ಜಡ್ಜ್ ಎದುರು ಹೇಳಿಕೆ ನೀಡಿದ ಬಳಿಕ ಯುವತಿ ವಶಕ್ಕೆ ನೀಡುವಂತೆ ಎಸ್‌ಐಟಿ ಮನವಿ

Mar 30, 2021, 5:25 PM IST

ಬೆಂಗಳೂರು (ಮಾ. 30): ತೀವ್ರ ಸಂಚಲನವನ್ನುಂಟು ಮಾಡಿದ್ದ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಕ್ಲೈಮ್ಯಾಕ್ಸ್ ತಲುಪಿದೆ. ಸೀಡಿಯಲ್ಲಿದ್ದಾರೆ ಎನ್ನಲಾದ ಯುವತಿ ನ್ಯಾಯಾಧೀಶರ ಎದುರು ಹಾಜರಾಗಿದ್ದಾರೆ. ಅಜ್ಞಾತ ಸ್ಥಳದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಹೇಳಿಕೆ ನೀಡಿದ ಬಳಿಕ ಯುವತಿಯನ್ನು ವಶಕ್ಕೆ ನೀಡುವಂತೆ ಎಸ್‌ಐಟಿ ಮನವಿ ಮಾಡಿದೆ. ಕೋರ್ಟ್ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. 

ಮ್ಯಾಜಿಸ್ಟ್ರೇಟ್ ಎದುರು ಯುವತಿ ಹಾಜರ್ ; ಯುವತಿ ಹೇಳಿಕೆ ಪ್ರಕ್ರಿಯೆ ಹೇಗೆ.?