Oct 20, 2020, 11:34 AM IST
ನವದೆಹಲಿ (ಅ. 20): ಅತಿಕ್ರಮಣ ಬುದ್ಧಿ ತೋರುವ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು, ಗಡಿಯಲ್ಲಿನ 7 ಕಡೆ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯನ್ನು ದಾಟಿ ಚೀನಾದೊಳಕ್ಕೆ ನುಗ್ಗಿರುವ ಸಂಗತಿ ಈಗ ಬೆಳಕಿಗೆ ಬಂದಿದೆ.
ಭಾರತದ ಗಡಿಯಲ್ಲಿ ನುಸುಳಿದ ಚೀನಾ ಯೋಧನ ಬಂಧನ!
ಭಾರತದ ಆಕ್ರಮಣದ ಬೆನ್ನಲ್ಲೇ ಯುದ್ಧೋನ್ಮಾದದ ಮಾತುಗಳನ್ನು ನಿಲ್ಲಿಸಿರುವ ನೆರೆ ದೇಶ, ದಕ್ಷಿಣ ಪ್ಯಾಂಗಾಂಗ್ ಸರೋವರದಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತಕ್ಕೆ ಮೊರೆ ಇಟ್ಟಿದೆ. ಇದಕ್ಕೆ ಬಿಗಿಪಟ್ಟು ಹಾಕಿರುವ ಭಾರತ, ಪ್ಯಾಂಗಾಂಗ್ ಸರೋವರದ ಉತ್ತರ ದಿಕ್ಕಿನಿಂದ ಚೀನಾ ತನ್ನ ಯೋಧರನ್ನು ಕರೆಸಿಕೊಂಡರೆ ಏಕಕಾಲಕ್ಕೆ ನಾವೂ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಸಿದ್ಧವಿರುವುದಾಗಿ ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಮಾತುಕತೆಯ ಮಂತ್ರವನ್ನು ಚೀನಾ ಜಪಿಸುತ್ತಿದೆ ಎಂದು ಹೇಳಲಾಗಿದೆ.