Night Curfew: ವ್ಯಾಪಾರಸ್ಥರು, ಜನರ ಹಿತದೃಷ್ಟಿ ನೋಡ್ಕೊಂಡು ಕರ್ಫ್ಯೂ ವಿಧಿಸಿ: ಎಚ್‌ಡಿಕೆ

Dec 27, 2021, 5:22 PM IST

ಬೆಂಗಳೂರು (ಡಿ. 27): ರಾಜ್ಯದಲ್ಲಿ ಕೊರೋನಾ ರೂಪಾಂತರ ತಳಿ ಒಮಿಕ್ರೋನ್‌ (Omicron) ಪ್ರಕರಣ ಹರಡುವಿಕೆ ತಡೆಯಲು ರಾಜ್ಯಾದ್ಯಂತ ಡಿ. 28ರಿಂದ ಜನವರಿ 7 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ (Night Curfew) ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಹೊಸ ವರ್ಷಾಚರಣೆಗೆ ಪ್ರತ್ಯೇಕ ಮಾರ್ಗಸೂಚಿ, ಸಭೆ, ಸಮಾರಂಭಗಳಲ್ಲಿ ಜನರ ಸೇರುವಿಕೆಗೆ ಸಂಖ್ಯಾ ಮಿತಿ ಸೇರಿದಂತೆ ಹಲವು ನಿರ್ಬಂಧಗಳನ್ನು ರಾಜ್ಯ ಸರ್ಕಾರ ವಿಧಿಸಿದೆ.

New Year 2022: ಪಾಸ್ ಕೊಡಲ್ಲ, ಸುಮ್ಮನೆ ಓಡಾಡಿದ್ರೆ ಬಿಡಲ್ಲ, ಕಮಿಷನರ್ ಪಂತ್ ಆದೇಶ

'ನೈಟ್‌ ಕರ್ಫ್ಯೂನಿಂದ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ನಷ್ಟವಾಗುತ್ತದೆ. ವ್ಯಾಪಾರಸ್ಥರು ಸಾಲ ಮಾಡಿ ಬಂಡವಾಳ ಹಾಕಿರುತ್ತಾರೆ. ಇದನ್ನೆಲ್ಲಾ ನೋಡಿಕೊಂಡು ಸರ್ಕಾರ ಯೋಚಿಸಿ ನಿರ್ಧಾರಕ್ಕೆ ಬರಬೇಕು' ಎಂದು ಎಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದಾರೆ.