ಬೆಂಗಳೂರಿಗೆ ಬೈ ಬೈ ಹೇಳ್ತಿದ್ದಾರೆ ಜನ ! ದೇವನಹಳ್ಳಿ ಟೋಲ್‌ನಲ್ಲಿ ಟ್ರಾಫಿಕ್ ಜಾಮೋ ಜಾಮ್..!

Jul 13, 2020, 12:19 PM IST

ಬೆಂಗಳೂರು (ಜು. 13): ನಾಳೆಯಿಂದ ಬೆಂಗಳೂರು ಲಾಕ್‌ಡೌನ್ ಹಿನ್ನಲೆಯಲ್ಲಿ ಇಲ್ಲಿಂದ ಆಂಧ್ರದತ್ತ ಮಹಾ ಪ್ರಯಾಣ ಬೆಳೆಸಿದ್ದಾರೆ. ಲಗೇಜ್ ಸಮೇತ ಆಂಧ್ರ, ತೆಲಂಗಾಣ ಭಾಗದ ಜನರು ಮನೆಗಳನ್ನು ಖಾಲಿ ಮಾಡಿ ಊರುಗಳತ್ತ ಮುಖ ಮಾಡುತ್ತಿದ್ದಾರೆ. ದೇವನಹಳ್ಳಿ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟೋಲ್‌ ಬಳಿ ಕಿಮೀಗಟ್ಟಲೇ ವಾಹನಗಳು ನಿಂತಿವೆ. 

ಬೆಂಗಳೂರು ಬಿಡ್ತಿದ್ದಾರೆ ಜನ; ಊರಿನ ಕಡೆ ಮಹಾ ವಲಸೆ ಶುರು

ಅಲ್ಲಿದ್ದವರನ್ನು ಸುವರ್ಣ ನ್ಯೂಸ್ ಪ್ರತಿನಿಧಿ ಮಾತನಾಡಿಸಿದಾಗ, ' ಸರ್, ಇಲ್ಲಿ ಲಾಕ್‌ಡೌನ್‌ ಆಗುತ್ತಿದೆ. ಕೆಲಸ ಇಲ್ಲ. ವೇತನ ಇಲ್ಲ. ಊರಿಗೆ ಹೋದರೆ ಕೂಲಿನಾದ್ರೂ ಮಾಡಿ ಬದುಕ್ತೀವಿ ಸಾರ್..! ಅಂತ ತಮ್ಮ ಅಳಲನ್ನು' ತೋಡಿಕೊಂಡಿದ್ದಾರೆ.