MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • "ಮಕ್ಕಳು ಆಟದ‌ ಸಮಯ ಬದಲಾಯಿಸಿ ನಿಮ್ಮ ಧಾರಾವಾಹಿ ನೋಡ್ತಿದ್ದಾರೆ": ವೀಕ್ಷಕರು ಹೀಗಂದದ್ದು ಯಾರಿಗೆ, ಯಾಕೆ?

"ಮಕ್ಕಳು ಆಟದ‌ ಸಮಯ ಬದಲಾಯಿಸಿ ನಿಮ್ಮ ಧಾರಾವಾಹಿ ನೋಡ್ತಿದ್ದಾರೆ": ವೀಕ್ಷಕರು ಹೀಗಂದದ್ದು ಯಾರಿಗೆ, ಯಾಕೆ?

TV serial fan craze: ಅವರಿಬ್ಬರನ್ನೂ ಕಂಡರೂ ಕನ್ನಡಿಗರಿಗೆ ಇಷ್ಟವಾದರೂ ವಿಶೇಷವಾಗಿ ಈ ನಟ ನೆಚ್ಚಿನ ನಾಯಕ ಪ್ರಶಸ್ತಿ ಪಡೆದಿರುವುದಕ್ಕೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಯಾರು ಆ ನಟ, ಯಾಕೆ ಅಂತ ಮುಂದೆ ಓದಿ... 

2 Min read
Author : Ashwini HR
Published : Oct 19 2025, 02:44 PM IST
Share this Photo Gallery
  • FB
  • TW
  • Linkdin
  • Whatsapp
16
ಯಾರು ಆ ನಟ?
Image Credit : Facebook

ಯಾರು ಆ ನಟ?

ಜೀ ಕನ್ನಡ ವಾಹಿನಿಯಲ್ಲಿ ಕಳೆದೆರೆಡು ದಿನಗಳಿಂದ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025 ಪ್ರಸಾರವಾಗುತ್ತಿದೆ. ಈ ಬಾರಿ ನೆಚ್ಚಿನ ನಾಯಕ ಪ್ರಶಸ್ತಿಯನ್ನು ಇಬ್ಬರು ನಟರು ತಮ್ಮದಾಗಿಸಿಕೊಂಡಿದ್ದಾರೆ. ಅವರಿಬ್ಬರನ್ನೂ ಕಂಡರೂ ಕನ್ನಡಿಗರಿಗೆ ಇಷ್ಟವಾದರೂ ವಿಶೇಷವಾಗಿ ಈ ನಟ ನೆಚ್ಚಿನ ನಾಯಕ ಪ್ರಶಸ್ತಿ ಪಡೆದಿರುವುದಕ್ಕೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಯಾರು ಆ ನಟ, ಯಾಕೆ ಅಂತ ಮುಂದೆ ಓದಿ…

26
ಅಭಿಮಾನಿಗಳಿಂದ ವಿಶ್
Image Credit : Facebook

ಅಭಿಮಾನಿಗಳಿಂದ ವಿಶ್

ಈ ಬಾರಿ ನೆಚ್ಚಿನ ನಾಯಕ ಪ್ರಶಸ್ತಿಯನ್ನು ಅಣ್ಣಯ್ಯ ಧಾರಾವಾಹಿಯಿಂದ ಶಿವು ಪಾತ್ರಧಾರಿ ವಿಕಾಶ್ ಉತ್ತಯ್ಯ, ಅಮೃತಧಾರೆ ಧಾರಾವಾಹಿಯಿಂದ ಗೌತಮ್ ದಿವಾನ್ ಪಾತ್ರಧಾರಿ ನಟರಂಗ ರಾಜೇಶ್‌ ಪಡೆದಿದ್ದಾರೆ. ಇವರಿಬ್ಬರಿಗೂ ಈ ಪ್ರಶಸ್ತಿ ದೊರೆತಿರುವುದಕ್ಕೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರ ಹರಿದು ಬಂದಿದೆ.

