ಕ್ಷಣ ಕ್ಷಣಕ್ಕೂ  ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!

ಕ್ಷಣ ಕ್ಷಣಕ್ಕೂ ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!

Published : Aug 11, 2023, 01:40 PM IST

ರಾಮಯ್ಯ ಆಸ್ಪತ್ರೆಯಲ್ಲಿ ಸಂತೋಷ್‌​ಗೆ ಡಯಾಲಿಸಿಸ್
ಆಗಸ್ಟ್ 17ರೊಳಗೆ ಸಂತೋಷ್‌​ಗೆ ಕಿಡ್ನಿ ಕಸಿ ಆಗಬೇಕಿದೆ
ಸಂತೋಷ್ ಪ್ರಾಣ ಉಳಿಸಲು ಪತ್ನಿ ಐಶ್ವರ್ಯ ಹೋರಾಟ

ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಸಂತೋಷ್​ ಕಿಡ್ನಿ(kidney) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂತೋಷ್‌ ಮತ್ತು ಐಶ್ವರ್ಯ 2016ರ ಜೂನ್ 24ರಲ್ಲಿ ಪರಸ್ಪರ ಪ್ರೀತಿಸಿ ಮದುವೆ ಆಗಿದ್ರು. ಮದುವೆ ಆದ್ಮೇಲೇ ಹ್ಯಾಪಿ ಆಗಿಯೇ ಲೈಫ್ ಲೀಡ್ ಮಾಡ್ತಾ ಇದ್ರು, ಜೊತೆಗೆ ಇಬ್ಬರು ಮಕ್ಕಳಾದ 5 ವರ್ಷದ ಶರತ್, 6 ವರ್ಷದ ತನೀಶ್ ಜೊತೆಯಲ್ಲಿ ಹಾಯಾಗಿ ಖುಷಿಯಾಗಿದ್ದರು. ಇವರ ಬದುಕು ಅಂದ್ಕೊಂಡಂಗೇ ಸಾಗ್ತಾ ಇತ್ತು. ಆದ್ರೆ, ಇದ್ದಕ್ಕಿದ್ದಂತೆ ಇವರ ಜೀವನದಲ್ಲಿ ಎದ್ದ ಬಿರುಗಾಳಿಗೆ ದಿಕ್ಕು ತೋಚದಂತೆ ಆಗಿದ್ದಾರೆ. 2019ರಲ್ಲಿ ಮೂತ್ರದ ಸೋಂಕು ಎಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂತೋಷ್‌​​ಗೆ ಆಸ್ಪತ್ರೆಯೇ ಖಾಯಂ ಆಗಿ ಬಿಟ್ಟಿತ್ತು, ಹೊಟ್ಟೆಯಲ್ಲಿ ಗಡ್ಡೆ ಇದೆ. ಆಪರೇಷನ್ ಮಾಡಬೇಕು ಎಂದವರು ಕೊನೆಗೆ ಕಿಡ್ನಿ ವೈಫಲ್ಯ ಆಗಿದೆ ಎಂದು ಹೇಳಿಬಿಟ್ಟರು. ವೈದ್ಯರ ಮಾತಿಗೆ ಕಂಗಾಲಾದ ಪತ್ನಿ ಐಶ್ವರ್ಯಗೆ ದಿಕ್ಕುತೋಚದಂತೆ ಆಗಿದೆ.

ಯಾವಾಗ ಕಿಡ್ನಿ ವೈಫಲ್ಯ(kidney failure) ಅನ್ನೋದು  ಗೊತ್ತಾಯ್ತೋ  ಗಂಡನನ್ನ ಉಳಿಸಿಕೊಳ್ಳಲು ಅಲೆಯದ ಆಸ್ಪತ್ರೆಯಿಲ್ಲ. ಕಾಣದ ದೇವರುಗಳಿಲ್ಲಿ. ಗಂಡನ ಚಿಕಿತ್ಸೆಗೆ ಅಲ್ಲಿ ಇಲ್ಲಿ ಹಣಕಾಸು ಹೊಂಚಿ ಲಕ್ಷ..ಲಕ್ಷ.. ಖರ್ಚು ಮಾಡಿ ಟ್ರೀಟ್ಮೆಂಟ್ ಕೊಡಿಸಿದ್ದಾರೆ. ಈ ಹಿಂದೇ ಕೂಡ ನಮ್ಮ ಏಷ್ಯಾನೆಟ್​ ಸುವರ್ಣ ನ್ಯೂಸ್‌​ನ ಬಿಗ್​3ಯಲ್ಲಿ ಸಹಾಯ ಕೇಳಿಕೊಂಡು ಬಂದಿದ್ದರು. ಆಗ ಚಿಕಿತ್ಸೆಗೆ  ಕರೆಂಟ್ ಅಫೇರ್ಸ್ ಎಡಿಟರ್ ಆಗಿರೋ ಜಯಪ್ರಕಾಶ್​​ಶೆಟ್ಟಿ ಅವರು 50 ಸಾವಿರ ಸಹಾಯ ಮಾಡಿದ್ದರು. ಇದೀಗ, ಸಂತೋಷ್‌ಗೆ ತುರ್ತಾಗಿ ಕಿಡ್ನಿ ಕಸಿ ಮಾಡಿಸಬೇಕಿದೆ. ಕಿಡ್ನಿ ದಾನಕ್ಕೆ ಸಂತೋಷ್ ಸೋದರ ಅರುಣ್ ಮುಂದಾಗಿದ್ದು, ಬೆಂಗಳೂರಿನ(Bengaluru) ರಾಮಯ್ಯ ಆಸ್ಪತ್ರೆಯವರು ಆಗಸ್ಟ್ 17ರೊಳಗೆ  7 ಲಕ್ಷ  ಅರೇಂಜ್ ಮಾಡಿಕೊಂಡು ಬಂದ್ರೆ ಸಂತೋಷ್​ ಪ್ರಾಣ ಉಳಿಸಬಹುದು ಅಂದಿದ್ದಾರೆ.​ ಹೀಗಾಗಿ ಈ ಹುಡುಗಿ ಹಣಕ್ಕಾಗಿ ಕಂಡ ಕಂಡವರ ಮನೆ ಬಾಗಿಲು, ರಾಜಕಾರಣಿಗಳ ಮನೆ ಕಾದರು ಯಾರೂ ಈಕೆಯ ನೆರವಿಗೆ ದಾವಿಸಿಲ್ಲ.

ಇದನ್ನೂ ವೀಕ್ಷಿಸಿ:  ಅನಧಿಕೃತ ಖಾಸಗಿ ಶಾಲೆಗಳಿಗೆ ಸದ್ಯದ್ರಲ್ಲೇ ಬೀಳುತ್ತೆ ಬೀಗ: ಆ.14ರೊಳಗೆ ಮುಚ್ಚುವಂತೆ ಖಡಕ್ ಆದೇಶ !

22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
Read more