ಮೈಸೂರು ದೇವಾಲಯಗಳ ತೆರವು ವಿವಾದ: ಸುದ್ದಿಗೋಷ್ಠಿಯಲ್ಲಿ ಪ್ರತಾಪ್ ಸಿಂಹ ಗರಂ

Sep 13, 2021, 1:56 PM IST

ಮೈಸೂರು (ಸೆ. 13): ರಸ್ತೆ, ಫುಟ್‌ಪಾತ್, ಪಾರ್ಕ್‌ಗಳಲ್ಲಿ ನಿರ್ಮಾಣವಾಗಿರುವ ದೇವಾಲಯಗಳನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಮೈಸೂರು ಜಿಲ್ಲಾಡಳಿತ ತೆರವು ಮಾಡಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಸುದ್ಧಿಗೋಷ್ಠಿ ನಡೆಸಿದ್ದಾರೆ.

'ರಾಜ್ಯದಲ್ಲಿ ವಕ್ಫ್ ಬೋರ್ಡ್ ನಿರ್ಮಾಣ ಮಾಡಿ, ಮಸೀದಿಗಳನ್ನು ಕಟ್ಟಿ ಕೋಡಿಫಿಕೇಶನ್ ಮಾಡಲು ಅವಕಾಶ ನೀಡಲಾಗಿದೆ. ಅದೇ ರಿತಿ ನಮಗೂ ಅವಕಾಶ ಕೊಡಿ. ಪೂಜಿಸುವ ಹಕ್ಕು ಕೊಟ್ಟಂತೆ, ಅದನ್ನು ರಕ್ಷಿಸುವ ಹಕ್ಕನ್ನೂ ಕೊಡಿ' ಎಂದು ಆಗ್ರಹಿಸಿದ್ದಾರೆ.