MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ವರ್ತೂರ್​ ಜೊತೆ ನಾನು ಮದ್ವೆ ಆಗ್ತೇನಂತಾ ಹೇಳಿದ್ನಾ? ತನಿಷಾ ಕುಪ್ಪಂಡ ಇಷ್ಟು ಗರಂ ಆಗಿದ್ಯಾಕೆ?

ವರ್ತೂರ್​ ಜೊತೆ ನಾನು ಮದ್ವೆ ಆಗ್ತೇನಂತಾ ಹೇಳಿದ್ನಾ? ತನಿಷಾ ಕುಪ್ಪಂಡ ಇಷ್ಟು ಗರಂ ಆಗಿದ್ಯಾಕೆ?

ಬಿಗ್​ಬಾಸ್​ನಲ್ಲಿ ಭಾರಿ ಸ್ನೇಹಿತರಾಗಿದ್ದ ವರ್ತೂರ್​ ಸಂತೋಷ್​ ಅವರ ಮದುವೆ ಬಗ್ಗೆ ತನಿಷಾ ಕುಪ್ಪಂಡ ಅವರನ್ನು ಕೇಳಿದಾಗ ತನಿಷಾ ಹೇಳಿದ್ದೇನು? 

2 Min read
Suchethana D
Published : Aug 25 2025, 06:39 PM IST
Share this Photo Gallery
  • FB
  • TW
  • Linkdin
  • Whatsapp
17
ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಜೋಡಿ
Image Credit : Google

ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಜೋಡಿ

ಬಿಗ್​ಬಾಸ್​ ಸೀಸನ್​ 10ರಲ್ಲಿ ಭಾರಿ ಸದ್ದು ಮಾಡಿದ್ದವರ ಪೈಕಿ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಜೋಡಿ ಕೂಡ ಒಂದು. ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಬಳಿಕ ಇಬ್ಬರ ಮನಸ್ಸಲ್ಲಿ ಪ್ರೀತಿ ಅರಳಿದೆ ಎನ್ನುವ ಗಾಸಿಪ್ ಹಬ್ಬಿತ್ತು. ಇತರ ಸ್ಪರ್ಧಿಗಳು ಕೂಡ ಇವರಿಬ್ಬರ ಬಗ್ಗೆ ಸಾಕಷ್ಟು ಮಾತನಾಡಿಕೊಳ್ತಿದ್ರು.

27
ಬಿಗ್​ಬಾಸ್​ನಲ್ಲಿ ಒಳ್ಳೆಯ ಸ್ನೇಹ
Image Credit : Google

ಬಿಗ್​ಬಾಸ್​ನಲ್ಲಿ ಒಳ್ಳೆಯ ಸ್ನೇಹ

ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಈ ಜೋಡಿಯ ಮೇಲೆ ಎಲ್ಲರ ಕಣ್ಣು ಇದ್ದೇ ಇದೆ. ಇವರು ಸ್ನೇಹಿತರಾಗಿ ಮುಂದುವರೆದಿದ್ದರು. ಅನೇಕ ಬಾರಿ ಭೇಟಿ ಕೂಡ ಆಗಿದ್ದಾರೆ. ಆಗಾಗ ಇಬ್ಬರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು. ಆದ್ದರಿಂದ ಇವರ ನಡುವಿನ ಸಂಬಂಧದ ಬಗ್ಗೆ ಹಲವಾರು ರೀತಿ ಸುದ್ದಿ ಹರಡಿಕೊಂಡದ್ದು ಇದೆ.

Related Articles

Related image1
ಬಿಗ್​ಬಾಸ್​ ವರ್ತೂರು ಮದುವೆ: ತನಿಷಾ ವಿಷ್ಯ ಹೇಳುತ್ತಲೇ ಭಾವಿ ಪತ್ನಿಯ ಗುಟ್ಟು ರಟ್ಟು ಮಾಡಿದ ಸಂತೋಷ್​
Related image2
ನನ್ನ ಪಕ್ಕದ ಸೀಟಿನಲ್ಲಿ.. ಎನ್ನುತ್ತಲೇ 2ನೇ ಮದ್ವೆ ಬಗ್ಗೆ ಮೌನ ಮುರಿದ ವಿಜಯ ರಾಘವೇಂದ್ರ: ನಟ ಹೇಳಿದ್ದೇನು?
37
ತನಿಷಾ-ವರ್ತೂರು ಜೋಡಿ
Image Credit : tanisha kuppanda instagram

