ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ, ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ: ನಟಿ ಸುಹಾಸಿನಿ

ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ, ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ: ನಟಿ ಸುಹಾಸಿನಿ

Published : Sep 14, 2022, 04:01 PM IST

ನನ್ನ ನಗುವಿಗೆ ಕಾರಣ ನನ್ನ ಸುತ್ತ‌‌ ಇರೋ ನೀವೆಲ್ಲ. ಮಾನ್ಸೂನ್ ರಾಗ ಸಿನಿಮಾಗೆ ನಿರ್ದೇಶಕ ರವಿಂಧ್ರನಾಥ್ ಅವಕಾಶ ನೀಡಿದ್ರು. ಈ ಸಿನಿಮಾಗಾಗಿ ನಾನು ಶೂಟಿಂಗ್ ಬಂದಾಗ ಒಂದು ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ. ಯಾಕಂದ್ರೆ ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ ಎಂದು ನಟಿ ಸುಹಾಸಿನಿ ಹೇಳಿದರು.

ಮಾನ್ಸೂನ್ ರಾಗ, ಸ್ಯಾಂಡಲ್ ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಬಹುನಿರೀಕ್ಷೆಯ ಸಿನಿಮಾ. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಇತ್ತೀಚೆಗೆ ಚಿತ್ರತಂಡ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ ಹಿರಿಯ ನಟಿ ಸುಹಾಸಿನಿ ಮಾನ್ಸೂನ್ ರಾಗ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಚ್ಯುತ್ ಕುಮಾರ್ ಹೇಳಿದ ಹಾಗೆ ಸುಹಾಸಿನಿ ಕೂಡ ಅಚ್ಯುತ್ ಜೊತೆ ನಟಿಸಲು ಭಯವಾಗಿತ್ತು ಎಂದು ಹೇಳಿದರು. 'ನನ್ನ ನಗುವಿಗೆ ಕಾರಣ ನನ್ನ ಸುತ್ತ‌‌ ಇರೋ ನೀವೆಲ್ಲ. ಮಾನ್ಸೂನ್ ರಾಗ ಸಿನಿಮಾಗೆ ನಿರ್ದೇಶಕ ರವಿಂಧ್ರನಾಥ್ ಅವಕಾಶ ನೀಡಿದ್ರು. 

ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ: ಧನಂಜಯ್

ಈ ಸಿನಿಮಾಗಾಗಿ ನಾನು ಶೂಟಿಂಗ್ ಬಂದಾಗ ಒಂದು ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ. ಯಾಕಂದ್ರೆ ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ. ಸಿನಿಮಾದಲ್ಲಿ ನಟಿಸಿದ್ರೆ ನಾನು ನನ್ನ ಕಾಸ್ಟ್ಯೂಮ್ ಅನ್ನು ನಾನೆ ಮಾಡಿಕೊಳ್ತೇನೆ. ಆದರೆ ಈ ಸಿನಿಮಾದಲ್ಲಿ ನನ್ನ ಕಾಸ್ಟ್ಯೂಮ್ ನಿರ್ದೇಶಕರೇ ಮಾಡಿದ್ರು. ಅಚ್ಯುತ್ ಕುಮಾರ್ ಅದ್ಭುತ ನಟರು. ಅವರ ಜೊತೆ ನಟಿಸುವಾಗ ನನಗೂ ತುಂಬಾ ಭಯ ಇತ್ತು. ಈ ಸಿನಿಮಾದಲ್ಲಿ ನನಗೆ ಹ್ಯಾಪಿ ರೊಮ್ಯಾಂಟಿಕ್ ಪಾತ್ರ ಕೊಟ್ಟಿದ್ದಾರೆ. ಮದುವೆ ಮೊದಲು ಕನ್ನಡ ಸಿನಿಮಾ ಮಾಡೋಕೆ ಅವಕಾಶ ಇರಲಿಲ್ಲ. ಆದ್ರೆ ಮದುವೆ ಆದ ಮೇಲೆ ಕನ್ನಡ ಸಿನಿಮಾ ಅವಕಾಶ ಹೆಚ್ಚು ಸಿಕ್ತು. ನಾನು ಕನ್ನಡ ಸಿನಿಮಾದಲ್ಲೇ ಹೆಚ್ಚು ನಟಿಸುತ್ತೇನೆ. ನನ್ನನ್ನ ಇಲ್ಲಿ ವರೆಗೆ ಯಾರೂ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಗೆ ಕರೆದಿಲ್ಲ. ಆದರೆ ಮಾನ್ಸೂನ್ ರಾಗ ಟೀಂ ನನ್ನನ್ನ ಕರೆದಿದ್ದಾರೆ' ಎಂದು ಸಂತೋಷ ಪಟ್ಟರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
Read more