ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ, ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ: ನಟಿ ಸುಹಾಸಿನಿ

ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ, ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ: ನಟಿ ಸುಹಾಸಿನಿ

Published : Sep 14, 2022, 04:01 PM IST

ನನ್ನ ನಗುವಿಗೆ ಕಾರಣ ನನ್ನ ಸುತ್ತ‌‌ ಇರೋ ನೀವೆಲ್ಲ. ಮಾನ್ಸೂನ್ ರಾಗ ಸಿನಿಮಾಗೆ ನಿರ್ದೇಶಕ ರವಿಂಧ್ರನಾಥ್ ಅವಕಾಶ ನೀಡಿದ್ರು. ಈ ಸಿನಿಮಾಗಾಗಿ ನಾನು ಶೂಟಿಂಗ್ ಬಂದಾಗ ಒಂದು ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ. ಯಾಕಂದ್ರೆ ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ ಎಂದು ನಟಿ ಸುಹಾಸಿನಿ ಹೇಳಿದರು.

ಮಾನ್ಸೂನ್ ರಾಗ, ಸ್ಯಾಂಡಲ್ ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಬಹುನಿರೀಕ್ಷೆಯ ಸಿನಿಮಾ. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಇತ್ತೀಚೆಗೆ ಚಿತ್ರತಂಡ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ ಹಿರಿಯ ನಟಿ ಸುಹಾಸಿನಿ ಮಾನ್ಸೂನ್ ರಾಗ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಚ್ಯುತ್ ಕುಮಾರ್ ಹೇಳಿದ ಹಾಗೆ ಸುಹಾಸಿನಿ ಕೂಡ ಅಚ್ಯುತ್ ಜೊತೆ ನಟಿಸಲು ಭಯವಾಗಿತ್ತು ಎಂದು ಹೇಳಿದರು. 'ನನ್ನ ನಗುವಿಗೆ ಕಾರಣ ನನ್ನ ಸುತ್ತ‌‌ ಇರೋ ನೀವೆಲ್ಲ. ಮಾನ್ಸೂನ್ ರಾಗ ಸಿನಿಮಾಗೆ ನಿರ್ದೇಶಕ ರವಿಂಧ್ರನಾಥ್ ಅವಕಾಶ ನೀಡಿದ್ರು. 

ಡಿಂಪಲ್ ಡಿಂಪಲ್‌ ಕಾಣುತ್ತಾ ಅಂತ ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ: ಧನಂಜಯ್

ಈ ಸಿನಿಮಾಗಾಗಿ ನಾನು ಶೂಟಿಂಗ್ ಬಂದಾಗ ಒಂದು ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ. ಯಾಕಂದ್ರೆ ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ. ಸಿನಿಮಾದಲ್ಲಿ ನಟಿಸಿದ್ರೆ ನಾನು ನನ್ನ ಕಾಸ್ಟ್ಯೂಮ್ ಅನ್ನು ನಾನೆ ಮಾಡಿಕೊಳ್ತೇನೆ. ಆದರೆ ಈ ಸಿನಿಮಾದಲ್ಲಿ ನನ್ನ ಕಾಸ್ಟ್ಯೂಮ್ ನಿರ್ದೇಶಕರೇ ಮಾಡಿದ್ರು. ಅಚ್ಯುತ್ ಕುಮಾರ್ ಅದ್ಭುತ ನಟರು. ಅವರ ಜೊತೆ ನಟಿಸುವಾಗ ನನಗೂ ತುಂಬಾ ಭಯ ಇತ್ತು. ಈ ಸಿನಿಮಾದಲ್ಲಿ ನನಗೆ ಹ್ಯಾಪಿ ರೊಮ್ಯಾಂಟಿಕ್ ಪಾತ್ರ ಕೊಟ್ಟಿದ್ದಾರೆ. ಮದುವೆ ಮೊದಲು ಕನ್ನಡ ಸಿನಿಮಾ ಮಾಡೋಕೆ ಅವಕಾಶ ಇರಲಿಲ್ಲ. ಆದ್ರೆ ಮದುವೆ ಆದ ಮೇಲೆ ಕನ್ನಡ ಸಿನಿಮಾ ಅವಕಾಶ ಹೆಚ್ಚು ಸಿಕ್ತು. ನಾನು ಕನ್ನಡ ಸಿನಿಮಾದಲ್ಲೇ ಹೆಚ್ಚು ನಟಿಸುತ್ತೇನೆ. ನನ್ನನ್ನ ಇಲ್ಲಿ ವರೆಗೆ ಯಾರೂ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಗೆ ಕರೆದಿಲ್ಲ. ಆದರೆ ಮಾನ್ಸೂನ್ ರಾಗ ಟೀಂ ನನ್ನನ್ನ ಕರೆದಿದ್ದಾರೆ' ಎಂದು ಸಂತೋಷ ಪಟ್ಟರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more