Puneeth Rajkumar: ನಮ್ ಋಷಿಯ 'ಶಿವನೇ ನೀನಿದ್ದರೇ' ಹಾಡು ಸಖತ್ ವೈರಲ್

Nov 19, 2021, 2:48 PM IST

ಇತ್ತೀಚೆಗಷ್ಟೇ ನಿಧನರಾದ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರ ಬಗ್ಗೆ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 'ಒಳಿತು ಮಾಡು ಮನುಸ' ಎಂಬ ಹಾಡು ಬರೆದ ನಮ್ ಋಷಿ (Nam Rushi) ಇದೀಗ ಪುನೀತ್ ಬಗ್ಗೆ ಹಾಡೊಂದನ್ನು ರಚಿಸಿದ್ದಾರೆ. 'ಶಿವನೇ ನೀನಿದ್ದರೇ ನಿನಗೆ ಮನಸಿದ್ದರೇ' ಎಂಬ ಹಾಡನ್ನು ಬರೆದಿದ್ದು, ಎಸ್.ಟಿ.ಸೋಮಶೇಖರ್ ಹಾಡಿಗೆ ದನಿಯಾಗುವುದರ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಶ್ರೀಗುರು ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Puneeth Rajkumarಗೆ ನಮನ ಸಲ್ಲಿಸಿದ ತೆಲುಗು ಕಿರುತೆರೆ ವಾಹಿನಿ!

ನಮ್ ಋಷಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ. ಇವರು 2019 ರಲ್ಲಿ ತೆರಕಂಡ 'ಒನ್ ವೇ' ಚಿತ್ರವನ್ನು ನಿರ್ದೇಶಿಸಿದ್ದು, ಇವರು ರಚಿಸಿದ 'ಒಳಿತು ಮಾಡು ಮನುಸ' ಹಾಡು ತುಂಬಾ ಪ್ರಸಿದ್ಧಿಯಾಗಿದೆ. ಈ ಹಿಂದೆ ಪುನೀತ್ ಅಕಾಲಿಕ ನಿಧನಕ್ಕೆ, ವಿಕಟಕವಿ ಯೋಗರಾಜ್ ಭಟ್ (Yogaraj Bhat) 'ಕರುನಾಡ ರಾಜರತ್ನನಿಗೆ ಗೀತ ನಮನ' ಎಂಬ ವಿಶೇಷವಾದ ಹಾಡೊಂದನ್ನು ಬರೆದಿದ್ದರು. ಹಾಗೂ ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ರವರು (Ananad YouTube Channel) 'ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ವಿ ಮಿಸ್ ಯೂ ಎಂದು 'ಬೊಂಬೆ ಆಡ್ಸೋನು' ಹಾಡನ್ನು ಬಿಡುಗಡೆ ಮಾಡಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment