ಕಾಂಗ್ರೆಸ್‌ ಕಚೇರಿ ಗುಸು-ಗುಸು ಹಿಂದೆ ಇರುವ ನಾಯಕನ ಗುಟ್ಟು ಹೇಳಿದ ಕಟೀಲ್!

Oct 13, 2021, 5:34 PM IST

ಮಂಗಳೂರು(ಅ. 13)  ಕಾಂಗ್ರೆಸ್ (Congress) ನಾಯಕರೇ ತಮ್ಮವರೇ ವಿರುದ್ಧ ಬೃಹತ್  ಹಗರಣಗಳ ಮಾತನಾಡಿದ್ದಾರೆ. ಕಾಂಗ್ರೆಸ್ ನ ಕರ್ಮ ಕಾಂಡ ಬಯಲಿಗೆ ಬಂದಿದೆ. ಕಲೆಕ್ಷನ್ ಗಿರಾಕಿಗಳು ಅಂಥ ನಾವು  ಹೇಳಿಲ್ಲ.. ಅವರ ಪಕ್ಷದವರೇ ಹೇಳಿದ್ದಾರೆ.. ಹೀಗೆಂದು ಹೇಳಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel). 

ಮಾಧ್ಯಮಗಳು ತೋರಿಸಿದ್ದು ಸರಿ..ನಿಜವಿದೆ ಎಂದ ಡಿಕೆಶಿ

ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇಂಥ ಆರೋಪಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಉಗ್ರಪ್ಪ  ಮತ್ತು ಸಲೀಂ ಮಾತುಗಳ ಬಗ್ಗೆ ತನಿಖೆ ಆಗಬೇಕು.  ಇದರ ಹಿಂದೆ ಡಿಕೆಶಿ (DK Shivakumar) ಅವರನ್ನು ರಾಜಕೀಯವಾಗಿ ಮುಗಿಸುವ ತಂತ್ರಗಾರಿಕೆ ಇದೆ ಎಂದು ಹೇಳಿದ್ದಾರೆ.