Related Articles

Related image1
Amruthadhare: ಈ ಎರಡೂ ವಿಚಾರ ಭೂಮಿಕಾಗೆ ಗೊತ್ತಾದ್ರೆ ಏನ್‌ ಮಾಡ್ಬೋದು?
Related image2
ಭೂಮಿಕಾ, ಗೌತಮ್‌...ಇವರೆಲ್ಲರ ಮಧ್ಯೆ ಜಾಣೆಯಾಗಿದ್ದು ಗೆಟಪ್ ಬದಲಾಯಿಸಿದ ಮಲ್ಲಿಯಂತೆ!
36
ವಿಕಾಶ್ ಉತ್ತಯ್ಯ
Image Credit : Facebook

ವಿಕಾಶ್ ಉತ್ತಯ್ಯ

ವಿಕಾಶ್ ಉತ್ತಯ್ಯ ಅಣ್ಣಯ್ಯ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಹೆಚ್ಚು ಹತ್ತಿರವಾದರು. ಹಿರಿತೆರೆಯಲ್ಲೂ ಕಾಣಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಮೂಲತಃ ಕೊಡಗಿನವರಾದ ವಿಕಾಶ್ ಉತ್ತಯ್ಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸಿನಿಮಾ ಹಾಗೂ ಕಿರುಚಿತ್ರಗಳಲ್ಲಿ ಅಭಿನಯಿಸಿರುವ ವಿಕಾಶ್ ಇದುವರೆಗೂ ಎರಡು ಸಿನಿಮಾಗಳಾದ ಆನಾ, ಮೇರಿ ಹಾಗೂ ಕನಸಿನ ಮಳೆ ಕಿರುಚಿತ್ರದಲ್ಲಿ ನಟಿಸಿದ್ದಾರೆ.

46
ನಟರಂಗ ರಾಜೇಶ್‌
Image Credit : facebook

ನಟರಂಗ ರಾಜೇಶ್‌

ಇನ್ನು ನಟರಂಗ ರಾಜೇಶ್‌ ಬಗ್ಗೆ ಹೇಳುವುದಾದರೆ ಟಿಎನ್ ಸೀತಾರಾಮ್ ಅವರ ನಿರ್ದೇಶನದ ಮಾಯಮೃಗ ಸೀರಿಯಲ್‌ನಲ್ಲಿ ಶ್ರೀಧರ್ ಎಂಬ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು. ಅದಾದ ಬಳಿಕ 2003ರಲ್ಲಿ ಗುಪ್ತಗಾಮಿನಿ ಧಾರಾವಾಹಿಯಲ್ಲಿ ನಟಿಸಿದರು. ಇದರಲ್ಲಿ ತೇಜಸ್ವಿ ಪಾತ್ರ ಎಲ್ಲರ ಗಮನ ಸೆಳೆಯಿತು. ಹೀಗೆ ಒಂದಾದ ಮೇಲೊಂದರಂತೆ ಹಿಟ್ ಸೀರಿಯಲ್‌ಗಳಲ್ಲಿ ನಟಿಸಿರುವ ರಾಜೇಶ್‌ ಅವರು ಸದ್ಯ ಅಮೃತಧಾರೆಯಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಧಾರಾವಾಹಿಗಳಲ್ಲಿ ಮಾತ್ರವಲ್ಲ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು ರಾಜೇಶ್. ಇದುವರೆಗೂ 80ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

56
ನೀವೇ ಜನಪ್ರಿಯ ನಾಯಕ
Image Credit : Asianet News

ನೀವೇ ಜನಪ್ರಿಯ ನಾಯಕ

ಈಗ ನೆಚ್ಚಿನ ನಾಯಕ ಪ್ರಶಸ್ತಿಯನ್ನು ಪಡೆದಿರುವ ನಟರಂಗ ರಾಜೇಶ್‌ಗೆ ಅಭಿಮಾನಿಗಳು ವಿಶ್ ಮಾಡುತ್ತಲೇ ಇದ್ದಾರೆ. ಜೀ ಅವ್ರಿಗೆ ಬೆಸ್ಟ್ ಇರ್ಬೋದು ನಮ್ಗೆ ನೀವೇ ಜನಪ್ರಿಯ ನಾಯಕ ಎಂದಿರುವ ಅಭಿಮಾನಿಗಳು ರಾಜೇಶ್ ಅವರ ಬಗ್ಗೆ ಇನ್ನು ಏನೆಲ್ಲಾ ಹೇಳಿದ್ದಾರೆ ನೋಡಿ…

66
ಅಭಿಮಾನಿಗಳ ಪ್ರತಿಕ್ರಿಯೆ
Image Credit : Facebook

ಅಭಿಮಾನಿಗಳ ಪ್ರತಿಕ್ರಿಯೆ

*ನಟರಂಗ ರಾಜೇಶರಿಗೆ "ನೆಚ್ಚಿನ ನಟ" ಪ್ರಶಸ್ತಿ ಸಿಕ್ಕಿರುವುದು ಬಹಳ ಸಂತೋಷ.
*ನೀವು ಈ ಪ್ರಶಸ್ತಿಗೆ ಅರ್ಹರು.
*ಶುಭಾಷಯಗಳು ಸರ್. ನಿಮ್ಮ ಪಾತ್ರಕ್ಕೆ ನೀವು ಜೀವ ತುಂಬಿದ್ದೀರ.
*ಕಂಗ್ರಾಟ್ಸ್ ಸರ್. ನೀವು ಧಾರಾವಾಹಿಯಲ್ಲಿ ತೋರಿಸಿರುವಂತೆ ನಿಜ ಜೀವನದಲ್ಲಿ ಶಕುಂತಲಾ ಮತ್ತು ಲಕ್ಷ್ಮೀಕಾಂತ ಅವರನ್ನ ನಂಬಬೇಡಿ. *ಅಭಿನಂದನೆಗಳು .. ಹೀಗೊಂದು ಹೇಳಿಕೊಳ್ಳುವ ಸಂಗತಿ ಇದೆ . ಶಟಲ್ ಬ್ಯಾಟ್ ಮಿಟನ್‌ ಕೋಚ್ ತೆಗೆದುಕೊಳ್ಳುತ್ತಿರುವ ಹಲವು ಮಕ್ಕಳು ಆಟದ‌ ಸಮಯ ಬದಲಾಯಿಸಿಕೊಂಡು ಅಮೃತಧಾರೆಯಲ್ಲಿ ನಿಮ್ಮ ಪಾತ್ರ‌ ನೋಡಲು ಅಪೇಕ್ಷಿಸುತ್ತಿದ್ದಾರೆ... ಮತ್ತೊಮ್ಮೆ ಅಭಿನಂದನೆ ಒಂದು ಪಾತ್ರ ಯುವ ಜನಾಂಗಕ್ಕೂ ಸ್ಪೂರ್ತಿಯಾಗುತ್ತಿರುವುದು ನಿಜಕ್ಕೂ ಹೆಮ್ಮೆ ಶುಭಂ ಭೂಯಾತ್ ಎಂದೆಲ್ಲಾ ವಿಶ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ

Latest Videos
Recommended Stories
Recommended image1
ಗಂಡನ ಜೊತೆಗಿನ ಕೋಳಿ ಜಗಳದಿಂದಲೇ ಕನ್ನಡಿಗರ ಮನ ಗೆದ್ದ ‘Nandagokula’ದ ಅಮ್ಮು… ಯಾರೀಕೆ?
Recommended image2
Karna Serial ನಟ ಕಿರಣ್​ ರಾಜ್ ​ಬಂಪರ್​ ಆಫರ್​: ಸುಲಭದ ರೆಸಿಪಿ ಹೇಳಿ ಸರ್​ಪ್ರೈಸ್​ ಪಡೆಯಿರಿ- ಡಿಟೇಲ್ಸ್​ ಇಲ್ಲಿದೆ
Recommended image3
Toxic: ವರ್ಷಗಳ ಗಡ್ಡಕ್ಕೆ ಯಶ್​ ಗುಡ್​ಬೈ ಹೇಳೋ ಮುನ್ನ ಪತ್ನಿ ರಾಧಿಕಾ ಪಂಡಿತ್​ ಏನ್​ ಹೇಳಿದ್ರು ನೋಡಿ!
Related Stories
Recommended image1
Amruthadhare: ಈ ಎರಡೂ ವಿಚಾರ ಭೂಮಿಕಾಗೆ ಗೊತ್ತಾದ್ರೆ ಏನ್‌ ಮಾಡ್ಬೋದು?
Recommended image2
ಭೂಮಿಕಾ, ಗೌತಮ್‌...ಇವರೆಲ್ಲರ ಮಧ್ಯೆ ಜಾಣೆಯಾಗಿದ್ದು ಗೆಟಪ್ ಬದಲಾಯಿಸಿದ ಮಲ್ಲಿಯಂತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved