ಇನ್ನೂ 2 ದಿನ ರಾಜ್ಯದಲ್ಲಿ ಹೈ ಅಲರ್ಟ್; ಪ್ರವಾಹದಬ್ಬರಕ್ಕೆ ಜನ ಹೈರಾಣೋ ಹೈರಾಣು!

Oct 19, 2020, 10:50 AM IST

ಬೆಂಗಳೂರು (ಅ. 19): ಮಳೆ.. ಮಳೆ..ಮಳೆ... ಎಲ್ಲಿ ನೋಡಿದರೂ ಮಳೆ. ಹೈದ್ರಾಬಾದ್ ಕರ್ನಾಟಕ, ಮಹಾರಾಷ್ಟ್ರ, ಕಲ್ಯಾಣ ಕರ್ನಾಟಕದ ಕೆಲವು ಭಾಗಗಳು ಮಳೆಯಿಂದ ತತ್ತರಿಸಿ ಹೋಗಿವೆ. ಕೆಲವು ಭಾಗಗಳಲ್ಲಿ ಪ್ರವಾಹ ಅಬ್ಬರವನ್ನು ನೋಡಿದರೆ ನಿಜಕ್ಕೂ ಭಯವಾಗುತ್ತದೆ.

ಕೋವಿಡ್ ಗುಡ್‌ನ್ಯೂಸ್; ಪರಿಸ್ಥಿತಿ ಹೀಗೆ ಮುಂದುವರೆದರೆ ಫೆಬ್ರವರಿಯಲ್ಲಿ ನಿಯಂತ್ರಣ ಸಾಧ್ಯ

ಒಂದು ಕಡೆ ಜವಾಬ್ದಾರಿ ಮರೆತ ಜನಪ್ರತಿನಿಧಿಗಳು, ಮತ್ತೊಂದು ಕಡೆ ಪ್ರವಾಹದ ಅಬ್ಬರ ಜನರನ್ನು ಹೈರಾಣಾಗಿಸಿದೆ. ಜೀವನ ದುಸ್ತರ ಎನಿಸತೊಡಗಿದೆ. ಈಗ ಸ್ವಲ್ಪ ಮಳೆ ಕ್ಷೀಣಿಸಿದರೂ 17 ರಿಂದ 21 ರವರೆಗೆ ರಾಜ್ಯಕ್ಕೆ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನಷ್ಟು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.