ಬೆಳಗಾವಿಗೂ ಬಂದ್ರೂ ರಾಮದುರ್ಗಕ್ಕೆ ಬರದ ಸಿಎಂ; ರಾಜ್ಯ ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಆಕ್ರೋಶ

Aug 26, 2020, 2:43 PM IST

ಬೆಂಗಳೂರು (ಆ. 26): ಬೆಳಗಾವಿಗೂ ಬಂದ್ರೂ ರಾಮದುರ್ಗಕ್ಕೆ ಬರದ ಸಿಎಂ. ಇಲ್ಲಿನ ನೆರೆ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮ್ಮನ್ನು ಈ ರೀತಿ ಬೀದಿಯಲ್ಲಿ ಕೂರಿಸಿದ ಸರ್ಕಾರಕ್ಕೆ ಧಿಕ್ಕಾರ' ಎಂದು ರಾಮದುರ್ಗಾ ಮಿನಿ ವಿಧಾನಸೌಧದ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಳೆದ ವರ್ಷ ಪ್ರವಾಹದಲ್ಲಿ ನಾವು ಮನೆ, ಆಸ್ತಿ ಕಳೆದುಕೊಂಡು ಬೀದಿಯಲ್ಲಿದ್ದೇವೆ. ಕಳೆದ ವರ್ಷದ ಬರ ಪರಿಹಾರ ಇದುವರೆಗೂ ಬಂದಿಲ್ಲ. ಸಿಎಂ ಸಾಹೇಬ್ರು ಬೆಳಗಾವಿಗೆ ಬಂದು ಹೋಗಿದ್ದಾರೆ. ಆದರೆ ರಾಮದುರ್ಗಕ್ಕೆ ಮಾತ್ರ ಬಂದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಕೋವಿಡ್‌ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ'; ಬಿಎಸ್‌ವೈ