ಯಲಚೇನಹಳ್ಳಿ ಮೈದಾನವನ್ನು ಶುಚಿ ಮಾಡಲು BBMP ಅಧಿಕಾರಿಗಳಲ್ಲಿ ಮನವಿ ಮಾಡಿದ ನಟ ಅನಿರುದ್ಧ್!

May 16, 2022, 1:11 PM IST

ಕನಕಪುರ ರಸ್ತೆ ಯಲಚೇನಹಳ್ಳಿ ಮೆಟ್ರೋ ಸ್ಪೇಷನ್‌ ಬಳಿ ಇರುಚ ಮೈದಾನದಲ್ಲಿ ಕಸದ ರಾಶಿ ಇದ್ದು ಕೆಟ್ಟ ವಾಸನೆ ಬರುತ್ತಿರುವ ಕಾರಣ ನಟ ಅನಿರುದ್ಧ್ ಬಿಬಿಎಂಪಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ಇಲ್ಲಿನ ಸ್ಥಳೀಯರು ಕಸ ಹಾಕಬಾರದು, ಇಲ್ಲಿನ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಪೋಷ್ಟ್‌ ಮಾಡಿದ್ದೀನಿ ಎಂದು ಅನಿರುದ್ಧ್ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮಾಜ ಮುಖಿ ಕೆಲಸಗಳು ಮ್ತು ಸ್ವಚ್ಛತೆ ಅಭಿಯಾನದಲ್ಲಿ ಅನಿರುದ್ಧ ಪಾಲ್ಗೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment