MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Amruthadhaare Serial Update: ಗೌತಮ್-ಭೂಮಿಕಾಗೂ ಇಕ್ಕಟ್ಟಿನ ಸ್ಥಿತಿ ತಂದ ಗೆಳೆಯ; ಛೇ..ಹೀಗೆಲ್ಲ ಮಾಡಬಾರದಪ್ಪಾ..!

Amruthadhaare Serial Update: ಗೌತಮ್-ಭೂಮಿಕಾಗೂ ಇಕ್ಕಟ್ಟಿನ ಸ್ಥಿತಿ ತಂದ ಗೆಳೆಯ; ಛೇ..ಹೀಗೆಲ್ಲ ಮಾಡಬಾರದಪ್ಪಾ..!

ಅಮೃತಧಾರೆ ಧಾರಾವಾಹಿಯಲ್ಲಿ ಕಳೆದ ಗೌತಮ್‌ ಹಾಗೂ ಭೂಮಿ ಒಂದಾಗಿರೋದನ್ನು ತೋರಿಸಲಾಗಿತ್ತು. ಆದರೆ ಇದು ಕನಸು, ನನಸಲ್ಲ. ಈಗ ಇವರಿಬ್ಬರು ಎಷ್ಟು ದೂರ ಆಗಿದ್ದಾರೋ ಅಷ್ಟೇ ಹತ್ತಿರ ಆಗುವಂಥ ಪರಿಸ್ಥಿತಿ ಬಂದಿದೆ. ಹಾಗಾದರೆ ಏನಾಯ್ತು?

1 Min read
Padmashree Bhat
Published : Oct 29 2025, 07:13 AM IST
Share this Photo Gallery
  • FB
  • TW
  • Linkdin
  • Whatsapp
15
ಭೂಮಿಕಾ ಕೂಡ ಟೀಚರ್‌
Image Credit : zee5

ಭೂಮಿಕಾ ಕೂಡ ಟೀಚರ್‌

ಗೌತಮ್‌ ಹಾಗೂ ಭೂಮಿಕಾ ಒಂದೇ ವಠಾರದಲ್ಲಿದ್ದಾರೆ. ಗೌತಮ್‌ ಈಗ ಭೂಮಿಕಾ‌ ಸ್ಕೂಲ್‌ನ ಕ್ಯಾಬ್‌ ಡ್ರೈವರ್. ದಿನವೂ ಅವನು ಮಕ್ಕಳನ್ನು ಕರೆದುಕೊಂಡು, ಶಾಲೆಗೆ ಬರಬೇಕು. ಆ ಶಾಲೆಯಲ್ಲಿ ಭೂಮಿಕಾ ಕೂಡ ಟೀಚರ್‌ ಆಗಿದ್ದಾಳೆ. ಈಗ ಭೂಮಿಕಾಳನ್ನು ಕೂಡ ಕರೆದುಕೊಂಡು ಶಾಲೆಗೆ ಬರಬೇಕಿತ್ತು. ಆಗ ಭೂಮಿಕಾ ನಾನು ಬರೋದಿಲ್ಲ, ಆಟೋದಲ್ಲಿ ಬರ್ತೀನಿ ಎಂದು ಹೇಳ್ತಾಳೆ.

25
ಆನಂದ್‌ ಮಾಡೋದು ಒಂದಾ, ಎರಡಾ?
Image Credit : zee5

ಆನಂದ್‌ ಮಾಡೋದು ಒಂದಾ, ಎರಡಾ?

ಆಟೋದಲ್ಲಿ ಬರೋದಾದ್ರೆ ಗೌತಮ್‌ನನ್ನು ಕೆಲಸದಿಂದ ತೆಗೆದು ಹಾಕುವೆ ಎಂದು ಸ್ಕೂಲ್‌ನವರು ಹೇಳ್ತಾರೆ, ಆಗ ಭೂಮಿ ಕೆಲಸಕ್ಕೆ ಬರಲು ಒಪ್ಪುತ್ತಾಳೆ. ಕಾರ್‌ನಲ್ಲಿ ಹೋಗುವಾಗ ಆನಂದ್‌ ಫೋನ್‌ ರಿಂಗಣಿಸುವುದು. ಆಗ ಆನಂದ್‌, “ಓಹೋ ವಿರಹ ವೇದನೆಯನ್ನು ತಾಳಲಾರದೆ ಮುತ್ತುಗಳ ಸುರಿಮಳೆ ಸುರಿಸ್ತೀರಾ” ಎಂದು ಹೇಳಿ ಕಾಲೆಳೆಯುತ್ತಾನೆ. ಅದನ್ನು ಕೇಳಿ ಗೌತಮ್‌ ಹಾಗೂ ಭೂಮಿಗೆ ಮುಜುಗರ ಆಗುವುದು.

Related Articles

Related image1
Amruthadhaare Serial: ಗೌತಮ್‌ ಬಂಡವಾಳ ಬಯಲು ಮಾಡ್ತಿರೋ ದತ್ತುಪುತ್ರಿ; ಆ ಟೆಸ್ಟ್‌ ಬೇಡ ಎಂದ ವೀಕ್ಷಕರು
Related image2
Amruthadhaare Serial: ಗಂಡ- ಹೆಂಡ್ತಿ ಮನಸ್ಸು ಸೇರಾಯ್ತು: ಅಕ್ಕ-ತಮ್ಮ ಒಂದಾಗೋ ಹೊತ್ತೂ ಬಂದಾಗೋಯ್ತು!
35
ಮಲ್ಲಿ, ಆ ಪಾಪಿಗಳ ಕಣ್ಣಿಗೆ ಬೀಳ್ತಾಳಾ?
Image Credit : Instagram

ಮಲ್ಲಿ, ಆ ಪಾಪಿಗಳ ಕಣ್ಣಿಗೆ ಬೀಳ್ತಾಳಾ?

ಇನ್ನೊಂದು ಕಡೆ ಮಲ್ಲಿಯನ್ನು ಜಯದೇವ್‌ ರೌಡಿಗಳು ಬೆನ್ನಟ್ಟಿದ್ದಾರೆ. ಮಲ್ಲಿ ಅವರ ಕಣ್ಣಿಗೆ ಬಿದ್ದರೆ ಏನು ಕಥೆ ಅಂತ ಲಕ್ಷ್ಮೀಕಾಂತ್‌ ಟೆನ್ಶನ್‌ ಮಾಡಿಕೊಂಡಿದ್ದಾನೆ. ಮಲ್ಲಿ ಆರಾಮಾಗಿ ಇರೋದು ನೋಡಿ ಜಯದೇವ್‌ಗೆ ಸಹಿಸೋಕೆ ಆಗ್ತಿಲ್ಲ. ಮಲ್ಲಿ ಎಲ್ಲಿದ್ದಾಳೆ ಅಂತ ಗೊತ್ತಾದರೆ ಭೂಮಿಕಾ-ಗೌತಮ್‌ರನ್ನು ಕೂಡ ಕಂಡುಹಿಡಿಯಬಹುದು ಎಂದು ಅವರು ಲೆಕ್ಕಾಚಾರ ಹಾಕಿದ್ದಾರೆ.

45
ಮುಂದೆ ಏನಾಗುವುದು?
Image Credit : Instagram

ಮುಂದೆ ಏನಾಗುವುದು?

ಜಯದೇವ್‌ ಕುತಂತ್ರದಂತೆ ಮಲ್ಲಿ, ಕಣ್ಣಿಗೆ ಬೀಳ್ತಾಳಾ? ಅಥವಾ ಜಯದೇವ್‌ ಯೋಜನೆಯಂತೆ ಭೂಮಿ ಹಾಗೂ ಅವನ ಮಗು ಕೂಡ ಅವನ ಕಣ್ಣಿಗೆ ಬೀಳ್ತಾಳಾ ಎಂದು ಕಾದು ನೋಡಬೇಕಿದೆ. ಗೌತಮ್‌ ಹಾಗೂ ಭೂಮಿಕಾ ಒಂದಾಗ್ತಾರಾ ಎಂಬ ಅನುಮಾನ ಕೂಡ ಶುರುವಾಗಿದೆ.

55
ಪಾತ್ರಧಾರಿಗಳು
Image Credit : zee kannada

ಪಾತ್ರಧಾರಿಗಳು

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌, ಜಯದೇವ್‌ ಪಾತ್ರದಲ್ಲಿ ರಾಣವ್‌ ಅವರು ನಟಿಸುತ್ತಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved