ಕಾಂಗ್ರೆಸ್ ಬಣ ರಾಜಕೀಯಕ್ಕೆ ಅಂತ್ಯ ಹಾಡಲು ಹೈಕಮಾಂಡ್ ಪ್ಲ್ಯಾನ್..!

Oct 6, 2021, 11:34 AM IST

ಬೆಂಗಳೂರು (ಅ. 06): ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ರಾಜಕೀಯ ಸಂಚಲನ ಮೂಡಿಸಿದೆ.  ಕಾಂಗ್ರೆಸ್‌ ಹೈಕಮಾಂಡ್‌ ಎಐಸಿಸಿಗೆ ಶೀಘ್ರವೇ ತರಲಿರುವ ಕೆಲ ಮಹತ್ವದ ಬದಲಾವಣೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. 

ಸಿಂಧಗಿ, ಹಾನಗಲ್ 'ಕೈ' ಅಭ್ಯರ್ಥಿ ಘೋಷಣೆ: ಪ್ಲಸ್, ಮೈನಸ್ ಲೆಕ್ಕಾಚಾರ ಹೀಗಿದೆ

ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಬಿಜೆಪಿಯ ನೂತನ ಸರ್ಕಾರದ ಕಾರ್ಯಶೈಲಿ ಹೇಗಿದೆ? ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ ಪರಿಸ್ಥಿತಿ ಹೇಗಿರಬಹುದು. ಪಕ್ಷಕ್ಕೆ ಎಷ್ಟುಅವಕಾಶವಿದೆ? ಜೆಡಿಎಸ್‌ ಪಾತ್ರ ಏನಾಗಲಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಪಡೆದರು ಎನ್ನಲಾಗಿದೆ. ಇದೇ ವೇಳೆ ರಾಜ್ಯ ನಾಯಕತ್ವದಲ್ಲಿ ಒಳ ಜಗಳಕ್ಕೆ ಆಸ್ಪದ ನೀಡದಂತೆ ಅವರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು ಎನ್ನಲಾಗಿದೆ.