ಕೊಲೆ ಆರೋಪಿ ದರ್ಶನ್​​​​ಗೆ ಒಳ್ಳೆ ಟೈಮ್​ ಶುರು ಆಯ್ತಾ?: ಬೆಸ್ಟ್​ ವಿಲನ್ ಜಗಪತಿ ಬಾಬು.. ಬೆಸ್ಟ್ ಡೆಬ್ಯೂ ಆರಾಧನಾ!

Sep 29, 2024, 6:50 PM IST

ಆಷಾಡ ಮಾಸ ಮುಗಿದು ಶ್ರಾವಣ ಬಂತು ಇನ್ನುಂದೆ ಎಲ್ಲವೂ ಒಳ್ಳೆದಾಗುತ್ತೆ ಅಂತಾರಲ್ಲ ಹಾಗೆ ದರ್ಶನ್​ಗೆ ಬ್ಯಾಡ್​​ಟೈಂ ಮುಗಿದು ಒಳ್ಳೆ ಟೈಮ್ ಶುರುವಾಗುತ್ತಿದೆಯಾ.? ಹೀಗೊಂದು ಟಾಕ್ ದಚ್ಚು ಫ್ಯಾನ್ಸ್​ ಬಳಗದಲ್ಲಿ ಎದ್ದಿದೆ. ಅದಕ್ಕೆ ಕಾರಣ ದಾಸನ ಕಾಟೇರ ಸಿನಿಮಾವನ್ನ ಅರಸಿಕೊಂಡು ಬರುತ್ತಿರೋ ಪ್ರಶಸ್ತಿಗಳು. ಇದರ ಜೊತೆಗೆ ದಚ್ಚು ಬೇಲ್ ವಿಷಯ ಹಾಗು ದಾಸ ಜೈಲಲ್ಲಿ ನಗು ನಗುತ್ತಾ ಜೀವನ ಕಳೆಯುತ್ತಿರೋದು..? ಹಾಗಾದ್ರೆ ದಚ್ಚು ಯಾಕಿಷ್ಟು ಖುಷಿಯಾಗಿದ್ದಾರೆ..? ದಾಸನ ಕಾಟೇರ ಮತ್ತೆ ಯಾವ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ  ಅಂತ ನೋಡೋಣ ಬನ್ನಿ. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಜೈಲು ಸೇರಿ ನಾಲ್ಕು ತಿಂಗಳಾಗ್ತಾ ಬಂತು. ಈ ನಾಲ್ಕು 
ತಿಂಗಳಲ್ಲಿ ದರ್ಶನ್ ಇಲ್ಲದ ಸ್ಯಾಂಡಲ್​ವುಡ್​ ಹಲವು ಸಾಧನೆ ಮಾಡಿದೆ. ಹತ್ತಾರು ಪ್ರಶಸ್ತಿಗಳು ಕನ್ನಡ ಸಿನಿ ಜಗತ್ತಿಗೆ ಸಿಕ್ಕಿದೆ. 

ಸಿನಿಮಾಗಳು ಸೂಪರ್​ ಹಿಟ್​ ಆಗಿದೆ. ಆ ಕಡೆ ಜೈಲಲ್ಲಿರೋ ದರ್ಶನ್​ ಜೈಲು ವಾಸಕ್ಕೆ ಅಡ್ಜೆಸ್ಟ್ ಆಗಿದ್ದು, ಇನ್ನೇನು ಬೇಲ್ ಸಿಗುತ್ತೆ ಹೊರಗೆ ಬರುತ್ತೇನೆ ಅಂತ ಖುಷ್ ಖುಷಿಯಿಂದ ಜೈಲಲ್ಲೇ ಓಡಾಡ್ಕೊಂಡಿದ್ದಾರೆ. ಇದರ ಮಧ್ಯೆ ದಾಸನ ಕಾಟೇರ ಪ್ರಶಸ್ತಿಯ ಹೊಸ ಕಿರೀಟ ಹಾಕಿಕೊಂಡಿದೆ. ಕಾಟೇರ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕೊನೆ ಸಿನಿಮಾ. ಈ ಕಾಟೇರ ಗೆದ್ದಿದ್ದೇ ಗೆದ್ದಿದ್ದು. 100 ಕೋಟಿ ಕ್ಲಬ್ ಸೇರಿದ್ದೇ ಸೇರಿದ್ದು, ಇನ್ಮುಂದೆ ನಮ್ ಬಾಸ್​​ನ ಯಾರೂ ಹಿಡಿಯೋಕೆ ಆಗಲ್ಲ ಅಂತ ಫ್ಯಾನ್ಸ್ ಕಾಲರ್ ಎತ್ಕೊಂಡು ಓಡಾಡ್ತಿದ್ರು. ಆದ್ರೆ ಪೊಲೀಸರು ಕಾಟೇರನ್ನ ಹಿಡಿದು ಜೀಪಿಗೆ ತುಂಬಿಕೊಂಡು ಕೋರ್ಟ್​​ಗೆ ಒಪ್ಪಿಸಿ ಜೈಲಿಗೆ ಕೈಳಿಸಿದ್ರು. ಅಂದಿನಿಂದ ಕಾಟೇರನ ಖದರ್​ ಮೇಣದ ಬತ್ತಿಯಂತಾಯ್ತು. ಕಾಟೇರ ಸಿನಿಮಾಗೆ ಬರಬೇಕಿದ್ದ ಪ್ರಶಸ್ತಿಗಳು ದೂರಾದ್ವು. ಆದ್ರೂ ಹೋಪ್ಸ್ ಬಿಡದ ಫ್ಯಾನ್ಸ್​ ಈಗ ಖುಷಿ ಪಡುತ್ತಿದ್ದಾರೆ. 

ಯಾಕಂದ್ರೆ ಕಾಟೇರ ಸಿನಿಮಾಗೆ ಎರಡು ಐಫಾ ಪ್ರಶಸ್ತಿ ಸಿಕ್ಕಿವೆ. ಅಬುದಾಬಿಯಲ್ಲಿ ಈ ಭಾರಿಯ ಐಫಾ ಪ್ರಶಸ್ತಿ ಸಮಾರಂಭ ನಡೆದಿದೆ. ಈ ಭಾರಿ ಐಫಾದಲ್ಲಿ ದರ್ಶನ್​​​ ಸಿನಿಮಾ ಸೌಂಡ್ ಮಾಡಿದೆ. ಫಿಲ್ಮ್​ ಫೇರ್​ನಲ್ಲಿ ಹೋದ ಮರ್ಯಾದೆಯನ್ನ ಐಫಾದಲ್ಲಿ ಕಾಟೇರ ಪಡೆದುಕೊಂಡಿದೆ. ಯಾಕಂದ್ರೆ ಫಿಲ್ಮ್ ಫೇರ್​​ನ 10 ವಿಭಾಗಕ್ಕೆ ಕಾಟೇರ ಆಯ್ಕೆ ಆಗಿತ್ತು. ಆದ್ರೆ ರೇಸ್​ನಲ್ಲಿ ಒಂದೇ ಒಂದು ಪ್ರಶಸ್ತಿಯನ್ನ ಪಡೆಯಲಾಗಿಲ್ಲ. ಈಗ ಐಫಾದಲ್ಲಿ ಬೆಸ್ಟ್ ವಿಲನ್ ಕಾಟೇರ ಸಿನಿಮಾದ ಜಗಪತಿ ಬಾಬು ಹಾಗು ಅತ್ತುತ್ತಮ ಡೆಬ್ಯೂ ನಟಿ ಆರಾಧನಾ ರಾಮ್​ ಅಂತ ಪ್ರಶಸ್ತಿ ಪಡೆದಿದೆ. ಆದ್ರೆ ಇಲ್ಲೂ ದರ್ಶನ್​​ಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಮಾತ್ರ ಸಿಕ್ಕಿಲ್ಲ.. ಆ ಆವಾರ್ಡ್​ ಸಪ್ತಸಾಗರದಾಚೆ ಎಲ್ಲೋ ಹೀರೋ ರಕ್ಷಿತ್ ಶೆಟ್ಟಿ ಪಾಲಾಗಿದೆ. ಕಾಟೇರ ಈಗ ಐಫಾ ಪ್ರಶಸ್ತಿ ಗೆದ್ದಿದೆ. ಆದ್ರೆ ದಚ್ಚು ಹೊರಗಿದ್ದಿದ್ರೆ ಅದಿನ್ನೇನು ಸರ್​ಪ್ರೈಸ್​ಗಳು ಅಭಿಮಾನಿ ಬಳಗ ಸೇರುತ್ತಿದ್ವೋ. 

ಆದಷ್ಟು ಬೇಗ ಹೊರ ಬರೋ ಸೂಚನೆ ದಚ್ಚುಗೆ ಸಿಕ್ಕಂತಿದೆ. ಹೀಗಾಗೆ ದಾಸ ಪ್ರತಿ ದಿನ ನಗು ಮುಖದಲ್ಲಿ ಖುಷಿ ಖುಷಿಯಾಗಿ ಜೈಲಿನ ತುಂಬೆಲ್ಲಾ ಓಡಾಡ್ಕೊಂಡಿದ್ದಾರೆ. ಬೇಲ್ ಅರ್ಜಿ ವಿಚಾರಣೆ ನಡೆಯುತ್ತಿದ್ದು, ದರ್ಶನ್​​ ಕೆಲವೇ ದಿನದಲ್ಲಿ ಹೊರಗೆ ಬರೋ ಬರವಸೆಯಲ್ಲಿದ್ದಾರೆ. ದಚ್ಚುನ ಬಳ್ಳಾರಿಯಿಂದ ಕರೆ ತರೋಕೆ ಪತ್ನಿ ವಿಜಯಲಕ್ಷ್ಮಿ ಆದಾಗ್ಲೆ ಹೆಲಿಕಾಪ್ಟರ್ ಬುಕ್ ಮಾಡಿದ್ದಾರಂತೆ. ಮತ್ತೊಂದ್ ಕಡೆ ಡೆವಿಲ್ ಟೀಂ ದರ್ಶನ್​ರ ಬೇಟಿ ಮಾಡಿದ್ದು, ಸಿನಿಮಾ ಶೂಟಿಂಗ್​ಅನ್ನ ಆದಷ್ಟು ಬೇಗ ಶುರು ಮಾಡೋ ಬಗ್ಗೆ ದರ್ಶನ್ ಪಾಸಿಟೀವ್ ಆಗಿ ಮಾತಾಡಿದ್ದಾರಂತೆ. ಹೀಗಾಗಿ ದರ್ಶನ್​​​ಗೆ ಜೈಲು ವಾಸದ ಬ್ಯಾಡ್​ಟೈಮ್ ಮುಗಿಯೋ ಹಾಗೆ ಕಾಣುತ್ತಿದೆ. ಈಗ ಕಾಟೇರ ಬೇರೆ ಪ್ರಶಸ್ತಿ ಬಾಚಿಕೊಂಡಿದ್ದು, ದರ್ಶನ್​ ವಿಷಯಲ್ಲಿ ಎಲ್ಲವೂ ಪಾಸಿಟೀವ್ ಕಾಣುತ್ತಿವೆ ಅಂತ ಫ್ಯಾನ್ಸ್ ಮಾತಾಡಿಕೊಳ್ಳುತ್ತಿದ್ದಾರೆ.