ಪಾಕ್‌ ನೆಲದಲ್ಲೀಗ ಅರಾಜಕತೆ; ಎಲ್ಲಿಗೆ ಬಂತು ಇಮ್ರಾನ್ ಖಾನ್ ಕತೆ?

Oct 23, 2020, 10:24 AM IST

ಬೆಂಗಳೂರು (ಅ. 23): ಪಾಕಿಸ್ತಾನದಲ್ಲಿ ಈಗ ಇಮ್ರಾನ್‌ ಖಾನ್‌ ಸರ್ಕಾರ ಹಾಗೂ ಸೇನೆಯ ವಿರುದ್ಧ ರಾಜಕಾರಣಿಗಳಷ್ಟೇ ಅಲ್ಲ, ಪೊಲೀಸರೂ ಬಂಡಾಯ ಎದ್ದಿದ್ದಾರೆ. ಇದು ಇಮ್ರಾನ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪಾಕಿಸ್ತಾನದಲ್ಲಿ ಪೊಲೀಸ್ ದಂಗೆ; ಸರ್ಕಾರದ ವಿರುದ್ಧ ಪ್ರಬಲ ಹೋರಾಟ ಶುರು

ಇಮ್ರಾನ್‌ ಖಾನ್‌ ಸರ್ಕಾರದ ವಿರುದ್ಧ ಪ್ರಜಾಸತ್ತಾತ್ಮಕ ಚಳವಳಿಯ ಹೆಸರಿನಲ್ಲಿ 11 ಪಕ್ಷಗಳು ಒಟ್ಟುಗೂಡಿದ್ದು, ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಹಾಗೂ ಪಿಎಂಎಲ್‌ (ನವಾಜ್‌) ಪಕ್ಷದ ಮಧ್ಯೆ ಬಿರುಕು ಮೂಡಿಸಿ ರ್ಯಾಲಿಯನ್ನು ವಿಫಲಗೊಳಿಸಲು ಇಜಾಜ್‌ ಶಾ ಅವರು ಸೇನೆಯನ್ನು ಬಳಕೆ ಮಾಡಿಕೊಂಡಿದ್ದಾರೆ. ಪಾಕಿಸ್ತಾನದಲ್ಲೀಗ ಜನರು ಬಂಡಾಯವೆದ್ದಿದೆ. ಇಮ್ರಾನ್‌ ಖಾನ್‌ಗೆ ಬಂಡಾಯದ ಬಿಸಿ ತಟ್ಟಿದೆ.