ಗಂಡುಮೆಟ್ಟಿದ ನಾಡಲ್ಲಿ ಅಮಿತ್ ಶಾ 'ಪೌರತ್ವ' ಕಹಳೆಯ ಹೈಲೆಟ್ಸ್..!

Jan 18, 2020, 8:16 PM IST

ಹುಬ್ಬಳ್ಳಿ, [ಜ.18]: ಒಂದ್ಕಡೆ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶದ ಕಿಚ್ಚು ಭುಗಿಲೆದ್ದಿದ್ರೆ.. ಮತ್ತೊಂದೆಡೆ ಕಮಲ ನಾಯಕರು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ..ಇವತ್ತು [ಶನಿವಾರ] ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಜಾಗೃತಿ ಮೂಡಿಸುವ ಬೃಹತ್ ಸಮಾವೇಶ ನಡೀತು..

ಹುಬ್ಬಳ್ಳಿಯಲ್ಲಿ ಅಮಿತ್ ಶಾ ಘರ್ಜನೆ: ಸಿಎಎ ಜಾರಿ ನಮ್ಮೆಲ್ಲರ ಹೊಣೆ!

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರಿಂದ್  ವಾಣಿಜ್ಯ ನಗರಿ ಹುಬ್ಬಳ್ಳಿ ಫುಲ್ ಕೇಸರಿಮಯವಾಗಿತ್ತು. ಇನ್ನು ಸಮಾವೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ  ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಅವರ ಬಾಯಿಯಿಂದಲೇ ಕೇಳಿ.