ಬೆಂಗಳೂರು ಬಂದ್ ಆಯ್ತು ಈಗ ಕರುನಾಡಿಗೆ ಬೀಗ: ಕಾವೇರಿ ಕಿಚ್ಚಿಗೆ ಶುಕ್ರವಾರ ಸ್ತಬ್ಧವಾಗುತ್ತಾ ಕರ್ನಾಟಕ..?

ಬೆಂಗಳೂರು ಬಂದ್ ಆಯ್ತು ಈಗ ಕರುನಾಡಿಗೆ ಬೀಗ: ಕಾವೇರಿ ಕಿಚ್ಚಿಗೆ ಶುಕ್ರವಾರ ಸ್ತಬ್ಧವಾಗುತ್ತಾ ಕರ್ನಾಟಕ..?

Published : Sep 27, 2023, 10:08 AM IST

ಬೆಂಗಳೂರು ಬಂದ್ ಮುಗೀತು. ಈಗ ಕರ್ನಾಟಕ ಸ್ತಬ್ಧಕ್ಕೆ ಸಂಘಟನೆಗಳು ನಿರ್ಧರಿಸಿವೆ. ಕಾವೇರಿಗಾಗಿ ಶುಕ್ರವಾರ ಅಖಂಡ ಕರುನಾಡಿಗೆ ಬೀಗ ಹಾಕಲು ಪ್ಲಾನ್ ಮಾಡಿದ್ದು, ವಾಟಳ್ ನಾಗಾರಾಜ್ ನೇತೃತ್ವದಲ್ಲಿ ದೊಡ್ಡ ಹೋರಾಟ ಮಾಡಲು ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ.
 

ಕಾವೇರಿ ನೀರಿಗಾಗಿ ಸಂಘಟನೆಗಳ ಆಕ್ರೋಶ ಕಿಚ್ಚು ಹೆಚ್ಚಾಗಿದೆ. ಸರ್ಕಾರ ವಿರುದ್ಧ ವಿಭಿನ್ನವಾಗಿ ಕನ್ನಡಿಗರು ಹೋರಾಟ ಮಾಡ್ತಿದ್ದಾರೆ. ಕಾವೇರಿ ನೀರಿಗಾಗಿ ನಿನ್ನೆ ಇಡೀ ಬೆಂಗಳೂರು ಬಂದ್(Bengaluru Bandh) ಮಾಡಿದ್ರೆ. ಇತ್ತ ಶುಕ್ರವಾರ ಮತ್ತೊಂದು ಬಂದ್‌ಗೆ ಸಂಘಟನೆಗಳು ಸಿದ್ಧವಾಗ್ತಿವೆ. ರೈತ ನಾಯಕ ಕರುಬೂರು ಶಾಂತಕುಮಾರ್ (Karuburu Shanthakumar) ನೇತೃತ್ವದಲ್ಲಿ ಬೆಂಗಳೂರಿಗೆ ಸಂಘಟನೆಗಳು ಬೀಗ ಹಾಕಿದ್ರೆ. ಶುಕ್ರವಾರ ವಾಟಳ್ ನಾಗರಾಜ್(Vatal Nagaraj) ಸಾರಥ್ಯದಲ್ಲಿ ಅಖಂಡ ಕರ್ನಾಟಕ ಬಂದ್‌ಗೆ(Karnataka Bandh) ಮುಂದಾಗಿದ್ದಾರೆ. ಒಂದೇ ವಾರದಲ್ಲಿ ಕರುನಾಡು ಮಂದಿಗೆ ಮತ್ತೊಂದು ಬಂದ್ ಶಾಕ್ ಎದುರಾಗಿದೆ. ಕಾವೇರಿಗಾಗಿ ಬಂದ್ ಮಾಡುವ ವಿಚಾರಕ್ಕೆ ಸಂಘಟನೆಗಳ ಮಧ್ಯೆಯೇ ಬಿರುಕು ಮೂಡಿತ್ತು. ಅಷ್ಟೇ ಅಲ್ಲ ಕೆಲ ಸಂಘಟನೆಗಳು ಬೆಂಗಳೂರು ಬಂದ್‌ಗೆ ಸಾಥ್ ಕೊಟ್ರೆ. ಇನ್ನು ಸಂಘಟನೆಗಳು ಕರ್ನಾಟಕ ಬಂದ್‌ಗೆ ಸಪೋರ್ಟ್‌ ಮಾಡ್ತೀವಿ ಅಂತಾ ಬೆಂಗಳೂರು ಬಂದ್‌ಗೆ ನೈತಿಕ ಬೆಂಬಲ ಘೋಷಿಸಿದ್ವು..ಹೀಗಾಗಿ ಕರವೇ ಬಣ ಸೇರಿದಂತೆ ವಾಟಳ್ ನಾಗರಾಜ್ ನೇತೃತ್ವದ ಹಲವು ಬಣಗಳು ಸೆ.29ರಂದು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ  ಸಿದ್ಧತೆ ಮಾಡಿಕೊಳ್ತಿದ್ದಾರೆ. ಕಾವೇರಿ ಉಳಿವಿಗಾಗ ರೋಷಾಗ್ನಿ ಜೋರಾಗಿದೆ. ಕನ್ನಡಿಗರ ಆಕ್ರೋಶದ ಕಿಚ್ಚು ತಾರಕ್ಕೇರಿದೆ. ಇದರ ಮಧ್ಯೆಯೇ ನಿನ್ನೆ ಮತ್ತೆ CWRC ತಮಿಳುನಾಡಿಗೆ 18 ದಿನ 3 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿದೆ. ಇದು ಕರ್ನಾಟಕದಲ್ಲಿನ ಕಾವೇರಿ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ನಮಗೆ ಕುಡಿಯೋಕೆ ನೀರಿಲ್ಲ..ಹೇಗೆ ಬಿಡೋಕೆ ಆಗುತ್ತೆ ಅಂತಾ ವಾಟಳ್ ನಾಗರಾಜ್ ನೇತೃತ್ವದಲ್ಲಿ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ ಸತ್ಯಾಗ್ರಹ ಮಾಡಲು ಕೂಡ ಪ್ಲಾನ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೈಸೂರಿನಲ್ಲಿ ವಿವಾದ ಎಬ್ಬಿಸಿದ ಪ್ರಭಾಸ್ ಮೇಣದ ಪ್ರತಿಮೆ !

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more