ಮಾಫಿಯಾ ವಿರುದ್ಧ ಯೋಗಿ ಯುದ್ಧ..30 ದಿನದಲ್ಲಿ ಬದಲಾಗಿದ್ದೆಷ್ಟು..?

Mar 29, 2023, 11:44 AM IST

ಯೋಗಿ ಆದಿತ್ಯನಾಥ್ ಅಧಿಕಾರಕ್ಕೇರಿದಾಗಿನಿಂದ ಭ್ರಷ್ಟಾಚಾರ, ಭಯೋತ್ಪಾದನೆ ವಿರುದ್ಧ ಹೋರಾಟವನ್ನು ಮಾಡುತ್ತಿದ್ದಾರೆ. ಮಾಫಿಯಾ ಹಾಗೂ ಕ್ರಿಮಿನಲ್‌ಗಳ ವಿರುದ್ಧ ಕಠಿಣ ನೀತಿ ಅಳವಡಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿದ್ದು.ಗ್ಯಾಂಗ್‌ಸ್ಟರ್‌ಗಳ ವಿರುದ್ಧದ ಸಮರವನ್ನು  ಯೋಗಿ ಆದಿತ್ಯನಾಥ್ ಸರ್ಕಾರ ಮುಂದುವರೆಸಿದೆ. ಮಿಷನ್ ಪನಿಷ್ಮೆಂಟ್ ಹೆಸರಲ್ಲಿ  ಉತ್ತರ ಪ್ರದೇಶದಲ್ಲಿ ನಡೆಯುವ ಅಕ್ರಮವನ್ನು  ತೊಡೆದುಹಾಕುತ್ತಿದ್ದು, ಪುಡಾರಿಗಳು, ಮಾಫಿಯಾ ವಿರುದ್ಧ  ಕಟ್ಟುನಿಟ್ಟಿನ ಕ್ರಮವನ್ನು ತೆಗೊದುಕೊಳ್ಳುತ್ತಿದ್ದಾರೆ. ಕುಖ್ಯಾತ ಕ್ರಿಮಿನಲ್‌ಗಳು, ಗೂಂಡಾಗಳು ಹಾಗೂ ಗ್ಯಾಂಗ್‌ ಸ್ಟರ್‌ಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸುವಂತೆ ಉತ್ತರ ಪ್ರದೇಶ ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿತ್ತು. ಈಗ ಈ ಕೆರಳಿದ ಸಿಂಹದ ಗರ್ಜನೆಗೆ ಹೇಗೆ ಬದಲಾಗಿದೆ ಗೊತ್ತಾ ಉತ್ತರ ಪ್ರದೇಶ..? ಈ ವಿಡಿಯೋ ನೋಡಿ