ಸಿಎಂ - ನಿರಾಣಿ ಭೇಟಿ; ಕ್ಷಮೆ ಕೇಳಿ ಮಂತ್ರಿ ಸ್ಥಾನಕ್ಕೆ ಮನವಿ?

Jan 18, 2020, 1:36 PM IST

ಬೆಂಗಳೂರು (ಜ. 18): ಪಂಚಮಸಾಲಿ ಮಠದ ವಿವಾದದ ನಂತರ ಮುರುಗೇಶ್ ನಿರಾಣಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ.  ಹರ ಸಮಾವೇಶದಲ್ಲಿ ನಿರಾಣಿ ವಿರುದ್ಧವೂ ಸಿಎಂ ಆಕ್ರೋಶಗೊಂಡಿದ್ದರು. ವಿವಾದದ ತಣ್ಣಗಾದ ನಂತರ ಸಿಎಂ- ನಿರಾಣಿ ಭೇಟಿ ಕುತೂಹಲ ಮೂಡಿಸಿದೆ. 

'ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ ಕ್ಷಮೆ ಕೇಳಿದ್ದು ತಪ್ಪು'

ಪಂಚಮಸಾಲಿ ವಿವಾದಕ್ಕೆ ಕ್ಷಮೆ ಕೇಳಲು ಬಂದಿದ್ದಾರಾ ಅಥವಾ ಇಂದು ಹುಬ್ಬಳ್ಳಿಗೆ ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಸಚಿವ ಸಂಪುಟದಲ್ಲಿ ಶತಾಯಗತಾಯ ಸ್ಥಾನ ಪಡೆಯಬೇಕೆಂಬ ಆಸೆಯಿಂದ ಸಿಎಂರನ್ನು  ಭೇಟಿಯಾಗಿರಬಹುದಾ ಎಂಬ ಕುತೂಹಲ ಮೂಡಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!