MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Bigg Boss ಗೆದ್ದೆ ನಿಜ ಆದ್ರೆ... ದೊಡ್ಮನೆಯ ಬಹು ದೊಡ್ಡ ಸೀಕ್ರೆಟ್​ ರಿವೀಲ್​ ಮಾಡಿದ ವಿಜಯ ರಾಘವೇಂದ್ರ

Bigg Boss ಗೆದ್ದೆ ನಿಜ ಆದ್ರೆ... ದೊಡ್ಮನೆಯ ಬಹು ದೊಡ್ಡ ಸೀಕ್ರೆಟ್​ ರಿವೀಲ್​ ಮಾಡಿದ ವಿಜಯ ರಾಘವೇಂದ್ರ

ಬಿಗ್​ಬಾಸ್​​ 1ನೇ ಸೀಸನ್​ನಲ್ಲಿ ವಿಜೇತರಾಗಿ ಹೊರಹೊಮ್ಮಿದ್ದ ನಟ ವಿಜಯ ರಾಘವೇಂದ್ರ ಅವರು, ಇದೀಗ ಬಿಗ್​ಬಾಸ್​ನ ಬಹುದೊಡ್ಡ ಸೀಕ್ರೆಟ್​ ರಿವೀಲ್​ ಮಾಡಿದ್ದಾರೆ. ಏನದು ನೋಡಿ... 

2 Min read
Suchethana D
Published : Aug 16 2025, 11:45 AM IST
Share this Photo Gallery
  • FB
  • TW
  • Linkdin
  • Whatsapp
17
ಬಿಗ್​ಬಾಸ್​ 12 ಕುರಿತು ಕಾಯ್ತಿರೋ ವೀಕ್ಷಕರು
Image Credit : colors kannada instagram

ಬಿಗ್​ಬಾಸ್​-12 ಕುರಿತು ಕಾಯ್ತಿರೋ ವೀಕ್ಷಕರು

ಬಿಗ್​ಬಾಸ್​ ಕನ್ನಡದ 12ನೇ ಸೀಸನ್​ ಯಾವಾಗ ಶುರುವಾಗುತ್ತೆ ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ ವೀಕ್ಷಕರು. ಇದಾಗಲೇ ಪ್ರೊಮೋ ಕೂಡ ರಿಲೀಸ್​ ಆಗಿದೆ. ಈ ಬಾರಿ ಯಾರು ಯಾರು ದೊಡ್ಮನೆಯ ಒಳಗೆ ಹೋಗುತ್ತಾರೆ ಎನ್ನುವ ಬಗ್ಗೆ ಲಿಸ್ಟ್​ ಕೂಡ ಬಿಡುಗಡೆಯಾಗಿದ್ದು, ಅಂತಿಮವಾಗಿ ಯಾರು ಇರಲಿದ್ದಾರೆ ಎನ್ನುವುದನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ. ಸುದೀಪ್​ ಅವರು ಯಾವುದೇ ಕಾರಣಕ್ಕೂ ಮುಂದಿನ ಬಿಗ್​ಬಾಸ್​​ ನಡೆಸಿಕೊಡುವುದೇ ಇಲ್ಲ ಎಂದು ಹೇಳಿ ಭಾರಿ ಸುದ್ದಿ ಮಾಡಿ, ಬಳಿಕ ಮುಂದಿನ ನಾಲ್ಕು ಸೀಸನ್​ಗೆ ಒಪ್ಪಿಕೊಂಡಿದ್ದೂ ಆಗಿದೆ. ಇದು ವೀಕ್ಷಕರಿಗೆ ಬಹಳ ಖುಷಿ ಕೂಡ ಕೊಟ್ಟಿದೆ.

27
ಬಿಗ್​ಬಾಸ್​ ಸೀಕ್ರೆಟ್​ ರಿವೀಲ್​ ಮಾಡಿದ ನಟ
Image Credit : our own

ಬಿಗ್​ಬಾಸ್​ ಸೀಕ್ರೆಟ್​ ರಿವೀಲ್​ ಮಾಡಿದ ನಟ

ಅದರ ನಡುವೆಯೇ, ಬಿಗ್​ಬಾಸ್​ನ ಮೊದಲ ಸೀಸನ್​ನ ವಿನ್ನರ್​, ಸ್ಯಾಂಡಲ್​ವುಡ್​​ ಸ್ಟಾರ್​ ನಟ ವಿಜಯ ರಾಘವೇಂದ್ರ ಅವರು ಬಿಗ್​ಬಾಸ್​ ಮತ್ತು ತಮ್ಮ ಜೀವನದ ಅತಿದೊಡ್ಡ ಸೀಕ್ರೆಟ್​ ಅನ್ನು ಇದೀಗ ರಿವೀಲ್​ ಮಾಡಿದ್ದಾರೆ. ಅಷ್ಟಕ್ಕೂ ಕನ್ನಡಕ್ಕೆ ಬಿಗ್​ಬಾಸ್​ ಕಾನ್​ಸೆಪ್ಟ್​ ಹೊಸತಾಗಿತ್ತು. ಅದು ಮೊದಲ ಸೀಸನ್​ ಆಗಿತ್ತು. ಚಾನೆಲ್‌ನವರಿಗೆ ಹೊಸತು, ವೀಕ್ಷಕರಿಗೆ ಹೊಸತು. ಯಾವ ಸಮಯದಲ್ಲಿ ಏನು ನಿರೀಕ್ಷೆ ಮಾಡಬೇಕು ಎಂದು ಯಾರಿಗೂ ಗೊತ್ತಿಲ್ಲ ಏಕೆಂದರೆ 15 ವಿಭಿನ್ನ ವ್ಯಕ್ತಿತ್ವದವರು ಮನೆಯಲ್ಲಿದ್ದರು. ಆದ್ದರಿಂದ ಅದರ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು.

