MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಒನಕೆ ಓಬವ್ವನಾ ಅನ್ನೋ ಬದ್ಲು ರೇಣುಕಾಸ್ವಾಮಿನಾ ಅಂತಾರೆ: 'ಮಹಾನಟಿ' ಗಗನಾ ಫುಲ್​ ಗರಂ!

ಒನಕೆ ಓಬವ್ವನಾ ಅನ್ನೋ ಬದ್ಲು ರೇಣುಕಾಸ್ವಾಮಿನಾ ಅಂತಾರೆ: 'ಮಹಾನಟಿ' ಗಗನಾ ಫುಲ್​ ಗರಂ!

ಒನಕೆ ಓಬವ್ವನಾ ಅನ್ನೋ ಬದ್ಲು ರೇಣುಕಾಸ್ವಾಮಿನಾ ಅಂತಾರೆ ಎನ್ನುತ್ತಲೇ 'ಮಹಾನಟಿ' ಗಗನಾ ಫುಲ್​ ಗರಂ ಆಗಿದ್ಯಾಕೆ? ಅವರು ಹೇಳಿದ್ದೇನು? 

2 Min read
Suchethana D
Published : Aug 22 2025, 12:25 PM IST
Share this Photo Gallery
  • FB
  • TW
  • Linkdin
  • Whatsapp
18
ಚಿತ್ರದುರ್ಗದ ಗಗನಾ
Image Credit : Instagram

ಚಿತ್ರದುರ್ಗದ ಗಗನಾ

ಸದ್ಯ ಭರ್ಜರಿ ಬ್ಯಾಚುಲರ್ಸ್​ನಲ್ಲಿ ಡ್ರೋನ್​ ಪ್ರತಾಪ್​ ಜೊತೆ ಉತ್ತಮ ಪರ್ಫಾಮೆನ್ಸ್​ ಕೊಟ್ಟು ರನ್ನರ್​​ ಅಪ್​ ಆಗಿ ಮಿಂಚಿದವರು ಚಿತ್ರದುರ್ಗದ ಗಗನಾ. ಮಹಾನಟಿಯ ಮೊದಲ ಸೀಸನ್​ ಮೂಲಕ ಜನರಿಗೆ ಪರಿಚಯವಾಗಿದ್ದ ನಟಿ ಕೊನೆಗೆ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼನಲ್ಲಿಯೂ ಕಾಣಿಸಿಕೊಂಡಿದ್ದರು. ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದ್ದು, 'ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2'ನಲ್ಲಿ ಡ್ರೋನ್​ ಪ್ರತಾಪ್​ ಮತ್ತು ಗಗನಾ ಸಕತ್​ ಹವಾ ಸೃಷ್ಟಿಸಿದ್ದರು.

28
ಮುಗ್ಧ ಮಾತುಗಳಿಂದಲೇ ಜನಪ್ರಿಯತೆ
Image Credit : Faccebook

ಮುಗ್ಧ ಮಾತುಗಳಿಂದಲೇ ಜನಪ್ರಿಯತೆ

ಅಷ್ಟಕ್ಕೂ ಗಗನಾ ಮಹಾನಟಿ ರಿಯಾಲಿಟಿ ಶೋನಲ್ಲಿ ( Mahanati reality show)ತಮ್ಮ ಮುಗ್ಧ ಮಾತುಗಳಿಂದಲೇ ಜನಪ್ರಿಯತೆ ಪಡೆದರು. ಆದಾದ ಬಳಿಕ ನಿರಂತರವಾಗಿ ಒಂದಲ್ಲ ಒಂದು ಶೋಗಳಲ್ಲಿ ಗಗನಾಗೆ ಅವಕಾಶಗಳು ದೊರೆಯುತ್ತಾ ಬಂದವು. ಝೀ ಕನ್ನಡದ ಅವಕಾಶಗಳಿಂದಾಗಿ ಗಗನಾ ತಾವು ಕೆಲಸ ಮಾಡುತ್ತಿದ್ದ ಐಟಿ ಕಂಪೆನಿಯ ಕೆಲಸವನ್ನೇ ಬಿಟ್ಟಿದ್ದರು.

Related Articles

Related image1
ದರ್ಶನ್​ಗೆ ನಾಯಕಿಯಾಗಿ ಭರ್ಜರಿ ಬ್ಯಾಚುಲರ್ಸ್​ ಗಗನಾ? 'ಮಹಾನಟಿ' ಹೇಳಿದ್ದೇನು ಕೇಳಿ...
Related image2
ಕಾರು ಪರ್ಚೇಸ್​ ಮಾಡಲು ರೀಲ್ಸ್​ ಮಾಡಲು ಹೋದ 'ಮಹಾನಟಿ' ಗಗನಾ ಸ್ಥಿತಿ ಏನಾಯ್ತು ನೋಡಿ!
38
ಜನರ ರಿಯಾಕ್ಷನ್​ಗೆ ಬೇಸರ
Image Credit : Instagram

ಜನರ ರಿಯಾಕ್ಷನ್​ಗೆ ಬೇಸರ

ಇದೀಗ ಗಗನಾ ಅವರು ಸೆಲೆಬ್ರಿಟಿ ಆಗಿರೋ ಕಾರಣದಿಂದ ಅವರಿಗೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಇದೇ ಕಾರಣಕ್ಕೆ ಹೋದಲ್ಲಿ, ಬಂದಲ್ಲಿ ಅವರನ್ನು ಮಾತನಾಡಿಸಲಾಗುತ್ತಿದೆ. ಈ ಖುಷಿ ನಟಿಗೆ ಇದ್ದರೂ, ತಮ್ಮ ಊರು ಚಿತ್ರದುರ್ಗದ ಹೆಸರು ಹೇಳಿದಾಗ, ಜನರು ರಿಯಾಕ್ಟ್​ ಮಾಡುವುದನ್ನು ನೋಡಿ ಗಗನಾ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.

48
ರೇಣುಕಾಸ್ವಾಮಿನ ಊರಾ ಕೇಳ್ತಾರೆ...
Image Credit : our own

ರೇಣುಕಾಸ್ವಾಮಿನ ಊರಾ ಕೇಳ್ತಾರೆ...

FDFS ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು, ನನ್ನ ಊರಿನ ಬಗ್ಗೆ ತುಂಬಾ ಹೆಮ್ಮೆ ಇದೆ. ಒನಕೆ ಓಬವ್ವನಂಥ ವೀರ ಮಹಿಳೆಯ ಊರದು. ಇಷ್ಟು ವರ್ಷ ಚಿತ್ರದುರ್ಗ ಎಂದರೆ ಸಾಕು ಒನಕೆ ಓಬವ್ವಾ ಎನ್ನುತ್ತಿದ್ದರು. ಆದರೆ ಈಗ ಒಹೊ ರೇಣುಕಾಸ್ವಾಮಿ ಊರಾ ಎಂದು ಕೇಳುತ್ತಾರೆ. ನನಗೆ ತುಂಬಾ ಬೇಸರವಾಗುತ್ತದೆ. ಈ ಚಿತ್ರ ನನ್ನನ್ನು ನೆಗೆಟಿವ್​ ರೀತಿ ನೋಡ್ತಾ ಇರೋದು ತುಂಬಾ ನೋವು ಕೊಡುತ್ತಿದೆ ಎಂದಿದ್ದಾರೆ.

58
ರೇಣುಕಾಸ್ವಾಮಿ ಕುರಿತು ಗಗನಾ
Image Credit : Instagram

ರೇಣುಕಾಸ್ವಾಮಿ ಕುರಿತು ಗಗನಾ

ದರ್ಶನ್​ ಅವರು ರೇಣುಕಾಸ್ವಾಮಿಗೆ ಏನು ಮಾಡಿದ್ದಾರೆ, ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಏಕೆಂದರೆ ನಾನು ಅಲ್ಲಿ ಇರಲಿಲ್ಲ. ಅದರ ಬಗ್ಗೆ ನಾನೇನೂ ಹೇಳುವುದಿಲ್ಲ. ಆ ವಿಷಯಕ್ಕೂ ನನಗೂ ಸಂಬಂಧವಿಲ್ಲ. ಆದರೆ, ನನ್ನನ್ನು ರೇಣುಕಾಸ್ವಾಮಿಯ ಊರಿನವರಾ ಎಂದು ಪ್ರಶ್ನಿಸುವುದನ್ನು ಮಾತ್ರ ನನ್ನಿಂದ ಕೇಳಲು ಆಗುತ್ತಿಲ್ಲ ಎಂದಿದ್ದಾರೆ.

68
ಹೊಸ ಧಾರಾವಾಹಿಯಲ್ಲಿ ನಾಯಕಿ
Image Credit : Instagram

ಹೊಸ ಧಾರಾವಾಹಿಯಲ್ಲಿ ನಾಯಕಿ

ಇನ್ನು ಗಗನಾ ಕುರಿತು ಹೇಳುವುದಾದರೆ, ಅವರು ಈಗ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ʻರಾಜಕುಮಾರಿʼ ಎಂಬ ಹೆಸರಿನಲ್ಲಿ ಸೀರಿಯಲ್​ ಇದಾಗಿದ್ದು, ಇದಾಗಲೇ ಪ್ರೋಮೋ ರಿಲೀಸ್‌ ಆಗಿದೆ. ʻಈ ನಗುಮೊಗದ ಅರಸಿಗೆ ಸಿಹಿ ಹಂಚೋದೆ ಕನಸು ಬರ್ತಿದ್ದಾಳೆ ರಾಜಕುಮಾರಿ, ಶೀಘ್ರದಲ್ಲಿʼ ಎನ್ನುವ ಮೂಲಕ ʻಜೀ ಪಿಚ್ಚರ್‌ʼ ಪ್ರೊಮೋ ರಿಲೀಸ್​ ಮಾಡಿದೆ. ಈ ಪ್ರೋಮೋದಲ್ಲಿ ಗಗನಾ, ಪಕ್ಕಾ ಹಳ್ಳಿ ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೈಕಲ್‌ ಸವಾರಿ ಮಾಡಿದ್ದಾರೆ.

78
ದರ್ಶನ್​ ಬಗ್ಗೆ ಮಾತನಾಡಿದ ಗಗನಾ
Image Credit : Instagram

ದರ್ಶನ್​ ಬಗ್ಗೆ ಮಾತನಾಡಿದ ಗಗನಾ

ಈ ಹಿಂದೆಯೂ ಇವರು ದರ್ಶನ್​ ಬಗ್ಗೆ ಮಾತನಾಡಿದ್ದರು. ದರ್ಶನ್​ ಅವರನ್ನು ಹಾಡಿ ಹೊಗಳಿದ್ದರು. ಸದ್ಯ ಅವರಿಗೆ ಕೆಟ್ಟಕಾಲವಿದೆ ಅಷ್ಟೇ. ಆರುವ ಮೊದಲು ದೀಪಾ ಜೋರಾಗಿ ಉರಿಯುತ್ತದೆ, ಆರಿದ ಬಳಿಕ ಮತ್ತೆ ಚೆನ್ನಾಗಿ ಉರಿಯುತ್ತದೆ ಎಂದು ತಮ್ಮದೇ ಆದ ಗಾದೆಯನ್ನುಹೇಳುವ ಮೂಲಕ, ದರ್ಶನ್​ ಅವರು ಮತ್ತೆ ಬಲಿಷ್ಠರಾಗಿ ಬರುತ್ತಾರೆ ಎಂದು ಹೇಳಿದ್ದರು.

88
ದರ್ಶನ್ ಚಿತ್ರದಲ್ಲಿ ನಟಿಸುವ ಅವಕಾಶ
Image Credit : Google

ದರ್ಶನ್ ಚಿತ್ರದಲ್ಲಿ ನಟಿಸುವ ಅವಕಾಶ

ದರ್ಶನ್​ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ, ನಾಯಕಿ, ತಂಗಿ... ಹೀಗೆ ಯಾವ ರೋಲ್​ ಮಾಡುತ್ತೀರಿ ಎನ್ನುವ ಪ್ರಶ್ನೆಗೆ, ಅದು ತುಂಬಾ ದೊಡ್ಡ ಮಾತು. ಅವರ ಸೆಲ್ಫೀ ಸಿಕ್ಕರೆ ಸಾಕು, ಅದೇ ನನ್ನ ಪುಣ್ಯ. ಅವರ ಜೊತೆ ನಟಿಸುವುದು ನಾನು ಕನಸಿನಲ್ಲಿಯೂ ಊಹಿಸಿಕೊಳ್ಳಲು ಆಗದ್ದು ಎಂದಿದ್ದಾರೆ. ಇದೇ ವೇಳೆ ತಂಗಿಯ ಪಾತ್ರ ಮಾಡುವುದಿಲ್ಲ ಎನ್ನುವ ಮೂಲಕ ದರ್ಶನ್​ ಅವರಿಗೆ ನಾಯಕಿಯಾಗಿ ಮಾಡಲು ಸಿದ್ಧ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಿಯಾಲಿಟಿ ಶೋ
ಜೀ ಕನ್ನಡ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved