ಡೈವೋರ್ಸ್ ಫೋಟೋಶೂಟ್ ಮಾಡಿದ ಶಾಲಿನಿಯ ನರಕದ ಬದುಕು!

Published : May 05, 2023, 01:37 PM ISTUpdated : May 05, 2023, 02:12 PM IST
ಡೈವೋರ್ಸ್ ಫೋಟೋಶೂಟ್ ಮಾಡಿದ ಶಾಲಿನಿಯ ನರಕದ ಬದುಕು!

ಸಾರಾಂಶ

ಡಿವೋರ್ಸಿ ಅಂತ ಫೋಟೋ ಶೂಟ್ ಮಾಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಂಡ ಕೂಡಲೇ ಟ್ರೋಲ್ ಮಾಡಿದವರೇ ಹೆಚ್ಚು. ಆದರೆ, ಆ ಹೆಣ್ಣು ಗಂಡನಿಂದ ಅನುಭವಿಸಿದ ನೋವು ಎಂಥದ್ದು ಎನ್ನೋ ಕಲ್ಪನೆ ನಿಮಗಿದ್ಯಾ?

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿರೋ ತಮಿಳು ಕಿರುತೆರೆ ನಟಿ ಶಾಲಿನಿಯ ಡಿವೋರ್ಸ್ ಫೋಟೋಶೂಟ್ ಪರ- ವಿರುದ್ಧ ದೊಡ್ಡ ಚರ್ಚೆಯೇ ನಡೆದಿದೆ. ಗಂಡನಿಂದ ಡೈವೋರ್ಸ್ ಸಿಕ್ಕಿದ್ದನ್ನು ಸಂಭ್ರಮಿಸಿದ ನಟಿ ಶಾಲಿನಿಯ ದಾಂಪತ್ಯ ಬದುಕಿನಲ್ಲಿ ಅನುಭವಿಸಿದ್ದು ಬರೀ ಕಷ್ಟ, ಕಿರುಕುಳ, ಶೋಷಣೆಯೇ ಹೊರತು ಸಂತೋಷವನ್ನಲ್ಲ. ಅಷ್ಟಕ್ಕೂ ಶಾಲಿನಿ ಯಾರು? ಆಕೆ ಮದುವೆ ಆಗಿದ್ದು ಯಾರನ್ನು? ಡಿವೋರ್ಸ್ ಕೊಟ್ಟಿದ್ದು ಯಾವ ಕಾರಣಕ್ಕೆ? ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಶಾಲಿನಿಯೇ ಉತ್ತರ ಕೊಟ್ಟಿದ್ದಾರೆ.

ತಮಿಳು ಕಿರುತೆರೆಯಲ್ಲಿ ನಟಿಸುತ್ತಿದ್ದ ಶಾಲಿನಿ, ಮೀಡಿಯಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಸಲುವಾಗಿ ದುಬೈಗೆ ಶಿಫ್ಟ್​ ಆಗಿದ್ದಳು. 2015ರಲ್ಲಿ ಅದೇ ಕಂಪನಿಯಲ್ಲಿ ಈ ಭಾರತೀಯ ಹೆಣ್ಣು ಮಗಳಿಗೆ ಸಿಕ್ಕಿದ್ದೇ ರಿಯಾಜ್​ ಮೊಹಮ್ಮದ್​. ಫ್ಯಾಮಿಲಿ ಬಿಟ್ಟು ದುಬೈನಲ್ಲಿದ್ದ ಶಾಲಿನಿಗೆ ಆತ್ಮೀಯನಾದ ರಿಯಾಜ್​, ನಿಧಾನಕ್ಕೆ ಶಾಲಿನಿಯನ್ನು ಪ್ರೇಮದ ಬಲೆಯಲ್ಲಿ ಕೆಡವಿದ. ರಿಯಾಜ್​ಗೆ ಅದಾಗಲೇ ಮದುವೆಯಾಗಿ, ಮೊದಲ ಪತ್ನಿಗೆ ತಲಾಖ್ ನೀಡಿದ್ದ. ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಶಾಲಿನಿ, ರಿಯಾಜ್​ ಪ್ರೇಮದ ಬಲೆಗೆ ಬಿದ್ದು, ಮದುವೆಯೂ ಆಗಿಬಿಟ್ಟಳು. ರಿಯಾಜ್​ಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಶಾಲಿನಿ, ತನ್ನ ಹೆಸರನ್ನು ಸಾರಾ ಮೊಹ್ಮದ್​ ರಿಯಾಜ್​ (Sara Muhammad Riaz) ಎಂದು ಬದಲಿಸಿಕೊಂಡಳು.  

ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಿಲ್ಲ, ಸುಪ್ರೀಂ ಬಿಗ್‌ ತೀರ್ಪು!

ಮದುವೆಯಾದ ಕೆಲ ದಿನಗಳಲ್ಲೇ ಶುರುವಾಯ್ತು ನೋಡಿ ನರಕಯಾತನೆ. ವಿಪರೀತ ಕುಡಿಯುತ್ತಿದ್ದ ರಿಯಾಜ್​, ಶಾಲಿನಿಯ ಸಣ್ಣ ಪುಟ್ಟ ತಪ್ಪುಗಳನ್ನು ಮುಂದಿಟ್ಟು ಸಿಕ್ಕಾಪಟ್ಟೆ ಹೊಡೆಯುತ್ತಿದ್ದ. ರಾಕ್ಷಸಿ ಮನಸ್ಥಿತಿಯ ರಿಯಾಜ್​, ಗರ್ಭಿಣಿಯಾದಾಗಲೂ ಶಾಲಿನಿಯನ್ನು ಬಿಡದೇ ಮನಸೋ ಇಚ್ಚೆ ಬಡಿಯುತ್ತಿದ್ದ. ಅವನು ಹೇಳಿದಂತೆ ಕೆಲಸ ಬಿಟ್ಟೆ, ಫೇಸ್​ಬುಕ್​, ಇನ್​ಸ್ಟಾಗ್ರಾಂ ಎಲ್ಲದರಿಂದ ಹೊರಬಂದೆ. ನನ್ನ ಮೊಬೈಲ್ ನಂಬರ್ ಅಷ್ಟೇ ಅಲ್ಲ, ನಮ್ಮ ತಾಯಿಯ ಮೊಬೈಲ್​ ನಂಬರ್​ ಅನ್ನೂ ಬದಲಿಸಿದ್ದ. ಅವನು ಹೇಳಿದವರ ನಂಬರ್​ನಷ್ಟೇ ಸೇವ್​ ಮಾಡಿ ಕೊಂಡಿದ್ದೆ. ಬೇರೆ ನಂಬರ್​ನಿಂದ ಫೋನ್​ ಬಂದು ಬಿಟ್ಟರೆ ರಿಯಾಜ್ ನನ್ನನ್ನು ಹುರಿದು ಮುಕ್ಕಿಬಿಡುತ್ತಿದ್ದ. 

‘ನಾನು ನಗುವುದನ್ನೂ ಸಹಿಸುತ್ತಿರಲಿಲ್ಲ. ಅದಕ್ಕಾಗಿ ನಗುವುದನ್ನೇ ಮರೆತಿದ್ದೆ. ಸದಾ ಬುರ್ಖಾ, ಪರದೆಯ ಹಿಂದೆಯೇ ಇರುತ್ತಿದ್ದೆ. ಆತನ ಹೊಡೆತ ಸಹಿಸಲಾಗದೇ, ಪಾರ್ಕಿಂಗ್​ ಲಾಟ್​ಗೆ ಓಡಿ ಹೋಗಿ ಅವಿತು ನಿಲ್ಲುತ್ತಿದ್ದೆ. ಅವನ ಕೋಪ ಕಡಿಮೆಯಾಗಲಿ, ಸಮಾಧಾನವಾಗಲಿ ಅಂತ ಕಾಯುತ್ತಿದ್ದೆ. ಆತನ ಏಟಿನಿಂದ ನನ್ನ ಇಡೀ ದೇಹ ತತ್ತರಿಸಿ ಹೋಗಿತ್ತು. ಈ ಮಧ್ಯೆ, ಮಗಳು ಹುಟ್ಟಿದಳು. ಅವಳು ಬಂದ ಮೇಲೂ ನನ್ನ ಜೀವನ ಬದಲಾಗಲಿಲ್ಲ. ಅವನ ಕುಡಿತ, ಅನುಮಾನದ ನಡವಳಿಕೆಯಿಂದ ಬೇಸತ್ತು ಹೋಗಿದ್ದೆ. ಹೀಗೆ ಒಂದು ದಿನ, ಸಣ್ಣ ವಿಷಯಕ್ಕೆ ಜಗಳ ಶುರುವಾಗಿತ್ತು. ನನ್ನ ಮೇಲೆ ಏರಿ ಬಂದ. ಆತನ ಒಂದೊಂದು ಹೊಡೆತ ನೋಡಿ ಮಗಳು ಬೆಚ್ಚಿ ಬಿದ್ದಳು. ಅಮ್ಮನನ್ನು ಹೊಡೆಯಬೇಡ ಅಂತ ಕಾಲು ಹಿಡಿದರೂ ರಿಯಾಜ್ ಮನಸ್ಸು ಕರಗಲಿಲ್ಲ. ಇದು ನನ್ನನ್ನು ಕೆರಳುವಂತೆ ಮಾಡಿತು.

ದಾಂಪತ್ಯಕ್ಕೆ ಸಮಯವೆಲ್ಲಿ ಕೊಟ್ಟಿದ್ದೀರಿ: ವಿಚ್ಛೇದನಕ್ಕೆ ಮುಂದಾದ ಟೆಕ್ಕಿ ದಂಪತಿಯ ಪ್ರಶ್ನಿಸಿದ ಕೋರ್ಟ್

ನನ್ನ ಮಗಳ ಕಣ್ಣೀರು, ಭಯ ನನ್ನನ್ನು ರಿಯಾಜ್​ನನ್ನು ತೊರೆಯುವಂತೆ ಮಾಡಿತು. ಅಂದೇ ಅವನಿಗೆ ಹೇಳಿಬಿಟ್ಟೆ, ಇನ್ನು ನಿನ್ನೊಂದಿಗೆ ಬದುಕಲಾರೆ ಎಂದು. ಡಿವೋರ್ಸ್ (Divorce) ಸಿಗುವವರೆಗೂ ನಾನು ಅವನೊಂದಿಗೇ ಇದ್ದೆ. ಮನೆ ಬಿಟ್ಟು ಬಂದು, ರಸ್ತೆಯಲ್ಲಿ ನಿಲ್ಲುವುದು ನನಗೆ ಇಷ್ಟ ಇರಲಿಲ್ಲ. ಡಿವೋರ್ಸ್ ಪಡೆದು ಮಗಳೊಂದಿಗೆ ಭಾರತಕ್ಕೆ ವಾಪಸ್ಸಾದೆ.  ತನ್ನಂತೆಯೇ ನರಳುತ್ತಿರುವವರಿಗೆ ಸಾಂತ್ವನ ಮತ್ತು ಧೈರ್ಯ (Courage) ನೀಡಲು ಈ ವಿನೂತನ ಪರಿಕಲ್ಪನೆಯ ಫೋಟೋ ಶೂಟ್ ಮಾಡಿಸಿದೆ, ಅಂತಾರೆ ಶಾಲಿನಿ. ಈಗ ಹೇಳಿ, ಶಾಲಿನಿ ಮಾಡಿದ್ದು ತಪ್ಪಾ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

SM
About the Author

Shobha MC

ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಎಂಎ ಮುಗಿಸಿ, ಸೇರಿದ್ದು ವಿಜಯ ಕರ್ನಾಟಕ ಪತ್ರಿಕೆಗೆ. ಸೂರ್ಯೋದಯ ಸೇರಿ ಪತ್ರಿಕೆಗಳಲ್ಲಿ 7 ವರ್ಷಗಳ ಅನುಭವ. ನ್ಯೂಸ್ ಚಾನೆಲ್ಗಳಿನ್ನೂ ಸರಿಯಾಗಿ ಕಣ್ಬಿಡದ ಕಾಲದಲ್ಲೇ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಿದ್ದು, ಟೆಲಿವಿಷನ್ ಪಟ್ಟುಗಳೆಲ್ಲ ಕರತಲಾಮಲಕ. ಉದಯ ಟಿವಿಯಲ್ಲಿ 2 ವರ್ಷ ಸೇವೆ. ಕಳೆದ 17 ವರ್ಷದಿಂದಲೂ ಸುವರ್ಣ ನ್ಯೂಸ್ ಇನ್ಪುಟ್, ಔಟ್ಪುಟ್ ಹೆಡ್ ಆಗಿ ಕಾರ್ಯ ನಿರ್ವಹಣೆ. ಪತ್ರಿಕೆ- ಟಿವಿ ಎರಡರ ಅಗಾಧ ಅನುಭವ ಇರುವ ಏಕೈಕ ಪತ್ರಕರ್ತೆ. ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತರ ಸಂಘ, ಕೆಂಪೇಗೌಡ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ, ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಕಮಿಟಿ ಸದಸ್ಯೆಯಾಗಿಯೂ ನೇಮಕ.Read More...
Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?