Related Articles

Related image1
ವಿಜಯ ರಾಘವೇಂದ್ರ ಪುತ್ರ ಸಿನಿಮಾಕ್ಕೆ ಎಂಟ್ರಿ ಕೊಡ್ತಿದ್ದಾನಾ? ನಟನಿಂದ ಬಂತು ಹೀಗೊಂದು ಪ್ರತಿಕ್ರಿಯೆ
Related image2
ಅವ್ರ ಕೆಲಸ ಅವ್ರಿಗೆ ಮಾಡಲು ಬಿಟ್ಟುಬಿಡಿ... ವಿಷ್ಣುವರ್ಧನ್​ ಸಮಾಧಿ ನೆಲಸಮಕ್ಕೆ ವಿಜಯ ರಾಘವೇಂದ್ರ ಹೇಳಿದ್ದೇನು?
37
ಬಿಗ್​ಬಾಸ್​ನಿಂದ ಬಹುತೇಕರಿಗೆ ಆಫರ್​
Image Credit : our own

ಬಿಗ್​ಬಾಸ್​ನಿಂದ ಬಹುತೇಕರಿಗೆ ಆಫರ್​

ಬಿಗ್​ಬಾಸ್​ನಿಂದ ವಿನ್​ ಆಗಿ ಹೊರಕ್ಕೆ ಬಂದವರೂ ಸೇರಿದಂತೆ ಒಮ್ಮೆ ಬಿಗ್​ಬಾಸ್​ ಮನೆಗೆ ಹೋದರೆ ಅವರಿಗೆ ಭವಿಷ್ಯದಲ್ಲಿ ಸಕತ್​ ಡಿಮಾಂಡ್​ ಇರುತ್ತದೆ, ಅವರು ದೊಡ್ಡ ಸೆಲೆಬ್ರಿಟಿಗಳಾಗುತ್ತಾರೆ, ಬೇರೆ ಬೇರೆ ಷೋಗಳಿಗೆ ಅವರಿಗೆ ಆಫರ್​ ಬರುತ್ತದೆ ಎನ್ನುವುದು ತಿಳಿದದ್ದೇ.

47
ಯಾವುದೇ ಆಫರ್​ ಸಿಗಲಿಲ್ಲ
Image Credit : our own

ಯಾವುದೇ ಆಫರ್​ ಸಿಗಲಿಲ್ಲ

ಅದೇ ರೀತಿ ಆ ಟೈಮ್​ನಲ್ಲಿ ದಶಕದವರೆಗೆ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದರೂ, ವಿಜಯ ರಾಘವೇಂದ್ರ ಅವರು ಬಿಗ್​ಬಾಸ್​ ವಿಜಯ ರಾಘವೇಂದ್ರ ಆಗಿದ್ದು ನಿಜವಾದರೂ, ತಮಗೆ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಯಾವುದೇ ಆಫರ್​ ಬರಲಿಲ್ಲ. ಇದು ನನ್ನನ್ನು ಸ್ಟಾರ್​ ಮಾಡಲಿಲ್ಲ ಎನ್ನುವ ಸತ್ಯವನ್ನು ಸುವರ್ಣ ನ್ಯೂಸ್ ಬೆಂಗಳೂರು ಬಜ್ ಪಾಡ್‌ಕಾಸ್ಟ್ ಗೆ  ನೀಡಿರುವ ಸಂದರ್ಶನದಲ್ಲಿ ವಿಜಯ ರಾಘವೇಂದ್ರ ಅವರು ರಿವೀಲ್​ ಮಾಡಿದ್ದಾರೆ.

57
ಬಿಗ್​ಬಾಸ್​​ ಸತ್ಯ ಬಿಚ್ಚಿಟ್ಟ ವಿಜಯ ರಾಘವೇಂದ್ರ
Image Credit : our own

ಬಿಗ್​ಬಾಸ್​​ ಸತ್ಯ ಬಿಚ್ಚಿಟ್ಟ ವಿಜಯ ರಾಘವೇಂದ್ರ

ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ, ಈ ಬಗ್ಗೆ ಹೇಳಿಕೊಂಡಿದ್ದ ಅವರು, ಸುಮಾರು ನೂರು ದಿನಗಳ ಕಾಲ ನನ್ನನ್ನು ನೀವು ಆಶೀರ್ವಾದ ಮಾಡಿದ್ದೀರಿ. ಅಲ್ಲಿ ದೀರ್ಘ ಅವಧಿಯವರೆಗೆ ಇದ್ದು ಜೀವಿಸಿ, ಅನುಭವಿಸಿ ಬಂದಿದ್ದೇನೆ. ನನ್ನ ಪ್ರಕಾರ ನನ್ನ ಜೀವನದಕ್ಕೆ ಮತ್ತು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುವ ನನ್ನ ಸ್ನೇಹಿತರೆಲ್ಲಾ ಇದರಿಂದ ಆಗಿರುವ ದೊಡ್ಡ ಅನುಭವ ಎಂದರೆ, ಅವರವರ ಜೀವನ, ಅವರ ವ್ಯಕ್ತಿತ್ವ, ಅವರ ಅಪ್ಸ್​ ಆ್ಯಂಡ್​ ಡೌನ್ಸ್​, ಅವರಲ್ಲಿ ಇರುವ ಕೆಟ್ಟತನ-ಒಳ್ಳೆಯತನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲು ಅವಕಾಶ ಸಿಕ್ಕಿದೆ. ನಮ್ಮ ನಡವಳಿಕೆಯ ಬಗ್ಗೆ, ತಪ್ಪುಗಳು ಇದ್ದರೆ ಅದನ್ನು ಸರಿಪಡಿಸಿ ಕರೆಕ್ಷನ್​ ಮಾಡುವ ಅವಕಾಶ ಸಿಕ್ಕಿದೆ ಎಂದಿದ್ದರು ವಿಜಯ ರಾಘವೇಂದ್ರ.

67
ಬಿಗ್​ಬಾಸ್​​ ಸತ್ಯ ಬಿಚ್ಚಿಟ್ಟ ವಿಜಯ ರಾಘವೇಂದ್ರ
Image Credit : our own

ಬಿಗ್​ಬಾಸ್​​ ಸತ್ಯ ಬಿಚ್ಚಿಟ್ಟ ವಿಜಯ ರಾಘವೇಂದ್ರ

ಆದರೆ, ಇದೀಗ ಬಿಗ್​ಬಾಸ್​​ ಸತ್ಯ ಬಿಚ್ಚಿಟ್ಟಿದ್ದಾರೆ. ಅದು ನನ್ನನ್ನು ಸ್ಟಾರ್​ ಮಾಡಲಿಲ್ಲ. ಒಂದೇ ಒಂದು ಆಫರ್​ ನನಗೆ ಆ ಸಮಯದಲ್ಲಿ ಬರಲಿಲ್ಲ ಎನ್ನುವ ಮೂಲಕ ಬಿಗ್​ಬಾಸ್​ನಲ್ಲಿ ವಿಜೇತರಾದ ಮಾತ್ರಕ್ಕೆ ತಮಗೆ ದೊಡ್ಡ ಕಿರೀಟ ಬಂದಿರಲಿಲ್ಲ ಎಂದಿದ್ದಾರೆ.

77
ಬದಲಾಗಿದೆ ಬಿಗ್​ಬಾಸ್​​ ಕ್ರೇಜ್​
Image Credit : our own

ಬದಲಾಗಿದೆ ಬಿಗ್​ಬಾಸ್​​ ಕ್ರೇಜ್​

ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ ಬಿಡಿ. ಬಿಗ್​ಬಾಸ್​ ಮನೆಗೆ ಹೋಗುವವರು ಬಹುತೇಕ ಮಂದಿ, ಕಾಂಟ್ರವರ್ಸಿ ಇದ್ದವರೇ ಇಲ್ಲವೇ ಜೈಲುಪಾಲಾದವರು, ಕೇಸು-ಗೀಸು ಮಾಡಿಕೊಂಡವರು. ಅವರು ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಸ್ಟಾರ್​ ಆಗ್ತಿರೋದು, ಬೇರೆ ಬೇರೆ ಷೋಗಳಿಗೆ ಆಫರ್​ ಬರ್ತಿರೋದು, ಅಲ್ಲಿಯೂ ತಾವು ತುಂಬಾ ಒಳ್ಳೆಯ ವ್ಯಕ್ತಿಯ ರೀತಿ ಪೋಸ್​ ಕೊಟ್ಟು ಮರಳು ಮಾಡ್ತಿರೋದು ವೀಕ್ಷಕರಿಗೆ ಗೊತ್ತಿರೋದೆ. ಸೋಷಿಯಲ್​​ ಮೀಡಿಯಾಗಳಲ್ಲಿ ಬರುವ ಕಮೆಂಟ್​ಗಳಿಂದಲೇ ಅವರ ವ್ಯಕ್ತಿತ್ವವನ್ನೂ ಜನರು ಅಳೆಯುತ್ತಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Bengaluru Buzz (@officialbengalurubuzz)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ವಿಜಯ್ ರಾಘವೇಂದ್ರ
ಸ್ಯಾಂಡಲ್‌ವುಡ್
ರಿಯಾಲಿಟಿ ಶೋ
ಕಲರ್ಸ್ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved