ರಾಮಾಯಣ ಶೂಟಿಂಗ್ ಅಖಾಡದಲ್ಲಿ ನಟ ಯಶ್​! ಅಲ್ಲಿ ರಾವಣ, ಇಲ್ಲಿ ಡಾನ್.... ರಾಕಿ ಡಿಫ್ರೆಂಟ್ ಅವತಾರ

ರಾಮಾಯಣ ಶೂಟಿಂಗ್ ಅಖಾಡದಲ್ಲಿ ನಟ ಯಶ್​! ಅಲ್ಲಿ ರಾವಣ, ಇಲ್ಲಿ ಡಾನ್.... ರಾಕಿ ಡಿಫ್ರೆಂಟ್ ಅವತಾರ

Published : Jan 21, 2025, 12:33 PM ISTUpdated : Jan 21, 2025, 12:40 PM IST

ಯಶ್ ಅಭಿನಯದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಸಹ-ನಿರ್ಮಾಪಕರೂ ಆಗಿದ್ದಾರೆ. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುವುದು.

ರಾಕಿಭಾಯ್ ತಮ್ಮ ಫ್ಯಾನ್ಸ್​ಗೆ ದೊಡ್ಡ ಸಿಗ್ನಲ್ ಕೊಟ್ಟಿದ್ದಾರೆ. ಇಷ್ಟು ದಿನ ಯಶ್ ಟಾಕ್ಸಿಕ್​ ಸಿನಿಮಾದ್ದೇ ಸದ್ದು ಗದ್ದಲ ಇತ್ತು. ಈಗ ರಾಕಿ ರಾಮಾಯಣ ಆರಂಭ ಆಗುತ್ತಿರೋ ಬಗ್ಗೆ ಬಿಗ್ ಅಪ್ಡೇಟ್​​ ಒಂದು ಸಿಕ್ಕಿದೆ. ಯೆಸ್ ರಾಕಿಂಗ್ ಸ್ಟಾರ್ ಯಶ್ ಯಾಕಿಷ್ಟು ಸೈಲೆಂಟ್ ಆಗಿದ್ದಾರೆ, ಇನ್ನೂ ಎಷ್ಟು ಕಾಲ ಅವರ ಸಿನಿಮಾಗಾಗಿ ಕಾಯಬೇಕು ಅಂತ ಬೇಸರಿಸಿಕೊಂಡಿದ್ದ ಯಶ್ ಫ್ಯಾನ್ಸ್​ಗೆಲ್ಲಾ ಮತ್ತೊಂದು ಗುಡ್ ನ್ಯೂಸ್ ಇದೆ. ಯಶ್ ನಟಸಿ ನಿರ್ಮಿಸ್ತಾ ಇರೋ ಬಾಲಿವುಡ್​​ನ ಮೆಗಾಪ್ರಾಜೆಕ್ಟ್ ರಾಮಾಯಣದ ಶೂಟಿಂಗ್​​ಗೆ ಶ್ರೀಕಾರ ಹಾಕಲಾಗಿದೆ.ನಿತೇಶ್ ತಿವಾರಿ ಡೈರೆಕ್ಟ್ ಮಾಡ್ತಾ ಇರೋ ಬಹುಕೋಟಿ ವೆಚ್ಚದ ಎಪಿಕ್ ಮೂವಿ ರಾಮಾಯಣ. ರಣ್​ಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡ್ರೆ, ನಮ್ಮ ರಾಕಿಂಗ್ ಸ್ಟಾರ್ ಯಶ್ ದಶಕಂಠ ರಾವಣನಾಗಿ ಮಿಂಚಲಿದ್ದಾರೆ. ಅಷ್ಟೆ ಅಲ್ಲ ರಾಮಾಯಣ ಮಹಾಕಾವ್ಯವನ್ನ ಎರಡು ಭಾಗಗಳಲ್ಲಿ ತೆರೆಗೆ ತರಲು ತಯಾರಿ ಆಗಿದ್ದು, ಮೊದಲ ಭಾಗದ ಶೂಟಿಂಗ್ ನಿನ್ನೆಯಿಂದ ಆರಂಭ ಆಗಿದೆ. ವಿಶೇಷ ಅಂದ್ರೆ ಈ ರಾಮಾಯಣದಲ್ಲಿ ಯಶ್ ಜಸ್ಟ್ ರಾವಣನ ಪಾತ್ರ ಮಾಡ್ತಿಲ್ಲ. ಈ ಎಪಿಕ್ ಪ್ರಾಜೆಕ್ಟ್​​ಗೆ ಸಹ ನಿರ್ಮಾಪಕ ಕೂಡ ಹೌದು. ನಿಮಿತ್ ಮಲ್ಹೋತ್ರ ಜೊತೆಗೆ ಯಶ್ ಒಡೆತನದ ಮಾನ್​ಮೈಂಡ್ ಕ್ರಿಯೇಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದೆ.

ಕೋಟಿ ಕೋಟಿ ಒಡೆಯ 37 ಲಕ್ಷಕ್ಕಾಗಿ ಪರದಾಟ; ಕೋರ್ಟ್​​​​ ಮೆಟ್ಟಿಲೇರಿದ ನಟ ದರ್ಶನ್

 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more