ಕ್ಷಣ ಕ್ಷಣಕ್ಕೂ  ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!

ಕ್ಷಣ ಕ್ಷಣಕ್ಕೂ ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!

Published : Aug 11, 2023, 01:40 PM IST

ರಾಮಯ್ಯ ಆಸ್ಪತ್ರೆಯಲ್ಲಿ ಸಂತೋಷ್‌​ಗೆ ಡಯಾಲಿಸಿಸ್
ಆಗಸ್ಟ್ 17ರೊಳಗೆ ಸಂತೋಷ್‌​ಗೆ ಕಿಡ್ನಿ ಕಸಿ ಆಗಬೇಕಿದೆ
ಸಂತೋಷ್ ಪ್ರಾಣ ಉಳಿಸಲು ಪತ್ನಿ ಐಶ್ವರ್ಯ ಹೋರಾಟ

ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಸಂತೋಷ್​ ಕಿಡ್ನಿ(kidney) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂತೋಷ್‌ ಮತ್ತು ಐಶ್ವರ್ಯ 2016ರ ಜೂನ್ 24ರಲ್ಲಿ ಪರಸ್ಪರ ಪ್ರೀತಿಸಿ ಮದುವೆ ಆಗಿದ್ರು. ಮದುವೆ ಆದ್ಮೇಲೇ ಹ್ಯಾಪಿ ಆಗಿಯೇ ಲೈಫ್ ಲೀಡ್ ಮಾಡ್ತಾ ಇದ್ರು, ಜೊತೆಗೆ ಇಬ್ಬರು ಮಕ್ಕಳಾದ 5 ವರ್ಷದ ಶರತ್, 6 ವರ್ಷದ ತನೀಶ್ ಜೊತೆಯಲ್ಲಿ ಹಾಯಾಗಿ ಖುಷಿಯಾಗಿದ್ದರು. ಇವರ ಬದುಕು ಅಂದ್ಕೊಂಡಂಗೇ ಸಾಗ್ತಾ ಇತ್ತು. ಆದ್ರೆ, ಇದ್ದಕ್ಕಿದ್ದಂತೆ ಇವರ ಜೀವನದಲ್ಲಿ ಎದ್ದ ಬಿರುಗಾಳಿಗೆ ದಿಕ್ಕು ತೋಚದಂತೆ ಆಗಿದ್ದಾರೆ. 2019ರಲ್ಲಿ ಮೂತ್ರದ ಸೋಂಕು ಎಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂತೋಷ್‌​​ಗೆ ಆಸ್ಪತ್ರೆಯೇ ಖಾಯಂ ಆಗಿ ಬಿಟ್ಟಿತ್ತು, ಹೊಟ್ಟೆಯಲ್ಲಿ ಗಡ್ಡೆ ಇದೆ. ಆಪರೇಷನ್ ಮಾಡಬೇಕು ಎಂದವರು ಕೊನೆಗೆ ಕಿಡ್ನಿ ವೈಫಲ್ಯ ಆಗಿದೆ ಎಂದು ಹೇಳಿಬಿಟ್ಟರು. ವೈದ್ಯರ ಮಾತಿಗೆ ಕಂಗಾಲಾದ ಪತ್ನಿ ಐಶ್ವರ್ಯಗೆ ದಿಕ್ಕುತೋಚದಂತೆ ಆಗಿದೆ.

ಯಾವಾಗ ಕಿಡ್ನಿ ವೈಫಲ್ಯ(kidney failure) ಅನ್ನೋದು  ಗೊತ್ತಾಯ್ತೋ  ಗಂಡನನ್ನ ಉಳಿಸಿಕೊಳ್ಳಲು ಅಲೆಯದ ಆಸ್ಪತ್ರೆಯಿಲ್ಲ. ಕಾಣದ ದೇವರುಗಳಿಲ್ಲಿ. ಗಂಡನ ಚಿಕಿತ್ಸೆಗೆ ಅಲ್ಲಿ ಇಲ್ಲಿ ಹಣಕಾಸು ಹೊಂಚಿ ಲಕ್ಷ..ಲಕ್ಷ.. ಖರ್ಚು ಮಾಡಿ ಟ್ರೀಟ್ಮೆಂಟ್ ಕೊಡಿಸಿದ್ದಾರೆ. ಈ ಹಿಂದೇ ಕೂಡ ನಮ್ಮ ಏಷ್ಯಾನೆಟ್​ ಸುವರ್ಣ ನ್ಯೂಸ್‌​ನ ಬಿಗ್​3ಯಲ್ಲಿ ಸಹಾಯ ಕೇಳಿಕೊಂಡು ಬಂದಿದ್ದರು. ಆಗ ಚಿಕಿತ್ಸೆಗೆ  ಕರೆಂಟ್ ಅಫೇರ್ಸ್ ಎಡಿಟರ್ ಆಗಿರೋ ಜಯಪ್ರಕಾಶ್​​ಶೆಟ್ಟಿ ಅವರು 50 ಸಾವಿರ ಸಹಾಯ ಮಾಡಿದ್ದರು. ಇದೀಗ, ಸಂತೋಷ್‌ಗೆ ತುರ್ತಾಗಿ ಕಿಡ್ನಿ ಕಸಿ ಮಾಡಿಸಬೇಕಿದೆ. ಕಿಡ್ನಿ ದಾನಕ್ಕೆ ಸಂತೋಷ್ ಸೋದರ ಅರುಣ್ ಮುಂದಾಗಿದ್ದು, ಬೆಂಗಳೂರಿನ(Bengaluru) ರಾಮಯ್ಯ ಆಸ್ಪತ್ರೆಯವರು ಆಗಸ್ಟ್ 17ರೊಳಗೆ  7 ಲಕ್ಷ  ಅರೇಂಜ್ ಮಾಡಿಕೊಂಡು ಬಂದ್ರೆ ಸಂತೋಷ್​ ಪ್ರಾಣ ಉಳಿಸಬಹುದು ಅಂದಿದ್ದಾರೆ.​ ಹೀಗಾಗಿ ಈ ಹುಡುಗಿ ಹಣಕ್ಕಾಗಿ ಕಂಡ ಕಂಡವರ ಮನೆ ಬಾಗಿಲು, ರಾಜಕಾರಣಿಗಳ ಮನೆ ಕಾದರು ಯಾರೂ ಈಕೆಯ ನೆರವಿಗೆ ದಾವಿಸಿಲ್ಲ.

ಇದನ್ನೂ ವೀಕ್ಷಿಸಿ:  ಅನಧಿಕೃತ ಖಾಸಗಿ ಶಾಲೆಗಳಿಗೆ ಸದ್ಯದ್ರಲ್ಲೇ ಬೀಳುತ್ತೆ ಬೀಗ: ಆ.14ರೊಳಗೆ ಮುಚ್ಚುವಂತೆ ಖಡಕ್ ಆದೇಶ !

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more