ತನಿಷಾ-ವರ್ತೂರು ಜೋಡಿ

ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಎಲ್ಲಿಗೆ ಹೋದ್ರೂ ಇಬ್ಬರ ಮದುವೆ ಬಗ್ಗೆ ಜನರು ಕೇಳುತ್ತಲೇ ಇರ್ತಾರೆ. ವರ್ತೂರು ಸಂತೋಷ್ ಮತ್ತು ತನಿಷಾ ಕುಪ್ಪಂಡ ಮದುವೆ ಆಗಬೇಕು ಎಂದು ಫ್ಯಾನ್ಸ್ ಬೇಡಿಕೆ ಆಗಿದೆ. ಈ ಜೋಡಿಯ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅದರ ನಡುವೆಯೇ ವರ್ತೂರು ಸಂತೋಷ್​ ಮೊದಲೇ ಮದ್ವೆಯಾಗಿದ್ದಾರೆ ಎಂಬ ಫೋಟೋ ಕೂಡ ಹರಿದಾಡಿದ್ದವು. ಪತ್ನಿಗೆ ಇವರು ಕಿರುಕುಳ ಕೊಟ್ಟಿದ್ದರಿಂದ ಅವರು ದೂರವಾಗಿದ್ದಾರೆ ಎಂಬೆಲ್ಲಾ ಆರೋಪ ಇವರ ಮೇಲೆ ಬಂದಿತ್ತು.

47
ಕಾಲಾಯ ತಸ್ಮೈ ನಮಃ
Image Credit : our own

ಕಾಲಾಯ ತಸ್ಮೈ ನಮಃ

ಕೊನೆಗೆ ವರ್ತೂರು ಅವರು, ಕಾಲಾಯ ತಸ್ಮೈ ನಮಃ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಮದುವೆ ಎನ್ನುವುದು ವೈಯಕ್ತಿಕ ವಿಷಯ. ನಾನು ಎಲ್ಲಿಯೂ ನನ್ನ ಮದ್ವೆಯಾಗಿಲ್ಲ ಎಂದು ಹೇಳಿಲ್ಲ. ಈಗಲೂ ನನ್ನ ಮಾತು ಒಪ್ಪಿ ಬಂದರೆ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ. ಎಲ್ಲೂ ಯಾರ ಮೇಲೂ ನಾನು ಆರೋಪ ಹೊರಿಸುತ್ತಿಲ್ಲ ಎಂದಿದ್ದರು. ಕೊನೆಗೆ ಆ ವಿಷಯ ಅಲ್ಲಿಯೇ ತಣ್ಣಗಾಯಿತು. ಅದರ ನಡುವೆಯೇ, ವರ್ತೂರು ಮತ್ತು ತನಿಷಾ ಕುಪ್ಪಂಡ ಮಧ್ಯೆ ಕುಚ್ ಕುಚ್​ ನಡೆಯುತ್ತಿದೆ ಎಂದೇ ಸದ್ದು ಮಾಡಿತ್ತು.

57
ತನಿಷಾಗೆ ಮದ್ವೆ ಪ್ರಶ್ನೆ
Image Credit : Instagram

ತನಿಷಾಗೆ ಮದ್ವೆ ಪ್ರಶ್ನೆ

ಈ ಬಗ್ಗೆ ತನಿಷಾ ಅವರಿಗೆ ಕಂಟೆಂಟ್​ ಕ್ರಿಯೇಟರ್​ ಒಬ್ಬರು ಪ್ರಶ್ನೆ ಕೇಳಿದ್ದಾರೆ. ವರ್ತೂರು ಸಂತೋಷ್ ಮದುವೆಯ ಬಗ್ಗೆ ಕೇಳಿದಾಗ ಗರಂ ಆದ ತನಿಷಾ, ನಾನೇನಾದ್ರೂ ಅವರನ್ನು ಮದ್ವೆಯಾಗ್ತೇನೆಂದು ಹೇಳಿದ್ನಾ, ಇಲ್ವಲ್ಲಾ ಮತ್ತೆ ಅವ್ರ ಮದುವೆಯ ಬಗ್ಗೆ ನನಗ್ಯಾಕೆ ಕೇಳ್ತೀರಿ. ಅದು ಅವರ ಬಳಿಯೇ ಕೇಳಿ ಎಂದಿದ್ದಾರೆ. ಬೇರೆಯವರ ವಿಷ್ಯ ನನಗೇನು ಎಂದು ಪ್ರಶ್ನಿಸಿದ್ದಾರೆ.

67
ಮದುವೆಯ ಬಗ್ಗೆ ವರ್ತೂರು ಸಂತೋಷ್​
Image Credit : Instagram

ಮದುವೆಯ ಬಗ್ಗೆ ವರ್ತೂರು ಸಂತೋಷ್​

ಇದಾಗಲೇ ವರ್ತೂರು ಸಂತೋಷ್​ ಅವರು ಮತ್ತೊಂದು ಮದುವೆಯ ಬಗ್ಗೆ ಇದಾಗಲೇ ಮಾತನಾಡಿದ್ದಾರೆ. ನನ್ನ ಜೀವನದಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇನೋ ಹೇಳ್ತಾರಲ್ಲ, ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ ಎಂದು. ಹಾಗೆ ಆಗಿದೆ ನನ್ನ ಜೀವನ. ಆದರೆ ನಾನು ಮುಂದಿನ ಹೆಜ್ಜೆ ಇಡುತ್ತಿದ್ದೇನೆ. ಮತ್ತೊಂದು ಮದುವೆಗೆ ಸಿದ್ಧನಾಗಿದ್ದೇನೆ. ಹುಡುಗಿಯೂ ನಮ್ಮ ಸಂಬಂಧಿಕಳೇ. ಅವಳ ಜೊತೆ ಒಡನಾಟವಿದೆ. ಶೀಘ್ರದಲ್ಲಿಯೇ ಮದುವೆಯಾಗುತ್ತೇವೆ ಎಂದಿದ್ದರು ಸಂತೋಷ್​.

77
ತನಿಷಾ ಕುರಿತು ವರ್ತೂರು
Image Credit : our own

ತನಿಷಾ ಕುರಿತು ವರ್ತೂರು

ಇದೇ ವೇಳೆ, ತನಿಷಾ ಕುಪ್ಪಂಡ ಅವರ ವಿಷಯವನ್ನೂ ತಿಳಿಸಿದ ವರ್ತೂರು ಅವರು, ನಾನು ಮದ್ವೆಯಾಗ್ತಿದ್ದೇನೆ ಎಂದು ಹೇಳಿದ ತಕ್ಷಣ ಮತ್ತೆ ತನಿಷಾ ಹೆಸರನ್ನು ಎಳೆದು ತರಬೇಡಿ ಪಾಪ. ಅವಳು ನನ್ನ ಫ್ರೆಂಡ್ ಅಷ್ಟೇ. ಈ ವಿಡಿಯೋ ನೋಡ್ತಿರೋರಿಗೆ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ. ನಾನು ಮದ್ವೆಯಾಗ್ತಿರೋ ಹುಡುಗಿ ನನ್ನ ಸಂಬಂಧಿಕಳು. ಇಬ್ಬರೂ ಮೀಟ್​ ಆಗ್ತಾ ಇರ್ತೇವೆ, ಮತ್ತೆ ತನಿಷಾ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದರು. ಹುಡುಗನಿಗೆ ಹುಡುಗಿ ಇರಬೇಕು, ಹುಡುಗಿಗೆ ಹುಡುಗನೊಬ್ಬ ಇರಬೇಕು. ಅಂದ್ರೆ ಮಾತ್ರ ಜೀವನ ಆಗುವುದು. ಎಲ್ಲರಿಗೂ ಒಬ್ಬೊಬ್ಬರು ಇದ್ದೇ ಇರುತ್ತಾರೆ ಎಂದೂ ಹೇಳಿದ್ದರು ವರ್ತೂರು.

 
 
 
 
View this post on Instagram
 
 
 
 
 
 
 
 
 
 
 

A post shared by NewsBeatKannada (@newsbeatkannada)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ರಿಯಾಲಿಟಿ ಶೋ
ಕಲರ್ಸ್ ಕನ್ನಡ
ಸಂಬಂಧಗಳು
ಮದುವೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved