ರದೇಶದ ಶಾಮಿಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಗಳಿಂದ ಪೊಲೀಸರು, ಅಪರಾಧಕ್ಕೆ ಬಳಸಲಾದ ಚಾಕು, ಬ್ಯಾಗ್ ಮತ್ತು ಇಬ್ಬರ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೊ*ಲೆಯಾದ ಮನೀಷ್, ಇಬ್ಬರು ಆರೋಪಿಗಳ ಸಲಿಂಗಿತನದ ವಿಷಯವನ್ನು ರಿವೀಲ್ ಮಾಡೋದಾಗಿ ಬೆದರಿಕೆ ಹಾಕಿದ್ದನು. ಇದರಿಂದ ಮನೀಷ್ ಬಾಯಿ ಮುಚ್ಚಿಸಲು ಹೋಗಿ ಆತನ ಪ್ರಾಣವನ್ನೇ ತೆಗೆದಿದ್ದಾರೆ.

Related Articles

Related image1
ಸೌದಿ ಅರೇಬಿಯಾದಲ್ಲಿ ಕೆಲಸ ಮಾಡ್ತಿದ್ದ 26 ವರ್ಷ ಭಾರತೀಯ ಯುವಕ ಪೊಲೀಸರ ಗುಂಡೇಟಿಗೆ ಬಲಿ
Related image2
ಮುಂಬೈ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ರೋಹಿತ್ ಆರ್ಯ ಸ್ಟಾರ್ ನಟಿಯನ್ನೂ ಆಡಿಷನ್‌ಗೆ ಕರೆದಿದ್ದ!
35
ಆರೋಪಿಗಳ ಬಂಧನ
Image Credit : Google

ಆರೋಪಿಗಳ ಬಂಧನ

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಎನ್‌ಪಿ ಸಿಂಗ್, ಖೇಡಭಾವು ಗ್ರಾಮದ ನಿವಾಸಿಯಾಗಿರುವ ಮನೀಷ್ (28) ಎಂಬಾತನ ಕೊ*ಲೆಯಾಗಿದೆ. ಗುರುವಾರ ಮಧ್ಯಾಹ್ನ ಮನೀಷ್ ಚಿಕ್ಕಪ್ಪ ರೂಪ್ ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ರಾಜ್‌ವೀರ್ ಮತ್ತು ಸಾಹಿಲ್ ಎಂಬಾತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ನನ್ನ ಗರ್ಭಿಣಿ ಮಾಡುವ ಗಂಡು ಬೇಕು: ಜಾಹೀರಾತು ನಂಬಿ ವೀರ್ಯದಾನದ ಆಸೆಯಲ್ಲಿದ್ದವನಿಗೆ ಆಘಾತ: 11 ಲಕ್ಷ ಖೋತಾ

45
ಬೆದರಿಕೆ ಹಾಕಿದ್ದ ಮನೀಷ್
Image Credit : Google

ಬೆದರಿಕೆ ಹಾಕಿದ್ದ ಮನೀಷ್

ಮನೀಷ್‌ಗೂ ಮತ್ತು ಆರೋಪಿ ರಾಜ್‌ವೀರ್‌ಗೂ ಬಹಳ ದಿನಗಳಿಂದ ಪರಿಚಯವಿತ್ತು. ಕೀಟನಾಶಕ ವಿತರಕನಾಗಿದ್ದರಿಂದ ಆರೋಪಿಗಳ ಊರಿಗೆ ಮನೀಷ್ ತೆರಳುತ್ತಿದ್ದನು. ಕೆಲ ದಿನಗಳ ಹಿಂದೆಯಷ್ಟೇ ಮನೀಷ್‌ಗೆ ಸಾಹಿಲ್‌ನ ಪರಿಚಯವಾಗಿತ್ತು. ರಾಜ್‌ವೀರ್ ಮತ್ತು ಸಾಹಿಲ್ ಸಂಬಂಧ ವಿಷಯ ತಿಳಿಯುತ್ತಿದ್ದಂತೆ ಮನೀಷ್ ಇಬ್ಬರಿಗೂ ಬೆದರಿಕೆ ಹಾಕಲು ಆರಂಭಿಸಿದ್ದನು ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್ ಗುಂಡೇಟಿಗೆ ಬಲಿ

55
ತೋಟಕ್ಕೆ ತೆರಳಿ ಚಾಕು ಇರಿದು ಎಸ್ಕೇಪ್
Image Credit : Google

ತೋಟಕ್ಕೆ ತೆರಳಿ ಚಾಕು ಇರಿದು ಎಸ್ಕೇಪ್

ಇದರಿಂದ ಕೋಪಗೊಂಡ ಆರೋಪಿಗಳು ಪ್ಲಾನ್ ಮಾಡಿಕೊಂಡು ಮನೀಷ್ ಮನೆಗೆ ತೆರಳಿದ್ದಾರೆ. ಮನೀಷ್ ತೋಟದಲ್ಲಿರುವ ವಿಷಯ ತಿಳಿದು ಅಲ್ಲಿಗೆ ಹೋದ ರಾಜ್‌ವೀರ್ ಮತ್ತು ಸಾಹಿಲ್ ಚಾಕು ಇರಿದು ಕೊ*ಲೆ ಮಾಡಿದ್ದಾರೆ. ನಂತರ ಅಲ್ಲಿಂದ ಇಬ್ಬರು ಪರಾರಿಯಾಗಿದ್ದಾರೆ. ಮನೆಗೆ 5 ನಿಮಿಷದಲ್ಲಿ ಬರೋದಾಗಿ ಮನೀಷ್ ಹೇಳಿದ್ದನು. ಮನೆಗೆ ಹೊರಡುವ ವೇಳೆ ಇಬ್ಬರು ಆರೋಪಿಗಳು ಎದುರಾಗಿ ಚಾಕುವಿನಿಂದ ಇರಿದಿದ್ದಾರೆ.

ಇದನ್ನೂ ಓದಿ: ಆಸ್ತಿ ಚೆನ್ನಾಗಿದೆ, ಮಗಳು ಚೆನ್ನಾಗಿರ್ತಾಳೆ ಅಂತಾ ಮದ್ವೆ ಮಾಡಿಕೊಟ್ಟೆ, ಆದ್ರೆ ಹೀಗಾಗೋಯ್ತು!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕೊಲೆ
ಕ್ರೈಮ್ ನ್ಯೂಸ್
ಭಾರತ ಸುದ್ದಿ
ಉತ್ತರ ಪ್ರದೇಶ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved