ಬೆಂಗಳೂರು ಬಂದ್ ಆಯ್ತು ಈಗ ಕರುನಾಡಿಗೆ ಬೀಗ: ಕಾವೇರಿ ಕಿಚ್ಚಿಗೆ ಶುಕ್ರವಾರ ಸ್ತಬ್ಧವಾಗುತ್ತಾ ಕರ್ನಾಟಕ..?

ಬೆಂಗಳೂರು ಬಂದ್ ಆಯ್ತು ಈಗ ಕರುನಾಡಿಗೆ ಬೀಗ: ಕಾವೇರಿ ಕಿಚ್ಚಿಗೆ ಶುಕ್ರವಾರ ಸ್ತಬ್ಧವಾಗುತ್ತಾ ಕರ್ನಾಟಕ..?

Published : Sep 27, 2023, 10:08 AM IST

ಬೆಂಗಳೂರು ಬಂದ್ ಮುಗೀತು. ಈಗ ಕರ್ನಾಟಕ ಸ್ತಬ್ಧಕ್ಕೆ ಸಂಘಟನೆಗಳು ನಿರ್ಧರಿಸಿವೆ. ಕಾವೇರಿಗಾಗಿ ಶುಕ್ರವಾರ ಅಖಂಡ ಕರುನಾಡಿಗೆ ಬೀಗ ಹಾಕಲು ಪ್ಲಾನ್ ಮಾಡಿದ್ದು, ವಾಟಳ್ ನಾಗಾರಾಜ್ ನೇತೃತ್ವದಲ್ಲಿ ದೊಡ್ಡ ಹೋರಾಟ ಮಾಡಲು ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ.
 

ಕಾವೇರಿ ನೀರಿಗಾಗಿ ಸಂಘಟನೆಗಳ ಆಕ್ರೋಶ ಕಿಚ್ಚು ಹೆಚ್ಚಾಗಿದೆ. ಸರ್ಕಾರ ವಿರುದ್ಧ ವಿಭಿನ್ನವಾಗಿ ಕನ್ನಡಿಗರು ಹೋರಾಟ ಮಾಡ್ತಿದ್ದಾರೆ. ಕಾವೇರಿ ನೀರಿಗಾಗಿ ನಿನ್ನೆ ಇಡೀ ಬೆಂಗಳೂರು ಬಂದ್(Bengaluru Bandh) ಮಾಡಿದ್ರೆ. ಇತ್ತ ಶುಕ್ರವಾರ ಮತ್ತೊಂದು ಬಂದ್‌ಗೆ ಸಂಘಟನೆಗಳು ಸಿದ್ಧವಾಗ್ತಿವೆ. ರೈತ ನಾಯಕ ಕರುಬೂರು ಶಾಂತಕುಮಾರ್ (Karuburu Shanthakumar) ನೇತೃತ್ವದಲ್ಲಿ ಬೆಂಗಳೂರಿಗೆ ಸಂಘಟನೆಗಳು ಬೀಗ ಹಾಕಿದ್ರೆ. ಶುಕ್ರವಾರ ವಾಟಳ್ ನಾಗರಾಜ್(Vatal Nagaraj) ಸಾರಥ್ಯದಲ್ಲಿ ಅಖಂಡ ಕರ್ನಾಟಕ ಬಂದ್‌ಗೆ(Karnataka Bandh) ಮುಂದಾಗಿದ್ದಾರೆ. ಒಂದೇ ವಾರದಲ್ಲಿ ಕರುನಾಡು ಮಂದಿಗೆ ಮತ್ತೊಂದು ಬಂದ್ ಶಾಕ್ ಎದುರಾಗಿದೆ. ಕಾವೇರಿಗಾಗಿ ಬಂದ್ ಮಾಡುವ ವಿಚಾರಕ್ಕೆ ಸಂಘಟನೆಗಳ ಮಧ್ಯೆಯೇ ಬಿರುಕು ಮೂಡಿತ್ತು. ಅಷ್ಟೇ ಅಲ್ಲ ಕೆಲ ಸಂಘಟನೆಗಳು ಬೆಂಗಳೂರು ಬಂದ್‌ಗೆ ಸಾಥ್ ಕೊಟ್ರೆ. ಇನ್ನು ಸಂಘಟನೆಗಳು ಕರ್ನಾಟಕ ಬಂದ್‌ಗೆ ಸಪೋರ್ಟ್‌ ಮಾಡ್ತೀವಿ ಅಂತಾ ಬೆಂಗಳೂರು ಬಂದ್‌ಗೆ ನೈತಿಕ ಬೆಂಬಲ ಘೋಷಿಸಿದ್ವು..ಹೀಗಾಗಿ ಕರವೇ ಬಣ ಸೇರಿದಂತೆ ವಾಟಳ್ ನಾಗರಾಜ್ ನೇತೃತ್ವದ ಹಲವು ಬಣಗಳು ಸೆ.29ರಂದು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ  ಸಿದ್ಧತೆ ಮಾಡಿಕೊಳ್ತಿದ್ದಾರೆ. ಕಾವೇರಿ ಉಳಿವಿಗಾಗ ರೋಷಾಗ್ನಿ ಜೋರಾಗಿದೆ. ಕನ್ನಡಿಗರ ಆಕ್ರೋಶದ ಕಿಚ್ಚು ತಾರಕ್ಕೇರಿದೆ. ಇದರ ಮಧ್ಯೆಯೇ ನಿನ್ನೆ ಮತ್ತೆ CWRC ತಮಿಳುನಾಡಿಗೆ 18 ದಿನ 3 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿದೆ. ಇದು ಕರ್ನಾಟಕದಲ್ಲಿನ ಕಾವೇರಿ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ನಮಗೆ ಕುಡಿಯೋಕೆ ನೀರಿಲ್ಲ..ಹೇಗೆ ಬಿಡೋಕೆ ಆಗುತ್ತೆ ಅಂತಾ ವಾಟಳ್ ನಾಗರಾಜ್ ನೇತೃತ್ವದಲ್ಲಿ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ ಸತ್ಯಾಗ್ರಹ ಮಾಡಲು ಕೂಡ ಪ್ಲಾನ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೈಸೂರಿನಲ್ಲಿ ವಿವಾದ ಎಬ್ಬಿಸಿದ ಪ್ರಭಾಸ್ ಮೇಣದ ಪ್ರತಿಮೆ !

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more